AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈಯ ಕಟ್ಟಡವೊಂದರ 13ನೇ ಮಹಡಿಯಲ್ಲಿತ್ತು 4 ಅಡಿ ಉದ್ದದ ಹೆಬ್ಬಾವು: ಹೇಗೆ ಬಂತು? ನಿವಾಸಿಗಳಿಗೆ ಅಚ್ಚರಿ

ಮುಂಬೈನ ಘಾಟ್‌ಕೋಪರ್‌ನಲ್ಲಿ 13 ಮಹಡಿಗಳ ಕಟ್ಟಡದ ಟೆರೇಸ್‌ಗೆ 4 ಅಡಿ ಉದ್ದದ ಹೆಬ್ಬಾವು ಬಂದಿದ್ದು, ಇದೀಗ ಹೆಬ್ಬಾವುವನ್ನು ರಕ್ಷಿಸಲಾಗಿದೆ.

ಮುಂಬೈಯ ಕಟ್ಟಡವೊಂದರ 13ನೇ ಮಹಡಿಯಲ್ಲಿತ್ತು 4 ಅಡಿ ಉದ್ದದ ಹೆಬ್ಬಾವು: ಹೇಗೆ ಬಂತು? ನಿವಾಸಿಗಳಿಗೆ ಅಚ್ಚರಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jul 27, 2023 | 7:04 PM

Share

ಪುಣೆ,ಜು.27: ಮುಂಬೈನ ಘಾಟ್‌ಕೋಪರ್‌ನಲ್ಲಿ 13 ಮಹಡಿಗಳ ಕಟ್ಟಡದ ಟೆರೇಸ್‌ಗೆ 4 ಅಡಿ ಉದ್ದದ ಹೆಬ್ಬಾವು ಬಂದಿದ್ದು, ಇದೀಗ ಹೆಬ್ಬಾವುವನ್ನು ರಕ್ಷಿಸಲಾಗಿದೆ. ವ್ರಾಜ್ ಪ್ಯಾರಡೈಸ್ ರೆಸಿಡೆಂಟ್​ನಲ್ಲಿರುವ ನಿವಾಸಿಗಳು ಇಷ್ಟು ಎತ್ತರದಲ್ಲಿ ಹೆಬ್ಬಾವುವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹೆಬ್ಬಾವುವನ್ನು ರಕ್ಷಿಸಿದ್ದಾರೆ.

ಈ ಕಟ್ಟಡದ ಕೆಲವು ನಿರ್ಮಾಣ ಕಾರ್ಯಗಳು ನಡೆಸುತ್ತಿದ್ದು, ಸಿಮೆಂಟ್ ಮಿಶ್ರಿತ ದಪ್ಪ ಪೇಸ್ಟ್‌ನಲ್ಲಿ ಈ ಹೆಬ್ಬಾವು ಸಿಲುಕಿಕೊಂಡಿತ್ತು ಎಂದು ಪ್ರಾಣಿ ರಕ್ಷಣಾ ವೇದಿಕೆಯ ಸದಸ್ಯ ಸೂರಜ್ ಸಹಾ ಟೈಮ್ಸ್​​ ಆಫ್ ಇಂಡಿಯಾ (TOI)ಕ್ಕೆ ತಿಳಿಸಿದ್ದಾರೆ. ಮಂಗಳವಾರ ಘಾಟ್‌ಕೋಪರ್ (ಪಶ್ಚಿಮ) ಎಲ್‌ಬಿಎಸ್ ರಸ್ತೆಯಲ್ಲಿರುವ ವ್ರಾಜ್ ಪ್ಯಾರಡೈಸ್ ಕಟ್ಟಡದ ಟೆರೇಸ್‌ನಲ್ಲಿ ಹೆಬ್ಬಾವು ಕಂಡುಬಂದಿದೆ. ಈ ಟೆರೇಸ್‌ನಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ಹೆಬ್ಬಾವು ಸಿಮೆಂಟ್ ಮಿಶ್ರಿತ ದಪ್ಪ ಪೇಸ್ಟ್‌ಗೆ ಹೋಗಿ ಅಂಟಿಕೊಂಡಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಲ್ಲಿರುವ ನಿವಾಸಿಗಳು ಈ ಬಗ್ಗೆ ತಿಳಿಸಿದ್ದಾರೆ, ನಂತರ ಅವರು ಬಂದು ಅದನ್ನು ರಕ್ಷಿಸಿದ್ದಾರೆ ಎಂದು ಸೂರಜ್ ಸಹಾ ಹೇಳಿದ್ದಾರೆ.

ಇದನ್ನೂ ಓದಿ: ನಾಯಿ ನುಂಗಿ ನರಳುತ್ತಿದ್ದ 15 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ; ವಿಡಿಯೋ ವೈರಲ್

ಇನ್ನೂ ಈ ಹೆಬ್ಬಾವು ಇಷ್ಟು ಎತ್ತರದ ಕಟ್ಟಡ ಮೇಲೆ ಹೇಗೆ ಬಂತು ಎಂದು ಅಲ್ಲಿನ ನಿವಾಸಿಗಳು ಆಶ್ಚರ್ಯಪಟ್ಟಿದ್ದಾರೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು. ಇದು ಲಿಫ್ಟ್​​ನಲ್ಲಿ ಬಂದಿರಬಹುದು ಎಂದು ನೆಟ್ಟಿಗರು ತಮಾಷೆಯಾಗಿ ಹೇಳಿದ್ದಾರೆ. ಮಳೆಗಾಲದಲ್ಲಿ ಹಾವುಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗಿರುತ್ತದೆ. ಈ ಸಮಯದಲ್ಲಿ ಎತ್ತರ ಸ್ಥಳಗಳನ್ನು ಅವುಗಳು ಹುಡುಕಿಕೊಂಡು ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 27 July 23

Follow Us
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ