AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ಡೋಸ್​ ಲಸಿಕೆ ನೀಡಿಕೆ; ಸಾಧನೆಯನ್ನು ಸಂಭ್ರಮಿಸಲು 100 ಪ್ರಮುಖ ಸ್ಮಾರಕಗಳಿಗೆ ತ್ರಿವರ್ಣ ದೀಪಾಲಂಕಾರ

ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಹಾದಿ ಸುಗಮವಾಗಿರಲಿಲ್ಲ. ಜನವರಿಯಲ್ಲಿ ಒಂದು ಬಾರಿ ಪ್ರಾರಂಭವಾಯಿತಾದರೂ ನಂತರದ ದಿನಗಳಲ್ಲಿ ಕೆಲವು ಅಡೆತಡೆ ಉಂಟಾಗಿ ಲಸಿಕಾ ಅಭಿಯಾನಕ್ಕೆ ಸ್ವಲ್ಪ ಹಿನ್ನಡೆಯಾಯಿತು.

100 ಕೋಟಿ ಡೋಸ್​ ಲಸಿಕೆ ನೀಡಿಕೆ; ಸಾಧನೆಯನ್ನು ಸಂಭ್ರಮಿಸಲು 100 ಪ್ರಮುಖ ಸ್ಮಾರಕಗಳಿಗೆ ತ್ರಿವರ್ಣ ದೀಪಾಲಂಕಾರ
ದೆಹಲಿಯ ಕೆಂಪುಕೋಟೆ
TV9 Web
| Updated By: Lakshmi Hegde|

Updated on: Oct 22, 2021 | 9:25 AM

Share

ಭಾರತದಲ್ಲಿ ನಿನ್ನೆ ಕೊವಿಡ್​ 19 ಲಸಿಕೆ ಅಭಿಯಾನ 100 ಕೋಟಿ ಡೋಸ್​​​ಗಳ ಮೈಲಿಗಲ್ಲು ತಲುಪಿದೆ. ಜನವರಿಯಿಂದ ಶುರುವಾದ ಅಭಿಯಾನ 9 ತಿಂಗಳಲ್ಲಿ 100 ಕೋಟಿ ಡೋಸ್​ ಲಸಿಕೆ ನೀಡಿದ್ದು ಸಾಮಾನ್ಯ ಸಾಧನೆಯೇನೂ ಅಲ್ಲ. ಈ ಸಂತೋಷವನ್ನು ಭಾರತೀಯ ಸಂಸ್ಕೃತಿ ಸಚಿವಾಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಭಿನ್ನವಾಗಿ ಆಚರಿಸಿದೆ. 100 ಕೋಟಿ ಡೋಸ್​ ಲಸಿಕೆ ನೀಡಿಕೆ ಪೂರ್ಣವಾದ ಹಿನ್ನೆಲೆಯಲ್ಲಿ ದೇಶದ 100 ಪ್ರಮುಖ ಸ್ಮಾರಕಗಳಿಗೆ ತ್ರಿವರ್ಣ (ಕೇಸರಿ-ಬಿಳಿ-ಹಸಿರು)ದ ದೀಪಾಲಂಕಾರ ಮಾಡಿದೆ. ಈ ಮೂಲಕ ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೊರೊನಾ ವಾರಿಯರ್ಸ್​ ಆದ ಆರೋಗ್ಯ ಸಿಬ್ಬಂದಿ, ಪ್ಯಾರಾಮೆಡಿಕಲ್​ ಸಿಬ್ಬಂದಿ, ಲಸಿಕೆ ಹಾಕುವವರು, ಸ್ವಚ್ಛತಾ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆಗೆ ಗೌರವವನ್ನು ಸಲ್ಲಿಸಿದೆ. 

ಹೀಗೆ ತ್ರಿವರ್ಣ ದೀಪಾಲಂಕಾರ ಮಾಡಲಾದ 100 ಸ್ಮಾರಕಗಳಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ ದೆಹಲಿಯ ಕೆಂಪುಕೋಟೆ, ಹುಮಾಯೂನ್​ ಸಮಾಧಿ, ಕುತುಬ್​ ಮಿನಾರ್​, ಉತ್ತರಪ್ರದೇಶದ ಆಗ್ರಾ ಕೋಟೆ, ಫತೇಪುರ್​ ಸಿಕ್ರಿ, ಒಡಿಶಾದ ಕೋನಾರ್ಕ್​ ದೇವಾಲಯ, ತಮಿಳುನಾಡಿನ ಮಲ್ಲಪುರಂರಥ ದೇವಾಲಯ, ಗೋವಾದ ಸೇಂಟ್​ ಫ್ರಾನ್ಸಿಸ್​ ಆಫ್​ ಅಸ್ಸಿಸಿ ಚರ್ಚ್​,  ರಾಜಸ್ಥಾನದ ಚಿತ್ತೋರ್, ಕುಂಭಲ್ಗಡ್​ ಕೋಟೆಗಳು, ಬಿಹಾರದ ನಳಂದ ವಿಶ್ವವಿದ್ಯಾಲಯದ ಉತ್ಖನನ ಅವಶೇಷಗಳು, ಗುಜರಾತ್​​​ನ ಧೋಲವೀರ ಇತ್ಯಾದಿಗಳು ಸೇರಿವೆ. ಅಕ್ಟೋಬರ್​ 21ರ ರಾತ್ರಿ ಈ ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿತ್ತು.

Khajuraho

ಖಜುರಾಹೋ

ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಹಾದಿ ಸುಗಮವಾಗಿರಲಿಲ್ಲ. ಜನವರಿಯಲ್ಲಿ ಒಂದು ಬಾರಿ ಪ್ರಾರಂಭವಾಯಿತಾದರೂ ನಂತರದ ದಿನಗಳಲ್ಲಿ ಕೆಲವು ಅಡೆತಡೆ ಉಂಟಾಗಿ ಲಸಿಕಾ ಅಭಿಯಾನಕ್ಕೆ ಸ್ವಲ್ಪ ಹಿನ್ನಡೆಯಾಯಿತು. ಎರಡನೇ ಅಲೆ ಅತ್ಯಂತ ಮಾರಣಾಂತಿಕವಾಗಿ ಬಾಧಿಸಿತು. ಅದೆಲ್ಲದರ ಮಧ್ಯೆ ಇಂದು ಕೊರೊನಾ ಲಸಿಕೆ ಅಭಿಯಾನ ಒಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಸೇರಿ ಹಲವರು ಸಂತೋಷ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಶ್ಲಾಘಿಸಿದೆ. ಚೀನಾ ಬಿಟ್ಟರೆ ಒಂದು ಶತಕೋಟಿ ಜನರಿಗೆ ಲಸಿಕೆ ನೀಡಿದ ದೇಶ ಭಾರತವೇ ಆಗಿದೆ.

Sun Temple

ಕೊನಾರ್ಕ್​ ಸೂರ್ಯ ದೇವಾಲಯ

ಇದನ್ನೂ ಓದಿ: Aryan Khan: ‘ಡ್ರಗ್ಸ್​, ವೇಶ್ಯಾವಾಟಿಕೆ ಎಂದಿಗೂ ನಾಶ ಆಗಲ್ಲ’; ಆರ್ಯನ್​ ಪರ ಮಾತಾಡಿದ ಸಲ್ಮಾನ್​ ಮಾಜಿ ಪ್ರೇಯಸಿ ಸೋಮಿ ಅಲಿ

Kane Williamson: ಟಿ20 ವಿಶ್ವಕಪ್​ನಲ್ಲಿ ಅಭಿಯಾನ ಆರಂಭಿಸುವ ಮುನ್ನವೇ ನ್ಯೂಜಿಲೆಂಡ್​ಗೆ ಬಿಗ್ ಶಾಕ್

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?