AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poornachandra Tejaswi Death Anniversary: ‘ಹಲ್ಲು ಕಿರಿಯೋ ಮೂತಿಯಷ್ಟೇ ತೆಗೀತೀಯ! ಶಾಸ್ತ್ರಾಚಾರನೂ ತೆಕ್ಕೊ’

Karvalo : ನಿಮಗೆ ಗೊತ್ತಲ್ಲ ಜನ್ಮದಲ್ಲಿ ಒಂದೇ ಒಂದು ಸಾರಿ ಮದುವೆ ಆಗೋದಂತ!” ಪ್ರಭಾಕರ ಮೂವ್ವತ್ತಾರು ಫೋಟೋ ತೆಗೆಯಬಹುದಾದ ಒಂದು ಇಡೀ ರೋಲನ್ನೇ ಹಾಕಿಕೊಂಡು ಬಂದಿದ್ದ; ಬೆಂಗಳೂರಿನ ಕಲಾಸಕ್ತೆ ಸಂಧ್ಯಾ ನರೇಂದ್ರರಿಗೆ ಈ ಕಾದಂಬರಿಯ ಈ ಭಾಗ ಇಷ್ಟ.

Poornachandra Tejaswi Death Anniversary: ‘ಹಲ್ಲು ಕಿರಿಯೋ ಮೂತಿಯಷ್ಟೇ ತೆಗೀತೀಯ! ಶಾಸ್ತ್ರಾಚಾರನೂ ತೆಕ್ಕೊ’
ಲೇಖಕ ಪೂರ್ಣಚಂದ್ರ ತೇಜಸ್ವಿ ಮತ್ತು ಸಂಧ್ಯಾ ನರೇಂದ್ರ
ಶ್ರೀದೇವಿ ಕಳಸದ
|

Updated on: Apr 05, 2022 | 4:18 PM

Share

Poornachandra Tejaswi Death Anniversary : ಮದುವೆ ದಿನ ನಾವೆಲ್ಲಾ ಇಲ್ಲದಿದ್ದರೆ ಮಂದಣ್ಣ ಮದುವೇನೇ ಆಗೋದಿಲ್ಲಂತೆ ಎಂದು ಮಾಮೂಲೀ ಸುಳ್ಳೊಂದನ್ನು ಕರೆಯೋಲೆಯ ಜೊತೆಯಲ್ಲೇ ಮಂದಣ್ಣ ಹೇಳಿಕಳಿಸಿದ್ದ. ನಾವು ಅವರಿವರ ಮಾತುಗಳಿಗೆ ವದಂತಿಗಳಿಗೆಲ್ಲಾ ಬೆಲೆಕೊಟ್ಟು ದೂರಕ್ಕಿರೋದು ಬೇಡವೆಂದು ಮದುವೆಗೆ ಹೋದೆವು. ಸಣ್ಣ ಚಪ್ಪರ ಒಂದನ್ನು ಕಟ್ಟಿದ್ದರು. ನಾನು ಹೋಗಬೇಕಾದರೆ ಮೊದಲೇ ಕರ್ವಾಲೊ ಸಾಹೇಬರು ಪ್ರಭಾಕರ ಎಲ್ಲ ಬಂದಿದ್ದರು. ಪ್ರಭಾಕರ ಕರ್ವಾಲೊರವರಿಗೆ ಮದುವೆಯ ಶಾಸ್ತ್ರಾಚಾರ ವಿಧಿ ವಿಧಾನಗಳನ್ನು ವಿವರಿಸುತ್ತಿದ್ದ. ನಾನು ಹೋಗುತ್ತಿದ್ದಂತೆಯೇ ಅವರು ನಗುತ್ತಾ “ಬನ್ನಿ ಬನ್ನಿ” ಎಂದರು . ನಾನು ಹೋಗಿ ಕುಳಿತಿರಲಿಲ್ಲ. ಅಷ್ಟರಲ್ಲೇ ಯಾರೋ “ಓ ಗಂಡಿನ ಕಡೆಯೋರು ಬಂದ್ರು ಬಂದ್ರು” ಎಂದು ಕೂಗಿದರು. ಹುಲ್ಲಿಗೆ ಬೆಂಕಿಹಾಕಿ ತಮಟೆ ಕಾಯಿಸುತ್ತಾ ಕುಳಿತಿದ್ದ ಇಬ್ಬರು ಹರಿಜನರು ತಕ್ಷಣ ಎದ್ದು “ಢಂಮ್ ಢಂಮ್ಮು ಢಂಮ್ಮು ಢಂಮ್ಮು” ಎಂದು ಬಲವಾಗಿ ತಮಟೆ ಬಡಿಯ ತೊಡಗಿದರು.

ತೇಜಸ್ವಿಯವರ ‘ಕರ್ವಾಲೋ’ದಿಂದ ತಮಗಿಷ್ಟವಾದ ಆಯ್ದ ಭಾಗ ಕಳಿಸಿದವರು ಬೆಂಗಳೂರಿನ ಕಲಾಸಕ್ತೆ ಸಂಧ್ಯಾ ನರೇಂದ್ರ.

ದಿಬ್ಬಣದ ಮುಂಭಾಗದಲ್ಲಿ ಲಕ್ಷ್ಮಣ ತಲೆಗೆ ಒಂದು ಟವಲ್ ಸುತ್ತಿಕೊಂಡು ಪೇಟದ ತರಹ ಮಾಡಿಕೊಂಡು, ಕೇವಲ ಒಂದು ಪಂಚೆ ನೆಟ್ ಬನಿಯನ್ ತೊಟ್ಟುಕೊಂಡು ಬರುತ್ತಾ ಇದ್ದ. ಲಕ್ಷ್ಮಣ ಕೊಂಚ ವಯಸ್ಸಾದವನಂತೆ ಕಾಣಬೇಕೆಂದೂ ಅದಕ್ಕಾಗಿ ಇದೇ ರೀತಿ ವೇಷ ಧರಿಸಬೇಕೆಂದೂ ಮಂದಣ್ಣ ವಿಪರೀತ ಹಟ ಮಾಡಿದನಂತೆ. ಅವನ ಹಿಂದುಗಡೆಯೇ ಮಂದಣ್ಣ ಒಂದು ಪೇಟ ಕಟ್ಟಿಕೊಂಡು ಅದಕ್ಕೊಂದು ಬಾಸಿಂಗ ಸಿಕ್ಕಿಸಿಕೊಂಡು ಅದಕ್ಕೆ ನೇತುಕೊಂಡಿದ್ದ ಗಾಜಿನ ಕುಚ್ಚುಗಳನ್ನೆಲ್ಲಾ ಓಲಾಡಿಸುತ್ತಾ ಬರುತ್ತಿದ್ದ. ಕೈಯಲ್ಲಿ ಒಂದು ಬೆಂಡಿನ ಗದೆ ಹಿಡಿದುಕೊಂಡಿದ್ದ. ಮುಖ ನೋಡಿದೆ. ಗುರುತೇ ಸಿಕ್ಕಲಿಲ್ಲ! ಮೂವತ್ತೆರಡು ಹಲ್ಲುಗಳ ಹಿಂದೆ ಒಂದು ಮೂಗು ಎರಡು ಕಣ್ಣುಗಳು ಮಾತ್ರ ಕಂಡವು. ಬೇರೆ ಯಾರೋ ಒಬ್ಬಾತ ಮಂದಣ್ಣನ ತಲೇಮೇಲೆ ಒಂದು ಛತ್ರಿ ಹಿಡಿದುಕೊಂಡಿದ್ದ. ಹಲವಾರು ಜನ ಹೆಂಗಸರು ಏನೇನೋ ಹೊತ್ತುಕೊಂಡಿದ್ದರು.

ಪ್ರಭಾಕರ ಕ್ಯಾಮರ ತಂದಿದ್ದ. ಜೊತೆಗೆ ಈಚೆಗೆ ಹೊಸದಾಗಿ ಕೊಂಡಿದ್ದ ಪ್ಲಾಷ್‌ಲೈಟನ್ನೂ ತಂದಿದ್ದ. ಬರುವಾಗಲೇ ಮಂದಣ್ಣ ಪ್ರತಿ ಹೆಜ್ಜೆಗೂ ಪ್ರಭಾಕರ ಫೋಟೋ ತೆಗೆದಾನೇನೋ ಎಂದು ನಿರೀಕ್ಷಿಸುತ್ತಾ ನಿಧಾನ ಹೆಜ್ಜೆ ಇಡುತ್ತಾ ಬಂದ. ಅವನ ಹಿಂದೆ ಒಂದೆರಡು ಜನ ಹಳ್ಳಿ ಹುಡುಗರು ಅಕಸ್ಮಾತ್ ಪ್ರಭಾಕರ ಫೋಟೋ ತೆಗೆದರೆ ತಮ್ಮ ಮುಖವೂ ಬೀಳಲೆಂದು ಮಂತ್ರಿಗಳ ಹಿಂದೆ ಇಣುಕುವ ಸ್ಥಳೀಯ ಪುಢಾರಿಗಳಂತೆ ಹತ್ತಿರದಲ್ಲೇ ನಡೆದು ಬಂದರು.

ಇದನ್ನೂ ಓದಿ : Poornachandra Tejaswi Death Anniversary: ನಮ್ಮ ತೇಜಸ್ವಿ; ತೇಜಸ್ವಿಯವರ ಹಸಿವೆ ಮರೆಸಿದ ಆ ಸಂಗೀತ

ಮಂದಣ್ಣ ಮದುವೆಗೆ ಮೊದಲೇ ಪ್ರಭಾಕರನಿಗೆ ಸಿಕ್ಕಿ “ಒಳ್ಳೇ ಪೋಜು ತಕ್ಕೊಡಬೇಕು ಪ್ರಭಾಕರಯ್ಯ. ನೋಡಿದರೆ ಸಾಕು, ಮದುವೆ ಆದಂಗೇ ಇರಬೇಕು. ಆಯ್ತಾ, ಹೈಕ್ಲಾಸು ಪೋಜು ತೆಗೀಬೇಕು. ನಿಮಗೆ ಗೊತ್ತಲ್ಲ ಜನ್ಮದಲ್ಲಿ ಒಂದೇ ಒಂದು ಸಾರಿ ಮದುವೆ ಆಗೋದಂತ!” ಎಂದು ಅಂಗಲಾಚಿದ್ದನಂತೆ. ಅದಕ್ಕೇ ಪ್ರಭಾಕರ ಮೂವ್ವತ್ತಾರು ಫೋಟೋ ತೆಗೆಯಬಹುದಾದ ಒಂದು ಇಡೀ ರೋಲನ್ನೇ ಹಾಕಿಕೊಂಡು ಬಂದಿದ್ದ. ಕರ್ವಾಲೊ ಹೇಳಿದರು, ‘‘ಬರೀ ಮಂದಣ್ಣನ ಹಲ್ಲು ಕಿರಿಯೋ ಮೂತಿ ಏನು ತೆಗೀತೀಯ! ಇವೆಲ್ಲಾ ಶಾಸ್ತ್ರಾಚಾರನೂ ತೆಕ್ಕೊ’’ ಎಂದು.

ಎಲ್ಲ ಗಂಡಿನ ಕಡೆಯವರೂ ಚಪ್ಪರದೊಳಗೆ ಜಾಗ ಮಾಡಿಕೊಂಡರು. ಆದರೆ ಪರಿಸ್ಥಿತಿ ಶಾಂತವಾಗಿದ್ದುದು ಇದ್ದಕ್ಕಿದ್ದಂತೆ ಗೊಂದಲಗೊಳ್ಳುವಂತೆ ಕಂಡಿತು. ಗಂಡಿನ ಕಡೆಯ ಹೆಂಗಸೊಬ್ಬಳು ವಧುವಿಗೆ ಕೊಡುವ ಉಡುಗೊರೆಗಳ ಬುಟ್ಟಿಯನ್ನು ಮದುವೆ ಮಣೆ ಎದುರು ಇಟ್ಟಳು. ತಕ್ಷಣ ತೊಂದರೆ ಆರಂಭವಾಯ್ತು. ಅಲ್ಲಿದ್ದ ಹೆಣ್ಣಿನ ಕಡೆಯ ಯಾರು ಯಾರೋ ಹೆಂಗಸರು ಅದನ್ನು ಪರೀಕ್ಷಿಸಲು ಲಗುಬಗೆಯಿಂದ ನುಗ್ಗಿದರು. ಒಬ್ಬಳು ಕೆಂಪು ಜಲ್ಲಿ ಕಾಗದದಲ್ಲಿ ಸುತ್ತಿಟ್ಟಿದ್ದ ಬಳೆ ಮತ್ತು ತಾಳಿ ಸರಗಳನ್ನು ತೆಗೆದು ನೋಡಿ ತಾತ್ಸಾರದ ಮುಖ ಮಾಡಿಕೊಂಡು ‘ಅಬ್ಬಬ್ಬಬ್ಬ ನೆಗ್ಲಾಕೇ ಆಗಲ್ಲ, ಅಷ್ಟೊಂದು ತೂಕ ಇದೆಯಲ್ಲಾ” ಎಂದು ತಮ್ಮ ಹೆಂಗಸರ ಕಡೆ ತಿರುಗಿ ಹಿಯ್ಯಾಳಿಸಿದಳು.

ಇದನ್ನೂ ಓದಿ : Poornachandra Tejaswi Death Anniversary: ಆ ಮುದುಕಿ ಮೈ ಮುಟ್ಟಿದರೆ ನನ್ನ ತಾಳಿ ಆಣೆ, ಮುಸುಡಿಗೆ ಒರಲೆ ಹಿಡಿಯಾ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ