ಕ್ರೂರಿ ಕೊರೊನಾ ವಿರುದ್ಧ SIXER ಎತ್ತಿದ ನೀತಿ ಆಯೋಗ, ಏನದು?

ದೆಹಲಿ: ಜಸ್ಟ್ ಇನ್ನು ಎರಡೇ ದಿನದಲ್ಲಿ ಲಾಕ್​ಡೌನ್ ಮುಗಿಯುತ್ತೆ ಅಂತಾ ಆಶಾಭಾವ ಇಟ್ಟುಕೊಂಡವರಿಗೆ ಢವಢವ ಶುರುವಾಗಿದೆ. ಯಾಕಂದ್ರೆ ಅತ್ತ ಕೊರೊನಾ ನಿಯಂತ್ರಣಕ್ಕೆ ಬರ್ತಿಲ್ಲ, ಇತ್ತ ಸೋಂಕು ವ್ಯಾಪಕವಾಗಿ ಹಬ್ಬುತ್ತಾ ಸಾಗುತ್ತಿದೆ. ಹಾಗಾಗಿ ಕೊರೊನಾ ನಿಯಂತ್ರಣಕ್ಕೆ ನೀತಿ ಆಯೋಗ ಆರು ಸೂತ್ರಗಳನ್ನು ಹೆಣೆದಿದೆ. ಕೊರೊನಾ ಸಂಓಕನ್ನು ಬೌಂಡರಿಯಾಚೆ ತಳ್ಳುವುದಕ್ಕೆ ಸಿಕ್ಸರ್​ ಎತ್ತುವ ಉತ್ಸಾಹದಲ್ಲಿದೆ. ಈ ನಿಟ್ಟಿನಲ್ಲಿ, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರು ಕೊವಿಡ್ 19 ತಡೆಗೆ 6 ಸೂತ್ರಗಳ ಬಲೆ ಹೆಣೆದಿದ್ದಾರೆ. ಈ ಸೂತ್ರಗಳನ್ನು ಅನುಸರಿಸಿದರೆ […]

ಕ್ರೂರಿ ಕೊರೊನಾ ವಿರುದ್ಧ SIXER ಎತ್ತಿದ ನೀತಿ ಆಯೋಗ, ಏನದು?
ಪ್ರಾತಿನಿಧಿಕ ಚಿತ್ರ

Updated on: May 01, 2020 | 3:59 PM

ದೆಹಲಿ: ಜಸ್ಟ್ ಇನ್ನು ಎರಡೇ ದಿನದಲ್ಲಿ ಲಾಕ್​ಡೌನ್ ಮುಗಿಯುತ್ತೆ ಅಂತಾ ಆಶಾಭಾವ ಇಟ್ಟುಕೊಂಡವರಿಗೆ ಢವಢವ ಶುರುವಾಗಿದೆ. ಯಾಕಂದ್ರೆ ಅತ್ತ ಕೊರೊನಾ ನಿಯಂತ್ರಣಕ್ಕೆ ಬರ್ತಿಲ್ಲ, ಇತ್ತ ಸೋಂಕು ವ್ಯಾಪಕವಾಗಿ ಹಬ್ಬುತ್ತಾ ಸಾಗುತ್ತಿದೆ. ಹಾಗಾಗಿ ಕೊರೊನಾ ನಿಯಂತ್ರಣಕ್ಕೆ ನೀತಿ ಆಯೋಗ ಆರು ಸೂತ್ರಗಳನ್ನು ಹೆಣೆದಿದೆ. ಕೊರೊನಾ ಸಂಓಕನ್ನು ಬೌಂಡರಿಯಾಚೆ ತಳ್ಳುವುದಕ್ಕೆ ಸಿಕ್ಸರ್​ ಎತ್ತುವ ಉತ್ಸಾಹದಲ್ಲಿದೆ.

ಈ ನಿಟ್ಟಿನಲ್ಲಿ, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರು ಕೊವಿಡ್ 19 ತಡೆಗೆ 6 ಸೂತ್ರಗಳ ಬಲೆ ಹೆಣೆದಿದ್ದಾರೆ. ಈ ಸೂತ್ರಗಳನ್ನು ಅನುಸರಿಸಿದರೆ ಖಚಿತವಾಗಿ ಕೊರೊನಾ ನಿಯಂತ್ರಿಸಬಹುದಾಗಿದೆ.

1. ರೆಡ್ ಜೋನ್‌ ಪ್ರದೇಶಗಳಲ್ಲಿ ಅತಿ ಕಠಿಣ ಸೀಲ್​ಡೌನ್ ಕ್ರಮ
2. ಮಾಸ್ಕ್ ಧರಿಸುವುದು ಹೊಸ ಫ್ಯಾಷನ್ ಆಗಬೇಕು.  ಜೊತೆಗೆ, ಸಾಮಾಜಿಕ ಅಂತರವನ್ನೂ ಪಾಲಿಸಬೇಕು
3. ವೈರಸ್ ಮತ್ತೆ ಪುಟಿದೇಳುವ ಸಾಧ್ಯತೆ ಹೆಚ್ಚಿದ್ದು, ವೈದ್ಯಕೀಯ ಸೌಲಭ್ಯ ಹೆಚ್ಚಿಸುವುದು
4. 60 ವರ್ಷ ದಾಟಿದ ಹಿರಿಯರನ್ನು ಜೋಪಾನವಾಗಿ ನೋಡಿಕೊಳ್ಳುವುದು
5. ಕೊರೊನಾಗೆ ಮದ್ದು ಕಂಡುಹಿಡಿಯೋವರೆಗೆ ನಿಯಮ ಪಾಲನೆ
6. ಕೊರೊನಾ ಹೊಡೆತದಿಂದ ಜನರ ಬದುಕು ಹಾಳಾಗಬಾರದು. ಆರ್ಥಿಕತೆ ಉತ್ತೇಜಿಸುವ ಯೋಜನೆ ಜಾರಿಗೆ ತರಬೇಕು

Published On - 11:38 am, Fri, 1 May 20