AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಳಿಗಳು ಮೊಟ್ಟೆ ಇಡುತ್ತಿಲ್ಲವೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ..! ತಮಾಷೆನೇ ಅಲ್ಲ, ಇಲ್ಲಿದೆ ಒಂದು ಗಂಭೀರ ವಿಷಯ

ಇನ್ನು ಘಟನೆಗೆ ಸಂಬಂಧಪಟ್ಟಂತೆ ಕಂಪನಿಯ ಮಾಲೀಕನನ್ನು ಸಂಪರ್ಕಿಸಿದಾಗ, ಅವರೂ ಸಹ ಒಪ್ಪಿಕೊಂಡಿದ್ದಾರೆ. ಹಲವು ಕೋಳಿಸಾಕಾಣಿಕಾ ಕೇಂದ್ರದ ಮಾಲೀಕರು ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಕೋಳಿಗಳು ಮೊಟ್ಟೆ ಇಡುತ್ತಿಲ್ಲವೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ..! ತಮಾಷೆನೇ ಅಲ್ಲ, ಇಲ್ಲಿದೆ ಒಂದು ಗಂಭೀರ ವಿಷಯ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Apr 21, 2021 | 7:23 PM

Share

ಮುಂಬೈ: ನನ್ನ ಸಾಕಣಿಕಾ ಕೇಂದ್ರದಲ್ಲಿರುವ ಕೋಳಿಗಳು ಮೊಟ್ಟೆ ಇಡುತ್ತಿಲ್ಲ ಎಂದು ಇಲ್ಲೊಬ್ಬ ರೈತ ಪೊಲೀಸರಿಗೆ ದೂರು ನೀಡಿದ್ದಾರೆ.. ! ಇದೇನಪ್ಪಾ.. ಈ ರೈತನ ಪೌಲ್ಟ್ರಿಯಲ್ಲಿ ಕೋಳಿ ಮೊಟ್ಟೆ ಇಡದಿದ್ದರೆ ಪೊಲೀಸರೇನು ಮಾಡಬೇಕು ಎಂದು ಅನ್ನಿಸುವುದು ಸಹಜ. ಆದರೆ ಇಲ್ಲಿಯೇ ಇದೆ ನಿಜವಾದ ಟ್ವಿಸ್ಟ್​..!

ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಈ ರೈತರ ದೂರು ಏನೆಂದರೆ, ನಾನು ಒಂದು ಕೋಳಿ ಆಹಾರ ಉತ್ಪಾದನಾ ಘಟಕದಿಂದ ಆಹಾರ ತಂದು ನನ್ನ ಸಾಕಾಣಿಕಾ ಕೇಂದ್ರದ ಕೋಳಿಗಳಿಗೆ ನೀಡಿದ್ದೆ. ಅದನ್ನು ತಿಂದ ನಂತರ ಇಲ್ಲಿರುವ ಒಂದೂ ಹೆಣ್ಣು ಕೋಳಿಯೂ ಮೊಟ್ಟೆ ಇಟ್ಟಿಲ್ಲ ಎಂದು ಆ ನಿರ್ದಿಷ್ಟ ಆಹಾರ ಉತ್ಪಾದನಾ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಮಸ್ಯೆ ಎದುರಾಗಿದ್ದು ಬರೀ ಈತನೊಬ್ಬನಿಗೇ ಅಲ್ಲ, ಆ ಕಂಪನಿಯ ಆಹಾರವನ್ನು ಕೋಳಿಗಳಿಗೆ ತಿನ್ನಿಸಿದ, ಅದೇ ಏರಿಯಾದ ಉಳಿದ ಮೂರ್ನಾಲ್ಕು ಕೋಳಿ ಸಾಕಣಿಕಾ ಕೇಂದ್ರದ ಮಾಲೀಕರೂ ಸಹ ಇದೇ ಸಮಸ್ಯೆಯನ್ನು ಪೊಲೀಸರ ಎದುರು ತೋಡಿಕೊಂಡಿದ್ದಾರೆ. ಇನ್ನು ಆಹಾರ ಒದಗಿಸಿದ ಉತ್ಪಾದನಾ ಕಂಪನಿ, ಎಲ್ಲ ಪೌಲ್ಟ್ರಿ ಮಾಲೀಕರಿಗೂ ಪರಿಹಾರ ನೀಡಲು ಒಪ್ಪಿಗೆ ನೀಡಿದ್ದರಿಂದ ಪೊಲೀಸರು ಯಾವುದೇ ಎಫ್​ಐಆರ್ ದಾಖಲು ಮಾಡಲಿಲ್ಲ.

ಅಹ್ಮದ್​ ನಗರದಲ್ಲಿರುವ ಕಂಪನಿಯೊಂದರಿಂದ ನಾನು ಕೋಳಿಗಳಿಗಾಗಿ ಆಹಾರ ಖರೀದಿ ಮಾಡಿದ್ದೆ. ಅದನ್ನು ತಿಂದಾಗಿನಿಂದ ನನ್ನ ಕೋಳಿಗಳು ಮೊಟ್ಟೆ ಇಟ್ಟಿಲ್ಲ ಎಂದು ರೈತ ದೂರು ನೀಡಿದ್ದ ಬೆನ್ನಲ್ಲೇ, ಪೊಲೀಸರು ಅಹ್ಮದ್​ನಗರದ ಪಶುಸಂಗೋಪನಾ ಅಧಿಕಾರಿಯನ್ನು ಭೇಟಿ ಮಾಡಿದ್ದರು. ಆ ಆಹಾರವನ್ನು ಇನ್ನೊಮ್ಮೆ ಪರೀಕ್ಷೆ ಕೂಡ ಮಾಡಲಾಗಿದೆ. ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಿಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಇದೊಂದು ಸಾಮಾನ್ಯ ವಿದ್ಯಮಾನ ಎಂದು ಪಶುಸಂಗೋಪನಾ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮೊದಲು ಯಾವ ಆಹಾರ ಕೊಡುತ್ತಿದ್ದೀರೋ, ಅದನ್ನೇ ಕೊಟ್ಟರೆ ಮತ್ತೆ ಮೊಟ್ಟೆ ಇಡುತ್ತವೆ ಎಂದೂ ಸ್ಪಷ್ಟವಾಗಿ ವಿವರಿಸಿದ್ದಾರೆ.

ಇನ್ನು ಘಟನೆಗೆ ಸಂಬಂಧಪಟ್ಟಂತೆ ಕಂಪನಿಯ ಮಾಲೀಕನನ್ನು ಸಂಪರ್ಕಿಸಿದಾಗ, ಅವರೂ ಸಹ ಒಪ್ಪಿಕೊಂಡಿದ್ದಾರೆ. ಹಲವು ಕೋಳಿಸಾಕಾಣಿಕಾ ಕೇಂದ್ರದ ಮಾಲೀಕರು ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ ರೈತರಿಗಾದ ನಷ್ಟ ಪರಿಹಾರ ನೀಡಲೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳಲಿಲ್ಲ.

ಇದನ್ನೂ ಓದಿ: Apple products: ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?

Corona Death : ಅಂತ್ಯಕ್ರಿಗೆ 60 ಸಾವಿರ ರೂ. ಆ್ಯಂಬುಲೆನ್ಸ್ ಸಿಬ್ಬಂದಿ ಡಿಮ್ಯಾಂಡ್ | ಮಾಂಗಲ್ಯ ಸರ ಮಾರಲು ಮುಂದಾದ ಮಗಳು

A poultry farmer from Maharashtra approached the police and claimed hens are not laying eggs

Published On - 7:17 pm, Wed, 21 April 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ