AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?
ClothImage Credit source: Zameen.com
TV9 Web
| Edited By: |

Updated on: Jul 28, 2022 | 8:30 AM

Share

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ. ಮಳೆಗಾಲದಲ್ಲಿ ಸೂರ್ಯನ ಆಗಮನವಾಗದ ಕಾರಣ ಬಟ್ಟೆಗಳಲ್ಲಿ ನೀರಿನ ಅಂಶವು ಸಂಪೂರ್ಣವಾಗಿ ಆರದ ಕಾರಣ ಬಟ್ಟೆಯಲ್ಲಿ ಕಲೆಗಳು ಉಂಟಾಗುತ್ತವೆ.

ಸಿಲಿಕಾ ಜೆಲ್​: ಸಿಲಿಕಾ ಜೆಲ್​ ಅನ್ನು ಬಟ್ಟೆಗಳ ಮಧ್ಯೆ ಇಡಿ, ಅದು ಬಟ್ಟೆಯಲ್ಲಿರುವ ನೀರಿನ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಕಹಿಬೇವಿನ ಎಲೆ: ನೀವು ಕಹಿಬೇವಿನ ಎಲೆಗಳನ್ನು ಒಣಗಿಸಿ ಬಟ್ಟೆಗಳ ಮಧ್ಯೆ ಇಡುವುದರಿಂದ ಬಟ್ಟೆಯಲ್ಲಿರುವ ನೀರಿನಾಂಶವು ಹೀರಿಕೊಂಡು ಬಟ್ಟೆಯನ್ನು ಬೆಚ್ಚಗಿಡುತ್ತದೆ.

ನಿಂಬೆಹಣ್ಣು: ಬಟ್ಟೆಯಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣನ್ನು ಬಳಕೆ ಮಾಡಬಹುದು. ನಿಂಬೆಹಣ್ಣನ್ನು ಬಟ್ಟೆಗಳ ಮೇಲೆ ರಬ್ ಮಾಡಿ.

ಬಿಳಿ ವಿನೆಗರ್: ಬಟ್ಟೆಯನ್ನು ಸ್ವಚ್ಛವಾಗಿಡಲು ಬಿಳಿ ವಿನೆಗರ್ ಬಳಕೆ ಮಾಡಬೇಕು. ಬಟ್ಟೆಯನ್ನು ಸೋಪಿನ ನೀರಿನಿಂದ ತೊಳೆದ ಬಳಿಕ ಬಟ್ಟೆಯನ್ನು ವೈಟ್ ವಿನೆಗರ್​ ಅಲ್ಲಿ ಅದ್ದಿಡಬೇಕು. ಹಾಗೆಯೇ ಶಿಲೀಂದ್ರಗಳಿಂದ ಬರುವ ವಾಸನೆಯೂ ದೂರವಾಗುತ್ತದೆ.

ಬೇಕಿಂಗ್ ಸೋಡಾ: ಬಟ್ಟೆಯಲ್ಲಿರುವ ಫಂಗಸ್​ ದೂರ ಮಾಡಲು ಬಟ್ಟೆಯನ್ನು ಮೊದಲು ಒದ್ದೆ ಮಾಡಿ ಬಳಿಕ ಅದರ ಮೇಲೆ ಬೇಕಿಂಗ್ ಸೋಡಾವನ್ನು ಹಾಕಿ. ಸುಮಾರು 20 ನಿಮಿಷಗಳ ಬಳಿಕ ಡಿಟರ್ಜೆಂಟ್ ಬಳಸಿ ಸ್ವಚ್ಛಗೊಳಿಸಬೇಕು.

Follow Us
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?