ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಸ್ಕೀಮ್ ಮೂಲಕ ಯುವ ಪದವೀಧರರಿಗೆ ಸುವರ್ಣ ಅವಕಾಶ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಸ್ಕೀಮ್ ಮೂಲಕ ಯುವಕರನ್ನು ಉದ್ಯೋಗಕ್ಕೆ ಉತ್ತೇಜಿಸುದಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ತಂದಿದೆ. ಈ ಮೂಲಕ ದೇಶದ ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡುತ್ತಿದೆ. ಅಭ್ಯರ್ಥಿಗಳು ಈ ತಕ್ಷಣವೇ ನೀವು ಅರ್ಜಿ ಸಲ್ಲಿಸಿ. ಹೇಗೆ ಅರ್ಜಿ ಸಲ್ಲಿಸುವುದು, ಯಾವೆಲ್ಲ ಸೌಕರ್ಯಗಳು ಇದೆ. ಈ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಸ್ಕೀಮ್ ಮೂಲಕ ಯುವ ಪದವೀಧರರಿಗೆ ಸುವರ್ಣ ಅವಕಾಶ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
Follow us
|

Updated on: Oct 19, 2024 | 10:50 AM

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಸ್ಕೀಮ್ (PMIS) ಇದು ಯುವಕರಿಗೆ ಭಾರತ ಸರ್ಕಾರ ತಂದಿರುವ ಯೋಜನೆ, ಇಲ್ಲಿ ಯುವಕರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಹಾಗೂ ಉತ್ತಮ ತರಬೇತಿಯನ್ನು ಪಡೆಯಲು, ಉತ್ತಮ ಉದ್ಯೋಗವನ್ನು ಪಡೆಯಲು ಈ ಯೋಜನೆಯನ್ನು ತರಲಾಗಿದೆ. 2024-25ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿದೆ. 500 ಕಂಪನಿಗಳಲ್ಲಿ ಯುವಕರು ಇಂಟರ್ನ್‌ಶಿಪ್​​ಗಳನ್ನು ಮಾಡಬಹುದು. ಈ ಯೋಜನೆಯ ಮೂಲಕ ಸುಮಾರು ಒಂದು ಕೋಟಿ ಯುವ ಪದವೀಧರರಿಗೆ 500ಕ್ಕೂ ಹೆಚ್ಚು ಉತ್ತಮ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶ ನೀಡಲಿದೆ. ಇನ್ನು ಈ ಯೋಜನೆಗೆ ಹೇಗೆ ನೀವು ಅರ್ಜಿ ಸಲ್ಲಿಸಬಹುದು, ಇದರ ಪ್ರಮುಖ ವೈಶಿಷ್ಟ್ಯಗಳು, ಅರ್ಹತಾ ಮಾನದಂಡಗಳು, ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಪ್ರಯೋಜನಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

PM ಇಂಟರ್ನ್‌ಶಿಪ್ ಯೋಜನೆ ಎಂದರೇನು?

2024-2025 ರ ಆರ್ಥಿಕ ವರ್ಷಕ್ಕೆ, 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಭಾರತ ಎಲ್ಲ ರಾಜ್ಯಗಳಲ್ಲೂ ಜಾರಿಗೊಳಿಸಲಾಗಿದೆ. ಇದು ಕೇಂದ್ರ/ರಾಜ್ಯ ಯೋಜನೆಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇಂಟರ್ನ್‌ಶಿಪ್ ಅವಧಿಯು 12 ತಿಂಗಳುಗಳವರೆಗೆ ಮಾಡಬೇಕು.

1. ಈ ಯೋಜನೆಯು ಪ್ರಾಯೋಗಿಕ ಸನ್ನಿವೇಶಗಳಿಗೆ ತಮ್ಮ ಸೈದ್ಧಾಂತಿಕ ಜ್ಞಾನವನ್ನು ಅನ್ವಯಿಸಲು ಅನುವು ಮಾಡಿಕೊಡುವ ಮೂಲಕ ವೃತ್ತಿಪರ ನೆಲೆಯಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ಇಂಟರ್ನ್‌ಗಳನ್ನು ಒದಗಿಸಲು ಆದ್ಯತೆ ನೀಡುತ್ತದೆ.

2.ತೈಲ ಮತ್ತು ಅನಿಲ, ಆತಿಥ್ಯ, ಆಟೋಮೋಟಿವ್, ಐಟಿ ಮತ್ತು ಬ್ಯಾಂಕಿಂಗ್ ಸೇರಿದಂತೆ ವಿವಿಧ ರೀತಿಯ ಆಸಕ್ತಿಗಳು ಮತ್ತು ಕೌಶಲ್ಯಗಳನ್ನು ಪೂರೈಸುವ ವಿವಿಧ ಶ್ರೇಣಿಯ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಲಭ್ಯವಿದೆ.

3.ಈ ಯೋಜನೆಯು ಭಾರತದ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ, ಇಂಟರ್ನ್‌ಗಳಿಗೆ ಉದ್ಯಮಿಗಳೊಂದಿಗೆ ಕೆಲಸ ಮಾಡಲು ಮತ್ತು ಕಲಿಯಲು ಅವಕಾಶವನ್ನು ನೀಡುತ್ತದೆ.

4.ಇಂಟರ್ನ್‌ಶಿಪ್ ಅವಧಿಯಲ್ಲಿ ಇಂಟರ್ನ್‌ಗಳು ತಮ್ಮ ಜೀವನ ವೆಚ್ಚವನ್ನು ಬೆಂಬಲಿಸಲು ಮಾಸಿಕ ಸ್ಟೈಫಂಡ್ ಅನ್ನು ಪಡೆಯುತ್ತಾರೆ.

5. ಈ ಯೋಜನೆ ಮೂಲಕ ಯುವ ಪದವೀಧರರನ್ನು ಉದ್ಯೋಗದಾತರನ್ನಾಗಿ, ಹಾಗೂ ಉದ್ಯೋಗಕ್ಕೆ ಹೋಗಲು ಸಿದ್ಧಗೊಳಿಸಲು ತರಬೇತಿ, ಕೌಶಲ್ಯಗಳನ್ನು ಬೆಳೆಸುವುದು ಅಗತ್ಯ ಆಗಿದೆ.

PM ಇಂಟರ್ನ್‌ಶಿಪ್ ಯೋಜನೆ: ಇಂಟರ್ನ್‌ಶಿಪ್ ಪಾವತಿ

PM ಇಂಟರ್ನ್‌ಶಿಪ್ ಯೋಜನೆಗಳಲ್ಲಿ ಕೆಲಸ ಮಾಡುವ ಇಂಟರ್ನ್‌ಗಳಿಗೆ ಮಾಸಿಕ ಇಂಟರ್ನ್‌ಶಿಪ್ ಸ್ಟೈಫಂಡ್ ಅನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಅವರ ಸಾರಿಗೆ, ವಸತಿ ಮತ್ತು ಊಟದಂತಹ ವೆಚ್ಚಗಳನ್ನು ಸರಿದೂಗಿಸಲು ಅವರು ಅನುದಾನಕ್ಕೆ ಅರ್ಹರಾಗಬಹುದು.

ಇನ್ನು ಇಂಟರ್ನ್‌ಗಳಿಗೆ 4500 ರೂ. ಸರ್ಕಾರ ಹಾಗೂ ಕಂಪನಿಯು ಮಾಸಿಕ ರೂ. 500 ರೂ ನೀಡುತ್ತದೆ. ಒಟ್ಟು 5000ದವರೆಗೆ ವೇತನವನ್ನು ಕೂಡ ನೀಡುತ್ತದೆ. ಈ ಬಗ್ಗೆ ಅಧಿಕೃತ ಮಾಹಿತಿಗಾಗಿ PMIS ವೆಬ್‌ಸೈಟ್​​​ಗೆ ಭೇಟಿ ನೀಡಿ.

ಇದನ್ನೂ ಓದಿ: ಐಟಿ ಸೆಕ್ಟರ್​ನಲ್ಲಿ ಭರ್ಜರಿ ಉದ್ಯೋಗಾವಕಾಶ; ಎಐ, ಎಂಎಲ್, ಡೇಟಾ ಸೈನ್ಸ್ ಇತ್ಯಾದಿ ಕಲಿತವರಿಗೆ ಒಳ್ಳೆಯ ಬೇಡಿಕೆ

ಅಭ್ಯರ್ಥಿಗಳಿಗೆ PM ಇಂಟರ್ನ್‌ಶಿಪ್ ಸ್ಕೀಮ್ ಅರ್ಹತಾ ಮಾನದಂಡ

1. ವಯಸ್ಸು: ಡಿಸೆಂಬರ್ 1, 2024 ರಂತೆ 21 ಮತ್ತು 24 ವರ್ಷಗಳ ನಡುವೆ.

2. ಪೌರತ್ವ: ಭಾರತದ ಪ್ರಜೆಯಾಗಿರಬೇಕು.

3. ಶೈಕ್ಷಣಿಕ ಅರ್ಹತೆ: ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪದವಿಯನ್ನು ಹೊಂದಿರಬೇಕು.

ಶೈಕ್ಷಣಿಕ ಅರ್ಹತೆಗಳು

ಶೈಕ್ಷಣಿಕ ಅರ್ಹತೆಗಳು: ಹೈಸ್ಕೂಲ್, ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಉತ್ತೀರ್ಣರಾಗಿರಬೇಕು. ITI ಯಿಂದ ಪ್ರಮಾಣಪತ್ರ, ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್‌ನಿಂದ ಡಿಪ್ಲೊಮಾ, BA, B.Sc, B.Com, BCA, BBA, ಮುಂತಾದ ಪದವಿಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.

‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Nithya Bhavishya: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್