AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಸ್ಟಾ ಯೋಜನೆಗೆ ಕಾಂಗ್ರೆಸ್​ನಿಂದ ತೀವ್ರ ವಿರೋಧ; ಆದರೆ ರಾಜಸ್ಥಾನದಲ್ಲಿ 160 ಫ್ಲ್ಯಾಟ್​​ಗಳ ನಿರ್ಮಾಣ ಸದ್ದಿಲ್ಲದೆ ಆರಂಭ

ಒಟ್ಟು 176 ಫ್ಲ್ಯಾಟ್​ಗಳ ನಿರ್ಮಾಣಕ್ಕೆ ಜೈಪುರ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಇಟ್ಟಿತ್ತು. ಆದರೆ ವಸತಿ ಮಂಡಳಿ 160 ಫ್ಲ್ಯಾಟ್​​ಗಳಿಗೆ ಮಾತ್ರ ಅನುಮೋದನೆ ನೀಡಿದೆ.

ವಿಸ್ಟಾ ಯೋಜನೆಗೆ ಕಾಂಗ್ರೆಸ್​ನಿಂದ ತೀವ್ರ ವಿರೋಧ; ಆದರೆ ರಾಜಸ್ಥಾನದಲ್ಲಿ 160 ಫ್ಲ್ಯಾಟ್​​ಗಳ ನಿರ್ಮಾಣ ಸದ್ದಿಲ್ಲದೆ ಆರಂಭ
ಅಶೋಕ್​ ಗೆಹ್ಲೋಟ್​
TV9 Web
| Edited By: |

Updated on: Jun 05, 2021 | 2:52 PM

Share

ಕೊರೊನಾ ಉಲ್ಬಣಗೊಂಡ ಸಂದರ್ಭದಲ್ಲೂ ಕೇಂದ್ರ ಸರ್ಕಾರ ವಿಸ್ಟಾ ಯೋಜನೆಯಡಿ ಹೊಸ ಸಂಸತ್​ ಭವನ ನಿರ್ಮಾಣ ಸೇರಿ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಆರೋಪಿಸಿದ್ದವು. ಆದರೆ ಇದೀಗ ಕೊವಿಡ್​ ಸಾಂಕ್ರಾಮಿಕದ ಮಧ್ಯೆ ರಾಜಸ್ಥಾನ ಕಾಂಗ್ರೆಸ್​ ಸರ್ಕಾರ, ಶಾಸಕರಿಗಾಗಿ 160 ಐಷಾರಾಮಿ ಫ್ಲ್ಯಾಟ್​​ಗಳ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ. ಜ್ಯೋತಿನಗರದಲ್ಲಿರುವ ರಾಜ್ಯದ ವಿಧಾನಸೌಧದ ಬಳಿಯೇ ಈ ಫ್ಲ್ಯಾಟ್​ಗಳು ನಿರ್ಮಾಣವಾಗಲಿದ್ದು, ಮೇ 20ರಿಂದ ಕೆಲಸ ಶುರುವಾಗಿದೆ. ಸುಮಾರು 266 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ.

ಈ ಯೋಜನೆಯನ್ನು ರಾಜಸ್ಥಾನ ವಸತಿ ಮಂಡಳಿ (ಆರ್​ಎಚ್​ಬಿ) ಪ್ರಾರಂಭಿಸಿದ್ದು, ಪ್ರತಿ ಫ್ಲ್ಯಾಟ್​ 3,200 ಚದರ್​ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಹಾಗೇ, ನಾಲ್ಕು ಮಲಗುವ ಕೋಣೆಯನ್ನು ಒಳಗೊಂಡಿರಲಿದೆ ಎಂದು ಮಂಡಳಿ ತಿಳಿಸಿದೆ. 30 ತಿಂಗಳ ಒಳಗೆ ಈ ಯೋಜನೆಯನ್ನು ಸಂಪೂರ್ಣಗೊಳಿಸಲು ನಿಗದಿ ಮಾಡಲಾಗಿದ್ದು, ಅದರ ಒಳಗೇ ಕೆಲಸ ಮುಗಿಸುವುದಾಗಿಯೂ ಆರ್​ಎಚ್​​ಬಿ ತಿಳಿಸಿದೆ.

ಒಟ್ಟು 176 ಫ್ಲ್ಯಾಟ್​ಗಳ ನಿರ್ಮಾಣಕ್ಕೆ ಜೈಪುರ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಇಟ್ಟಿತ್ತು. ಆದರೆ ವಸತಿ ಮಂಡಳಿ 160 ಫ್ಲ್ಯಾಟ್​​ಗಳಿಗೆ ಮಾತ್ರ ಅನುಮೋದನೆ ನೀಡಿದೆ. ಕಾನೂನು ಪ್ರಕಾರವೇ ಫ್ಲ್ಯಾಟ್​​ಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್​ ದೋಸ್ತಾರಾ ತಿಳಿಸಿದ್ದಾರೆ. ಒಂದು ಕಡೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿಸ್ಟಾ ಯೋಜನೆಯನ್ನು ವಿರೋಧಿಸುತ್ತಿದೆ. ಇತ್ತ ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರ ಕೊವಿಡ್ 19 ಕಾಲದಲ್ಲೇ 160 ಫ್ಲ್ಯಾಟ್​​ಗಳ ನಿರ್ಮಾಣ ಶುರು ಮಾಡಿದೆ. ಅದರಲ್ಲೂ ರಾಹುಲ್ ಗಾಂಧಿ, ವಿಸ್ಟಾ ಯೋಜನೆಯನ್ನು ಕ್ರಿಮಿನಲ್​ ವೇಸ್ಟೇಜ್​ ಎಂದು ಹೇಳಿದ್ದರು.

ಇದನ್ನು ಓದಿ: Amazon Kannada Insult: ಆ ಗೂಗಲ್ ಆಯ್ತು, ಈಗ ಅಮೆಜಾನ್‌ ಆನ್​ಲೈನ್ ಶಾಪಿಂಗ್​ನಲ್ಲೂ ಕನ್ನಡ ಧ್ವಜ, ಲಾಂಛನಕ್ಕೆ ಅಪಮಾನ

Congress led Rajasthan government has started the construction of 160 luxurious flats

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ