AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Bamboo Day 2024 : ನೈಸರ್ಗಿಕ ಸ್ಪರ್ಶ ನೀಡಲು ಬಿದಿರಿನ ಮನೆಯ ವಿನ್ಯಾಸ ಹೀಗಿರಲಿ

ಬಿದಿರು ಯಾವುದೇ ಆರೈಕೆಯಿಲ್ಲದೇ ತಾನಾಗಿಯೇ ಬೆಳೆಯುತ್ತದೆ. ಈ ಬಿದಿರಿನಿಂದ ಹಲವಾರು ಪ್ರಯೋಜನಗಳಳಿವೆ. ಹೀಗಾಗಿ ಈ ಬಿದಿರು ಕಾಡುಗಳ ಸಂರಕ್ಷಣೆ ಮತ್ತು ಬಿದಿರು ಉದ್ಯಮದ ಉತ್ತೇಜನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

World Bamboo Day 2024 : ನೈಸರ್ಗಿಕ ಸ್ಪರ್ಶ ನೀಡಲು ಬಿದಿರಿನ ಮನೆಯ ವಿನ್ಯಾಸ ಹೀಗಿರಲಿ
ಸಾಂದರ್ಭಿಕ ಚಿತ್ರ ( ವಿಶ್ವ ಬಿದಿರು ದಿನ)
ಸಾಯಿನಂದಾ
| Edited By: |

Updated on: Sep 18, 2024 | 9:52 AM

Share

ಬಿದಿರು ಅತೀ ವೇಗವಾಗಿ ಬೆಳೆಯುವ ಸಸ್ಯಗಳಲ್ಲಿ ಒಂದು. ಇದು ಭೂಮಿಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಣ್ಣಿನ ಸವೆತವನ್ನು ತಡೆಗಟ್ಟುವಲ್ಲಿ, ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ. ಈ ಬಿದಿರಿನ ಮರವು ಇತರ ಮರಗಳಿಗಿಂತ ಶೇಕಡಾ 35 % ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡಿ ಪರಿಸರವನ್ನು ರಕ್ಷಿಸುತ್ತದೆ. ಎಲ್ಲಾ ದೃಷ್ಟಿಯಿಂದಲೂ ಪ್ರಯೋಜನಕಾರಿರುವ ಈ ಬಿದಿರಿನ ಕೃಷಿಯನ್ನು ಉತ್ತೇಜಿಸಲು ಮತ್ತು ಅದರ ವಿವಿಧ ಉಪಯೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ವಿಶ್ವ ಬಿದಿರು ದಿನದ ಹಿಂದಿನ ಇತಿಹಾಸ ಹಾಗೂ ಮಹತ್ವ:

ವಿಶ್ವ ಬಿದಿರು ದಿನವನ್ನು ವಿಶ್ವ ಬಿದಿರು ಸಂಘಟನೆಯ ಅಂದಿನ ಅಧ್ಯಕ್ಷ ಕಮಲೇಶ್ ಸಲಾಂ ಅವರು ಪ್ರಪಂಚದಾದ್ಯಂತ ತಮ್ಮ ಪ್ರತಿನಿಧಿಗಳೊಂದಿಗೆ ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಹೀಗಾಗಿ ಸೆಪ್ಟೆಂಬರ್ 18, 2009 ರಲ್ಲಿ ಬ್ಯಾಂಕಾಕ್ ನ ಥೈಲ್ಯಾಂಡ್ ನಲ್ಲಿ ನಡೆದ 8 ನೇ ವಿಶ್ವ ಬಿದಿರು ಕಾಂಗ್ರೇಸ್ ಸಮ್ಮೇಳನದಲ್ಲಿ, ವಿಶ್ವ ಬಿದಿರು ಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಿತು. ಈ ಸಂಸ್ಥೆಯು ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರವನ್ನು ರಕ್ಷಿಸಲು, ಬಿದಿರಿನ ಸುಸ್ಥಿರ ಬಳಕೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಬಿದಿರಿನ ಸಸ್ಯಗಳ ಬಳಕೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವುದು ಹಾಗೂ ಬಿದಿರಿನ ಉತ್ಪನ್ನಗಳ ತಯಾರಿಕೆ, ಮಾರಾಟದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ.

ಬಿದಿರಿನ ಮನೆಯ ವಿನ್ಯಾಸಕ್ಕಾಗಿ ಅಲಂಕಾರಿಕ ಕಲ್ಪನೆಗಳು

ಈಗಿನ ಕಾಲದಲ್ಲಿ ಮನೆಗಾಗಿ ಲಕ್ಷಾನುಗಟ್ಟಲೆ ದುಡ್ಡು ಖರ್ಚು ಮಾಡುತ್ತಾರೆ. ಆದರೆ, ಈ ಕ್ರಾಫ್ಟ್ ವರ್ಕ್‌ಗಳ ಜೊತೆಗೆ ಬಿದಿರಿನ ಫ‌ರ್ನಿಚರ್‌ಗಳು ಮನೆಯ ಅಂದ ಹೆಚ್ಚಿಸುತ್ತದೆ. ಅದಲ್ಲದೇ ಮನೆಯ ನೋಟವನ್ನು ಬದಲಾಯಿಸುವುದರೊಂದಿಗೆ ಹಳ್ಳಿ ಮನೆಯಲ್ಲಿ ಇರುವಂತೆ ಅನಿಸುತ್ತದೆ. ಹೀಗಾಗಿ ಈ ಬಿದಿರಿನ ಮನೆಯ ವಿನ್ಯಾಸವು ಪರಿಸರ ಸ್ನೇಹಿಯಾಗಿದೆ.

ಇದನ್ನೂ ಓದಿ: ಚಂದ್ರಗ್ರಹಣ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬೇಕು, ಏನು ಮಾಡಬಾರದು?

ಬಿದಿರಿನ ಮನೆಯ ಬಾಹ್ಯ ವಿನ್ಯಾಸ :

ಬಿದಿರು ಶಾಖ ವಿರೋಧಿ ಗುಣವನ್ನು ಹೊಂದಿದ್ದು ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ. ಬಿದಿರಿನ ಮನೆಯನ್ನು ವಿನ್ಯಾಸಗೊಳಿಸುವಾಗ, ರಚನೆಯನ್ನು ಗಟ್ಟಿಮುಟ್ಟಾದ ಅಡಿಪಾಯಕ್ಕೆ ಕಾಂಕ್ರಿಟ್ ಗಳನ್ನು ಹಾಕಬಹುದು. ಆಕರ್ಷಕ ನೋಟವನ್ನು ತಂದು ಕೊಡುವ ಈ ಈ ಬಿದಿರಿನ ಮನೆಯ ಬಾಹ್ಯ ವಿನ್ಯಾಸವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಒದಗಿಸುತ್ತದೆ.

* ಬಿದಿರಿನ ಮನೆಯ ಒಳಾಂಗಣ ವಿನ್ಯಾಸ: ಮನೆಗೆ ಸೊಗಸಾದ ನೋಟವನ್ನು ನೀಡಲು ಫರ್ನಿಚರ್ ಗಳು, ವಾಲ್ ಹ್ಯಾಗಿಂಗ್ ಸೇರಿದಂಯತೆ ಇನ್ನಿತ್ತರ ಅಲಂಕಾರಿಕ ವಸ್ತುಗಳನ್ನು ಬಳಸಬಹುದು. ಈ ಬಿದಿರು ಹೆಚ್ಚಿನ ಬೆಂಕಿಯ ಪ್ರತಿರೋಧವನ್ನು ಹೊಂದಿದ್ದು, ಹೀಗಾಗಿ ಅಡುಗೆ ಮನೆಯ ವಿನ್ಯಾಸಗಳಲ್ಲಿ ಈ ವಸ್ತುಗಳನ್ನು ಸೇರಿಸಿಕೊಳ್ಳಬಹುದು. ಬಿದಿರು ನೆಲಹಾಸು ಮತ್ತು ಪೀಠೋಪಕರಣಗಳ ವಿನ್ಯಾಸಕ್ಕೆ ಸೂಕ್ತವಾದ ಆಯ್ಕೆಯಾಗಿದೆ.

* ಬಿದಿರಿನ ಮನೆಯ ಗೋಡೆಯ ವಿನ್ಯಾಸ: ಬಿದಿರಿನ ಮನೆಯನ್ನು ವಿನ್ಯಾಸಗೊಳಿಸುವಾಗ, ನೈಸರ್ಗಿಕ ಬಿದಿರನ್ನು ಗೋಡೆಗೆ ಸೇರಿಸಿಕೊಳ್ಳಬಹುದು. ಮಲಗುವ ಕೋಣೆಗಳು ಮತ್ತು ಬಾತ್ರೂಮ್‌ಗೆ ಗೂ ಬಳಸುವುದರಿಂದ ವಿಶಿಷ್ಟವಾದ ನೋಟವನ್ನು ನೀಡುತ್ತದೆ.

* ಬಿದಿರಿನ ಮೆಟ್ಟಿಲು ಹಾಗೂ ಉದ್ಯಾನವನ ವಿನ್ಯಾಸ : ಬಿದಿರಿನ ಮೆಟ್ಟಿಲುಗಳನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ನಿರ್ಮಿಸಬಹುದು. ಉದ್ಯಾನವನದಂತಹ ಹೊರಾಂಗಣ ಸ್ಥಳಗಳಿಗೆ, ಬಿದಿರಿನಿಂದ ಮಾಡಿದ ಆಸನವು ಕಲಾತ್ಮಕತೆ ಸ್ಪರ್ಶವನ್ನು ತಂದು ಕೊಡುತ್ತದೆ.

* ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚು : ಈ ಬಿದಿರಿನ ಮನೆಯ ವಿನ್ಯಾಸವು ಪರಿಸರ ಸ್ನೇಹಿಯಾಗಿದ್ದು ಸಾಂಪ್ರದಾಯಿಕ ನೋಟವನ್ನು ಒದಗಿಸುತ್ತದೆ. ಬಿದಿರಿನ ಆಲಂಕಾರಿಕ ವಸ್ತುಗಳು ಉಳಿದ ಅಲಂಕಾರಿಕ ವಸ್ತುಗಳಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ದೊರೆಯುವುದರೊಂದಿಗೆ ಹೆಚ್ಚು ಸಮಯ ಬಾಳಿಕೆ ಬರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ