AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Food Day: ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ ಯುವಜನತೆ

ಇತ್ತೀಚಿಗೆ ಯುವಜನತೆ ಜಂಕ್ ಫುಡ್ ನ ಹಿಂದೆ ಬಿದ್ದು  ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಜಂಕ್ ಫುಡ್ ಗಳಿಂದ ಉತ್ತಮ ಆರೋಗ್ಯದ ಕೊರತೆ ಕಾಡುತ್ತಿದೆ.

World Food Day: ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ ಯುವಜನತೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 16, 2022 | 8:04 AM

Share

ಜಗತ್ತಿನಲ್ಲಿ ಪ್ರತಿನಿತ್ಯ ಆಹಾರವಿಲ್ಲದೆ ಸಾವಿರಾರು ಜನ ಸಾಯ್ತಾ ಇದ್ದಾರೆ. ಅದರ ವಿರುದ್ಧ ಹೋರಾಡಲೆಂದು ಇರುವುದೇ ವಿಶ್ವ ಆಹಾರ ದಿನ. 1945ರಲ್ಲಿ ವಿಶ್ವಸಂಸ್ಥೆಯು ಅಕ್ಟೋಬರ್ 16ರಂದು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಆಹಾರ ಎನ್ನುವುದು ಮಾನವನ ಬದುಕಲು ಬೇಕಾಗಿರುವ ಬಹಳ ಪ್ರಮುಖ ಅಂಶವಾಗಿದೆ. ಮನುಷ್ಯ ಪ್ರತಿನಿತ್ಯ ತನ್ನ ಜೀವನದಲ್ಲಿ ಹೋರಾಟ ನಡೆಸುವುದೇ ಒಂದು ಹೊತ್ತಿನ ಆಹಾರಕ್ಕಾಗಿ. ತುತ್ತು ಅನ್ನವು ಕೂಡ ಒಬ್ಬನ ಪ್ರಾಣ ಉಳಿಸಬಹುದು. ಇವತ್ತು ದೇಶದಲ್ಲಿ ಪ್ರತಿನಿತ್ಯ ಹಸಿವಿನಿಂದ ಸಾಕಷ್ಟು ಜನ ಸಾಯ್ತಾ ಇದ್ದಾರೆ. ಇದರ ವಿರುದ್ಧ ಹೋರಾಡುವುದಕ್ಕಾಗಿಯೇ ವಿಶ್ವ ಆಹಾರ ದಿನವನ್ನ ಮಾಡಲಾಗುತ್ತಿದೆ.

ಇತ್ತೀಚಿಗೆ ಯುವಜನತೆ ಜಂಕ್ ಫುಡ್ ನ ಹಿಂದೆ ಬಿದ್ದು  ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಜಂಕ್ ಫುಡ್ ಗಳಿಂದ ಉತ್ತಮ ಆರೋಗ್ಯದ ಕೊರತೆ ಕಾಡುತ್ತಿದೆ. ಮತ್ತು ಪಾರ್ಟಿ ಎಂಬ ಹೆಸರಲ್ಲಿ ಬಹಳಷ್ಟು ಆಹಾರವನ್ನು ವ್ಯರ್ಥ ಮಾಡುವುದು ಕಾಣುತ್ತಿದೆ. ಪಾರ್ಟಿ ಹೆಸರಲ್ಲಿ ಹೋಟೆಲ್ ಅಲ್ಲಿ ಹೆಚ್ಚಾಗಿ ಆರ್ಡರ್ ಮಾಡಿ ಅದನ್ನ ತಿನ್ನದೆ ಹಾಗೆ ಬಿಟ್ಟು ಬರುವುದು, ಇಲ್ಲವೆಂದರೆ ತಮಗೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ತಟ್ಟೆ ಅಲ್ಲಿ ಬಳಸಿಕೊಂಡು ಆಹಾರವನ್ನು ವೇಸ್ಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: Global Hunger Index: ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 107ನೇ ಸ್ಥಾನ; ದೇಶದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಎಂದ ಸರ್ಕಾರ

ಪ್ರತಿಯೊಂದು ಅನ್ನದ ಆಗಳಿನ ಹಿಂದೆ ಸಾಕಷ್ಟು ರೈತರ ಶ್ರಮ ವಿರುತ್ತದೆ. ಅದ್ದೂರಿ ಮದುವೆ ಭರದಲ್ಲಿ ವಿವಿಧ ರೀತಿಯ ಆಹಾರ ತಯಾರಿಸಿ ಬಂದವರಿಗೆ ಬಳಸಿದ ನಂತರ ಉಳಿದ ಆಹಾರವನ್ನು ವ್ಯರ್ಥ ಮಾಡುತ್ತಾರೆ. ಪ್ರತಿನಿತ್ಯ ಆಹಾರವಿಲ್ಲದೆ ಏಷ್ಟೋ ಜೀವಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಅದರಲ್ಲೂ 5 ವರುಷದ ಕೆಳಗಿನ ಮಕ್ಕಳೇ ಹೆಚ್ಚು ಆಹಾರ ಕೊರತೆಯಿಂದ ಹಸುನೀಗುತಿದ್ದಾರೆ. ಭಾರತದಲ್ಲಿ ಅಧಿಕವಾಗಿ ಆಹಾರ ಕೊರತೆ ಇಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಿದೆ. ಇನ್ನಾದರೂ ಎಚ್ಚೆತ್ತು ಕೊಂಡು ಅಹಾರವನ್ನು ವ್ಯರ್ಥ ಮಾಡದೆ ಮಿತವಾಗಿ ತಮಗೆ ಬೇಕಾದಷ್ಟು  ಬಳಸಿ ಕೊಳ್ಳಿ  ಮೋಜು ಮಸ್ತಿ ಹೆಸರಲ್ಲಿ ಆಹಾರವನ್ನು ವ್ಯರ್ಥ ಮಾಡಬೇಡಿ  ಇನ್ನೊಂದು ಜೀವ ಅಲ್ಲಿ ಆಹಾರವಿಲ್ಲದೆ ನರಳುತ್ತಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಇದನ್ನೂ ಓದಿ: Instant Foods: ಎರಡೇ ನಿಮಿಷದಲ್ಲಿ ತಯಾರಾಗುವ ಆಹಾರ ದೇಹಕ್ಕೆ ಮಾರಕವಾ?

ಬರಹ: ಐಶ್ವರ್ಯ ಕೋಣನ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್