AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಜ್ರಿವಾಲ್​ಗೆ ಸಂಕಷ್ಟ: ರಾಜಕೀಯ ಜಾಹೀರಾತು ಪ್ರಕಟ ಆರೋಪ: AAPಗೆ 164 ಕೋಟಿ ರೂ ಹಿಂದಿರುಗಿಸುವಂತೆ ನೋಟಿಸ್

ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 163.62 ಕೋಟಿ ರೂಪಾಯಿ ಹಿಂದಿರುಗಿಸುವಂತೆ ನೋಟಿಸ್ ನೀಡಲಾಗಿದೆ.

ಕೇಜ್ರಿವಾಲ್​ಗೆ ಸಂಕಷ್ಟ: ರಾಜಕೀಯ ಜಾಹೀರಾತು ಪ್ರಕಟ ಆರೋಪ: AAPಗೆ 164 ಕೋಟಿ ರೂ ಹಿಂದಿರುಗಿಸುವಂತೆ ನೋಟಿಸ್
ಅರವಿಂದ್ ಕೇಜ್ರಿವಾಲ್
TV9 Web
| Updated By: ನಯನಾ ರಾಜೀವ್|

Updated on: Jan 12, 2023 | 10:20 AM

Share

ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 163.62 ಕೋಟಿ ರೂಪಾಯಿ ಹಿಂದಿರುಗಿಸುವಂತೆ ನೋಟಿಸ್ ನೀಡಲಾಗಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ (ವಿಕೆ ಸಕ್ಸೇನಾ) ಅವರು ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳಿಗಾಗಿ ಎಎಪಿಯಿಂದ 97 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು, ನಂತರ ಈ ಬೆಳವಣಿಗೆ ಕಂಡುಬಂದಿದೆ. 2016ರ ಅವಧಿಯಲ್ಲಿ ಸರ್ಕಾರಿ ಜಾಹೀರಾತಿನ ಹೆಸರಲ್ಲಿ ಪಡೆದ ಹಣವನ್ನು ಕೇಜ್ರಿವಾಲ್ ಸರ್ಕಾರ ರಾಜಕೀಯ ಜಾಹೀರಾತಿಗೆ ಬಳಸಿದೆ ಎನ್ನಲಾಗಿದೆ.

ಪೂರ್ಣ ಮೊತ್ತವನ್ನು 10 ದಿನಗಳಲ್ಲಿ ಪಾವತಿಸಬೇಕು ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ನೀಡಿರುವ ವಸೂಲಾತಿ ನೋಟಿಸ್ ಮೊತ್ತದ ಮೇಲಿನ ಬಡ್ಡಿಯನ್ನು ಒಳಗೊಂಡಿದ್ದು, ದೆಹಲಿಯ ಆಡಳಿತಾರೂಢ ಎಎಪಿ 10 ದಿನಗಳಲ್ಲಿ ಸಂಪೂರ್ಣ ಮೊತ್ತವನ್ನು ಪಾವತಿಸುವುದು ಕಡ್ಡಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಎಎಪಿ ಸಂಚಾಲಕರು ಹಾಗೆ ಮಾಡಲು ವಿಫಲರಾದರೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಹಿಂದಿನ ಆದೇಶದಂತೆ ಪಕ್ಷದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಎಲ್ಲಾ ಕಾನೂನು ಕ್ರಮಗಳನ್ನು ಕಾಲಮಿತಿಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಎಪಿ ಸಂಸದರಿಗೆ 3 ತಿಂಗಳು ಜೈಲು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರಿಗೆ ಯುಪಿ ಸುಲ್ತಾನಪುರ ನ್ಯಾಯಾಲಯ 3 ತಿಂಗಳ ಶಿಕ್ಷೆ ವಿಧಿಸಿದೆ. ಇದರೊಂದಿಗೆ ನ್ಯಾಯಾಲಯವು ಎಎಪಿ ಸಂಸದರಿಗೆ 1500 ರೂಪಾಯಿ ದಂಡವನ್ನು ವಿಧಿಸಿದೆ, 21 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.

18 ಜೂನ್ 2001 ರ ಪ್ರಕರಣದಲ್ಲಿ ಅವರಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಯಾವುದೇ ಶಿಕ್ಷೆ ನೀಡಿದರೂ ಸ್ವೀಕಾರಾರ್ಹ. ಈ ನಿರ್ಧಾರದ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ