AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coimbatore: ಅಲ್ಕೋಹಾಲ್​ ಐಸ್​​ಕ್ರೀಂ ಮಾರುತ್ತಿದ್ದ ಕೆಫೆ ಜಪ್ತಿ; ಪರವಾನಗಿ ರದ್ದು

ಇಲ್ಲಿ ಕೆಲಸ  ಮಾಡುವ ಯಾವುದೇ ಕೆಲಸಗಾರರ ಬಳಿಯೂ ವೈದ್ಯಕೀಯ ಫಿಟ್​​ನೆಸ್​ ಪ್ರಮಾಣಪತ್ರವಿಲ್ಲ. ಇಲ್ಲಿನವರು ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ತಲೆಗೆ ಟೊಪ್ಪಿ ಧರಿಸುವುದಿಲ್ಲ.  ಕೈಗೆ ಕೈಗವಸು, ಮಾಸ್ಕ್​​ಗಳನ್ನು ಹಾಕಿಕೊಳ್ಳುವುದಿಲ್ಲ.

Coimbatore: ಅಲ್ಕೋಹಾಲ್​ ಐಸ್​​ಕ್ರೀಂ ಮಾರುತ್ತಿದ್ದ ಕೆಫೆ ಜಪ್ತಿ; ಪರವಾನಗಿ ರದ್ದು
ಕೆಫೆಯನ್ನು ಸೀಲ್​ ಮಾಡಿದ ಆಹಾರ ಸುರಕ್ಷತಾ ಅಧಿಕಾರಿಗಳು
TV9 Web
| Edited By: |

Updated on: Oct 22, 2021 | 8:52 AM

Share

ಆಹಾರ ಸ್ವಚ್ಛತೆ ಮತ್ತು ಗುಣಮಟ್ಟ ನಿಯಮಗಳನ್ನು ಪಾಲಿಸದ ಮತ್ತು ಅಕ್ರಮವಾಗಿ ಲಿಕ್ಕರ್​ ಬಾಟಲಿಗಳನ್ನು ಇಟ್ಟುಕೊಂಡಿದ್ದ ಕೆಫೆಯೊಂದನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಮುಚ್ಚಿಸಿದ್ದಾರೆ. ಕೊಯಂಬತ್ತೂರಿನ ಅವಿನಾಶಿ ರಸ್ತೆಯಲ್ಲಿರುವ ಲಕ್ಷ್ಮೀ ಮಿಲ್ಸ್​​ ಪ್ರದೇಶದಲ್ಲಿರುವ ಒಂದು ಕೆಫೆ ಹೀಗೊಂದು ಆರೋಪಕ್ಕೆ ಗುರಿಯಾಗಿದೆ. ಕೆಫೆಯ ಹೆಸರು ರೋಲಿಂಗ್​ ಡಫ್​.

ಈ ಕೆಫೆಯಲ್ಲಿ ಐಸ್​ಕ್ರೀಂಗೆ ಮಧ್ಯ ಮಿಶ್ರಣ ಮಾಡಿ ನೀಡುತ್ತಾರೆ ಎಂದು ಹಲವು ಗ್ರಾಹಕರು ನೀಡಿದ ದೂರಿನ ಮೇರೆಗೆ ಆಹಾರ ಸುರಕ್ಷತಾ ಮತ್ತು ಪರಿಶೀಲನಾ ಅಧಿಕಾರಿಗಳು ಕೆಫೆಗೆ ತೆರಳಿದ್ದರು. ಅಂದಹಾಗೆ ಈ ಕೆಫೆಯಲ್ಲಿ ಸಿಗುವ ಲಿಕ್ಕರ್​ ಐಸ್​ಕ್ರೀಂ ಸ್ಥಳೀಯ ಯುವಜನರ ಪಾಲಿಗೆ ಅಚ್ಚುಮೆಚ್ಚಿನ ಆಹಾರವಾಗಿಬಿಟ್ಟಿತ್ತು. ಹೀಗೆ ಅಧಿಕಾರಿಗಳು ಭೇಟಿ ಕೊಟ್ಟ ಸಂದರ್ಭದಲ್ಲಿ ಎರಡು ಲಿಕ್ಕರ್​ ಬಾಟಲಿಗಳನ್ನು ಅವರು ವಶಪಡಿಸಿಕೊಂಡಿದ್ದಾರೆ.  ಇನ್ನು ಕೆಫೆಯಲ್ಲಿ ಆಹಾರ ತಯಾರಿಸುತ್ತಿದ್ದ ಸ್ಥಳವಂತೂ ಪೂರ್ತಿಯಾಗಿ ಸೊಳ್ಳೆ ಮತ್ತು ನೊಣಗಳಿಂದ ತುಂಬಿಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿ ಕೆಲಸ  ಮಾಡುವ ಯಾವುದೇ ಕೆಲಸಗಾರರ ಬಳಿಯೂ ವೈದ್ಯಕೀಯ ಫಿಟ್​​ನೆಸ್​ ಪ್ರಮಾಣಪತ್ರವಿಲ್ಲ. ಇಲ್ಲಿನವರು ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ತಲೆಗೆ ಟೊಪ್ಪಿ ಧರಿಸುವುದಿಲ್ಲ.  ಕೈಗೆ ಕೈಗವಸು, ಮಾಸ್ಕ್​​ಗಳನ್ನು ಹಾಕಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಈ ಕೆಫೆಯನ್ನು ಜಪ್ತಿ ಮಾಡಲು ಒಟ್ಟು ಎಂಟು ಕಾರಣಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಕೊಟ್ಟಿದ್ದಾರೆ.  ಘಟನೆ ನಡೆದ ಬೆನ್ನಲ್ಲೇ ತಮಿಳುನಾಡಿನ ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್​, ಈ ಕೆಫೆಯ ಪರವಾನಗಿ ರದ್ದುಗೊಳಿಸಿ, ಬಾಗಿಲು ಮುಚ್ಚಿ ಸೀಲ್​ ಹಾಕಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮೊಸರು ಮತ್ತು ಹುಣಸೆಹಣ್ಣಿನ ಚಟ್ನಿ ಬೆರೆಸಿ ‘ರಸಗುಲ್ಲಾ ಚಾಟ್’ ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ನೋಡಿ

Temple Tour: ಮಹಾತಪಸ್ವಿ ಮಾರ್ಕಂಡೇಯ ಶಿವನಲ್ಲಿ ಐಕ್ಯವಾದ ಸಂಗಮ ಕ್ಷೇತ್ರವಿದು; ಒಮ್ಮೆ ಭೇಟಿ ಕೊಡಿ

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ