AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರ್ಖಂಡ​ ಜಡ್ಜ್​ ಹತ್ಯೆ ಕೇಸ್​ನಲ್ಲೊಂದು ಟ್ವಿಸ್ಟ್​; ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಸಿಬಿಐ

ಜಾರ್ಖಂಡ ಜಡ್ಜ್​ ಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.. ಹಾಗೇ ಸಿಬಿಐ ಕೂಡ ತನಿಖೆ ಶುರು ಮಾಡಿದೆ. ಇದಕ್ಕಾಗಿ 20 ಜನರ ತಂಡ ರಚಿತವಾಗಿದೆ. ಹಲವು ಆಯಾಮಗಳ ವಿಚಾರಣೆಗಳನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಜಾರ್ಖಂಡ​ ಜಡ್ಜ್​ ಹತ್ಯೆ ಕೇಸ್​ನಲ್ಲೊಂದು ಟ್ವಿಸ್ಟ್​; ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಸಿಬಿಐ
ಧನ್​ಬಾದ್​ ಜಡ್ಜ್​ ವಾಕಿಂಗ್​ ಮಾಡುತ್ತಿದ್ದಾಗ ಡಿಕ್ಕಿ ಹೊಡೆದ ವ್ಯಾನ್​
TV9 Web
| Updated By: Lakshmi Hegde|

Updated on:Aug 22, 2021 | 10:05 AM

Share

ಪಾಟ್ನಾ: ಕಳೆದ ತಿಂಗಳು ಜಾರ್ಖಂಡ್​​​ನಲ್ಲಿ ನಡೆದ ನ್ಯಾಯಾಧೀಶರ ಹತ್ಯೆ ಪ್ರಕರಣಕ್ಕೊಂದು ಸಣ್ಣ ಟ್ವಿಸ್ಟ್​ ಸಿಕ್ಕಿದೆ. ಕಳೆದ ತಿಂಗಳು ಧನ್​ಬಾದ್​​ ಜಡ್ಜ್​ ಉತ್ತಮ್​ ಆನಂದ್​ ಮುಂಜಾನೆ ವಾಕಿಂಗ್​ ಮಾಡುತ್ತಿದ್ದಾಗ, ಆಟೋ ರಿಕ್ಷಾ​​ವೊಂದು ಅವರಿಗೆ ಡಿಕ್ಕಿ ಮಾಡಿತ್ತು. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.. ಹಾಗೇ ಸಿಬಿಐ ಕೂಡ ತನಿಖೆ ಶುರು ಮಾಡಿದೆ. ಹಾಗೇ, ಜಡ್ಜ್​ ಹತ್ಯೆಗೆ ಸಂಬಂಧಪಟ್ಟಂತೆ ಹೊಸ ವಿಷಯಗಳನ್ನು, ಮಾಹಿತಿಯನ್ನೂ ಹೊರತೆಗೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧಿಸಿರುವ ಆರೋಪಿಗಳ ವಿಚಾರಣೆ ನಡೆಸಿರುವ ಸಿಬಿಐ, ಈ ಆರೋಪಿಗಳು ನ್ಯಾಯಾಧೀಶರನ್ನು ಹತ್ಯೆ ಮಾಡುವುದಕ್ಕೂ ಮೊದಲು ಮೊಬೈಲ್​ ಮೂಲಕ ಹಲವು ಕರೆಗಳನ್ನು ಮಾಡಿದ್ದಾರೆ. ಆದರೆ ಒಂದು ಏನೇಂದರೆ, ಈ ಕರೆಗಳನ್ನು ಮಾಡಲೆಂದೇ ಮೊಬೈಲ್​ಗಳನ್ನು ಕದ್ದಿದ್ದರು. ಅದೂ ಜಡ್ಜ್​​ ಉತ್ತಮ್​ ಆನಂದ್​ ಅವರನ್ನು ಹತ್ಯೆ ಮಾಡುವ ಮುನ್ನಾದಿನ ರಾತ್ರಿಯಷ್ಟೇ ಮೊಬೈಲ್​​ಗಳನ್ನು ಕದ್ದಿದ್ದಾರೆ ಎಂಬ ವಿಷಯ ಸ್ಪಷ್ಟವಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಜಡ್ಜ್​ ಹತ್ಯೆ ಮಾಡುವ ಮುನ್ನಾದಿನ ರಾತ್ರಿ ಇಬ್ಬರು ಆರೋಪಿಗಳು, ಮೂರು ಫೋನ್​ಗಳನ್ನು ಕದ್ದಿದ್ದಾರೆ. ಆ ಮೂರು ಫೋನ್​ಗಳೂ ಕೂಡ ಪುರೇಂದು ವಿಶ್ವಕರ್ಮ ಎಂಬ ರೈಲ್ವೆ ಕಾಂಟ್ರಾಕ್ಟರ್​​ ಬಳಿ ಇದ್ದವೇ ಆಗಿದ್ದವು. ಈ ಫೋನ್​ಗಳು ಮೂಲಕ ಹಲವು ಕರೆಗಳನ್ನು ಮಾಡಿದ್ದಾರೆ. ಆದರೆ ಹೀಗೆ ಕರೆ ಮಾಡುವಾಗ ಸಿಮ್​​ಗಳನ್ನು ತಮ್ಮದೇ ಬಳಸಿಕೊಂಡಿದ್ದಾರೆ. ಈ ವಿಚಾರವನ್ನು ನಮ್ಮ ಬಳಿ ಆರೋಪಿಗಳೇ ಹೇಳಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ. ಅಂದು ತಮ್ಮ ಮೊಬೈಲ್​ ಕಳುವಾದ ಬಳಿಕ ವಿಶ್ವಕರ್ಮಾ ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆಗ ಅಲ್ಲಿದ್ದ ಕಾನ್​ಸ್ಟೆಬಲ್​ ವಿಜಯ್ ಯಾದವ್​ ಅದನ್ನು ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಲು ನಿರ್ಲಕ್ಷ್ಯ ಮಾಡಿದರು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಉತ್ತಮ್​ ಆನಂದ್​ (49) ಧನ್​ಬಾದ್​ ಜಿಲ್ಲೆಯ ನ್ಯಾಯಾಧೀಶರಾಗಿದ್ದರು. ಜುಲೈ 28ರಂದು ಮುಂಜಾನೆ ಅವರ ಹತ್ಯೆಯಾಗಿದೆ. ಇದೊಂದು ಹಿಟ್​ ಆ್ಯಂಡ್​ ರನ್​ ಕೇಸ್​​. ನ್ಯಾಯಾಧೀಶರು ರಸ್ತೆಯ ಒಂದು ಬದಿಗೆ ವಾಕಿಂಗ್​ ಮಾಡುತ್ತಿದ್ದರೂ, ವ್ಯಾನ್​ ಅಲ್ಲಿಗೇ ಹೋಗಿ ಅವರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ. ಇದು ಮೊದಲು ಅಪಘಾತ ಎಂದೇ ಹೇಳಲಾಗಿತ್ತು. ಆದರೆ ಸಿಸಿಟಿವಿ ದೃಶ್ಯ ಬಹಿರಂಗವಾದ ಬಳಿಕವಷ್ಟೇ ಇದೊಂದು ಹತ್ಯೆ ಎಂದು ಗೊತ್ತಾಗಿದ್ದು. ಕೂಡಲೇ ಸುಪ್ರೀಂಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿತು. ಹಲವು ನ್ಯಾಯಮೂರ್ತಿಗಳು ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಅದರಂತೆ ಸಿಬಿಐನ 20 ಅಧಿಕಾರಿಗಳ ತಂಡ ರಚನೆಯಾಗಿ, ಆಗಸ್ಟ್​ 4ರಿಂದ ತನಿಖೆ ಶುರು ಮಾಡಿದೆ.

ಉತ್ತಮ್​ ಆನಂದ್​ ಅವರು ಹಲವು ಹೈಪ್ರೊಫೈಲ್​ ಕೇಸ್​ಗಳ ವಿಚಾರಣೆ ನಡೆಸುತ್ತಿದ್ದರು. ಮಾಫಿಯಾ ಹತ್ಯೆಗಳ ವಿಚಾರಣೆ ನಡೆಸಿದ್ದ ಅವರು, ಇಬ್ಬರು ಗ್ಯಾಂಗ್​ಸ್ಟರ್​ಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಅಷ್ಟೇ ಅಲ್ಲ, ಸ್ಥಳೀಯ ಪ್ರಭಾವಿ ಶಾಸಕರೊಬ್ಬರ ಆಪ್ತನೊಬ್ಬನ ಕೈವಾಡವಿದೆ ಎಂದು ಹೇಳಲಾದ ಕೊಲೆ ಪ್ರಕರಣದ ವಿಚಾರಣೆಯನ್ನೂ ನಡೆಸಿದ್ದರು. ಅಲ್ಲಿಯೂ ಸಹ ಜಾಮೀನಿಗೆ ನಿರಾಕರಿಸಿದ್ದರು.

ಇದನ್ನೂ ಓದಿ: Viral Video: ವ್ಯಕ್ತಿ ತಯಾರಿಸಿದ ವಾಟರ್​ಮೆಲಾನ್​ ಪಿಜ್ಜಾ ನೋಡಿ ತಯಾರಿಗೆ ಮುಂದಾದ ಆಸ್ಟ್ರೇಲಿಯಾ ಡಾಮಿನೋಸ್​!

ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ

(Accused In Dhanbad Judge Murder Case Stole Mobile Phones says CBI)

Published On - 9:54 am, Sun, 22 August 21

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?