Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕೀಲರ ಮೇಲೆ ಹಲ್ಲೆ ನಡೆಸಿದರೆ ಅಪಾಯ ಖಚಿತ; ಸಿದ್ಧವಾಯಿತು ಹೊಸ ಕಾಯ್ದೆಯ ಕರಡು

ಸದ್ಯ ಪ್ರಸ್ತಾಪಿಯ ಕಾಯ್ದೆಯ ಕರಡಿನಲ್ಲಿ ಭಾರತೀಯ ವಕೀಲರ ಪರಿಷತ್​ನಿಂದ ನೇಮಕಗೊಂಡ ವಕೀಲರು ಅಥವಾ ಅವರ ಕುಟುಂಬಸ್ಥರಿಗೆ‌ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆ ನಡೆಸಿದಲ್ಲಿ ಕಠಿಣ ಕ್ರಮ ಕೈಗೊಳ್ಳು ಅವಕಾಶ ನೀಡಲಾಗಿದೆ. 6 ತಿಂಗಳನಿಂದ ಹಿಡಿದು 2 ವರ್ಷಗಳ ವರೆಗೆ ಜೈಲು ಮತ್ತು 10 ಲಕ್ಷಗಳವರೆಗೆ ದಂಡ ವಿಧಿಸುವ ಅವಕಾಶವೂ ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದಲ್ಲಿ ವಿಧಿಸಬಹುದಾಗಿದೆ.

ವಕೀಲರ ಮೇಲೆ ಹಲ್ಲೆ ನಡೆಸಿದರೆ ಅಪಾಯ ಖಚಿತ; ಸಿದ್ಧವಾಯಿತು ಹೊಸ ಕಾಯ್ದೆಯ ಕರಡು
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Jul 03, 2021 | 10:42 PM

ತಮ್ಮ ವೃತ್ತಿಯಿಂದಲೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇರುವ ವಕೀಲರ ರಕ್ಷಣೆಗೆ ಕಾಯ್ದೆಯನ್ನು ರಚಿಸಲು ಕರಡನ್ನು ಸಿದ್ಧಪಡಿಸಲಾಗಿದ್ದು, ವಕೀಲರು ಅಥವಾ ಅವರ ಕುಟುಂಬಸ್ಥರಿಗೆ‌ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆ ನಡೆಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಕುರಿತು ಪ್ರಸ್ತಾಪಿಸಲಾಗಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ನೇಮಿಸಿದ್ದ 7 ಹಿರಿಯ ವಕೀಲರ ಸಮಿತಿ ಈ ಕಾಯ್ದೆಯ ಕರಡನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಸಂಸತ್​ನಲ್ಲಿ ಮಂಡಿಸುವ ಕುರಿತು ಪ್ರಯತ್ನ ನಡೆಯಲಿದೆ ಎಂದು ತಿಳಿದುಬಂದಿದೆ.

ವಕೀಲರ ಮೇಲಿನ ಹಲ್ಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಈ ಕಾಯ್ದೆಯನ್ನು ರಚಿಸಲು ಉದ್ದೇಶಿಸಲಾಗಿದ್ದು, ಒಟ್ಟು 16 ಭಾಗಗಳನ್ನು ಕರಡಿನಲ್ಲಿ ಅಳವಡಿಸಲಾಗಿದೆ. ಸಂಸತ್​ ಸಭೆಯಲ್ಲಿ ಚರ್ಚೆಯ ನಂತರ ಈ ಕಾಯ್ದೆಯ ಕರಡು ಪಡೆಯಲಿರುವ ಅಂತಿಮ ಸ್ವರೂಪ ಇನ್ನಷ್ಟೇ ತಿಳಿಯಬೇಕಿದೆ.

ಸದ್ಯ ಪ್ರಸ್ತಾಪಿಯ ಕಾಯ್ದೆಯ ಕರಡಿನಲ್ಲಿ ಭಾರತೀಯ ವಕೀಲರ ಪರಿಷತ್​ನಿಂದ ನೇಮಕಗೊಂಡ ವಕೀಲರು ಅಥವಾ ಅವರ ಕುಟುಂಬಸ್ಥರಿಗೆ‌ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆ ನಡೆಸಿದಲ್ಲಿ ಕಠಿಣ ಕ್ರಮ ಕೈಗೊಳ್ಳು ಅವಕಾಶ ನೀಡಲಾಗಿದೆ. 6 ತಿಂಗಳನಿಂದ ಹಿಡಿದು 2 ವರ್ಷಗಳ ವರೆಗೆ ಜೈಲು ಮತ್ತು 10 ಲಕ್ಷಗಳವರೆಗೆ ದಂಡ ವಿಧಿಸುವ ಅವಕಾಶವೂ ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದಲ್ಲಿ ವಿಧಿಸಬಹುದಾಗಿದೆ.

ಪೊಲೀಸರು ಯಾವುದೇ ನ್ಯಾಯವಾದಿ ವಿರುದ್ದದ ಪ್ರಕರಣದಲ್ಲಿ ನ್ಯಾಯವಾದಿಯನ್ನು ಜಿಲ್ಲೆಯ ಮುಖ್ಯ ದಂಡಾಧಿಕಾರಿ ಆದೇಶವಿಲ್ಲದ ಯಾವುದೇ ಪ್ರಕರಣದಲ್ಲಿ ಬಂಧಿಸುವಂತಿಲ್ಲ.  ಭಾರತೀಯ ವಕೀಲರ ಪರಿಷತ್​ನಿಂದ ನೇಮಿತ 7 ಹಿರಿಯ ವಕೀಲರ ಸಮಿತಿ ವಕೀಲರ ರಕ್ಷಣ ಕಾಯಿದೆ ಸಿದ್ದಪಡಿಸಿದ್ದು, ವಕೀಲರು ಅಥವಾ ಅವರ ಕುಟುಂಬಸ್ಥರಿಗೆ‌ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆಗೆ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ. ವಕೀಲರಿಗೆ ಕೋರ್ಟ್​ ಆಫೀಸರ್ ಎಂದು ಮಾನ್ಯತೆ ನೀಡುವ ಕುರಿತೂ ಕರಡಿನಲ್ಲಿ ಪ್ರಸ್ತಾಪಿಸಲಾಗಿದ್ದು, ಅವರ ವಿರುದ್ದದ‌ ಯಾವುದೇ ಪ್ರಕರಣವನ್ನು 30ದಿನದಲ್ಲಿ ಮುಗಿಸಬೇಕು ಎಂದು ಉಲ್ಲೇಖಿಸಲಾಗಿರುವ 16ಸೆಕ್ಷನ್​ಗಳ ಕಾಯಿದೆಯ ಡ್ರಾಫ್ಟ್ ಸಿದ್ಧವಾಗಿದೆ.

ಇದನ್ನೂ ಓದಿ: 

Karnataka Unlock 3.0: ಹೊಸ ಅನ್​ಲಾಕ್ ಮಾರ್ಗಸೂಚಿ ಪ್ರಕಟ; ಏನೆಲ್ಲಾ ಬದಲಾವಣೆ? ಯಾವುದಕ್ಕೆಲ್ಲಾ ಅವಕಾಶ?

Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ

(7 member committee of BCI prepared Advocate Protection Act draft to protect lawyers)

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ