AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಕಿರುಬೆರಳು ವ್ಯಕ್ತಿತ್ವ ಹೇಳುತ್ತೆ

ಕೈಯಲ್ಲಿರುವ ಎಲ್ಲಾ ಬೆರಳುಗಳು ಒಂದೇ ತರಹ ಇರಲು ಸಾಧ್ಯವಿಲ್ಲ. ಅದರಲ್ಲಿಯೂ ಈ ಬೆರಳುಗಳಲ್ಲಿಯೇ ನಾಜೂಕಾದ ಸಣ್ಣದಾದ ಬೆರಳೆಂದರೆ ಈ ಕಿರುಬೆರಳು. ಹೆಬ್ಬೆಟ್ಟಿಗಿಂತ ಉದ್ದ ಮತ್ತು ಉಳಿದ ಬೆರಳುಗಳಿಗಿಂತ ಪುಟ್ಟದಾದ ಈ ಬೆರಳಿನಲ್ಲಿಯೇ ಅಡಗಿದೆ ವ್ಯಕ್ತಿತ್ವ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ಕಿರುಬೆರಳಿನ ಉದ್ದವು ವ್ಯಕ್ತಿಯj ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ನಿಮ್ಮ ಕಿರುಬೆರಳು ಎಷ್ಟು ಉದ್ದವಿದೆ ಎನ್ನುವ ಆಧಾರದ ಮೇಲೆ ನಿಮ್ಮ ಗುಣಸ್ವಭಾವ ತಿಳಿದುಕೊಳ್ಳಬಹುದಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test: ನಿಮ್ಮ ಕಿರುಬೆರಳು ವ್ಯಕ್ತಿತ್ವ ಹೇಳುತ್ತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 14, 2025 | 12:50 PM

Share

ನೀವು ಎಂದಾದರೂ ನಿಮ್ಮ ಕೈಬೆರಳುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ. ಹೌದು,ಕೈಯಲ್ಲಿರುವ ಐದು ಬೆರಳುಗಳ ಉದ್ದವು ಬೇರೆ ಬೇರೆಯಾಗಿರುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಕೈ ಬೆರಳಿನ ಉದ್ದದಲ್ಲಿ ಭಿನ್ನತೆ ಕಾಣಬಹುದು. ಆದರೆ ಕಿರುಬೆರಳು ಉಂಗುರ ಬೆರಳಿಗಿಂತ ಎಷ್ಟು ಉದ್ದವಿದೆ ಎನ್ನುವ ಆಧಾರದ ಮೇಲೆ ವ್ಯಕ್ತಿಯ ಗುಣಸ್ವಭಾವವೇನೆಂದು ಸುಲಭವಾಗಿ ತಿಳಿದುಕೊಳ್ಳಬಹುದು. ಹೀಗಾಗಿ ನಿಮ್ಮ ಕಿರು ಬೆರಳು ಉಂಗುರ ಬೆರಳಿಗೆ ಸಮವಾಗಿದೆಯೇ, ಚಿಕ್ಕದಿದೆಯೇ ಎಂದು ಒಮ್ಮೆ ಗಮನಿಸಿ. ಇದು ನಿಮ್ಮ ನಿಗೂಢ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

  • ಕಿರುಬೆರಳು ನಿಮ್ಮ ಉಂಗುರದ ಬೆರಳಿಗಿಂತ ಉದ್ದವಾಗಿದ್ದರೆ : ಕಿರುಬೆರಳಿನ ಉದ್ದವು ಹೀಗಿದ್ದರೆ ಈ ವ್ಯಕ್ತಿಗಳು ಉದಾರ ಸ್ವಭಾವವುಳ್ಳವರು. ಸಹಾಯ ಎಂದ ಕೂಡಲೇ ತನ್ನ ಬಳಿ ಇರುವ ಎಲ್ಲದ್ದನ್ನು ಕೊಟ್ಟು ಬಿಡುತ್ತಾರೆ. ಅದಲ್ಲದೇ, ಯಾರಿಗಾದರೂ ಏನನ್ನೂ ಕೊಡುವ ಮೊದಲು ತನ್ನ ಬಗ್ಗೆ ಸ್ವಲ್ಪ ಕೂಡ ಯೋಚನೆ ಮಾಡುವುದಿಲ್ಲ. ನಿಸ್ವಾರ್ಥ ಗುಣ ಹೊಂದಿದ್ದು, ಎಲ್ಲರಿಗೂ ಒಳ್ಳೆಯದೇ ಆಗಲಿ ಎಂದು ಬಯಸುತ್ತಾರೆ. ಬುದ್ಧಿವಂತರಾಗಿದ್ದು, ಎಲ್ಲರ ಮಾತನ್ನು ಕೇಳುತ್ತೀರಿ. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ನೂರು ಬಾರಿ ಯೋಚಿಸುತ್ತಾರೆ. ಈ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ತಮ್ಮದೇ ಇರಲು ಇಷ್ಟಪಡುತ್ತಾರೆ. ಈ ಜನರಿಗೆ ಒಳಗೊಂದು ಹೊರಗೊಂದು ಸ್ವಭಾವ ತೋರ್ಪಡಿಸುವ ಜನರೆಂದರೆ ಆಗುವುದಿಲ್ಲ.
  • ಕಿರುಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿದ್ದರೆ : ಉಂಗುರ ಬೆರಳಿಗಿಂತ ಚಿಕ್ಕದಾದ ಕಿರುಬೆರಳನ್ನು ಹೊಂದಿರುವ ಜನರು ಕರುಣಾಮಯಿಗಳಾಗಿದ್ದು, ಯಾರಿಗಾದರೂ ಕಷ್ಟ ಎಂದರೆ ಸಹಾಯ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ತಮ್ಮ ಆದ್ಯತೆ ಹಾಗೂ ಆಸೆಗಳಿಗೆ ಬೆಲೆ ಕೊಡುವುದರ ಬದಲು ಇತರರ ಆಸೆ ಆಕಾಂಕ್ಷೆಗಳಿಗೆ ಈಡೇರಿಸಲು ಮುಂದಾಗುತ್ತಾರೆ. ನಿಸ್ವಾರ್ಥ ಸ್ವಭಾವ ಹೊಂದಿದ್ದು ಸಮಾಜದಲ್ಲಿ ಒಂದೊಳ್ಳೆ ಸ್ಥಾನಮಾನ ಹಾಗೂ ಗೌರವ ಸಂಪಾದಿಸಿಕೊಳ್ಳುತ್ತಾರೆ. ತನ್ನವರು ಎಷ್ಟೇ ಬೇಜಾರು ನೋವು ಮಾಡಿದರೂ ಇವರ ಕಾಳಜಿ ಮಾಡುವ ರೀತಿ ಬದಲಾಗುವುದಿಲ್ಲ. ಎಲ್ಲರನ್ನು ಕ್ಷಮಿಸುತ್ತಾರೆ. ಆದರೆ ಮೋಸ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗುಣ ಈ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ.
  • ಉಂಗುರದ ಬೆರಳು ಮತ್ತು ಕಿರುಬೆರಳು ಸಮಾನವಾಗಿದ್ದರೆ : ಉಂಗುರದ ಬೆರಳು ಮತ್ತು ಕಿರುಬೆರಳು ಒಂದೇ ನೇರಕ್ಕೆ ಇದ್ದರೆ ಈ ವ್ಯಕ್ತಿಗಳು ಸಮತೋಲಿತ ವ್ಯಕ್ತಿಗಳಾಗಿರುತ್ತಾರೆ. ಎಲ್ಲರೊಂದಿಗೆ ಬೆರೆಯುವ ಹಾಗೂ ತನ್ನವರನ್ನು ಮುನ್ನಡೆಸಿಕೊಂಡು ಹೋಗುವ ಗುಣ ಈ ವ್ಯಕ್ತಿಗಳಲ್ಲಿ ಅಧಿಕವಾಗಿರುತ್ತದೆ. ಶಾಂತ ಸ್ವಭಾವವನ್ನು ಹೊಂದಿದ್ದು, ಜಗಳಗಳಿಂದ ದೂರವಿರಲು ಬಯಸುತ್ತಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ಎಲ್ಲದಕ್ಕೂ ಸುಲಭ ಪರಿಹಾರ ಕಂಡುಕೊಳ್ಳುತ್ತಾರೆ. ಶ್ರಮ ಜೀವಿಗಳಾಗಿದ್ದು, ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ