ಚಾಕೋಲೇಟ್ ತಿಂದ ನಂತರ ಮಕ್ಕಳಿಗೆ ಬಾದಾಮಿ ಕೊಡಿ

ಮಕ್ಕಳಿಗೆ ಜಾಸ್ತಿ ಚಾಕೋಲೇಟ್ ಕೊಟ್ಟರೆ ಅವರ ಹಲ್ಲುಗಳು ಹಾಳಾಗುತ್ತವೆ. ಹೆಚ್ಚಿನ ಮಕ್ಕಳು ಚಾಕೊಲೇಟ್‌ಗಳನ್ನು ಇಷ್ಟಪಡುತ್ತಾರೆ. ಅವರು ಅವಕಾಶ ಸಿಕ್ಕಾಗಲೆಲ್ಲಾ ಚಾಕೊಲೇಟ್‌ಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಚಾಕೋಲೇಟ್ ತಿಂದ ಬಳಿಕ ಮಕ್ಕಳಿಗೆ ಬಾದಾಮಿ ಕೊಟ್ಟರೆ ಅವರ ಆರೋಗ್ಯ ಚೆನ್ನಾಗಿರುತ್ತದೆ.

ಚಾಕೋಲೇಟ್ ತಿಂದ ನಂತರ ಮಕ್ಕಳಿಗೆ ಬಾದಾಮಿ ಕೊಡಿ
ಬಾದಾಮಿImage Credit source: iStock
Follow us
|

Updated on: Feb 21, 2024 | 4:57 PM

ಬಾದಾಮಿ ಹಲ್ಲುಗಳಿಗೆ ಒಳ್ಳೆಯದು. ಏಕೆಂದರೆ ಬಾದಾಮಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ನಿಮಗೆ ಆರೋಗ್ಯಕರ ನಗು ನೀಡಲು ಸಹಾಯ ಮಾಡುತ್ತದೆ. ಬಾದಾಮಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತವೆ, ಇದು ಪ್ಲೇಕ್ ಆಮ್ಲಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೋಷಕರು ಮತ್ತು ವೈದ್ಯರು ಮಕ್ಕಳಿಗೆ ಸಕ್ಕರೆಯ ಸೇವನೆಯನ್ನು ಮಿತಿಗೊಳಿಸಲು ಸಲಹೆ ನೀಡುತ್ತಾರೆ. ಆದರೆ, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೇ? ಎಂಬ ಪ್ರಶ್ನೆ ನಿಮಗಿದೆಯೇ? ಖಂಡಿತವಾಗಿಯೂ ಚಾಕೋಲೇಟ್ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದೇನೂ ಇಲ್ಲ. ಇದಲ್ಲದೆ, ಪೋಷಕರಿಗೆ ಚಾಕೋಲೇಟ್​ ಸೇವನೆಯಿಂದ ದೂರವಿರಲು ಮಕ್ಕಳ ಮನವೊಲಿಸುವುದು ತುಂಬಾ ಕಷ್ಟ. ಅದಕ್ಕಾಗಿ ಪರಿಹಾರ ಇಲ್ಲಿದೆ.

ಆಗಾಗ ಮಕ್ಕಳು ಚಾಕೋಲೇಟ್, ಪೇಸ್ಟ್ರಿ, ಕೇಕ್ ತಿನ್ನುವುದರಿಂದ ಸಮಸ್ಯೆಯೇನೂ ಇಲ್ಲ. ಮಕ್ಕಳು ಮಿತವಾಗಿ ಚಾಕೋಲೇಟ್ ಸೇವಿಸಬಹುದು. ಆದರೆ, ಮಕ್ಕಳ ಹಲ್ಲುಗಳನ್ನು ಸರಿಯಾಗಿ ಕ್ಲೀನ್ ಮಾಡುವುದು ಅತ್ಯಗತ್ಯ. ಪೋಷಕರು ತಿಳಿದುಕೊಳ್ಳಬೇಕಾದ ಒಂದು ವಿಷಯವೆಂದರೆ, ತಮ್ಮ ಮಕ್ಕಳು ಚಾಕೊಲೇಟ್ ಬಾರ್ ಅನ್ನು ತಿಂದರೆ, ಅವರಿಗೆ ತಕ್ಷಣ ಶೇಂಗಾ ಅಥವಾ ಬಾದಾಮಿ ಕೊಡಬೇಕು. ಅದು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ…

ಇದನ್ನೂ ಓದಿ: Chocolate Day 2024: ಮನೆಯಲ್ಲೇ ಚಾಕೋಲೇಟ್ ತಯಾರಿಸಿ ಸಂಗಾತಿಗೆ ಸರ್​ಪ್ರೈಸ್ ನೀಡಿ

ಚಾಕೊಲೇಟ್ ಹೇಗೆ ಹಾನಿ ಮಾಡುತ್ತದೆ?:

ಚಾಕೊಲೇಟ್‌ಗಳನ್ನು ತಿನ್ನುವುದರಿಂದ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳಿವೆ. ವಿಶೇಷವಾಗಿ ಡಾರ್ಕ್ ಚಾಕೋಲೇಟ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ, ಮಕ್ಕಳು ಹಾಲು, ಸಕ್ಕರೆ ಆಧಾರಿತ ಚಾಕೊಲೇಟ್‌ಗಳನ್ನು ತಿನ್ನಲು ಇಷ್ಟಪಡುತ್ತಾರೆ. ನೀವು ಅವುಗಳನ್ನು ಸೇವಿಸಲು ನೀಡಿದಾಗ ಹಲ್ಲುಗಳ ಆರೋಗ್ಯ ಕೆಡುತ್ತದೆ.

ಇದನ್ನೂ ಓದಿ: ಬಾದಾಮಿ ಹಾಲು ಪಕ್ಕಕ್ಕಿಡಿ, ವಾಲ್​ನಟ್ ಹಾಲು ಕುಡಿದು ನೋಡಿ!

ಚಾಕೊಲೇಟ್ ನಂತರ ಬಾದಾಮಿ ತಿನ್ನುವುದು ಯಾಕೆ ಒಳ್ಳೆಯದು?:

ಮಕ್ಕಳು ಚಾಕೊಲೇಟ್ ತಿನ್ನುವುದನ್ನು ತಡೆಯಲು ಪೋಷಕರಿಗೆ ಕಷ್ಟವಾದರೆ, ಚಾಕೊಲೇಟ್ ತಿಂದ ನಂತರ ಶೇಂಗಾ ಅಥವಾ ಬಾದಾಮಿಯನ್ನು ತಿನ್ನಿಸುವ ಮೂಲಕ ದಂತಕ್ಷಯದ ಅಪಾಯವನ್ನು ನಿಭಾಯಿಸಬಹುದು ಎಂದು ದಂತವೈದ್ಯ ಡಾ ಚಿರಾಗ್ ಅರುಣ್ ಚಾಮ್ರಿಯಾ ಹೇಳಿದ್ದಾರೆ. “ಇದು ಚಾಕೊಲೇಟ್‌ಗಳಲ್ಲಿನ ಎಲ್ಲಾ ಆಮ್ಲೀಯತೆಯನ್ನು ತೆಗೆದುಹಾಕಲುತ್ತದೆ. ಇದು ಹಲ್ಲಿನ ಆರೋಗ್ಯಕ್ಕೂ ಒಳ್ಳೆಯದು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ