ಆನ್​ಲೈನ್​ನಲ್ಲಿ ರೈಲ್ವೆ ಟಿಕೆಟ್​ ಬುಕ್ ಮಾಡಲು ಆಧಾರ್​ ಕಾರ್ಡ್, ಪಾಸ್​ಪೋರ್ಟ್​ ಕಡ್ಡಾಯವಾಗಲಿದೆ; ಶೀಘ್ರದಲ್ಲೇ ನಿಯಮ ಜಾರಿ

ಕೆಲವು ಮಧ್ಯವರ್ತಿಗಳು ರೈಲ್ವೆ ಟಿಕೆಟ್​​ನ್ನು ತ್ವರಿತವಾಗಿ ಬುಕ್​​ ಮಾಡಲು ಮುಂದುವರಿದ ಸಾಫ್ಟ್​ವೇರ್​ ಬಳಸುತ್ತಾರೆ. ಇದರಿಂದಾಗಿ ಒಂದೇ ಸಲಕ್ಕೆ 10-15 ಟಿಕೆಟ್​ ಬುಕ್​ ಮಾಡಬಹುದು. ನಕಲಿ ಪ್ರಯಾಣಿಕರ ಹೆಸರಿನಲ್ಲಿ ಟಿಕೆಟ್​ ಬುಕ್​ ಮಾಡಿ, ನಂತರ ಪ್ರೀಮಿಯಂ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಡಿಜಿ ಮಾಹಿತಿ ನೀಡಿದ್ದಾರೆ.

ಆನ್​ಲೈನ್​ನಲ್ಲಿ ರೈಲ್ವೆ ಟಿಕೆಟ್​ ಬುಕ್ ಮಾಡಲು ಆಧಾರ್​ ಕಾರ್ಡ್, ಪಾಸ್​ಪೋರ್ಟ್​ ಕಡ್ಡಾಯವಾಗಲಿದೆ; ಶೀಘ್ರದಲ್ಲೇ ನಿಯಮ ಜಾರಿ
ಪ್ರಾತಿನಿಧಿಕ ಚಿತ್ರ
Follow us
| Edited By: Lakshmi Hegde

Updated on:Jun 26, 2021 | 9:03 AM

ಆನ್​ಲೈನ್​ನಲ್ಲಿ ಟಿಕೆಟ್​ ಬುಕ್ಕಿಂಗ್ ಮಾಡುವ ಏಜೆಂಟ್​​ಗಳು ಮಾಡಬಹುದಾದ ಅಕ್ರಮಗಳನ್ನು ತಡೆಯಲು ಭಾರತೀಯ ರೈಲ್ವೆ ಒಂದು ಹೊಸ ಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ. ಆನ್​​ಲೈನ್​ನಲ್ಲಿ ರೈಲ್ವೆ ಟಿಕೆಟ್​ ಬುಕ್​ ಮಾಡುವಾಗ ಆಧಾರ್​ ಕಾರ್ಡ್ ಮತ್ತು ಪಾಸ್​ಪೋರ್ಟ್​ನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೇಳಿದೆ. ಇಷ್ಟು ದಿನ ಬಳಕೆದಾರರ ಹೆಸರು ಮತ್ತು ಪಾಸ್​ವರ್ಡ್​ ಹಾಕಿ ವೆಬ್​ಸೈಟ್​​ನಲ್ಲಿ ಸರಳವಾಗಿ ಲಾಗಿನ್​ ಆಗಿ, ರೈಲ್ವೆ ಟಿಕೆಟ್​ ಬುಕ್​ ಮಾಡಬಹುದಿತ್ತು. ಆದರೆ ಇನ್ನುಮುಂದೆ ಲಾಗಿನ್​ ಆಗುವವರು ತಮ್ಮ ಪಾಸ್​ಪೋರ್ಟ್ ಅಥವಾ ಆಧಾರ್​ಕಾರ್ಡ್​​ನಂತಹ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

ರೈಲ್ವೆ ಟಿಕೆಟ್​ ಬುಕ್ಕಿಂಗ್ ವೆಬ್​​ಸೈಟ್​ ದುರ್ಬಳಕೆ ಆಗುತ್ತಿರುವುದು ಹೆಚ್ಚಾದ ಬೆನ್ನಲ್ಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಈ ನಿರ್ಧಾರ ಕೈಗೊಂಡಿದೆ. ಅದೆಷ್ಟೋ ದಲ್ಲಾಳಿಗಳು ಟಿಕೆಟ್​ ಬುಕ್ಕಿಂಗ್​ ಹೆಸರಲ್ಲಿ ಪ್ರಯಾಣಿಕರಿಗೆ, ನಿಗಮಕ್ಕೆ ವಂಚನೆ ಮಾಡುತ್ತಿದ್ದಾರೆ. ಅದನ್ನು ತಡೆಯಲು, ನಮ್ಮ ವೆಬ್​ಸೈಟ್​ಗೆ ಲಾಗಿನ್ ಆಗಲು ಆಧಾರ್ ಕಾರ್ಡ್​, ಪಾಸ್​ಪೋರ್ಟ್​​​ಗಳನ್ನು ಕಡ್ಡಾಯ ಮಾಡುವ ಬಗ್ಗೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ರೈಲ್ವೆ ರಕ್ಷಣಾ ದಳದ ಡಿಜಿ ಅರುಣ್​ ಕುಮಾರ್ ತಿಳಿಸಿದ್ದಾರೆ.

ಕೆಲವು ಮಧ್ಯವರ್ತಿಗಳು ರೈಲ್ವೆ ಟಿಕೆಟ್​​ನ್ನು ತ್ವರಿತವಾಗಿ ಬುಕ್​​ ಮಾಡಲು ಮುಂದುವರಿದ ಸಾಫ್ಟ್​ವೇರ್​ ಬಳಸುತ್ತಾರೆ. ಇದರಿಂದಾಗಿ ಒಂದೇ ಸಲಕ್ಕೆ 10-15 ಟಿಕೆಟ್​ ಬುಕ್​ ಮಾಡಬಹುದು. ನಕಲಿ ಪ್ರಯಾಣಿಕರ ಹೆಸರಿನಲ್ಲಿ ಟಿಕೆಟ್​ ಬುಕ್​ ಮಾಡಿ, ನಂತರ ಪ್ರೀಮಿಯಂ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಡಿಜಿ ಮಾಹಿತಿ ನೀಡಿದ್ದಾರೆ. ವೆಬ್​ಸೈಟ್​ಗೆ ಆಧಾರ್​ ಕಾರ್ಡ್​ ಲಿಂಕ್ ಮಾಡುವ ವ್ಯವಸ್ಥೆ ಶೀಘ್ರದಲ್ಲೇ ಆಗುತ್ತದೆ. ಆದರೆ ಪಾಸ್​ಪೋರ್ಟ್​​ ಲಿಂಕ್​ ಮಾಡುವ ಸಂಬಂಧ ಕೆಲವು ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಅದೂ ಕೂಡ ಆದಷ್ಟು ಬೇಗನೇ ಜಾರಿಯಾಗುತ್ತದೆ. ಹೀಗೆ ಲಾಗಿನ್​ ಮಾಡುವಾಗ ಆಧಾರ್​ ಕಾರ್ಡ್ ಅಥವಾ ಪಾಸ್​ಪೋರ್ಟ್ ಕಡ್ಡಾಯವಾಗಿ ಒದಗಿಸಬೇಕು ಎಂಬ ನಿಯಮ ಜಾರಿಯಾದರೆ ಅಕ್ರಮಗಳನ್ನು ಪತ್ತೆಹಚ್ಚಬಹುದು ಎಂದೂ ಐಆರ್​ಸಿಟಿಸಿ ಹೇಳಿದೆ.

ಹೀಗೆ ಮಧ್ಯವರ್ತಿಗಳ ಹೆಸರಲ್ಲಿ ಅಕ್ರಮವಾಗಿ ರೈಲ್ವೆ ಟಿಕೆಟ್​ ಬುಕ್ ಮಾಡುವವರಿಗೆ ನೀಡಲಾಗುವ ಶಿಕ್ಷೆ ಪ್ರಮಾಣವನ್ನೂ ಭಾರತೀಯ ರೈಲ್ವೆ ಹೆಚ್ಚಿಸಿದೆ. 2018ರಿಂದ ಈ ಬಾರಿಯ ಮೇ ತಿಂಗಳವರೆಗೆ ಇಂಥ ಸುಮಾರು 14,250 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಬಿಜೆಪಿ ಗರ್ಭಗುಡಿಯಲ್ಲಿ ರಮೇಶ್​ ಜಾರಕಿಹೊಳಿ ಇರೋದು ಕಷ್ಟ; ಕಾಂಗ್ರೆಸ್​ನಲ್ಲಿ 8-10 ಜನರಿಗೆ ಮುಖ್ಯಮಂತ್ರಿ ಆಗೋ ಯೋಗ್ಯತೆ ಇದೆ: ಕೈ ಶಾಸಕ

Published On - 9:01 am, Sat, 26 June 21

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ