Travel: ಅಯೋಧ್ಯೆ ರಾಮ ಮಂದಿರ, ಸರಯೂ ನದಿಯ ದರ್ಶನಕ್ಕೆ ಹೆಲಿಕಾಪ್ಟರ್ ಸೇವೆ

ಅಯೋಧ್ಯೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ, ರಾಮನವಮಿಯ ದಿನದಂದು 15 ದಿನಗಳ ಕಾಲ ವೈಮಾನಿಕ ವೀಕ್ಷಣೆಯ ಸೇವೆಯನ್ನು ಉತ್ತರ ಪ್ರದೇಶದ ಪ್ರವಾಸೋದ್ಯಮವು ಪ್ರಾರಂಭಿಸಿದೆ. ಒಬ್ಬ ವ್ಯಕ್ತಿಗೆ 3 ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

Travel: ಅಯೋಧ್ಯೆ ರಾಮ ಮಂದಿರ, ಸರಯೂ ನದಿಯ ದರ್ಶನಕ್ಕೆ ಹೆಲಿಕಾಪ್ಟರ್ ಸೇವೆ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 05, 2023 | 3:02 PM

ಉತ್ತರ ಪ್ರದೇಶದ ಪ್ರವಾಸೋದ್ಯಮವು ಒಂದು ಅದ್ಭುತ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಅಡಿಯಲ್ಲಿ ಭಕ್ತರು ಹೆಲಿಕಾಪ್ಟರ್‌ನಿಂದ ಅಯೋಧ್ಯೆ ರಾಮ ಮಂದಿರದ ನಗರ ಮತ್ತು ಸರಯೂ ನದಿಯನ್ನು ವೀಕ್ಷಿಸಬಹುದು. ಶ್ರೀರಾಮನ ನಗರ ಅಯೋಧ್ಯೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ, ರಾಮನವಮಿಯ ದಿನದಂದು ವೈಮಾನಿಕ ವೀಕ್ಷಣೆ ಸೇವೆಯನ್ನು ಪ್ರಾರಂಭಿಸಲಾಯಿತು. ಅಧಿಕೃತ ಹೇಳಿಕೆಯ ಪ್ರಕಾರ ದೇಶದ ಮೂಲೆ ಮೂಲೆಯಿಂದ ಭಕ್ತರು ಅಯೋಧ್ಯೆಯ ದರ್ಶನ ಪಡೆಯಬಹುದು. ಅಧಿಕೃತ ಹೇಳಿಕೆಯ ಪ್ರಕಾರ, ಈ ಹೆಲಿಕಾಪ್ಟರ್ ಸೇವೆಯನ್ನು ಅಯೋಧ್ಯೆಯ ಸರಯೂ ಅಥಿತಿ ಗೃಹದಿಂದ ಪ್ರಾರಂಭಿಸಲಾಗಿದೆ. ಇದರಲ್ಲಿ ಪ್ರವಾಸಿಗರಿಗೆ ಏಳರಿಂದ ಎಂಟು ನಿಮಿಷಗಳ ಹಾರಾಟದಲ್ಲಿ ಅಯೋಧ್ಯಾ ನಗರ ಮತ್ತು ಸರಯೂ ನದಿಯ ವೈಮಾನಿಕ ನೋಟವನ್ನು ತೋರಿಸಲಾಗುತ್ತದೆ.

ಇದಕ್ಕಾಗಿ ಒಬ್ಬ ವ್ಯಕ್ತಿಗೆ 3 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಪ್ರಸ್ತುತ ಈ ಸೇವೆಯು 15 ದಿನಗಳವರೆಗೆ ಇದೆ. ಇದನ್ನು ನಂತರ ವಿಸ್ತರಿಸಲಾಗುವುದು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಹೆಲಿಕಾಪ್ಟರ್ ಸವಾರಿಯ ಸಂಖ್ಯೆಯು ಹೆಚ್ಚಾಗುತ್ತದೆ. ಅಯೋಧ್ಯೆಯ ವೈಮಾನಿಕ ಪ್ರವಾಸದ ಬಗ್ಗೆ ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಅವರು, ಅಯೋಧ್ಯೆಯಲ್ಲಿ ಉತ್ತಮ ಸಂಪರ್ಕಕ್ಕಾಗಿ ಹಾಗೂ ಅಯೋಧ್ಯೆಯನ್ನು ಪ್ರವಾಸೋದ್ಯಮದೊಂದಿಗೆ ಸಂಪರ್ಕಿಸಲು ಉತ್ತರ ಪ್ರದೇಶ ಸರ್ಕಾರವು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ಇದನ್ನೂ ಓದಿ: Travel: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಕರ್ನಾಟಕದ ಈ ಪ್ರದೇಶಗಳಿಗೆ ಹೋಗಿ ಬನ್ನಿ

ಅಯೋಧ್ಯೆಯ ದೇವಾಲಯದ ನಿರ್ಮಾಣ ಕಾರ್ಯದ ವೈಮಾನಿಕ ನೋಟವನ್ನು ಹೆಲಿಕಾಪ್ಟರ್ ಯಾನದ ಮೂಲಕ ವೀಕ್ಷಿಸಬಹುದು. ಪ್ರಸ್ತುತ ಇದು 15 ದಿನಗಳವರೆಗೆ ಪ್ರಯೋಗವಾಗಿದೆ. ನಂತರ ಅದನ್ನು ಮತ್ತಷ್ಟು ವಿಸ್ತರಿಸಲಾಗುವುದು. ಇದರೊಂದಿಗೆ ಉತ್ತರ ಪ್ರದೇಶದ ಇತರ ಯಾತ್ರಾ ಸ್ಥಳಗಳಲ್ಲಿಯೂ ಹೆಲಿಕಾಪ್ಟರ್ ಸೇವೆ ಶೀಘ್ರದಲ್ಲಿಯೇ ಲಭ್ಯವಾಗಲಿದೆ. ಸದ್ಯಕ್ಕೆ ಗೋವರ್ಧನ ಮತ್ತು ಅಯೋಧ್ಯೆಯಲ್ಲಿ ಈ ಸೌಲಭ್ಯ ಆರಂಭವಾಗಿದ್ದು, ಮುಂಬರುವ ಕುಂಭದ ಪ್ರಯಾಗರಾಜ್‌ನಲ್ಲೂ ಭಕ್ತರಿಗೆ ಹೆಲಿಕಾಪ್ಟರ್ ಸೌಲಭ್ಯವಿದ್ದು, ಪ್ರವಾಸಿಗರು ಆಕಾಶದಿಂದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

Published On - 3:02 pm, Wed, 5 April 23