AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಕರ್ನಾಟಕದ ಈ ಪ್ರದೇಶಗಳಿಗೆ ಹೋಗಿ ಬನ್ನಿ

ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮನಸ್ಸನ್ನು ಪ್ರಶಾಂತವಾಗಿಸಲು ಯಾವುದಾದರೂ ಒಳ್ಳೆಯ ಸ್ಥಳಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೀರಾ. ಬೆಂಗಳೂರಿಗೆ ಹತ್ತಿರವಾದ ಕೆಲವೊಂದು ಪ್ರವಾಸಿ ಸ್ಥಳಗಳ ಕುರಿತ ಮಾಹಿತಿ ಇಲ್ಲಿದೆ.

Travel: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ, ಕರ್ನಾಟಕದ ಈ ಪ್ರದೇಶಗಳಿಗೆ ಹೋಗಿ ಬನ್ನಿ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 01, 2023 | 2:51 PM

Share

ಈ ವಾರಾಂತ್ಯದಲ್ಲಿ ಬೆಂಗಳೂರಿನ ನಗರ ಜೀವನದ ಜಂಜಾಟದಿಂದ ಹಾಗೂ ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮನಸ್ಸನ್ನು ಪ್ರಶಾಂತವಾಗಿಸಲು ಯಾವುದಾದರೂ ಒಳ್ಳೆಯ ಸ್ಥಳಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೀರಾ. ಬೆಂಗಳೂರಿಗೆ ಹತ್ತಿರವಾದ ಕೆಲವೊಂದು ಪ್ರವಾಸಿ ಸ್ಥಳಗಳ ಕುರಿತ ಮಾಹಿತಿ ಇಲ್ಲಿದೆ.

ಗುಡಿಬಂಡೆ:

ಬೆಂಗಳೂರಿಗೆ ಹತ್ತಿರವಾದ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಒಂದಾದ ಗುಡಿಬಂಡೆ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಐತಿಹಾಸಿಕ ಸ್ಥಳವಾದ ಇದು ಬೆಟ್ಟಗಳು ಹಾಗೂ ಗುಡಿಬಂಡೆ ಕೋಟೆಗೆ ಹೆಸರುವಾಸಿಯಾಗಿದೆ. ಈ ಗುಡಿಬಂಡೆಯಲ್ಲಿ 17ನೇ ಶತಮಾನದಲ್ಲಿ ರಚಿಸಲಾದ ಕೋಟೆಯಾಗಿದ್ದು, ಇದನ್ನು ಸ್ಥಳೀಯ ಆಡಳಿತಗಾರ ಬೈರೇಗೌಡ ನಿರ್ಮಿಸಿದನು. ಈ ಬಹುಹಂತದ ಕೋಟೆಯು 16 ರಾಕ್ ಕಟ್ ಕೊಳಗಳನ್ನು ಹೊಂದಿದೆ. ಇವುಗಳನ್ನು ನೀರನ್ನು ಸಂಗ್ರಹಿಸಲು ರಚಿಸಲಾಗಿದೆ. ಈ ಪ್ರದೇಶವು ಹಲವಾರು ದೇವಾಲಯಗಳು ಮತ್ತು ಸುಂದರವಾದ ಸರೋವರಗಳಿಗೆ ನೆಲೆಯಾಗಿದೆ. ಆದ್ದರಿಂದ ಬೆಟ್ಟಗಳು, ಸ್ಮಾರಕಗಳು ಮತ್ತು ಸರೋವರಗಳ ಮಧ್ಯೆ ಈ ವಾರಂತ್ಯವನ್ನು ಕಳೆಯಲು ಉತ್ತಮವಾದ ಸ್ಥಳ ಇದಾಗಿದೆ. ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಟ್ರೆಕ್ಕಿಂಗ್ ಇಷ್ಟಪಡುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಟ್ರೆಕ್ಕಿಂಗ್ ಹೊರತಾಗಿ ನೀವು ಬ್ರಹ್ಮಹಳ್ಳಿ, ನಿಚ್ಚನಬಂಡಿಹಳ್ಳಿ ಮತ್ತು ಚಿನ್ನ ಹಳ್ಳಿ ಗ್ರಾಮಗಳಿಗೆ ಭೇಟಿ ನೀಡಬಹುದು.

ಬೆಂಗಳೂರಿನಿಂದ ಸುಮಾರು 90 ಕಿ.ಮೀ ದೂರ, ಚಿಕ್ಕಬಳ್ಳಾಪುರದ ಸಮೀಪದಲ್ಲಿದೆ ಈ ಸ್ಥಳ. ಬೆಂಗಳೂರಿನಿಂದ ಸಾಕಷ್ಟು ಸಿಟಿ ಬಸ್‌ಗಳು ಇಲ್ಲಿಗೆ ಹೋಗುತ್ತವೆ. 2 ಗಂಟೆಯ ಪ್ರಯಾಣದ ಮೂಲಕ ಈ ಸ್ಥಳವನ್ನು ತಲುಪಬಹುದು. ಹಾಗೂ ಗುಡಿಬಂಡೆಯಿಂದ ಸುಮಾರು 30 ಕಿಮೀ ದೂರದಲ್ಲಿ ಗೌರಿಬಿದನೂರಿನಲ್ಲಿ ರೈಲ್ವೆ ನಿಲ್ದಾಣವಿದೆ. ರೈಲಿನ ಮೂಲಕ ಬಂದರೆ, ಅಲ್ಲಿಂದ ಟ್ಯಾಕ್ಸಿಯ ಮೂಲಕ ಇಲ್ಲಿಗೆ ತಲುಪಬಹುದು.

ಗಂಡಿಕೋಟ:

ಭಾರತದ ಗ್ರ್ಯಾಂಡ್ ಕ್ಯಾನ್ಯನ್ ಎಂದು ಪ್ರಸಿದ್ಧವಾಗಿರುವ ಈ ಸ್ಥಳವು ಬೆಂಗಳೂರಿನಿಂದ ಸುಮಾರು 300ಕಿಮೀ ದೂರದಲ್ಲಿದೆ. ಕೆಲಸದ ಒತ್ತಡ ಹಾಗೂ ಬೆಂಗಳೂರು ಟ್ರಾಫಿಕ್‌ನಿಂದ ಬೇಸತ್ತು ಹೋಗಿದ್ದರೆ, ಈ ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಮನಸ್ಸನ್ನು ಪ್ರಶಾಂತವಾಗಿರಿಸಬಹುದು. ಪ್ರಶಾಂತವಾಗಿರುವ ಈ ಸ್ಥಳದಲ್ಲಿ ಕುಟೀರದ ವ್ಯವಸ್ಥೆಯೂ ಇದೆ. ಇಲ್ಲಿ ಕ್ಯಾಂಪ್ ಮಾಡಲು ಕೂಡ ಅನುಮತಿ ಇದೆ. ಹಾಗೂ ಇಲ್ಲಿ ಪೆನ್ನಾ ನದಿಯು ಹರಿದು ಹೋಗುವುದರಿಂದ ಆ ನದಿಯ ಸೌಂದರ್ಯವನ್ನು ಸವಿಯಬಹುದು. ಜೊತೆಗೆ ಕಯಾಕಿಂಗ್ ಮಾಡಲು ಅವಕಾಶವಿದೆ. ಮುಂಜಾನೆ ಬಂದು ಈ ಪ್ರಕೃತಿಯ ಮಧ್ಯೆ ನಡೆದಾಡುವ ಮೂಲಕ ಮನಸ್ಸನ್ನು ರಿಫ್ರೇಶ್ ಮಾಡಿಕೊಳ್ಳಬಹುದು. ಜೊತೆಗೆ ಇದು ಐತಿಹಾಸಿಕ ಸ್ಥಳವಾಗಿದೆ. ಇತಿಹಾಸ ಪ್ರಿಯರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ಭೇಟಿ ನೀಡಲು ಯೋಗ್ಯವಾದ ಸ್ಥಳ ಇದಾಗಿದೆ. ಬೆಂಗಳೂರಿನಿಂದ ಹೈದರಬಾದ್‌ಗೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ಗಂಡಿಕೋಟ ಸ್ಥಳವನ್ನು ತಲುಪಬಹುದು.

ತುರಹಳ್ಳಿ ಅರಣ್ಯ:

ಬೆಂಗಳೂರು ನಗರದ ಹೊರಗೆ ಕೇವಲ 20 ಕಿಮೀ ದೂರದಲ್ಲಿ ಈ ತುರಹಳ್ಳಿ ಅರಣ್ಯ ಪ್ರದೇಶವಿದೆ. ಈ ಸೊಗಸಾದ ಮೀಸಲು ಪ್ರದೇಶವು ಸೈಕ್ಲಿಂಗ್, ಟ್ರೆಕ್ಕಿಂಗ್ ಮಾಡಲು ಹಾಟ್ ಸ್ಪಾಟ್ ಸ್ಥಳವಾಗಿದೆ. ಸೈಕಲ್ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಈ ಕಾಡಿನೊಳಗೆ ಪ್ರವೇಶವಿಲ್ಲ. ನಗರ ಜೀವನದ ಜಂಜಾಟದಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಲು, ಈ ಶಾಂತಿಯುತವಾದ ಅರಣ್ಯವು ಸೂಕ್ತವಾಗಿದೆ.

ಇಲ್ಲಿ ಸೈಕ್ಲಿಂಗ್ ಅಥವಾ ಟ್ರೆಕ್ಕಿಂಗ್ ಮಾಡುವ ಮೂಲಕ ಕಾಡಿನಲ್ಲಿರುವ ಬಂಡೆಗಳು, ಸಸ್ಯರಾಶಿಗಳು, ಹಾಗೂ ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು. ಈ ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯುತ್ತಾ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

ಹೆಸರಘಟ್ಟ ಕೆರೆ:

ಒಂದು ದಿನದ ಪ್ರವಾಸ ಕೈಗೊಳ್ಳಲು ಬೆಂಗಳೂರಿಗೆ ಹತ್ತಿರದಲ್ಲಿರು ಸ್ಥಳವಾಗಿದೆ. ಈ ಹೆಸರಘಟ್ಟ ಸರೋವರವು 19ನೇ ಶತಮಾನದಲ್ಲಿ ರಚಿಸಲಾದ ಮಾನವ ನಿರ್ಮಿತ ಸರೋವರವಾಗಿದೆ. ಜೊತೆಗೆ ಇದು ಹಲವು ಬಗೆಯ ಪಕ್ಷಿಗಳ ತಾಣವಾಗಿದೆ. ಇಲ್ಲಿ ಪಕ್ಷಿಗಳನ್ನು ನೋಡಬಹುದು. ಈ ಸ್ಥಳವು ಪಕ್ಷಿ ವೀಕ್ಷಣೆಗೆ, ಕ್ಯಾಂಪಿಂಗ್ ಮಾಡಲು, ಪಿಕ್ನಿಕ್ ಮಾಡಲು, ಸೈಕ್ಲಿಂಗ್, ಬೋಟಿಂಗ್ ಮಾಡಲು ಸೂಕ್ತವಾಗಿದೆ. ನಗರ ಜೀವನದಿಂದ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಈ ಹೆಸರಘಟ್ಟ ಕೆರೆಯ ಸೌಂದರ್ಯ ಸವಿಯಲು ಒಂದು ದಿನದ ವಿಹಾರಕ್ಕೆ ಇಲ್ಲಿ ನೀವು ಬರಬಹುದು. ಬೆಂಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿರುವ ಈ ಸ್ಥಳಕ್ಕೆ 55 ನಿಮಿಷಗಳ ಪ್ರಯಾಣದ ಮೂಲಕ ತಲುಪಬಹುದು.

Published On - 2:21 pm, Sat, 1 April 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?