AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numbness : ಕೈ ಕಾಲುಗಳು ಮರಗಟ್ಟಿದಂತಹ ಅನುಭವವಾಗುತ್ತಿದೆಯೇ, ಟೆನ್ಶನ್ ಬೇಡ ಮನೆಯಲ್ಲೇ ಇದೆ ಔಷಧಿ

ಮಾನವನ ದೇಹದ ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಆ ವ್ಯಕ್ತಿಯನ್ನು ಆರೋಗ್ಯವಂತನಾಗಿದ್ದಾನೆ ಎನ್ನಬಹುದು. ಕೆಲವೊಮ್ಮೆ ಕಾಡುವ ಸಣ್ಣ ಪುಟ್ಟ ಸಮಸ್ಯೆಗಳು ಗಂಭೀರವಾಗುವುದಿಲ್ಲ. ಬಹುತೇಕರಿಗೆ ಕೂತಲ್ಲಿಯೇ ಕೂತಿದ್ದರೆ ಕಾಲುಗಳು ಮರಗಟ್ಟಿದ ಅನುಭವವಾಗಿರುತ್ತದೆ. ಇದನ್ನು ಜೋಮು ಹಿಡಿಯುವುದು ಎನ್ನಲಾಗುತ್ತದೆ. ಹೀಗಾದಾಗ ನಿಲ್ಲಲು ಆಗದೇ, ನಡೆಯಲು ಆಗದೇ ಕೆಲವು ನಿಮಿಷಗಳ ಕಾಲ ಸುಮ್ಮನೆ ಇರಬೇಕಾಗುತ್ತದೆ. ನಿಮಗೂ ಆಗಾಗ ಈ ಕೈ ಕಾಲುಗಳು ಜುಮ್ಮ್ ಎನ್ನುವ ಅನುಭವವಾಗುತ್ತಿದ್ದರೆ ಈ ಸರಳ ಮನೆ ಮದ್ದಿನಿಂದ ಸುಲಭ ಪರಿಹಾರ ಕಂಡುಕೊಳ್ಳಬಹುದು.

Numbness : ಕೈ ಕಾಲುಗಳು ಮರಗಟ್ಟಿದಂತಹ ಅನುಭವವಾಗುತ್ತಿದೆಯೇ, ಟೆನ್ಶನ್ ಬೇಡ ಮನೆಯಲ್ಲೇ ಇದೆ ಔಷಧಿ
ಸಾಯಿನಂದಾ
| Edited By: |

Updated on: Apr 03, 2024 | 1:05 PM

Share

ದೇಹದಲ್ಲಿರುವ ಪ್ರತಿಯೊಂದು ಅಂಗವು ಕಾರ್ಯ ನಿರ್ವಹಣೆಯಾಗಬೇಕಾದರೆ ರಕ್ತ ಪರಿಚಲನೆ ಸರಿಯಾಗಿ ಆಗಬೇಕು. ಕೆಲವೊಮ್ಮೆ ರಕ್ತ ಪರಿಚಲನೆಯಾಗದೇ ಇದ್ದಾಗ ನೋವು, ಸ್ನಾಯು ಸೆಳೆತ, ಕೈ ಕಾಲುಗಳು ಮರಗಟ್ಟುವಿಕೆ, ಪಾದಗಳಲ್ಲಿ ಜುಮ್ಮ್ ಎನ್ನುವುದು ಹೀಗೆ ನಾನಾ ರೀತಿಯ ಅನುಭವವಾಗುತ್ತದೆ. ಈ ಜೋಮು ಹಿಡಿಯುವ ಅಥವಾ ಮರಗಟ್ಟುವ ಅನುಭವವು ಕೆಲವೇ ನಿಮಿಷಗಳು ಆಗಿದ್ದರೂ ಆ ಕ್ಷಣವು ಕಿರಿಕಿರಿಯೆನಿಸುತ್ತದೆ. ನರಗಳ ಮೇಲೆ ಒತ್ತಡ ಬಿದ್ದಾಗ, ಕುಳಿತು ಕೊಳ್ಳುವ ಭಂಗಿಯೂ ಸರಿಯಿಲ್ಲದಿದ್ದಾಗ ಹೀಗಾಗುತ್ತದೆ. ಈ ವೇಳೆಯಲ್ಲಿ ಕೈ ಕಾಲುಗಳನ್ನು ಮುಟ್ಟಿದರೂ ಸ್ಪರ್ಶದ ಅನುಭವವಾಗುವುದೇ ಇಲ್ಲ, ಅಷ್ಟು ಭಾಗವು ಮರಗಟ್ಟಿದಂತಾಗಿರುತ್ತದೆ. ಸ್ವಲ್ಪ ಸಮಯ ಬಳಿಕ ಕೈ ಕಾಲುಗಳು ಯಥಾಸ್ಥಿತಿಗೆ ಮರಳುತ್ತದೆ.

ಕೈ ಕಾಲುಗಳ ಮರಗಟ್ಟುವಿಕೆಗೆ ಸರಳ ಮನೆ ಮದ್ದುಗಳು

  • ಒಂದು ಚಮಚ ಚಕ್ಕೆಯ ಪುಡಿ ಹಾಗೂ ಒಂದು ಚಮಚ ಜೇನುತುಪ್ಪ ಇವೆರಡನ್ನು ಬೆರೆಸಿ ಸೇವಿಸುವುದು ಈ ಸಮಸ್ಯೆಗೆ ಉತ್ತಮವಾದ ಔಷಧಿಯಾಗಿದೆ.
  • ವಿಟಮಿನ್ ಬಿ, ವಿಟಮಿನ್ ಬಿ6, ವಿಟಮಿನ್ ಬಿ12 ಹೇರಳವಾಗಿರುವ ಆಹಾರಗಳ ಸೇವನೆಯಿಂದ ಈ ಸಮಸ್ಯೆಯು ಬಾರದಂತೆ ನೋಡಿಕೊಳ್ಳಬಹುದು.
  • ಒಂದು ಬಕೆಟ್ ಬಿಸಿನೀರಿಗೆ ಎರಡು ಚಮಚ ಉಪ್ಪು ಹಾಕಿ ಕೆಲವು ನಿಮಿಷ ಕೈ ಕಾಲುಗಳನ್ನು ಇಟ್ಟರೆ ಜುಮ್ಮ್ ಎನ್ನುವ ಅನುಭವವು ದೂರವಾಗುತ್ತದೆ.
  • ವಾರಕ್ಕೊಮ್ಮೆ ಕೈ ಕಾಲುಗಳಿಗೆ ಎಳ್ಳೆಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಸರಿಯಾಗಿ ಜೋಮು ಹಿಡಿಯುವುದಿಲ್ಲ.
  • ಬೆಳಗ್ಗೆ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ ಕುಡಿಯುವುದು ಕೂಡ ಪರಿಣಾಮಕಾರಿಯಾಗಿದೆ.
  • ಅಶ್ವತ್ಥ ಮರದ ಮೂರು ನಾಲ್ಕು ತಾಜಾ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ, ಈ ಎಣ್ಣೆಯಿಂದ ಕೈ ಕಾಲುಗಳನ್ನು ಮಸಾಜ್ ಮಾಡುವುದರಿಂದ ಮರಗಟ್ಟುವಿಕೆ ಸಮಸ್ಯೆಯು ಶಮನವಾಗುತ್ತದೆ.
  • ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಒಣ ಶುಂಠಿ, ಒಂದೆರಡು ಲವಂಗ ಹಾಗೂ ಬೆಳ್ಳುಳ್ಳಿಯನ್ನು ಅಗಿದು ತಿನ್ನುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಬಹುದು.
  • ರಾತ್ರಿ ಮಲಗುವುದಕ್ಕೂ ಮೊದಲು ದೇಸಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಪಾದದ ಅಡಿಭಾಗಕ್ಕೆ ಹಾಗೂ ಕೈಗೆ ಮಸಾಜ್ ಮಾಡುವುದು ಪರಿಣಾಮಕಾರಿಯಾಗಿದೆ.

ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?