Sign In

By signing in or creating an account, you agree with Associated Broadcasting Company's Terms & Conditions and Privacy Policy.

World Environment Day 2021: ಟೆರೇಸ್​ ಮೇಲೆ ಪುಟ್ಟ ಕಾಡು ನಿರ್ಮಾಣ ಮಾಡಿದ ಮಧ್ಯಪ್ರದೇಶದ ವ್ಯಕ್ತಿ..2500ಕ್ಕೂ ಹೆಚ್ಚು ಮರಗಳು

ಸೋಹನ್​ಲಾಲ್​​ ಅವರ ಮನೆ ಟೆರೇಸ್​​ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ ಎನ್ನುತ್ತಾರೆ ಸೋಹನ್​ ಲಾಲ್​ ದ್ವಿವೇದಿ.

World Environment Day 2021: ಟೆರೇಸ್​ ಮೇಲೆ ಪುಟ್ಟ ಕಾಡು ನಿರ್ಮಾಣ ಮಾಡಿದ ಮಧ್ಯಪ್ರದೇಶದ ವ್ಯಕ್ತಿ..2500ಕ್ಕೂ ಹೆಚ್ಚು ಮರಗಳು
ಸೋಹನ್​ ಲಾಲ್​ ದ್ವಿವೇದಿ
Follow us
TV9 Web
| Updated By: Lakshmi Hegde

Updated on: Jun 05, 2021 | 4:32 PM

ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಮನೆ ಮೇಲೆ ಒಂದು ಸಣ್ಣ ಅರಣ್ಯವನ್ನೇ ಸೃಷ್ಟಿಸಿದ್ದಾರೆ. ಇಂದಿನ ವಿಶ್ವ ಪರಿಸರ ದಿನಾಚರಣೆ ದಿನ ಆ ಫೋಟೋಗಳು ಸಿಕ್ಕಾಪಟೆ ವೈರಲ್​ ಆಗಿವೆ. ಇವರ ಹೆಸರು ಸೋಹನ್​ ಲಾಲ್​ ದ್ವಿವೇದಿ. ಮನೆಯ ಟೆರೇಸ್​​ಮೇಲೆ 40 ಪ್ರಭೇದದ, 2500ಕ್ಕೂ ಹೆಚ್ಚು ಬೋನ್ಸಾಯ್​ ಮರಗಳನ್ನು ಬೆಳೆಸಿ ಅರಣ್ಯ ನಿರ್ಮಿಸಿದ್ದಾರೆ.

ಸೋಹನ್​ ಲಾಲ್​ ಅವರು ವಿದ್ಯುತ್​ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಉದ್ಯೋಗದಿಂದ ನಿವೃತ್ತಿಹೊಂದಿದ ನಂತರ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಬೋನ್ಸಾಯ್​ ಅರಣ್ಯ ನಿರ್ಮಾಣ ಮಾಡಲು ಮುಂಬೈ ಮೂಲದ ಮಹಿಳೆಯೊಬ್ಬರೇ ಸ್ಫೂರ್ತಿ ಎನ್ನುತ್ತಾರೆ ಸೋಹನ್​ ಲಾಲ್​. ಆಕೆ ಟೆರೇಸ್​ ಮೇಲೆ 250 ಬೋನ್ಸಾಯ್​ ಮರಗಳನ್ನು ನೆಟ್ಟಿ-ಬೆಳೆಸಿದ್ದರು. ಆಕೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದ ಸೋಹನ್​ ಲಾಲ್​ ತಾನೂ ಯಾಕೆ ಅದನ್ನು ಮಾಡಬಾರದು ಎಂದು ಯೋಚಿಸಿ, ಕಾರ್ಯಪ್ರವೃತ್ತರಾದರು. ಇದೀಗ ಇವರ ಮನೆ ಟೆರೇಸ್​ಗೆ ಹೋದರೆ ಅಲ್ಲೊಂದು ಬೋನ್ಸಾಯ್​ ಕಾಡು ನಿರ್ಮಾಣವಾಗಿದ್ದನ್ನು ನೋಡಬಹುದಾಗಿದೆ.

ಬೋನ್ಸಾಯ್​ ಮರಗಳೆಂದರೆ ಪುಟ್ಟಪುಟ್ಟ ಮರಗಳು. ಅವು ನೋಡಲೂ ಅಷ್ಟೇ ಸುಂದರವಾಗಿರುತ್ತದೆ. ಸೋಹನ್​ಲಾಲ್​​ ಅವರ ಮನೆ ಟೆರೇಸ್​​ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ. ಇವತ್ತಿಗೂ ದಿನದ ಬಹುತೇಕ ಸಮಯ ಇಲ್ಲಿಯೇ ಕಳೆಯುತ್ತೇನೆ ಎನ್ನುತ್ತಾರೆ ಸೋಹನ್​ಲಾಲ್​. ಅದರಲ್ಲೂ ಈಗಂತೂ ಲಾಕ್​ಡೌನ್​. ನನಗೆ ಮನೆಯಿಂದ ಹೊರಹೋಗಿ ಯಾವುದೇ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯ ಟೆರೇಸ್​​ನಿಂದ ನನಗೆ ತುಂಬ ಆರಾಮ ಎನ್ನಿಸಿದೆ ಎಂದಿದ್ದಾರೆ.

A man creates mini forest on his terrace in Madhya Pradesh

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ