ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರ ಕಡಿಮೆ ಮಾಡಿ, ಈ ಗಿಡಮೂಲಿಕೆ ಮಸಾಲೆ ಬಳಸಿ
ಬೇಸಿಗೆಯಲ್ಲಿ ಪಾಕವಿಧಾನಗಳಿಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅದಕ್ಕೆ ವಿಧಧ ಕಾರಣಗಳು ಇದೆ. ಅದಕ್ಕಾಗಿ ಗಿಡಮೂಲಿಕೆ ಮಸಾಲೆಗಳನ್ನು ಬಳಸುವುದು ಉತ್ತಮ.
Updated on:Apr 17, 2023 | 3:13 PM

ತುಳಸಿ: ಇದು ಅತ್ಯುತ್ತಮವಾದ ಗಿಡಮೂಲಿಕೆ, ಈ ಬೇಸಿಗೆಯಲ್ಲಿ ತುಂಬಾ ಉತ್ತಮ, ದೇಹದ ಉಷ್ಣಾಂಶಕ್ಕೆ ಹೆಚ್ಚು ಉಪಯುಕ್ತವಾಗಿದೆ. ಈ ಮೂಲಿಕೆಯಲ್ಲಿ ಪ್ರಕಾಶಮಾನವಾದ ಶಕ್ತಿ, ತಾಜಾ ರುಚಿ ಮತ್ತು ಪರಿಮಳ ಇರುವುದರಿಂದ ನಿಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಅಡುಗೆ ಮಾಡದರೆ ಇದನ್ನೂ ಬಳಸಿ ನೋಡಿ ಒಮ್ಮೆ.

ಪುದೀನಾ: ಪುದೀನಾ ಬೇಸಿಗೆಯಲ್ಲಿ ತುಂಬಾ ಉತ್ತಮವಾದ ಆಹಾರ. ಇದು ದೇಹದ ಆರೋಗ್ಯಕ್ಕೆ ಉತ್ತಮವಾದ ಮೂಲಿಕೆಯಾಗಿದೆ. ನಿಮ್ಮ ಊಟದ ಸಮಯದಲ್ಲಿ ದೇಹವನ್ನು ತಂಪಾಗಿಸುವ, ಉತ್ತೇಜಕ ಸ್ಪರ್ಶವನ್ನು ನೀಡುತ್ತದೆ, ಇದನ್ನು ಚಹಾ, ನಿಂಬೆ ಪಾನಕ ಅಥವಾ ಹಣ್ಣಿನ ಸಲಾಡ್ಗಳಿಗೆ ಮಿಶ್ರಣ ಮಾಡಿ.

ಜೀರಿಗೆ: ಜೀರಿಗೆ ಈ ಬೆಚ್ಚಗಿನ ಕಾಲದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ, ಏಕೆಂದರೆ ನಮ್ಮ ದೇಹದಲ್ಲಿ ಈ ಬೇಸಿಗೆ ತುಂಬಾ ಉಷ್ಣಾಂಶಗಳನ್ನು ಉಂಟು ಮಾಡುತ್ತದೆ, ಈ ಕಾರಣಕ್ಕೆ ನೀವು ತಿನ್ನುವ ಯಾವುದೇ ಆಹಾರದಲ್ಲಿ ಅಥವಾ ಮಸಾಲೆಗಳಲ್ಲಿ ಜೀರಿಗೆಯನ್ನು ಬಳಸಿ.

ಕೆಂಪುಮೆಣಸು: ಕೆಂಪುಮೆಣಸು ತಿನಿಸುಗಳಿಗೆ ತುಂಬಾ ಸೂಕ್ಷ್ಮವಾದ ಮಾಧುರ್ಯ ಮತ್ತು ಮಸಾಲೆಯಾಗಿದೆ. ಇದನ್ನು ಮಾಂಸಗಳು, ಹುರಿದ ತರಕಾರಿಗಳು ಅಥವಾ ಸ್ಪ್ರೆಡ್ಗಳಿಗೆ ಮಸಾಲೆಯಾಗಿ ಬಳಸಿ. ಇದು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ.

ಓರೆಗಾನೊ: ಓರೆಗಾನೊ ಒಂದು ಬಹುಮುಖ ಮೂಲಿಕೆಯಾಗಿದ್ದು ಇದನ್ನು ವಿವಿಧ ಮಸಾಲೆಗಳಲ್ಲಿ ಮಿಶ್ರಣ ಮಾಡಿಕೊಳ್ಳಬಹುದ. ಚಿಕನ್, ಮೀನು, ಅಥವಾ ತರಕಾರಿಗಳನ್ನು ಇದನ್ನೂ ಬಳಸಿ. ಸೂಪ್ಗಳಲ್ಲಿಯು ಇದನ್ನು ಮಿಶ್ರಣ ಮಾಡಿಕೊಳ್ಳಬಹುದು.

ಥೈಮ್: ಥೈಮ್ ಮಣ್ಣಿನ ಪರಿಮಳವನ್ನು ಹೊಂದಿರುವ ಸೂಕ್ಷ್ಮವಾದ ಮೂಲಿಕೆಯಾಗಿದ್ದು ಅದು ಬೇಸಿಗೆಯ ಭಕ್ಷ್ಯಗಳಿಗೆ ಸೂಕ್ತವಾಗಿದೆ. ಮಾಂಸ ಅಥವಾ ಹುರಿದ ತರಕಾರಿಗಳಲ್ಲಿ ಬಳಸಿದರೆ, ಒಳ್ಳೆಯ ಪರಿಮಳವು ಇರುತ್ತದೆ. ಇದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು.

ರೋಸ್ಮರಿ: ರೋಸ್ಮರಿ ಸುವಾಸನೆಯ ಮೂಲಿಕೆಯಾಗಿದ್ದು ಅದು ಗ್ರಿಲ್ಲಿಂಗ್ ಮತ್ತು ಹುರಿಯಲು ಉತ್ತಮ. ಪರಿಮಳಯುಕ್ತ ಮತ್ತು ರುಚಿಕರವಾದ ಬೇಸಿಗೆ ಊಟವಾದ ಮಾಂಸ, ಆಲೂಗಡ್ಡೆ, ಅಥವಾ ಇತರ ಬೇರು ತರಕಾರಿಗಳಿಗೆ ಇದನ್ನು ಬಳಸಬಹುದು.
Published On - 3:13 pm, Mon, 17 April 23

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್ ಸುದ್ದಿಗಳನ್ನು ಬರೆಯುತ್ತಾರೆ.
Read More




