AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿನ್ನುವ ಮೊದಲು ನೆನೆಸಿಡಬೇಕಾದ 5 ಆಹಾರಗಳಿವು

ನಾವು ಯಾವ ರೀತಿಯ ಆಹಾರಗಳನ್ನು ಸೇವಿಸುತ್ತೇವೆ ಎಂಬುದು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಉತ್ತಮ ಪೌಷ್ಟಿಕಾಂಶಗಳಿರುವ ಆಹಾರವನ್ನು ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಕೆಲವೊಂದು ಆಹಾರಗಳನ್ನು ತಿನ್ನುವ ಮೊದಲು ನೆನೆಸಿದರೆ ಒಳ್ಳೆಯದು.

ತಿನ್ನುವ ಮೊದಲು ನೆನೆಸಿಡಬೇಕಾದ 5 ಆಹಾರಗಳಿವು
ಕಿಡ್ನಿ ಬೀನ್ಸ್
ಸುಷ್ಮಾ ಚಕ್ರೆ
|

Updated on: Apr 13, 2024 | 2:34 PM

Share

ನಾವು ತಿನ್ನುವ ಮೊದಲು ಕೆಲವು ಆಹಾರಗಳನ್ನು ನೆನೆಸಿಟ್ಟರೆ ಅದರಿಂದ ಪ್ರಯೋಜನಗಳು ಹೆಚ್ಚು. ಅವುಗಳಲ್ಲಿ ಕಿಡ್ನಿ ಬೀನ್ಸ್, ಬಾದಾಮಿ, ಓಟ್ಸ್, ಕಡಲೆ, ಸೋಯಾಬೀನ್ಸ್ ಕೂಡ ಸೇರಿದೆ. ಈ ಆಹಾರ ಪದಾರ್ಥಗಳನ್ನು ನೆನೆಸುವುದರಿಂದ ಏನೆಲ್ಲ ಉಪಯೋಗಗಳಿವೆ, ಅದನ್ನು ಬಳಸುವುದು ಹೇಗೆ? ಅವುಗಳನ್ನು ಏಕೆ ನೆನೆಸಿಡಬೇಕು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಕಿಡ್ನಿ ಬೀನ್ಸ್:

ಕಿಡ್ನಿ ಬೀನ್ಸ್ ಪ್ರಮುಖ ಕಾಳುಗಳಲ್ಲಿ ಒಂದಾಗಿದೆ. ಇದು ನೆನೆಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಜೀರ್ಣಕ್ರಿಯೆಯ ಸಮಯದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುವ ಫೈಟಿಕ್ ಆಸಿಡ್ ಮತ್ತು ಲೆಕ್ಟಿನ್‌ಗಳನ್ನು ವಿಭಜಿಸಲು ಕಿಡ್ನಿ ಬೀನ್ಸ್ ಅನ್ನು ನೆನೆಸಿಡುವುದು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಿಡ್ನಿ ಬೀನ್ಸ್​ ಸೇವನೆಯಿಂದ ಆರೋಗ್ಯಕ್ಕೆ ಆಗುವ 5 ಪ್ರಯೋಜನಗಳು ಇಲ್ಲಿವೆ

ಕಡಲೆ:

ಕಡಲೆಯನ್ನು ನೆನೆಸದೇ ಹಾಗೇ ಬೇಯಿಸುವುದು ಕಷ್ಟ. ನೆನೆಸುವುದರಿಂದ ಕಡಲೆ ಮೃದುಗೊಳ್ಳುತ್ತದೆ. ಇದರಿಂದ ಕಡಲೆ ಹಾಕಿ ಮಾಡುವ ಅಡುಗೆ ಸಹ ರುಚಿಕರವಾಗುತ್ತದೆ.

ಸೋಯಾಬೀನ್:

ಸೋಯಾಬೀನ್ ಅನ್ನು ಮೃದುಗೊಳಿಸಲು ನೆನೆಸಬೇಕು. ಇದು ಅಡುಗೆ ಮತ್ತು ಸರಿಯಾದ ಜೀರ್ಣಕ್ರಿಯೆಯನ್ನು ಸಹ ಉತ್ತೇಜಿಸುತ್ತದೆ. ಸೋಯಾಬೀನ್‌ಗಳನ್ನು ನೆನೆಸುವುದು ಜೀರ್ಣಕ್ರಿಯೆಯ ಸಮಯದಲ್ಲಿ ಅನಿಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಓಟ್ಸ್:

ಓಟ್ಸ್ ಅನ್ನು ನೆನೆಸುವುದು ಪೋಷಕಾಂಶಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಅನುಕೂಲಗಳಿವೆ.

ಇದನ್ನೂ ಓದಿ: ಚಾಕೋಲೇಟ್ ತಿಂದ ನಂತರ ಮಕ್ಕಳಿಗೆ ಬಾದಾಮಿ ಕೊಡಿ

ಬಾದಾಮಿ:

ಬಾದಾಮಿಯು ದೀರ್ಘಕಾಲ ನೆನೆಸಿದ ಬೀಜಗಳಾಗಿವೆ. ಅದು ನೆನೆಯಲು ಕನಿಷ್ಠ 8 ಗಂಟೆಗಳ ಅಗತ್ಯವಿದೆ. ಇದು ಜೀರ್ಣಕ್ರಿಯೆಯ ಸಾಧ್ಯತೆಯನ್ನು ಸುಧಾರಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ಶುದ್ಧೀಕರಿಸುವ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಕ್ರಿಯಗೊಳಿಸುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!