AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡವೆಂಬ ಸಂಕೋಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೀರಾ ಈ ಸಲಹೆಗಳು ನಿಮಗೆ ನೆರವಾಗಬಹುದು

ಜೀವನದಲ್ಲಿ ನಮ್ಮ ಆರೋಗ್ಯಕ್ಕಿಂತ ಹೆಚ್ಚು ನಮ್ಮ ಕೆಲಸಕ್ಕೆ ಆದ್ಯತೆ ನೀಡುತ್ತೇವೆ. ಯಶಸ್ವಿಯಾಗಲು, ನಾವು ನಿರಂತರವಾಗಿ ಒತ್ತಡದ ಸಂಕೋಲೆಗಳಲ್ಲಿ ಸಿಲುಕಿ ಒದ್ದಾಡುತ್ತಿರುತ್ತೇವೆ. ಕೆಲಸದ ಒತ್ತಡದಿಂದ ಹೊರಬರುವುದು ನಿಮ್ಮ ದೇಹ ಹಾಗೂ ಮನಸ್ಸು ಎರಡಕ್ಕೂ ಒಳ್ಳೆಯದು.

ಒತ್ತಡವೆಂಬ ಸಂಕೋಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೀರಾ ಈ ಸಲಹೆಗಳು ನಿಮಗೆ ನೆರವಾಗಬಹುದು
ಮಾನಸಿಕ ಆರೋಗ್ಯImage Credit source: Healthshots.com
ನಯನಾ ರಾಜೀವ್
|

Updated on:Aug 17, 2023 | 3:05 PM

Share

ಜೀವನದಲ್ಲಿ ನಮ್ಮ ಆರೋಗ್ಯಕ್ಕಿಂತ ಹೆಚ್ಚು ನಮ್ಮ ಕೆಲಸಕ್ಕೆ ಆದ್ಯತೆ ನೀಡುತ್ತೇವೆ. ಯಶಸ್ವಿಯಾಗಲು, ನಾವು ನಿರಂತರವಾಗಿ ಒತ್ತಡದ ಸಂಕೋಲೆಗಳಲ್ಲಿ ಸಿಲುಕಿ ಒದ್ದಾಡುತ್ತಿರುತ್ತೇವೆ. ಕೆಲಸದ ಒತ್ತಡದಿಂದ ಹೊರಬರುವುದು ನಿಮ್ಮ ದೇಹ ಹಾಗೂ ಮನಸ್ಸು ಎರಡಕ್ಕೂ ಒಳ್ಳೆಯದು. ಕೆಲಸಕ್ಕೆ ಹೋಗುವ ವ್ಯಕ್ತಿಯು ತನ್ನ ವೈಯಕ್ತಿಕ ಜೀವನದ ಬೇಡಿಕೆಗಳಿಗೆ ಸಮಾನ ಆದ್ಯತೆಯನ್ನು ನೀಡುತ್ತಾನೆ. ಕೆಲಸದ ಸ್ಥಳದಲ್ಲಿ ಹೆಚ್ಚುತ್ತಿರುವ ಜವಾಬ್ದಾರಿಗಳು, ಹೆಚ್ಚು ಸಮಯ ಕೆಲಸ ಮಾಡುವುದು, ಮನೆಯಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಲು ಸಮಸ್ಯೆಯುಂಟಾಗಬಹುದು.

ಪ್ರಮುಖ ಕೆಲಸಗಳಿಗೆ ಆದ್ಯತೆ ನೀಡಿ ನೀವು ಕೆಲಸ ಮಾಡಬೇಕು ಎನ್ನುವುದು ಸರಿ ಹಾಗೆಯೇ ನಿಮ್ಮ ಸ್ನೇಹಿತರು, ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯುವುದು ಕೂಡ ಅಷ್ಟೇ ಮುಖ್ಯ. ಸರಿಯಾದ ವೇಳಾಪಟ್ಟಿಯನ್ನು ಮಾಡುವುದರಿಂದ ಅದು ಕೂಡ ಸಾಧ್ಯವಾಗುತ್ತದೆ. ಆದರೆ ಪ್ರಾಯೋಗಿಕವಾಗಿರುವುದು ಮುಖ್ಯ. ಹಗಲಿನಲ್ಲಿ ನೀವು ಹೆಚ್ಚು ಮುಖ್ಯವೆಂದು ತೋರುವ ಕಾರ್ಯಗಳಿಗೆ ಹೆಚ್ಚಿನ ಸಮಯವನ್ನು ನೀಡಿ. ಮನೆಯಲ್ಲಿ ಕಾಲ ಕಳೆಯುತ್ತಿರುವಾಗ ಆಫೀಸಿನ ಕೆಲಸಗಳು ಹಾಳಾಗುತ್ತವೆ ಎನ್ನುವ ಆಲೋಚನೆಯಲ್ಲಿ ಮುಳುಗಬೇಡಿ.

ನಿಮ್ಮ ಆಯ್ಕೆಯ ಕೆಲಸ ವೃತ್ತಿ ಜೀವನದಲ್ಲಿ ಯಾವುದೇ ಅಡೆತಡೆಗಳು ಇರಬಾರದು. ನೀವು ಮಾಡುತ್ತಿರುವ ಕೆಲಸದಲ್ಲಿ ನಿಮಗೆ ತೃಪ್ತಿ ಇಲ್ಲದಿದ್ದರೆ, ನೀವು ಒತ್ತಡದಲ್ಲಿದ್ದೀರಿ ಎಂದರ್ಥ. ನಿಮ್ಮ ಕೆಲಸದ ಪ್ರತಿಯೊಂದು ಅಂಶವನ್ನು ನೀವು ಪ್ರೀತಿಸಬೇಕಾಗಿಲ್ಲ. ಆದರೆ ಕೆಲಸದಲ್ಲಿ ಆಸಕ್ತಿ ಇರಬೇಕು. ಪ್ರತಿದಿನ ಬೆಳಗ್ಗೆ ನೀವು ಹಾಸಿಗೆಯಿಂದ ಎದ್ದಾಗ, ನಿಮ್ಮ ಕೆಲಸದ ಬಗ್ಗೆ ಧನಾತ್ಮಕವಾಗಿ ಯೋಚಿಸಬಹುದು. ನೀವು ದಣಿದಿದ್ದರೆ ಮತ್ತು ನೀವು ಇಷ್ಟಪಡುವ ಕೆಲಸಗಳನ್ನು ಮಾಡಲು ಕಷ್ಟವಾಗಿದ್ದರೆ, ಏನೋ ತಪ್ಪಾಗಿದೆ ಎಂದರ್ಥ. ವಿಷಕಾರಿ ವಾತಾವರಣದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ನಿಮ್ಮ ಕೆಲಸದಿಂದ ನೀವು ಭಯಪಡುತ್ತಿದ್ದರೆ, ಈಗ ನಿಮ್ಮ ಆಯ್ಕೆಯ ಕೆಲಸವನ್ನು ಹುಡುಕಲು ಪ್ರಾರಂಭಿಸಿ.

ಆರೋಗ್ಯಕ್ಕೆ ಆದ್ಯತೆ ನೀಡಿ ಮಾನಸಿಕ ಆರೋಗ್ಯ, ಭಾವನಾತ್ಮಕ ಆರೋಗ್ಯ ಮತ್ತು ದೈಹಿಕ ಸದೃಢತೆ ಅಂದರೆ ಒಟ್ಟಾರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನೀವು ಖಿನ್ನತೆ ಹೊಂದಿದ್ದರೆ ಮತ್ತು ಕೆಲಸ ಮಾಡುವುದನ್ನು ಮುಂದುವರಿಸಿದರೆ, ಅದು ಒಳ್ಳೆಯ ಬೆಳವಣಿಗೆಯಲ್ಲ, ತೀವ್ರವಾದ ಬೆನ್ನುನೋವಿನ ಹೊರತಾಗಿಯೂ ನೀವು ಕೆಲಸ ಮಾಡುತ್ತಿದ್ದರೆ, ಶೀಘ್ರದಲ್ಲೇ ನೀವು ಆರೋಗ್ಯದ ಕಾರಣಗಳಿಂದ ಕೆಲಸವನ್ನು ಬಿಡಬೇಕಾಗುತ್ತದೆ. ನೀವು ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ, ಚೆನ್ನಾಗಿ ಚಿಕಿತ್ಸೆ ಪಡೆಯಿರಿ. ಆರೋಗ್ಯದ ಬಗ್ಗೆ ಗಮನಕೊಡಿ.

ಮತ್ತಷ್ಟು ಓದಿ: ಬೆಳಗಿನ ಉಪಹಾರದಲ್ಲಿ ಈ ಆಹಾರಗಳನ್ನು ಸೇವಿಸಬೇಡಿ, ಇವುಗಳು ಆರೋಗ್ಯಕ್ಕೆ ಹಾನಿ

ಕಾಲಕಾಲಕ್ಕೆ ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸುವುದರಿಂದ ವಾರದ ಒತ್ತಡದಿಂದ ಚೇತರಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇತರ ಆಲೋಚನೆಗಳು ಹೊರಹೊಮ್ಮಲು ನಮಗೆ ಅವಕಾಶ ಸಿಗುತ್ತದೆ. ಅನ್‌ಪ್ಲಗ್ ಮಾಡುವುದು ಕೆಲಸದ ಇಮೇಲ್ ಅನ್ನು ಪರಿಶೀಲಿಸುವ ಬದಲು ಧ್ಯಾನವನ್ನು ಅಭ್ಯಾಸ ಮಾಡಲು ಕೆಲವು ಕ್ಷಣಗಳನ್ನು ತೆಗೆದುಕೊಳ್ಳುವುದು ಉತ್ತಮ. ನೀವು ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದರೆ, ಕೆಲವು ಉತ್ತಮ ಪುಸ್ತಕಗಳನ್ನು ಓದಿ. ಇದರಿಂದ ಕೆಲಸದ ಒತ್ತಡದಿಂದ ಮುಕ್ತಿ ಸಿಗುತ್ತದೆ.

ವಿರಾಮ ತೆಗೆದುಕೊಳ್ಳಿ ಕೆಲವೊಮ್ಮೆ ಅನ್‌ಪ್ಲಗ್ ಮಾಡುವುದು ಎಂದರೆ ರಜೆಯನ್ನು ತೆಗೆದುಕೊಳ್ಳುವುದು ಎಂದರ್ಥ. ಈ ಸಮಯದಲ್ಲಿ, ಕಚೇರಿ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಿ ರಜೆಯ ಸಮಯದಲ್ಲಿ ಪ್ರಯಾಣವು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಉಲ್ಲಾಸಗೊಳಿಸುತ್ತದೆ . ಈ ಸಮಯದಲ್ಲಿ, ಕಚೇರಿ ಮೇಲ್, ಕಚೇರಿ ವಾಟ್ಸಾಪ್ ಗುಂಪುಗಳನ್ನು ಪರಿಶೀಲಿಸುವುದನ್ನು ಮತ್ತು ಉತ್ತರಿಸುವುದನ್ನು ನಿಲ್ಲಿಸಿ. ಇದರೊಂದಿಗೆ, ಮತ್ತೆ ಕೆಲಸಕ್ಕೆ ಮರಳಿದಾಗ, ನೀವು ಎರಡು ಪಟ್ಟು ಉತ್ಸಾಹ ಮತ್ತು ಶಕ್ತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:00 pm, Thu, 17 August 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?