AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲರ್​ಫುಲ್​ ಸ್ಟ್ರಾಬೆರಿ ಥಂಡೈ ಮಾಡುವ ಸುಲಭ ವಿಧಾನ ಇಲ್ಲಿದೆ

ಉತ್ತರ ಭಾರತದ ರಾಜ್ಯಗಳಲ್ಲಿ ಹೋಳಿಯಂದು ಥಂಢೈ ಅನ್ನು ತಯಾರಿಸಿ ಸವಿಯುತ್ತಾರೆ. ನೀವೂ ಕೂಡ ತಯಾರಿಸಿ ಹೋಳಿಯನ್ನು ಮತ್ತಷ್ಟು ಕಲರ್​ಫುಲ್​ ಆಗಿಸಿಕೊಳ್ಳಿ. ಇಲ್ಲಿದೆ ಸುಲಭ ವಿಧಾನ

ಕಲರ್​ಫುಲ್​ ಸ್ಟ್ರಾಬೆರಿ ಥಂಡೈ ಮಾಡುವ ಸುಲಭ ವಿಧಾನ ಇಲ್ಲಿದೆ
ಸ್ಟ್ರಾಬೆರಿ ಥಂಡೈ
TV9 Web
| Edited By: |

Updated on:Mar 18, 2022 | 1:50 PM

Share

ಇಂದ ದೇಶದಾದ್ಯತಂತ ಸಂಭ್ರಮದ ಹೋಳಿ. ಹಬ್ಬ ಎಂದ ಮೇಲೆ ಮನೆಯಲ್ಲಿ ಸಿಹಿ ಮಾಡುವುದು ಸಾಮಾನ್ಯ. ಇಗ ಭೇಸಿಗೆ ಕಾಲವೂ ಆರಂಭವಾಗಿದೆ. ಇದೇ ಕಾರಣದಿಂದ ಪಾನೀಯಗಳಿಗೂ ಹೆಚ್ಚು ಬೇಡಿಕೆ ಇರುತ್ತದೆ. ಸಿಹಿ ಪಾನೀಯವನ್ನು ನೀವು ಈ ಹೋಳಿಯಂದು ತಯಾರಿಸಿದರೆ ಮಕ್ಕಳೂ ಇಷ್ಟಪಡುತ್ತಾರೆ. ನೀವೂ ಸೆಕೆಯಲ್ಲಿ ತಂಪಾಗಿ ಸೇವಿಸಬಹುದು. ನೀವೇನಾದರೂ ಸ್ಟ್ರಾಬೆರಿ ಹಣ್ಣಿನ ಪ್ರಿಯರಾಗಿದ್ದರೆ ಈ ಹೋಳಿಗೆ ಸ್ಟ್ರಾಬೆರಿಯ ಥಂಡೈಅನ್ನು ತಯಾರಿಸಬಹುದು. ಕಲರ್​ಫುಲ್​ ಆಗಿರುವ ಜ್ಯೂಸ್​ ನೊಡಿ ಮಕ್ಕಳೂ ಕುಡ ಖುಷಿಯಿಂದ ಸೇವಿಸುತ್ತಾರೆ. ಅಲ್ಲದೆ ಸ್ಟ್ರಾಬೆರಿ ಹಣ್ಣು ದೇಹಕ್ಕೂ ಒಳ್ಳೆಯದು. ಹಾಗಾದರೆ ಸ್ಟ್ರಾಬೆರಿ ಥಾಂಡೈ ತಯಾರಿಸುವುದೆ ಹೇಗೆ? ಇಲ್ಲಿದೆ ಮಾಡುವ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ: 4,5 ಬಾದಾಮಿ 4,5  ಪಿಸ್ತಾ 1 ಟೀ ಚಮಚ ಗಸಗಸೆ ಬೀಜಗಳು 2 ಟೇಬಲ್​ ಸ್ಪೂನ್​ ಸಕ್ಕರೆ 8 ಸ್ಟ್ರಾಬೆರಿ 4,5 ಗೋಡಂಬಿ 1 ಟೀಸ್ಪೂನ್ ಕಲ್ಲಂಗಡಿ ಬೀಜಗಳು 4 ಮೆಣಸುಕಾಳುಗಳು 1/4 ಚಮಚ ಪುಡಿಮಾಡಿದ ಹಸಿರು ಏಲಕ್ಕಿ 2 ಕಪ್ ಹಾಲು

ಮಾಡುವ ವಿಧಾನ: ಮೊದಲು ಗೋಡಂಬಿ, ಬಾದಾಮಿ, ಪಿಸ್ತಾ, ಮೆಣಸಿನ ಕಾಳು, ಕಲ್ಲಂಗಡಿ ಬೀಜಗಳು, ಗಸಗಸೆ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಒರಟಾಗಿ ರುಬ್ಬಿಕೊಳ್ಳಿ.  ನಂತರ ಅದಕ್ಕೆ ಕತ್ತರಿಸಿದ ಸ್ಟ್ರಾಬೆರಿಗಳನ್ನು ಸೇರಿಸಿ ಮತ್ತು ದಪ್ಪ ಸ್ಟ್ರಾಬೆರಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಅದಕ್ಕೆ  ಹಾಲನ್ನು ಸೇರಿಸಿ ಮತ್ತು ಹಾಲಿನೊಂದಿಗೆ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಲು ಮತ್ತೊಮ್ಮೆ ರುಬ್ಬಿಕೊಳ್ಳಿ. ನಂತರ ಮಿಕ್ಸಿ ಪಾತ್ರೆಯಿಂದ ತೆಗೆದು ಲೋಟಕ್ಕೆ ಹಾಕಿ ಬಾದಾಮಿ, ಪಿಸ್ತಾದೊಂದಿಗೆ ಅಲಂಕರಿಸಿ ಸವಿಯಿರಿ.

ಥಂಡೈ ಹೋಳಿಯ ವಿಶೇಷ ಖಾದ್ಯವೂ ಹೌದು. ಉತ್ತರ ಭಾರತದ ರಾಜ್ಯಗಳಲ್ಲಿ ಹೋಳಿಯಂದು ಥಂಢೈಅನ್ನು ತಯಾರಿಸಿ ಸವಿಯುತ್ತಾರೆ. ನೀವೂ ಕೂಡ ತಯಾರಿಸಿ ಹೋಳಿಯನ್ನು ಮತ್ತಷ್ಟು ಕಲರ್​ಫುಲ್​ ಆಗಿಸಿಕೊಳ್ಳಿ.

ಇದನ್ನೂ ಓದಿ:

ರುಚಿ ರಚಿಯಾದ ಸಿಹಿಗುಂಬಳ ಪಲ್ಯ ಮಾಡುವ ವಿಧಾನ ಇಲ್ಲಿದೆ; ಅಕ್ಕಿ ರೊಟ್ಟಿ, ಚಪಾತಿ ಜೊತೆ ಸವಿಯಿರಿ

Published On - 1:48 pm, Fri, 18 March 22

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ