AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happiness: ಖುಷಿಯಾಗಿರುವುದು ನಿಮ್ಮ ಅವಶ್ಯಕತೆಯಲ್ಲ, ಹಕ್ಕು , ನೀವು ಹ್ಯಾಪಿ ಆಗಿರಲು ಹೀಗೆ ಮಾಡಬಹುದಲ್ಲಾ

ಬಾಲ್ಯದಲ್ಲಿ ಚಿಕ್ಕಪುಟ್ಟ ಖುಷಿಯನ್ನು ಎಂಜಾಯ್ ಮಾಡುತ್ತಿದ್ದೆವು, ಬೆಳೆದು ದೊಡ್ಡವರಾದಂತೆ ಖುಷಿಯ ಪದದ ಅರ್ಥವೇ ಬದಲಾಗಿದೆ.

Happiness: ಖುಷಿಯಾಗಿರುವುದು ನಿಮ್ಮ ಅವಶ್ಯಕತೆಯಲ್ಲ, ಹಕ್ಕು , ನೀವು ಹ್ಯಾಪಿ ಆಗಿರಲು ಹೀಗೆ ಮಾಡಬಹುದಲ್ಲಾ
ನಗು
ನಯನಾ ರಾಜೀವ್
|

Updated on: Mar 22, 2023 | 9:00 AM

Share

ಬಾಲ್ಯದಲ್ಲಿ ಚಿಕ್ಕಪುಟ್ಟ ಖುಷಿಯನ್ನು ಎಂಜಾಯ್ ಮಾಡುತ್ತಿದ್ದೆವು, ಬೆಳೆದು ದೊಡ್ಡವರಾದಂತೆ ಖುಷಿಯ ಪದದ ಅರ್ಥವೇ ಬದಲಾಗಿದೆ. ಹಣವಿದ್ದರೆ ಮಾತ್ರ ಖುಷಿ, ಇಷ್ಟಪಟ್ಟಿದ್ದನ್ನು ಕೊಂಡುಕೊಂಡರೆ ಮಾತ್ರ ಮೊಗದಲ್ಲಿ ನಗು ಹೀಗೆ ಖುಷಿಯ ಅರ್ಥವೂ ಕೂಡ ವಿಷಯಗಳಿಗೆ ಸೀಮಿತವಾಗುತ್ತಾ ಹೋಯಿತು. ಮೊದಲು ಅಮ್ಮ ಮನೆಯಲ್ಲಿ ಸಹಿ ಮಾಡಿದರೆ ಸಾಕು ಚಪ್ಪರಿಸಿ ತಿಂದು ಖುಷಿಪಡುತ್ತಿದ್ದೆವು ಈಗ ಮೃಷ್ಟಾನ್ನ ಭೋಜನವನ್ನೇ ತಿಂದರೂ ಆ ಖುಷಿ ಇಲ್ಲ, ಹಬ್ಬಕ್ಕೆ ಅಪ್ಪ ಬಟ್ಟೆ ತಂದಾಗ ಆಗುವ ಖುಷಿ ನಿತ್ಯ ಮಾಲ್​ಗಳಿಗೆ ಹೋಗಿ ಹತ್ತಾರು ಒಟ್ಟಿಗೆ ಕೊಂಡರೂ ಸಿಗುತ್ತಿಲ್ಲ.

ಸ್ನೇಹಿತರ ಜತೆ ಸೈಕಲ್ ತುಳಿದರೂ ಎಷ್ಟೋ ಖುಷಿ ಈಗ ಸ್ನೇಹಿತರೊಂದಿಗೆ ಮಾತನಾಡಲೂ ಸಮಯವಿಲ್ಲ. ಖುಷಿಯನ್ನು ನೀವೇ ಅರಸುವುದನ್ನು ಬಿಟ್ಟಿದ್ದೀರಿ. ಖುಷಿ ಎಲ್ಲಿಯೂ ಹೋಗಿಲ್ಲ, ಆ ನಗುವನ್ನು ಕಂಡುಕೊಳ್ಳಲು ನೀವು ಪ್ರಯತ್ನಿಸುತ್ತಲೇ ಇಲ್ಲ. ಎಲ್ಲರಿಗೂ ಖುಷಿಯಾಗಿರುವ ಹಕ್ಕಿದೆ.

ನೀವು ಗಳಿಸಿರುವ ಸಂತೋಷಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ನೀವು ಈಗಿರುವ ಸ್ಥಿತಿಗೆ ಸಿಕ್ಕಿರುವ ಖುಷಿಗೆ ಸಂತೋಷವನ್ನು ವ್ಯಕ್ತಪಡಿಸಿ. ನಿಮ್ಮಲ್ಲಿರುವ ಎಷ್ಟೋ ವಸ್ತುಗಳು ಬೇರೆಯವರ ಬಳಿ ಇರುವುದಿಲ್ಲ ಅದಕ್ಕಾಗಿ ಖುಷಿ ಪಡಿ.

ನಿಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಿ ನೀವು ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಈಗ ಹೇಗೆ ತಂತೋಷವಾಗಿರಬೇಕು ಎಂಬುದರ ಕಡೆಗೆ ಹೆಚ್ಚು ಗಮನಕೊಡುವುದು ಅಗತ್ಯ. ಕೆಲವರು ಅನುಭವಿಸಿರುವ ಕಹಿ ನೆನಪುಗಳನ್ನೇ ಮೆಲುಕು ಹಾಕುತ್ತಾ ಮತ್ತೆ ಮತ್ತೆ ನೋವು ಅನುಭವಿಸುತ್ತಿರುತ್ತಾರೆ, ಆದರೆ ಅದೆಲ್ಲದರಿಂದ ಹೊರಬರಲೇಬೇಕು ಆಗ ಮಾತ್ರ ನೀವು ಸಂತೋಷವಾಗಿರಲು ಸಾಧ್ಯ.

ಇತರರಿಗೆ ಹಿತವೆನಿಸುವಂತಿರಿ ಯಾರಾದರೂ ನಮಗೆ ಕಟ್ಟದ್ದನ್ನು ಮಾಡಿದರೆ, ನಮಗೆ ಅವರ ಮೇಲೆ ನಕಾರಾತ್ಮಕ ಭಾವನೆಗಳು ಹುಟ್ಟುವುದು ಸಹಜ. ಆದರೆ ಅವರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆಯುವುದು ಜಾಣತನ. ನಿಮ್ಮ ಮನಸ್ಸಿನಲ್ಲಿ ಯಾರಿಗಾದರೂ ನಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡರೆ, ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಕೋಪವನ್ನು ನಿಯಂತ್ರಿಸಿ.

ನಿಮಗೆ ಏನಿಷ್ಟವೋ ಅದನ್ನು ಮಾಡಿ ನಿಮ್ಮ ನೆಚ್ಚಿನ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯವಾಗಿರುತ್ತದೆ. ಇದು ಚಿಂತೆಯನ್ನು ದೂರವಿರಸಲು ಸುಲಭ ಮಾರ್ಗವಾಗಿದೆ. ನಿಮ್ಮ ಬಯಕೆಗಳ ಮೇಲೆ ಕೆಲಸ ಮಾಡುವುದು ಒತ್ತಡ ಮತ್ತು ಆತಂಕದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.

ನಿಮಗೆ ನೀವೇ ಸವಾಲು ಹಾಕಿ ಇತರರನ್ನು ಸವಾಲಾಗಿ ತೆಗೆದುಕೊಳ್ಳುವ ಬದಲು ನಿಮಗೆ ನೀವು ಸವಾಲು ಹಾಕಿ, ನಿಮ್ಮ ವ್ಯಕ್ತಿತ್ವವನ್ನು ಹೇಗೆ ಸುಧಾರಿಸಿಕೊಳ್ಳುವುದು ಎಂಬುದರ ಕುರಿತು ಗಮನವಹಿಸಿ ಅದರಿಂದ ನೀವು ಚಿಂತೆಯನ್ನು ಮರೆತು ನೆಮ್ಮದಿಯಿಂದ ಇರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು