AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ ಸುಕ್ಕುಗಟ್ಟುವುದನ್ನು ತಡೆದು ಸದಾ ಯಂಗ್ ಆಗಿ ಕಾಣುವಂತೆ ಮಾಡಲು ಹೀಗೆ ಮಾಡಿ

ವಯಸ್ಸಾದಂತೆ ಮುಖ ಸುಕ್ಕುಗಟ್ಟುವುದು, ಮುಖದಲ್ಲಿ ಮೊಡವೆ ಮೂಡುವುದು, ಕಲೆಗಳು ಮೂಡುವುದು ಎಲ್ಲಾ ಸಾಮಾನ್ಯ ಆದರೆ ಈ ಕೆಲವು ಉತ್ಪನ್ನಗಳು ನೀವು ಸದಾ ಯಂಗ್ ಆಗಿ ಕಾಣಲು ಸಹಾಯ ಮಾಡುತ್ತವೆ.

ಮುಖ ಸುಕ್ಕುಗಟ್ಟುವುದನ್ನು ತಡೆದು ಸದಾ ಯಂಗ್ ಆಗಿ ಕಾಣುವಂತೆ ಮಾಡಲು ಹೀಗೆ ಮಾಡಿ
Face
TV9 Web
| Edited By: |

Updated on: Aug 01, 2022 | 10:37 AM

Share

ವಯಸ್ಸಾದಂತೆ ಮುಖ ಸುಕ್ಕುಗಟ್ಟುವುದು, ಮುಖದಲ್ಲಿ ಮೊಡವೆ ಮೂಡುವುದು, ಕಲೆಗಳು ಮೂಡುವುದು ಎಲ್ಲಾ ಸಾಮಾನ್ಯ ಆದರೆ ಈ ಕೆಲವು ಉತ್ಪನ್ನಗಳು ನೀವು ಸದಾ ಯಂಗ್ ಆಗಿ ಕಾಣಲು ಸಹಾಯ ಮಾಡುತ್ತವೆ. ನೀವು ಚೆಂದವಾಗಿ ಕಾಣಬೇಕೆಂದು ಕಾಸ್ಮೆಟಿಕ್ಸ್​ಗಳ ಪ್ರಯೋಗ ಮಾಡಬೇಡಿ, ನೈಸರ್ಗಿಕವಾಗಿ ಸಿಗುವಂತಹ ವಸ್ತುಗಳನ್ನೇ ಬಳಸಿ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಬಹುದು.

ನಿಮ್ಮ ಚರ್ಮದ ಆರೈಕೆಯ ಗುಣಮಟ್ಟವು ನೀವು ಆಯ್ಕೆ ಮಾಡಿದ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುತ್ತದೆ. ಸೂಕ್ಷ್ಮ ಚರ್ಮ ಮತ್ತು ಇತರ ಪರಿಸ್ಥಿತಿಗಳಿಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ನಿಮ್ಮ ಚರ್ಮವನ್ನು ನೇರವಾಗಿ ಬೀಳುವ ಸೂರ್ಯನ ಕಿರಣಗಳು, ಮಾಲಿನ್ಯಕಾರಕಗಳು ಮತ್ತು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಇತರ ಸಮಸ್ಯೆಗಳಿಂದ ರಕ್ಷಿಸಬಹುದು.

ಅಣಬೆಗಳು: ಅಣಬೆಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಯಾವುದೇ ಆಕ್ಸಿಡೇಟಿವ್ ಒತ್ತಡವನ್ನು ಸುಲಭವಾಗಿ ನಿವಾರಿಸುತ್ತದೆ. ಈ ಅಣಬೆಗಳು ಚರ್ಮದ ಟೋನ್​ಗಳನ್ನು ಸರಿಯಾಗಿಸುತ್ತದೆ ಹಾಗೂ ಸ್ಪಷ್ಟವಾದ ಮತ್ತು ಆರೋಗ್ಯಕರವಾಗಿ ಕಾಣುವ ಮೈಬಣ್ಣ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ಮೊಡವೆ, ಡೆರ್ಮಟೈಟಿಸ್, ದದ್ದುಗಳು, ಅಲರ್ಜಿಗಳು, ಸೊಳ್ಳೆಗಳು ಕಚ್ಚುವಿಕೆ, ತುರಿಕೆ, ರೋಸಾಸಿಯಾ ಅಥವಾ ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳಿರುವ ಯಾರಾದರೂ ಚಾಗಾ ಮಶ್ರೂಮ್ ಒದಗಿಸುವ ಅದ್ಭುತ ಪ್ರಯೋಜನ ಪಡೆಯಬಹುದು.

ವಿಟಮಿನ್ ಎ: ದೇಹವು ಸರಾಗವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಪ್ರಮಾಣದ ವಿಟಮಿನ್ ಎ ಬೇಕಾಗುತ್ತದೆ. ಇದು ಜೀವಕೋಶಗಳ ಬೆಳವಣಿಗೆ, ರೋಗನಿರೋಧಕ ಕ್ರಿಯೆ, ದೃಷ್ಟಿ ಮತ್ತು ಭ್ರೂಣದ ಬೆಳವಣಿಗೆಗೆ ತುಂಬಾ ಸಹಾಯಕ.

ಹಾಗೆಯೇ ವಿಟಮಿನ್ ಎ ಚರ್ಮಕ್ಕೆ ಪ್ರಯೋಜನಕಾರಿಯಾಗಿದ್ದು, ಇದು ಉಗುರುಗಳು ಮತ್ತು ಕೂದಲಿನ ಉತ್ತಮ ಬೆಳವಣಿಗೆಗೆ ಸಹ ಅತ್ಯಗತ್ಯ. ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವ ಅನೇಕ ಆಹಾರಗಳಿವೆ.

ವಿಟಮಿನ್ ಎ ಯ ಪ್ರಯೋಜನಗಳು: ವಿಟಮಿನ್ ಎ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುವುದಲ್ಲದೆ, ರಾತ್ರಿ ಕುರುಡುತನವನ್ನು ತಡೆಯುತ್ತದೆ. ಆಹಾರದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಎ ಸೇರಿಸುವುದರಿಂದ ವೃದ್ಧಾಪ್ಯದ ದೃಷ್ಟಿ ದುರ್ಬಲತೆಯನ್ನು ದೂರ ಮಾಡಬಹುದು.

ವಿಟಮಿನ್ ಸಿ ವಿಟಮಿನ್ ಸಿ ಆಹಾರಗಳು ಚರ್ಮ ಸುಕ್ಕುಗಟ್ಟುವುದನ್ನು ನಿಧಾನಗೊಳಿಸುತ್ತದೆ. ಕಾಂತಿಯನ್ನು ಹೆಚ್ಚಿಸಲು ಸುಕ್ಕುಗಳು ಮತ್ತು ಕುಗ್ಗಿದ ಚರ್ಮದಂತಹ ವಯಸ್ಸಾದ ರೋಗಲಕ್ಷಣಗಳನ್ನು ಎದುರಿಸಲು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

ನಿಮ್ಮ ಚರ್ಮವು ನೈಸರ್ಗಿಕವಾಗಿ ಈ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ಕುಗ್ಗುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆದಾಗ್ಯೂ, ನೀವು ವಯಸ್ಸಾದಂತೆ, ನಿಮ್ಮ ದೇಹವು ಕಡಿಮೆ ಕಾಲಜನ್ ಅನ್ನು ಉತ್ಪಾದಿಸುತ್ತದೆ.

ಚರ್ಮಕ್ಕೆ ಅನ್ವಯಿಸುವ ವಿಟಮಿನ್ ಸಿ ಹೊಸ ಕಾಲಜನ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ, ಇದು ಚರ್ಮವನ್ನು ರಕ್ಷಿಸುತ್ತದೆ ಮತ್ತು ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ವಿಟಮಿನ್ ಸಿಜಿ – ಆಸ್ಕೋರ್ಬಿಲ್ ಗ್ಲುಕೋಸೈಡ್ ಎಂದೂ ಕರೆಯುತ್ತಾರೆ. ಇದು ಚರ್ಮದ ಕಾಂತಿಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಉರಿಯೂತ ಕಡಿಮೆ ಮಾಡಿಕೊಳ್ಳುವುದು ಕ್ಯಾನ್ಸರ್, ಹೃದ್ರೋಗ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ವಯಸ್ಸಾಗುವಿಕೆಗೆ ಸಂಬಂಧಿಸಿದಂತೆ ಬರುವ ಕಾಯಿಲೆಗಳಲ್ಲಿ 90% ರಷ್ಟು ಕಾಯಿಲೆಗಳು ಬರಲು ಕಾರಣ ದೀರ್ಘಕಾಲದ ದೇಹದಾದ್ಯಂತವಿರುವ ಉರಿಯೂತ ಎಂದು ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಶಾಲೆಯ ಅಧ್ಯಯನ ಹೇಳುತ್ತದೆ. ನಿತ್ಯ ವ್ಯಾಯಾಮ, ಉತ್ತಮ ಆಹಾರ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಉರಿಯೂತವನ್ನು ಎದುರಿಸಲು ಉತ್ತಮ ಮಾರ್ಗವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಡೈರಿ ಹಾಗೂ ಮಾಂಸಾಹರ ಉತ್ಪನ್ನಗಳನ್ನು ತ್ಯಜಿಸಿ ಆರೋಗ್ಯಕರ ಆಹಾರ ಸೇವನೆಯು ಮಧ್ಯವಯಸ್ಕ ವಯಸ್ಕರಲ್ಲಿ 6 – 7 ವರ್ಷಗಳವರೆಗೆ ಮತ್ತು ಕಿರಿಯ ಜನರಲ್ಲಿ ಸುಮಾರು 10 ವರ್ಷಗಳವರೆಗೆ ಜೀವಿತಾವಧಿಯನ್ನು ವಿಸ್ತರಿಸಬಹುದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ