AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stay Positive: ನಕಾರಾತ್ಮಕ ಅಂಶಗಳು ನಿಮ್ಮ ಮೇಲೆ ಪ್ರಭಾವ ಬೀರದಂತೆ ತಡೆಯಲು ಈ ವಿಧಾನಗಳು ಉತ್ತಮ

ಏರಿಳಿತಗಳಿಂದ ಕೂಡಿದ ಈ ಜಗತ್ತಿನಲ್ಲಿ ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ವಿಚಾರಕ್ಕಿಂತ ಬೇಗ ನಕಾರಾತ್ಮಕ ವಿಚಾರಗಳೇ ಪರಿಣಾಮ ಬೀರುತ್ತವೆ.

Stay Positive: ನಕಾರಾತ್ಮಕ ಅಂಶಗಳು ನಿಮ್ಮ ಮೇಲೆ ಪ್ರಭಾವ ಬೀರದಂತೆ ತಡೆಯಲು ಈ ವಿಧಾನಗಳು ಉತ್ತಮ
ಪಾಸಿಟಿವ್Image Credit source: Forbes
ನಯನಾ ರಾಜೀವ್
|

Updated on: Jun 17, 2023 | 9:00 AM

Share

ಏರಿಳಿತಗಳಿಂದ ಕೂಡಿದ ಈ ಜಗತ್ತಿನಲ್ಲಿ ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ವಿಚಾರಕ್ಕಿಂತ ಬೇಗ ನಕಾರಾತ್ಮಕ ವಿಚಾರಗಳೇ ಪರಿಣಾಮ ಬೀರುತ್ತವೆ. ಕೆಟ್ಟ ವಿಚಾರಗಳೇ ನಿಮ್ಮನ್ನು ಸುತ್ತುವರೆದಿರುವಾಗ ಒಳ್ಳೆಯ ವಿಚಾರಗಳು ಬಹುಬೇಗ ನಿಮ್ಮ ಬಳಿ ಸುಳಿಯುವುದಿಲ್ಲ. ನೀವು ನಕಾರಾತ್ಮಕತೆ ನಡುವೆ ಸಕಾರಾತ್ಮಕ ವಿಚಾರಗಳನ್ನು ಆರಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಬೇಕು. ನೀವು ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ನಕಾರಾತ್ಮಕತೆಯಿಂದ ದೂರವಿರುವುದು ಬಹಳ ಮುಖ್ಯ. ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಸಂಗ್ರಹಿಸಲು ಪ್ರಯತ್ನಿಸಿ, ಅದು ನಿಮಗೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

1. ಧನಾತ್ಮಕ ಪದಗಳನ್ನು ಬಳಸಿ ನಾನು ಕೃತಜ್ಞನಾಗಿದ್ದೇನೆ, ನಾನು ಸಿದ್ಧನಿದ್ದೇನೆ, ನಾನು ಕಲಿಯಲು ಇಷ್ಟಪಡುತ್ತೇನೆ ಎನ್ನುವ ನಿಮ್ಮ ಸಕಾರಾತ್ಮಕ ಹೇಳಿಕೆಗಳು ಬಹಳ ದೂರ ನಿಮ್ಮನ್ನು ಕರೆದೊಯ್ಯುತ್ತದೆ. ನಾವು ಸಂವಹನ ಮಾಡುವ ವಿಧಾನವು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಈಗ ನೀವು ಯಾವ ರೀತಿಯ ಪದಗಳನ್ನು ಆರಿಸುತ್ತೀರಿ ಮತ್ತು ಜನರ ಮುಂದೆ ನಿಮ್ಮ ಅಭಿಪ್ರಾಯವನ್ನು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಪ್ರೀತಿ, ಪರಿಹಾರ, ಸಂತೋಷ, ಸುರಕ್ಷಿತ ಇತ್ಯಾದಿ ಪದಗಳನ್ನು ಬಳಸುವುದರಿಂದ ಹೆಚ್ಚು ಹರ್ಷಚಿತ್ತದಿಂದ ಸಂವಹನ ಮಾಡಿ ಅದು ನಿಮ್ಮ ಮನಸ್ಸನ್ನು ನಿರಾಳವಾಗಿಸುತ್ತದೆ.

2. ನಕಾರಾತ್ಮಕ ಸುದ್ದಿಗಳತ್ತ ಗಮನಹರಿಸಬೇಡಿ ಅನೇಕ ಜನರು ದಿನಪತ್ರಿಕೆಗಳಲ್ಲಿ ಅಥವಾ ಟಿವಿಗಳಲ್ಲಿ ಕೊಲೆ, ಅಪಘಾತ ಇಂತಹ ನಕಾರಾತ್ಮಕ ಸುದ್ದಿಗಳನ್ನು ನೋಡಲು ಪ್ರಾರಂಭಿಸುತ್ತಾರೆ. ದಿನದ ದೀರ್ಘ ಸಮಯವನ್ನು ಅದರ ಮೇಲೆ ಕಳೆಯುತ್ತಾರೆ. ಹೀಗೆ ನಿಮ್ಮ ಮನಸ್ಸು ಋಣಾತ್ಮಕ ಸಂಗತಿಗಳಿಂದ ತುಂಬಿರುತ್ತದೆ ಮತ್ತು ನೀವು ದಿನವಿಡೀ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ವಿಷಯಗಳನ್ನು ಯೋಚಿಸುತ್ತಿರುತ್ತೀರಿ. ಆದ್ದರಿಂದ ನೀವು ನಿಮ್ಮ ಸುತ್ತಲಿನ ಸಕಾರಾತ್ಮಕತೆಯನ್ನು ನಿರ್ಲಕ್ಷಿಸಲು ಆರಂಭಿಸುತ್ತೀರಿ.

ಅಂತಹ ಪರಿಸ್ಥಿತಿಯಲ್ಲಿ, ಯಾವಾಗಲೂ ನಿಮ್ಮ ದಿನವನ್ನು ಸಕಾರಾತ್ಮಕ ಲೇಖನಗಳೊಂದಿಗೆ ಪ್ರಾರಂಭಿಸಿ. ಇಂತಹ ಹಲವು ಮಾಹಿತಿಯುಕ್ತ ಸುದ್ದಿಗಳಿವೆ. ಅಲ್ಲದೆ, ನಿಮ್ಮ ಪತ್ರಿಕೆಯಲ್ಲಿ ಜೋಕ್‌ಗಳನ್ನು ಹೊಂದಿದ್ದರೆ, ಅವುಗಳನ್ನು ಸಹ ನೋಡಿ. ಕೊನೆಯಲ್ಲಿ, ಮೇಲಿನಿಂದ ನಕಾರಾತ್ಮಕ ಸುದ್ದಿಗಳನ್ನು ನೋಡಿ.

ಮತ್ತಷ್ಟು ಓದಿ: Mental Health: ನಿಮ್ಮ ದೈಹಿಕ ಸಮಸ್ಯೆಗಳು ಮಾನಸಿಕ ಆರೋಗ್ಯವನ್ನೂ ಕುಗ್ಗಿಸುತ್ತೆ, ಕಾಯಿಲೆಗೆ ಔಷಧ ನೀಡಿ, ಕೊರಗಬೇಡಿ

3. ಸಂಗೀತವನ್ನು ಕೇಳುವುದು ಸಹಾಯ ಮಾಡುತ್ತದೆ ಸರಿಯಾದ ಸಂಗೀತವು ನಿಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವೈಯಕ್ತಿಕವಾಗಿ ನಿಮ್ಮ ಮನಸ್ಸಿಗೆ ಶಾಂತಿ ತರುವ ಮತ್ತು ನೀವು ನಿಜವಾಗಿಯೂ ಆನಂದಿಸುವ ಹಾಡುಗಳ ಪಟ್ಟಿಯನ್ನು ರಚಿಸಿ. ನಿಮಗೆ ಪಾಸಿಟಿವ್ ಎನರ್ಜಿ ಬೇಕಾದಾಗಲೆಲ್ಲಾ ಆ ಹಾಡುಗಳನ್ನು ಆಲಿಸಿ.

4. ಕಷ್ಟ ಕಳೆದ ಬಳಿಕ ಒಳ್ಳೆಯ ದಿನಗಳ ಬರಲೇಬೇಕು ಹೇಗೆ ಬೆಳಗ್ಗೆ ಕಳೆದು ರಾತ್ರಿಯಾಗುವುದೋ ಹಾಗೆಯೇ ರಾತ್ರಿ ಕಳೆದು ಬೆಳಗಾಗಲೇಬೇಕು, ಕಷ್ಟದ ದಿನಗಳು ಕಳೆದು ಒಳ್ಳೆಯ ದಿನಗಳು ಬರುತ್ತದೆ, ಆದರೆ ನಂಬಿಕೆ ಇರಬೇಕಷ್ಟೆ. ನಿಮ್ಮ ಈ ಮನೋಭಾವವು ಪ್ರಸ್ತುತ ಕ್ಷಣದ ಮೇಲೆ ಕೇಂದ್ರೀಕರಿಸಲು ನಿಮಗೆ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು ನಕಾರಾತ್ಮಕತೆಯನ್ನು ಬಿಟ್ಟು ಸಕಾರಾತ್ಮಕ ವಿಷಯಗಳತ್ತ ಸಾಗಲು ಪ್ರೋತ್ಸಾಹಿಸುತ್ತದೆ.

5. ನಿಮ್ಮಲ್ಲಿ ಸ್ವಯಂ ಪ್ರೀತಿ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು, ನಿಮ್ಮನ್ನು ಪ್ರೀತಿಸುವುದು ಮತ್ತು ನಿಮ್ಮನ್ನು ನಂಬುವುದು ಬಹಳ ಮುಖ್ಯ. ನಾಳೆ ಯಾರಾದರೂ ನಿಮ್ಮತ್ತ ಬೆರಳು ತೋರಿಸಿದರೆ, ನೀವು ನಿಮ್ಮನ್ನು ಅನುಮಾನಿಸಲು ಪ್ರಾರಂಭಿಸುತ್ತೀರಿ, ಅದು ಸರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಭಯವಿದ್ದರೆ, ನೀವು ನಿಮ್ಮ ಕಡೆಗೆ ಹೆಚ್ಚು ಭಯವನ್ನು ಆಕರ್ಷಿಸುತ್ತೀರಿ. ಮತ್ತೊಂದೆಡೆ, ನೀವು ನಿರಾಶಾವಾದಿಯಾಗಿದ್ದರೆ, ನಿಮ್ಮ ಕಡೆಗೆ ಹೆಚ್ಚು ನಿರಾಶಾವಾದವನ್ನು ಆಕರ್ಷಿಸುತ್ತೀರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!