AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾಕೃತಿಯಲ್ಲಿ ಶ್ರೀರಾಮನ ಭವ್ಯ ಚರಿತ್ರೆ ಅಯೋಧ್ಯೆಯಲ್ಲಿ ಮಾತ್ರ

ಅಯೋಧ್ಯಾ: ಅಯೋಧ್ಯೆಯಲ್ಲಿ ಆಗಸ್ಟ್‌ ಐದರಂದು ರಾಮ ಮಂದಿರದ ನಿರ್ಮಾಣ ಶಿಲಾನ್ಯಾಸ ನೆರವೇರಲಿದೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ಬಹುದಿನಗಳ ರಾಮ ಭಕ್ತರ ಕನಸು ನನಸು ಮಾಡುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಇಡೀ ರಾಮಾಯಣವನ್ನೇ ಕಲ್ಲಿನ ಕೆತ್ತನೆಯಲ್ಲಿ ಹೇಳುವ ಶಿಲ್ಪಕಲೆಯ ಮೂರ್ತಿಗಳನ್ನ ತಯಾರು ಮಾಡಲಾಗುತ್ತಿದೆ. ಇದಕ್ಕಾಗಿ ಆಸ್ಸಾಂನಿಂದ ವಿಶೇಷವಾಗಿ ನುರಿತ ಶಿಲ್ಪಕಲಾಕಾರರು ಅಯೋಧ್ಯೆಯಲ್ಲಿ ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದಾರೆ. ಶ್ರೀರಾಮನ ಬಾಲ್ಯದಿಂದ ಹಿಡಿದು ಪಟ್ಟಾಭಿಷೇಕದ ವರೆಗಿನ ಶ್ರೀರಾಮನ ಲೀಲೆಗಳನ್ನು ಈ ಮೂರ್ತಿಗಳ ಮುಖಾಂತರ ಭಕ್ತರಿಗೆ ತಿಳಿಸುವ […]

ಕಲಾಕೃತಿಯಲ್ಲಿ ಶ್ರೀರಾಮನ ಭವ್ಯ ಚರಿತ್ರೆ ಅಯೋಧ್ಯೆಯಲ್ಲಿ ಮಾತ್ರ
Guru
|

Updated on: Aug 02, 2020 | 7:27 PM

Share

ಅಯೋಧ್ಯಾ: ಅಯೋಧ್ಯೆಯಲ್ಲಿ ಆಗಸ್ಟ್‌ ಐದರಂದು ರಾಮ ಮಂದಿರದ ನಿರ್ಮಾಣ ಶಿಲಾನ್ಯಾಸ ನೆರವೇರಲಿದೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ಬಹುದಿನಗಳ ರಾಮ ಭಕ್ತರ ಕನಸು ನನಸು ಮಾಡುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಇಡೀ ರಾಮಾಯಣವನ್ನೇ ಕಲ್ಲಿನ ಕೆತ್ತನೆಯಲ್ಲಿ ಹೇಳುವ ಶಿಲ್ಪಕಲೆಯ ಮೂರ್ತಿಗಳನ್ನ ತಯಾರು ಮಾಡಲಾಗುತ್ತಿದೆ.

ಇದಕ್ಕಾಗಿ ಆಸ್ಸಾಂನಿಂದ ವಿಶೇಷವಾಗಿ ನುರಿತ ಶಿಲ್ಪಕಲಾಕಾರರು ಅಯೋಧ್ಯೆಯಲ್ಲಿ ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದಾರೆ. ಶ್ರೀರಾಮನ ಬಾಲ್ಯದಿಂದ ಹಿಡಿದು ಪಟ್ಟಾಭಿಷೇಕದ ವರೆಗಿನ ಶ್ರೀರಾಮನ ಲೀಲೆಗಳನ್ನು ಈ ಮೂರ್ತಿಗಳ ಮುಖಾಂತರ ಭಕ್ತರಿಗೆ ತಿಳಿಸುವ ಮಹತ್ತರ ಕಾರ್ಯವಿದು. ಇದಕ್ಕಾಗಿ 2013ರಿಂದಲೇ ಕಲಾಕಾರರು ಕಾರ್ಯ ಆರಂಭಿಸಿದ್ದಾರೆ.

ರಂಜಿತ್‌ ಮಂಡಲ್‌ ಎನ್ನುವ ಕಲಾಕಾರನ ನೇತೃತ್ವದಲ್ಲಿ ತಯಾರಾಗುತ್ತಿರುವ ಈ ಕಲಾಕೃತಿಗಳಲ್ಲಿ ಶ್ರೀರಾಮ, ಲಕ್ಷ್ಮಣ, ಭರತ್‌ ಮತ್ತು ಶತೃಘ್ನರ ಮೂರ್ತಿಗಳು ಇರುತ್ತವೆ. ಇದಕ್ಕಾಗಿ ಮಂಡಲ್‌ ಜೊತೆ ಆತನ ತಂದೆ ಸೇರಿದಂತೆ ಹಲವಾರು ನುರಿತ ಕುಶಲಕರ್ಮಿಗಳು ಕೆತ್ತನೆ ಕಾರ್ಯ ಮಾಡುತ್ತಿದ್ದಾರೆ. ಈ ಎಲ್ಲ ಮೂರ್ತಿಗಳು ಪಕ್ಕಾ ಉತ್ತರ ಪ್ರದೇಶಿಯ ಶೈಲಿಯಲ್ಲಿರುತ್ತವೆ.

ಕೆತ್ತನೆ ಶೈಲಿ ಉತ್ತರ ಪ್ರದೇಶದ ಮಾದರಿಯಲ್ಲಿದ್ದರೂ ವಸ್ತ್ರಾಭರಣಗಳು ಮಾತ್ರ ಬಂಗಾಳಿ ಶೈಲಿಯಲ್ಲಿರುವತ್ತವೆ. ಹಾಗಂತ ಖುದ್ದು ಕುಶಲಕರ್ಮಿ ರಂಜಿತ್‌ ಮಂಡಲ್‌ ಅವರೇ ಹೇಳಿದ್ದಾರೆ. ಅಯೋಧ್ಯೆಗೆ ಬರುವ ಭಕ್ತರು ಈ ಕಲಾಕೃತಿಯ ಮೂಲಕವೇ ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಯೋಚನೆ ಈ ಕಲಾಕೃತಿಗಳ ರಚನೆಯ ಹಿಂದಿನ ಉದ್ದೇಶ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ