AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿದುಳು ಸರ್ಜರಿ ವೇಳೆ ಗಾಯತ್ರಿ ಮಂತ್ರ ಪಠಿಸಿದ ರೋಗಿ; ನಂತರ ನಡೆಯಿತು ವೈದ್ಯಕೀಯ ಲೋಕ ಅಚ್ಚರಿ ಪಡುವಂಥ ಪವಾಡ

ಈ ಗಡ್ಡೆ ತುಂಬ ಸೂಕ್ಷ್ಮ ಪ್ರದೇಶದಲ್ಲಿ ಆಗಿತ್ತು. ಅದರ ನಿಖರ ಸ್ಥಳದ ಮೇಲೆ ಗಮನ ಕೇಂದ್ರೀಕರಿಸಲು ಹೆಚ್ಚಿನ ಸಾಮರ್ಥ್ಯವಿರುವ ಮೈಕ್ರೋಸ್ಕೋಪ್​ ಬಳಸಬೇಕಾಯಿತು ಎಂದು ಆಸ್ಪತ್ರೆ ನಿರ್ದೇಶಕರಾದ ಡಾ. ಮಾಲಾ ಅರೋನ್​ ತಿಳಿಸಿದ್ದಾರೆ.

ಮಿದುಳು ಸರ್ಜರಿ ವೇಳೆ ಗಾಯತ್ರಿ ಮಂತ್ರ ಪಠಿಸಿದ ರೋಗಿ; ನಂತರ ನಡೆಯಿತು ವೈದ್ಯಕೀಯ ಲೋಕ ಅಚ್ಚರಿ ಪಡುವಂಥ ಪವಾಡ
ಶಸ್ತ್ರಚಿಕಿತ್ಸೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Aug 11, 2021 | 1:22 PM

Share

ವೈದ್ಯಕೀಯ ಲೋಕವೇ  ಅಚ್ಚರಿಪಡುವಂತಹ ಪವಾಡಗಳು ಅದೆಷ್ಟೋ ನಡೆದುಹೋಗಿವೆ. ಹಾಗೇ ಈಗೊಂದು ಘಟನೆ ನಡೆದಿದ್ದು ಜೈಪುರದ ನಾರಾಯಣ ಆಸ್ಪತ್ರೆಯಲ್ಲಿ. ಇಲ್ಲಿ ನಿವೃತ್ತ ಪೊಲೀಸ್​ ಕಾನ್​ಸ್ಟೆಬಲ್​ ಒಬ್ಬರಿಗೆ ಮಿದುಳು ಸರ್ಜರಿ (Brain Surgery) ನಡೆದಿತ್ತು. ಮಿದುಳಿನಲ್ಲಿ ಗಡ್ಡೆಯಾಗಿ ತುಂಬ ಸಂಕಷ್ಟದಲ್ಲಿದ್ದ ಇವರಿಗೆ ಸರ್ಜರಿ ಮಾಡುವುದಾಗಿ ನಿಶ್ಚಯವೇನೋ ಆಗಿತ್ತು. ಆದರೆ ಆ ಶಸ್ತ್ರಚಿಕಿತ್ಸೆಯಲ್ಲಿ ಸ್ವಲ್ಪ ಏರುಪೇರಾದರೂ ಆ ರೋಗಿಯ ಆರೋಗ್ಯ (Health) ಇನ್ನಷ್ಟು ಹದಗೆಡುವ ಸಾಧ್ಯತೆ ಇತ್ತು. ಅದೆಲ್ಲಕ್ಕಿಂತ ಮಿಗಿಲಾಗಿ, ವೈದ್ಯರುಗಳಿಗೇ ಪೂರ್ತಿಯಾಗಿ ನಂಬಿಕೆ ಇರಲಿಲ್ಲ, ಸರ್ಜರಿ ಯಶಸ್ವಿಯಾಗಬಹುದು ಎಂದು.

ಆದರೆ ಪವಾಡವೆಂಬಂತೆ ರೋಗಿಗೆ ಮಾಡಲಾದ ಸರ್ಜರಿ ಯಶಸ್ವಿಯಾಗಿದೆ. ಅದಕ್ಕೆ ಕಾರಣ ಆ ಪೊಲೀಸ್​ ಕಾನ್​ಸ್ಟೆಬಲ್​ ತಮ್ಮ ಸರ್ಜರಿ ವೇಳೆ ಪಠಿಸುತ್ತಿದ್ದ ಗಾಯತ್ರಿ ಮಂತ್ರ ಎಂದೇ ಹೇಳಲಾಗುತ್ತಿದೆ. ಪೊಲೀಸ್ ಕಾನ್​ಸ್ಟೆಬಲ್​ ಹೆಸರು ರಿದಂಲಾಲ್​ ರಾಮ್​. 57ವರ್ಷದ ಇವರಿಗೆ ತೀವ್ರವಾಗಿ ಅಪಸ್ಮಾರ ಕಾಣಿಸಿಕೊಂಡಿತ್ತು. ರೋಗ ವಿಕಾರದಿಂದ ಮಾತಾಡಲೂ ಸಾಧ್ಯವಾಗುತ್ತಿರಲಿಲ್ಲ. ತಪಾಸಣೆ ಮಾಡಿದಾಗ ಅವರ ಮಿದುಳಿನಲ್ಲಿ ಗಡ್ಡೆ ಇರುವುದು ಗೊತ್ತಾಗಿತ್ತು. ಸರ್ಜರಿ ಮಾಡುವಾಗ ಚೂರೇಚೂರು ಹೆಚ್ಚು ಕಡಿಮೆಯಾದರೂ ಪೂರ್ತಿಯಾಗಿ ಮಾತು ನಿಲ್ಲುತ್ತಿತ್ತು ಅಥವಾ ಪ್ಯಾರಾಲಿಸಿಸ್​ ಉಂಟಾಗುತ್ತಿತ್ತು. ಮಿದುಳಿನ ತುಂಬ ಸೂಕ್ಷ್ಮವಾದ ಜಾಗದಲ್ಲಿ ಈ ಗಡ್ಡೆ ಇದ್ದಿದ್ದರಿಂದ ಅಪಾಯ ಜಾಸ್ತಿಯಾಗಿಯೇ ಇತ್ತು. ಆದರೂ ಆಸ್ಪತ್ರೆಯ ಡಾ.ಕೆ.ಕೆ.ಬನ್ಸಾಲ್​ ನೇತೃತ್ವದ ತಂಡ ಈ ಸಂಕೀರ್ಣ ಸರ್ಜರಿಯನ್ನು ನಡೆಸಿತ್ತು. ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ ಪೊಲೀಸ್​ ಕಾನ್​ಸ್ಟೆಬಲ್​ ಒಂದೇ ಸಮನೆ ಗಾಯತ್ರಿ ಮಂತ್ರ ಪಠಣ ಮಾಡುತ್ತಲೇ ಇದ್ದರು.

ಈ ಗಡ್ಡೆ ತುಂಬ ಸೂಕ್ಷ್ಮ ಪ್ರದೇಶದಲ್ಲಿ ಆಗಿತ್ತು. ಅದರ ನಿಖರ ಸ್ಥಳದ ಮೇಲೆ ಗಮನ ಕೇಂದ್ರೀಕರಿಸಲು ಹೆಚ್ಚಿನ ಸಾಮರ್ಥ್ಯವಿರುವ ಮೈಕ್ರೋಸ್ಕೋಪ್​ ಬಳಸಬೇಕಾಯಿತು ಎಂದು ಆಸ್ಪತ್ರೆ ನಿರ್ದೇಶಕರಾದ ಡಾ. ಮಾಲಾ ಅರೋನ್​ ತಿಳಿಸಿದ್ದಾರೆ. ಇನ್ನು ಸರ್ಜರಿ ವೇಳೆ ರಾಮ್​ ಅವರು ಎಚ್ಚರವಾಗಿರುವಂತೆಯೇ ನೋಡಿಕೊಳ್ಳಲಾಗಿತ್ತು. ತಲೆಭಾಗಕ್ಕೆ ಅನಸ್ತೇಶಿಯಾ ಕೊಡಲಾಗಿತ್ತು. ರಾಮ್​ ತಮ್ಮ ಮನಸಿನ ಭಯ ಹೋಗಲಾಡಿಸಿಕೊಳ್ಳಲು ಗಾಯತ್ರಿ ಮಂತ್ರ ಪಠಣೆ ಮಾಡುತ್ತಿದ್ದರೂ ಎಂದೂ ಮಾಲಾ ಹೇಳಿದ್ದಾರೆ. 2018ರಲ್ಲೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. 30 ವರ್ಷದ ಅಕೌಂಟಂಟ್​ ಒಬ್ಬರು ತಮ್ಮ ಮಿದುಳು ಸರ್ಜರಿ ವೇಳೆ ಹನುಮಾನ್​ ಚಾಲೀಸಾ ಪಠಿಸುತ್ತಿದ್ದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಗಲಭೆಯೆಬ್ಬಿಸಿದವರ ವಿರುದ್ಧ ಕ್ರಮ, ನಿಮ್ಮ ವರ್ತನೆಯಿಂದ ರಾತ್ರಿ ನಿದ್ರೆಯೇ ಮಾಡಿಲ್ಲ; ಭಾವುಕರಾದ ವೆಂಕಯ್ಯ ನಾಯ್ಡು

ಭಾರತದ ಹೊರಗೆ ಕೊವಿಡ್ ಲಸಿಕೆ ಪಡೆದವರಿಗೆ ಶೀಘ್ರದಲ್ಲೇ ಪ್ರಮಾಣಪತ್ರ ನೀಡಲಿದೆ ಕೇಂದ್ರ ಸರ್ಕಾರ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ