AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈಯ ಕಟ್ಟಡವೊಂದರ 13ನೇ ಮಹಡಿಯಲ್ಲಿತ್ತು 4 ಅಡಿ ಉದ್ದದ ಹೆಬ್ಬಾವು: ಹೇಗೆ ಬಂತು? ನಿವಾಸಿಗಳಿಗೆ ಅಚ್ಚರಿ

ಮುಂಬೈನ ಘಾಟ್‌ಕೋಪರ್‌ನಲ್ಲಿ 13 ಮಹಡಿಗಳ ಕಟ್ಟಡದ ಟೆರೇಸ್‌ಗೆ 4 ಅಡಿ ಉದ್ದದ ಹೆಬ್ಬಾವು ಬಂದಿದ್ದು, ಇದೀಗ ಹೆಬ್ಬಾವುವನ್ನು ರಕ್ಷಿಸಲಾಗಿದೆ.

ಮುಂಬೈಯ ಕಟ್ಟಡವೊಂದರ 13ನೇ ಮಹಡಿಯಲ್ಲಿತ್ತು 4 ಅಡಿ ಉದ್ದದ ಹೆಬ್ಬಾವು: ಹೇಗೆ ಬಂತು? ನಿವಾಸಿಗಳಿಗೆ ಅಚ್ಚರಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jul 27, 2023 | 7:04 PM

Share

ಪುಣೆ,ಜು.27: ಮುಂಬೈನ ಘಾಟ್‌ಕೋಪರ್‌ನಲ್ಲಿ 13 ಮಹಡಿಗಳ ಕಟ್ಟಡದ ಟೆರೇಸ್‌ಗೆ 4 ಅಡಿ ಉದ್ದದ ಹೆಬ್ಬಾವು ಬಂದಿದ್ದು, ಇದೀಗ ಹೆಬ್ಬಾವುವನ್ನು ರಕ್ಷಿಸಲಾಗಿದೆ. ವ್ರಾಜ್ ಪ್ಯಾರಡೈಸ್ ರೆಸಿಡೆಂಟ್​ನಲ್ಲಿರುವ ನಿವಾಸಿಗಳು ಇಷ್ಟು ಎತ್ತರದಲ್ಲಿ ಹೆಬ್ಬಾವುವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹೆಬ್ಬಾವುವನ್ನು ರಕ್ಷಿಸಿದ್ದಾರೆ.

ಈ ಕಟ್ಟಡದ ಕೆಲವು ನಿರ್ಮಾಣ ಕಾರ್ಯಗಳು ನಡೆಸುತ್ತಿದ್ದು, ಸಿಮೆಂಟ್ ಮಿಶ್ರಿತ ದಪ್ಪ ಪೇಸ್ಟ್‌ನಲ್ಲಿ ಈ ಹೆಬ್ಬಾವು ಸಿಲುಕಿಕೊಂಡಿತ್ತು ಎಂದು ಪ್ರಾಣಿ ರಕ್ಷಣಾ ವೇದಿಕೆಯ ಸದಸ್ಯ ಸೂರಜ್ ಸಹಾ ಟೈಮ್ಸ್​​ ಆಫ್ ಇಂಡಿಯಾ (TOI)ಕ್ಕೆ ತಿಳಿಸಿದ್ದಾರೆ. ಮಂಗಳವಾರ ಘಾಟ್‌ಕೋಪರ್ (ಪಶ್ಚಿಮ) ಎಲ್‌ಬಿಎಸ್ ರಸ್ತೆಯಲ್ಲಿರುವ ವ್ರಾಜ್ ಪ್ಯಾರಡೈಸ್ ಕಟ್ಟಡದ ಟೆರೇಸ್‌ನಲ್ಲಿ ಹೆಬ್ಬಾವು ಕಂಡುಬಂದಿದೆ. ಈ ಟೆರೇಸ್‌ನಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ಹೆಬ್ಬಾವು ಸಿಮೆಂಟ್ ಮಿಶ್ರಿತ ದಪ್ಪ ಪೇಸ್ಟ್‌ಗೆ ಹೋಗಿ ಅಂಟಿಕೊಂಡಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಲ್ಲಿರುವ ನಿವಾಸಿಗಳು ಈ ಬಗ್ಗೆ ತಿಳಿಸಿದ್ದಾರೆ, ನಂತರ ಅವರು ಬಂದು ಅದನ್ನು ರಕ್ಷಿಸಿದ್ದಾರೆ ಎಂದು ಸೂರಜ್ ಸಹಾ ಹೇಳಿದ್ದಾರೆ.

ಇದನ್ನೂ ಓದಿ: ನಾಯಿ ನುಂಗಿ ನರಳುತ್ತಿದ್ದ 15 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ; ವಿಡಿಯೋ ವೈರಲ್

ಇನ್ನೂ ಈ ಹೆಬ್ಬಾವು ಇಷ್ಟು ಎತ್ತರದ ಕಟ್ಟಡ ಮೇಲೆ ಹೇಗೆ ಬಂತು ಎಂದು ಅಲ್ಲಿನ ನಿವಾಸಿಗಳು ಆಶ್ಚರ್ಯಪಟ್ಟಿದ್ದಾರೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು. ಇದು ಲಿಫ್ಟ್​​ನಲ್ಲಿ ಬಂದಿರಬಹುದು ಎಂದು ನೆಟ್ಟಿಗರು ತಮಾಷೆಯಾಗಿ ಹೇಳಿದ್ದಾರೆ. ಮಳೆಗಾಲದಲ್ಲಿ ಹಾವುಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗಿರುತ್ತದೆ. ಈ ಸಮಯದಲ್ಲಿ ಎತ್ತರ ಸ್ಥಳಗಳನ್ನು ಅವುಗಳು ಹುಡುಕಿಕೊಂಡು ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 27 July 23

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ