AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್ ಸೇವಾ ಕೇಂದ್ರದ ಮೂಲಕ ಆಧಾರ್​ಗೆ ನೋಂದಣಿ ಮಾಡಿಸಬೇಕಾ? ಆನ್​ಲೈನ್​ನಲ್ಲಿ ಅಪಾಯಿಂಟ್​ಮೆಂಟ್ ಬುಕ್ ಮಾಡುವುದು ಹೇಗೆ?

ಆಧಾರ್​ಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯುವುದಕ್ಕಾಗಿ ಆಧಾರ್ ಸೇವಾ ಕೇಂದ್ರಗಳಲ್ಲಿ ಆನ್​ಲೈನ್ ಅಪಾಯಿಂಟ್​ಮೆಂಟ್ ಪಡೆಯುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಇಲ್ಲಿದೆ.

ಆಧಾರ್ ಸೇವಾ ಕೇಂದ್ರದ ಮೂಲಕ ಆಧಾರ್​ಗೆ ನೋಂದಣಿ ಮಾಡಿಸಬೇಕಾ? ಆನ್​ಲೈನ್​ನಲ್ಲಿ ಅಪಾಯಿಂಟ್​ಮೆಂಟ್ ಬುಕ್ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 22, 2022 | 2:03 PM

ಆಧಾರ್ ನೋಂದಣಿ, ವಿಳಾಸ ಬದಲಾವಣೆ, ಹೆಸರು ಬದಲಾವಣೆ, ಜನ್ಮ ದಿನಾಂಕದಲ್ಲಿನ ಬದಲಾವಣೆ ಸೇರಿದಂತೆ ಇತರ ಯಾವುದೇ ಸೇವೆಗಳಿಗೆ ಆಧಾರ್​ ಸೇವಾ ಕೇಂದ್ರಗಳನ್ನು ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI)ನಿಂದ ಆರಂಭಿಸಲಾಗಿದೆ. ಭಾರತೀಯ ನಾಗರಿಕರು ಅವರ ವಯಸ್ಸು, ಲಿಂಗ ಎಂಬ ತಾರತಮ್ಯ ಇಲ್ಲದೆ 12 ಅಂಕಿಯ ಈ ಆಧಾರ್ ಸಂಖ್ಯೆಯನ್ನು ಪಡೆಯುವುದಕ್ಕೆ ಅರ್ಹರು. ಇದು ರಾಷ್ಟ್ರೀಯ ಐಡಿ ಕಾರ್ಡ್​ನಂತೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ನಾಗರಿಕರು ಇದಕ್ಕಾಗಿ ತಮ್ಮ ಸಮಯವನ್ನು ನಿಗದಿ ಮಾಡಿಕೊಳ್ಳಬೇಕು. ತಮ್ಮ ಕುಟುಂಬ ಸದಸ್ಯರು, ಸ್ನೇಹಿತರಿಗಾಗಿಯೂ ಆನ್​ಲೈನ್ ಅಪಾಯಿಂಟ್​ಮೆಂಟ್ ಸೇವೆಯನ್ನು ಬಳಸಿ, ಸಮಯ ನಿಗದಿ ಮಾಡಬಹುದು. ಹೊಸದಾಗಿ ನೋಂದಣಿ, ಹೆಸರಿನಲ್ಲಿ ಯಾವುದೇ ಅಪ್​ಡೇಟ್, ಮೊಬೈಲ್ ಸಂಖ್ಯೆ, ವಿಳಾಸ, ಇಮೇಲ್ ಐಡಿ ಅಥವಾ ಜನ್ಮ ದಿನಾಂಕವನ್ನು ಯುಐಡಿಎಐನಲ್ಲಿ ಬದಲಾಯಿಸುವುದಕ್ಕೆ ಈ ಆಧಾರ್ ಸೇವಾ ಕೇಂದ್ರಗಳು ಅಥವಾ ರಿಜಿಸ್ಟ್ರಾರ್ ಮೂಲಕ ನಡೆಯುವ ಆಧಾರ್ ಸೇವಾ ಕೇಂದ್ರಗಳಲ್ಲಿ ಸಾಧ್ಯವಾಗುತ್ತದೆ.

ಆಧಾರ್​ ನೋಂದಣಿಗೆ ಆನ್​ಲೈನ್​ ಅಪಾಯಿಂಟ್​ಮೆಂಟ್​ಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ: ಹಂತ 1: https://uidai.gov.in/ಗೆ ಭೇಟಿ ನೀಡಿ

ಹಂತ 2: ‘ನನ್ನ ಆಧಾರ್’ (My Aadhaar) ಅಡಿಯಲ್ಲಿ, ‘ಅಪಾಯಿಂಟ್‌ಮೆಂಟ್ ಬುಕ್ ಮಾಡಿ’ (Book an appointment) ಕ್ಲಿಕ್ ಮಾಡಿ

ಹಂತ 3: ಯುಐಡಿಎಐ ನಡೆಸುವ ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್​ಮೆಂಟ್​ ಕಾಯ್ದಿರಿಸುವಿಕೆಯಿಂದ ಆಯ್ಕೆ ಮಾಡಿ

ಹಂತ 4: ಡ್ರಾಪ್‌ಡೌನ್‌ನಿಂದ ನಿಮ್ಮ ನಗರ/ಸ್ಥಳವನ್ನು ಆಯ್ಕೆ ಮಾಡಿ

ಹಂತ 5: ‘ಅಪಾಯಿಂಟ್​ಮೆಂಟ್ ಬುಕ್ ಮಾಡಲು ಮುಂದುವರಿಯಿರಿ’ (proceed to book an appointment) ಮೇಲೆ ಕ್ಲಿಕ್ ಮಾಡಿ

ಹಂತ 6: ‘ಬುಕ್ ಅಪಾಯಿಂಟ್‌ಮೆಂಟ್’ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹಂತ 7: ‘ಹೊಸ ಆಧಾರ್’ ಅಥವಾ ‘ಆಧಾರ್ ಅಪ್‌ಡೇಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ಕ್ಯಾಪ್ಚಾ ನಮೂದಿಸಿ ಮತ್ತು ‘ಜನರೇಟ್ OTP’ ಕ್ಲಿಕ್ ಮಾಡಿ

ಹಂತ 8: OTP ಅನ್ನು ನಮೂದಿಸಿ ಮತ್ತು ಪರಿಶೀಲಿಸು ಕ್ಲಿಕ್ ಮಾಡಿ

ಹಂತ 9: ರಾಜ್ಯ, ನಗರ ಮತ್ತು ಆಧಾರ್ ಸೇವಾ ಕೇಂದ್ರದಂತಹ ಅಪಾಯಿಂಟ್​ಮೆಂಟ್ ವಿವರಗಳನ್ನು ನಮೂದಿಸಿ, ಭಾಷೆಯನ್ನು ಆಯ್ಕೆ ಮಾಡಿ ಮತ್ತು ಮುಂದೆ (Next) ಎಂಬುದರ ಮೇಲೆ ಕ್ಲಿಕ್ ಮಾಡಿ

ಹಂತ 10: ಪುರಾವೆಯೊಂದಿಗೆ ವೈಯಕ್ತಿಕ ವಿವರಗಳು ಮತ್ತು ವಿಳಾಸದ ವಿವರಗಳನ್ನು ನಮೂದಿಸಿ ಮತ್ತು ಮುಂದಿನ (Next) ಟ್ಯಾಬ್ ಅನ್ನು ಕ್ಲಿಕ್ ಮಾಡಿ

ಹಂತ 11: ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಿ ಮತ್ತು ಮುಂದೆ (Next) ಕ್ಲಿಕ್ ಮಾಡಿ.

ನಿಮ್ಮ ಸಮಯಾವಕಾಶ (ಅಪಾಯಿಂಟ್​ಮೆಂಟ್) ದೃಢೀಕರಿಸುವ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

ಹತ್ತಿರದ ನೋಂದಣಿ ಕೇಂದ್ರವನ್ನು ಕಂಡುಹಿಡಿಯುವುದು ಹೇಗೆ?: ಹತ್ತಿರದ ನೋಂದಣಿ ಕೇಂದ್ರವನ್ನು ಹುಡುಕಲು ‘ನೋಂದಣಿ ಕೇಂದ್ರವನ್ನು ಪತ್ತೆ ಮಾಡಿ’ ಎಂದು ಹುಡುಕಬಹುದು ಅಥವಾ https://appointments.uidai.gov.in/easearch.aspxಗೆ ಭೇಟಿ ನೀಡಿ ಮತ್ತು ರಾಜ್ಯ, ಜಿಲ್ಲೆ ಮತ್ತು ಪ್ರದೇಶವನ್ನು ನಮೂದಿಸಬಹುದು ಅಥವಾ ದಾಖಲಾತಿಗೆ ಏಜೆನ್ಸಿ ನಡೆಸುವ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು.

ಅಗತ್ಯವಿರುವ ದಾಖಲೆಗಳು: ನೋಂದಣಿಗೆ ಮಾನ್ಯವಾದ ಗುರುತಿನ ಪುರಾವೆ (ಭಾವಚಿತ್ರದೊಂದಿಗೆ), ವಿಳಾಸದ ಪುರಾವೆ ಮತ್ತು ಜನ್ಮ ದಿನಾಂಕದ ಪುರಾವೆ. ಅನುಮೋದಿತ ಪಟ್ಟಿಯಲ್ಲಿ ಇರುವಂಥ ದಾಖಲೆ ಆಗಿದ್ದಲ್ಲಿ ನೀವು ಒಂದೇ ದಾಖಲೆಯನ್ನು ಬಳಸಿಕೊಳ್ಳಬಹುದು.

ಆಧಾರ್-ಸಂಬಂಧಿತ ಸೇವೆಗಳಿಗೆ ಈ ಕೆಳಗಿನ ಶುಲ್ಕಗಳು: ಆಧಾರ್ ನೋಂದಣಿ: ಉಚಿತ

ಮಕ್ಕಳಿಗಾಗಿ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (5 ಮತ್ತು 15 ವರ್ಷ ವಯಸ್ಸಿನವರು): ಉಚಿತ

ಡೆಮೋಗ್ರಾಫಿಕ್ ಅಪ್‌ಡೇಟ್ ಜೊತೆಗೆ ಅಥವಾ ಇಲ್ಲದ ಯಾವುದೇ ಬಯೋಮೆಟ್ರಿಕ್ ಅಪ್‌ಡೇಟ್*: ರೂ 100

ನಿವಾಸಿಗಳಿಂದ ಕೇವಲ ಜನಸಂಖ್ಯೆಗೆ ಸಂಬಂಧಿಸಿದ ಅಪ್​ಡೇಟ್*: ರೂ. 50

ಆಧಾರ್ ಮತ್ತು ಬಣ್ಣದ ಮುದ್ರಣವನ್ನು ಡೌನ್‌ಲೋಡ್ ಮಾಡಿ: ರೂ. 30

*ಒಂದೇ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಮಾಹಿತಿಯ ಅಪ್​ಡೇಟ್ ಮಾಡಿದರೂ ಅದನ್ನು ಒಂದು ಅಪ್‌ಡೇಟ್ ಅಂತಷ್ಟೇ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: PAN- Aadhaar Linking: ನಿಗದಿತ ಗಡುವಿನೊಳಗೆ ಆಧಾರ್- ಪ್ಯಾನ್ ಜೋಡಣೆ ಆಗದಿದ್ದಲ್ಲಿ ರೂ. 10 ಸಾವಿರ ದಂಡ

ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ