AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಡಮಾನ್​-ನಿಕೋಬಾರ್​ ದ್ವೀಪದಲ್ಲಿ ಬೆಳಗ್ಗೆ ಎರಡು ಬಾರಿ ಭೂಕಂಪ..

Andaman and Nicobar: ಇತ್ತೀಚೆಗೆ ಹಲವು ಕಡೆಗಳಲ್ಲಿ ಭೂಕಂಪ ಉಂಟಾಗುತ್ತಿದೆ. ರಾಜಸ್ಥಾನದ ಬಿಕಾನೇರ್​​ನಲ್ಲಿ ಈಗಾಗಲೇ ಎರಡು ಬಾರಿ ಭೂಕಂಪವಾಗಿದೆ. ಈ ಎರಡೂ ಬಾರಿಯೂ ತೀವ್ರತೆ 5ಕ್ಕಿಂತ ಜಾಸ್ತಿಯಿತ್ತು.

ಅಂಡಮಾನ್​-ನಿಕೋಬಾರ್​ ದ್ವೀಪದಲ್ಲಿ ಬೆಳಗ್ಗೆ ಎರಡು ಬಾರಿ ಭೂಕಂಪ..
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Aug 03, 2021 | 9:24 AM

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ (Andaman and Nicobar)ದಲ್ಲಿ ಇಂದು ಬೆಳಗ್ಗೆ ಎರಡು ಕಡೆಗಳಲ್ಲಿ ಭೂಕಂಪ(Earthquake) ಉಂಟಾಗಿದೆ. ಮೊದಲ ಭೂಕಂಪ ಅಂಡಮಾನ್​ ಮತ್ತು ನಿಕೋಬಾರ್​ನ ಪೋರ್ಟ್​ಬ್ಲೇರ್​ ಬಳಿ ಉಂಟಾಗಿದ್ದು, ರಿಕ್ಟರ್​ ಮಾಪಕ (Rictor Scale)ದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಇಲ್ಲಿ ಮುಂಜಾನೆ 6.27ರಹೊತ್ತಿಗೆ ಭೂಮಿ ನಡುಗಿದೆ.

ಒಮ್ಮೆ ಭೂಕಂಪ ನಿಂತರೂ ಮತ್ತೆ ಬೆಳಗ್ಗೆ 7.21ರ ಹೊತ್ತಿಗೆ ಮತ್ತೊಮ್ಮೆ ಭೂಮಿ ನಡುಗಿದೆ. ಆಗ ಅದರ ತೀವ್ರತೆ ಮತ್ತಷ್ಟು ಹೆಚ್ಚಾಗಿತ್ತು. ಅಂದರೆ ರಿಕ್ಟರ್​ ಮಾಪಕದಲ್ಲಿ 4.6ರಷ್ಟು ದಾಖಲಾಗಿದೆ ಎಂದು ಎನ್​​ಸಿಎಸ್​ ತಿಳಿಸಿದೆ.

ಇತ್ತೀಚೆಗೆ ಹಲವು ಕಡೆಗಳಲ್ಲಿ ಭೂಕಂಪ ಉಂಟಾಗುತ್ತಿದೆ. ರಾಜಸ್ಥಾನದ ಬಿಕಾನೇರ್​​ನಲ್ಲಿ ಈಗಾಗಲೇ ಎರಡು ಬಾರಿ ಭೂಕಂಪವಾಗಿದೆ. ಈ ಎರಡೂ ಬಾರಿಯೂ ತೀವ್ರತೆ 5ಕ್ಕಿಂತ ಜಾಸ್ತಿಯಿತ್ತು. ಹಾಗೇ ಮೇಘಾಲಯ, ಹೈದರಾಬಾದ್​​ಗಳಲ್ಲೂ ಭೂಮಿ ನಡುಗಿತ್ತು. ಈ ಮಧ್ಯೆ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಒಂದು ಆತಂಕಕಾರಿ ವರದಿಯನ್ನೂ ನೀಡಿದೆ. ದೇಶದ ಶೇ59ರಷ್ಟು ಭಾಗಗಳಲ್ಲಿ ವಿವಿಧ ರೀತಿಯ ಭೂಕಂಪನಗಳು ಸಂಭವಿಸುವ ಸಾಧ್ಯತೆ ಇರುವುದಾಗಿ ಎನ್​ಸಿಎಸ್​ ಮಾಹಿತಿ ನೀಡಿದೆ. ಸದ್ಯದವರೆಗೆ ಯಾವುದೇ ಪ್ರದೇಶದಲ್ಲಿ ಭೀಕರವಾಗಿ ಭೂಕಂಪನವಾಗಿಲ್ಲ ಎಂದೂ ತಿಳಿಸಿದೆ.

ಇದನ್ನೂ ಒದಿ:ಚಿತ್ರದುರ್ಗ: ಅಪ್ರಾಪ್ತೆ ಅತ್ಯಾಚಾರ-ಕೊಲೆ ಪ್ರಕರಣ ಸಂಬಂಧ ಆರೋಪಿ ಬಿಡುಗಡೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕ ಅರೆಸ್ಟ್

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ