AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Environment Day 2021: ಟೆರೇಸ್​ ಮೇಲೆ ಪುಟ್ಟ ಕಾಡು ನಿರ್ಮಾಣ ಮಾಡಿದ ಮಧ್ಯಪ್ರದೇಶದ ವ್ಯಕ್ತಿ..2500ಕ್ಕೂ ಹೆಚ್ಚು ಮರಗಳು

ಸೋಹನ್​ಲಾಲ್​​ ಅವರ ಮನೆ ಟೆರೇಸ್​​ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ ಎನ್ನುತ್ತಾರೆ ಸೋಹನ್​ ಲಾಲ್​ ದ್ವಿವೇದಿ.

World Environment Day 2021: ಟೆರೇಸ್​ ಮೇಲೆ ಪುಟ್ಟ ಕಾಡು ನಿರ್ಮಾಣ ಮಾಡಿದ ಮಧ್ಯಪ್ರದೇಶದ ವ್ಯಕ್ತಿ..2500ಕ್ಕೂ ಹೆಚ್ಚು ಮರಗಳು
ಸೋಹನ್​ ಲಾಲ್​ ದ್ವಿವೇದಿ
TV9 Web
| Edited By: |

Updated on: Jun 05, 2021 | 4:32 PM

Share

ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಮನೆ ಮೇಲೆ ಒಂದು ಸಣ್ಣ ಅರಣ್ಯವನ್ನೇ ಸೃಷ್ಟಿಸಿದ್ದಾರೆ. ಇಂದಿನ ವಿಶ್ವ ಪರಿಸರ ದಿನಾಚರಣೆ ದಿನ ಆ ಫೋಟೋಗಳು ಸಿಕ್ಕಾಪಟೆ ವೈರಲ್​ ಆಗಿವೆ. ಇವರ ಹೆಸರು ಸೋಹನ್​ ಲಾಲ್​ ದ್ವಿವೇದಿ. ಮನೆಯ ಟೆರೇಸ್​​ಮೇಲೆ 40 ಪ್ರಭೇದದ, 2500ಕ್ಕೂ ಹೆಚ್ಚು ಬೋನ್ಸಾಯ್​ ಮರಗಳನ್ನು ಬೆಳೆಸಿ ಅರಣ್ಯ ನಿರ್ಮಿಸಿದ್ದಾರೆ.

ಸೋಹನ್​ ಲಾಲ್​ ಅವರು ವಿದ್ಯುತ್​ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಉದ್ಯೋಗದಿಂದ ನಿವೃತ್ತಿಹೊಂದಿದ ನಂತರ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಬೋನ್ಸಾಯ್​ ಅರಣ್ಯ ನಿರ್ಮಾಣ ಮಾಡಲು ಮುಂಬೈ ಮೂಲದ ಮಹಿಳೆಯೊಬ್ಬರೇ ಸ್ಫೂರ್ತಿ ಎನ್ನುತ್ತಾರೆ ಸೋಹನ್​ ಲಾಲ್​. ಆಕೆ ಟೆರೇಸ್​ ಮೇಲೆ 250 ಬೋನ್ಸಾಯ್​ ಮರಗಳನ್ನು ನೆಟ್ಟಿ-ಬೆಳೆಸಿದ್ದರು. ಆಕೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದ ಸೋಹನ್​ ಲಾಲ್​ ತಾನೂ ಯಾಕೆ ಅದನ್ನು ಮಾಡಬಾರದು ಎಂದು ಯೋಚಿಸಿ, ಕಾರ್ಯಪ್ರವೃತ್ತರಾದರು. ಇದೀಗ ಇವರ ಮನೆ ಟೆರೇಸ್​ಗೆ ಹೋದರೆ ಅಲ್ಲೊಂದು ಬೋನ್ಸಾಯ್​ ಕಾಡು ನಿರ್ಮಾಣವಾಗಿದ್ದನ್ನು ನೋಡಬಹುದಾಗಿದೆ.

ಬೋನ್ಸಾಯ್​ ಮರಗಳೆಂದರೆ ಪುಟ್ಟಪುಟ್ಟ ಮರಗಳು. ಅವು ನೋಡಲೂ ಅಷ್ಟೇ ಸುಂದರವಾಗಿರುತ್ತದೆ. ಸೋಹನ್​ಲಾಲ್​​ ಅವರ ಮನೆ ಟೆರೇಸ್​​ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ. ಇವತ್ತಿಗೂ ದಿನದ ಬಹುತೇಕ ಸಮಯ ಇಲ್ಲಿಯೇ ಕಳೆಯುತ್ತೇನೆ ಎನ್ನುತ್ತಾರೆ ಸೋಹನ್​ಲಾಲ್​. ಅದರಲ್ಲೂ ಈಗಂತೂ ಲಾಕ್​ಡೌನ್​. ನನಗೆ ಮನೆಯಿಂದ ಹೊರಹೋಗಿ ಯಾವುದೇ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯ ಟೆರೇಸ್​​ನಿಂದ ನನಗೆ ತುಂಬ ಆರಾಮ ಎನ್ನಿಸಿದೆ ಎಂದಿದ್ದಾರೆ.

A man creates mini forest on his terrace in Madhya Pradesh

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ