Delhi cabinet: ದೆಹಲಿ ಸರ್ಕಾರದಲ್ಲಿ ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಸಚಿವ ಸ್ಥಾನ

|

Updated on: Mar 01, 2023 | 2:53 PM

ಸಿಸೋಡಿಯಾ ಮತ್ತು ಜೈನ್ ಅವರ ಇಲಾಖೆಗಳನ್ನು ಕೈಲಾಶ್ ಗಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಿಗೆ ಹಂಚಿಕೆ ಮಾಡಲಾಗಿದೆ. ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಅವರು ಮಂಗಳವಾರ ಕೇಜ್ರಿವಾಲ್ ಸಂಪುಟವನ್ನು ವಿಸ್ತರಿಸುತ್ತಾರೆ ಎಂದು ಖಚಿತಪಡಿಸಿದ್ದರು.

Delhi cabinet: ದೆಹಲಿ ಸರ್ಕಾರದಲ್ಲಿ ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಸಚಿವ ಸ್ಥಾನ
ಸೌರಭ್ ಭಾರದ್ವಾಜ್- ಅತಿಶಿ
Follow us on

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಬುಧವಾರ ಎಎಪಿ ಶಾಸಕರಾದ ಸೌರಭ್ ಭಾರದ್ವಾಜ್ (Saurabh Bhardwaj) ಮತ್ತು ಅತಿಶಿ (Atishi) ಅವರ ಹೆಸರನ್ನು ದೆಹಲಿ ಕ್ಯಾಬಿನೆಟ್‌ಗೆ ನೇಮಕ ಮಾಡಲು ಲೆಫ್ಟಿನೆಂಟ್ ಗವರ್ನರ್‌ಗೆ ಕಳುಹಿಸಿ ಕೊಟ್ಟಿದ್ದಾರೆ. ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ಬಂಧನದ ನಂತರ ಸಂಪುಟಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಕೇಜ್ರಿವಾಲ್ ಇವರಿಬ್ಬರ ಹೆಸರನ್ನು ರಾಜ್ಯಪಾಲರಿಗೆ ಕಳಿಸಿದ್ದಾರೆ. ಸತ್ಯೇಂದ್ರ ಜೈನ್ ಅವರನ್ನು 2022 ರಲ್ಲಿ ಬಂಧಿಸಲಾಗಿತ್ತು, ಅವರ ಬಂಧನದಿಂದ, ಹೆಚ್ಚುವರಿ ಜವಾಬ್ದಾರಿ ಸಿಸೋಡಿಯಾ ಅವರ ಮೇಲಿತ್ತು.ಸಿಸೋಡಿಯಾ ಮಂಗಳವಾರದವರೆಗೆ 18 ಇಲಾಖೆಗಳ ಉಸ್ತುವಾರಿ ವಹಿಸಿದ್ದರು.

ಸಿಸೋಡಿಯಾ ಮತ್ತು ಜೈನ್ ಅವರ ಇಲಾಖೆಗಳನ್ನು ಕೈಲಾಶ್ ಗಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಿಗೆ ಹಂಚಿಕೆ ಮಾಡಲಾಗಿದೆ. ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಅವರು ಮಂಗಳವಾರ ಕೇಜ್ರಿವಾಲ್ ಸಂಪುಟವನ್ನು ವಿಸ್ತರಿಸುತ್ತಾರೆ ಎಂದು ಖಚಿತಪಡಿಸಿದ್ದರು.

“ದೆಹಲಿಯಲ್ಲಿ ಕ್ಯಾಬಿನೆಟ್ ಸಾಕಷ್ಟು ಚಿಕ್ಕದಾಗಿದೆ ಮತ್ತು ಹೆಚ್ಚಿನ ಪ್ರಮುಖ ಇಲಾಖೆಗಳನ್ನು ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಅವರು ನಿರ್ವಹಿಸಿದ್ದಾರೆ. ಕೆಲಸದ ವಿಷಯದಲ್ಲಿ ಹಿಂದುಳಿದಿರುವುದನ್ನು ತಪ್ಪಿಸಲು, ಶೀಘ್ರದಲ್ಲೇ ಇಬ್ಬರು ಹೊಸ ಸಚಿವರನ್ನು ನೇಮಿಸಲಾಗುವುದು” ಎಂದು ಭಾರದ್ವಾಜ್ ಹೇಳಿದ್ದಾರೆ.

ಸೌರಭ್ ಭಾರದ್ವಾಜ್ ಗ್ರೇಟರ್ ಕೈಲಾಶ್ ಕ್ಷೇತ್ರದ ಶಾಸಕರಾಗಿದ್ದು, ಅತಿಶಿ ಕಲ್ಕಾಜಿಯನ್ನು ಪ್ರತಿನಿಧಿಸುತ್ತಾರೆ.
ಸಿಸೋಡಿಯಾ ಮತ್ತು ಜೈನ್ ಅವರ ರಾಜೀನಾಮೆಯನ್ನು ಅಂಗೀಕರಿಸುವಂತೆ ದೆಹಲಿ ಎಲ್-ಜಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಮಾಡಿದ್ದಾರೆ. ಕೇಜ್ರಿವಾಲ್ ಇಬ್ಬರು ಸಚಿವರ ರಾಜೀನಾಮೆಯನ್ನು ಮಂಗಳವಾರ ಅಂಗೀಕರಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಅವರನ್ನು ಬಂಧಿಸಲಾಗಿದ್ದರೂ, ಸಿಸೋಡಿಯಾ ಜತೆಗೇ ಜೈನ್ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: Bomb Threat Call: ಅಮಿತಾಭ್​, ಅಂಬಾನಿ, ಧರ್ಮೇಂದ್ರ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ ಕಿಡಿಗೇಡಿ

ಜೈನ್ ಅವರ ಜೈಲು ವಾಸವು ಜೈಲಿನೊಳಗೆ ವಿಐಪಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೊದೊಂದಿಗೆ ಕಡಿಮೆ ವಿವಾದವಾಗಿತ್ತು. ಶಿಕ್ಷಣ ಕ್ರಾಂತಿ ಮಾಡಿದ್ದ ಸಿಸೋಡಿಯಾವರು ಹಣಕಾಸು, PWD ಉಸ್ತುವಾರಿ ವಹಿಸಿದ್ದರು.

ಎಎಪಿಯ ಆರಂಭದಿಂದಲೂ ಸದಸ್ಯರಾದ ಅತಿಶಿ ಅವರು ಮಾರ್ಲೆನಾ ( ಕಾರ್ಲ್ ಮಾರ್ಕ್ಸ್ ಮತ್ತು ವ್ಲಾಡಿಮಿರ್ ಲೆನಿನ್ ಎರಡು ಪದಗಳನ್ನು ಜೋಡಿಸಿ ಮಾರ್ಲೆನಾ) ಎಂಬ ಸರ್ ನೇಮ್ ಇರಿಸಿದ್ದು ಬಾರೀ ಸುದ್ದಿಯಾಗಿತ್ತು.. ಆದರೆ ಕಳೆದ ಚುನಾವಣೆಯಲ್ಲಿ ಅತಿಶಿ, ಮಾರ್ಲೆನಾ ಎಂಬ ಸರ್ ನೇಮ್ ಕೈಬಿಟ್ಟು ಮತ್ತೊಮ್ಮೆ ಸಿಂಗ್ ಎಂಬ ಸರ್ ನೇಮ್ ತಮ್ಮದಾಗಿಸಿಕೊಂಡರು.

ಪಕ್ಷದ ವೆಬ್‌ಸೈಟ್ ಪ್ರಕಾರ, ಅತಿಶಿ ಅವರು 2013 ರ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಕರಡು ಸಮಿತಿಯ ಪ್ರಮುಖ ಸದಸ್ಯರಾಗಿದ್ದರು. ಅತಿಶಿ ಅವರು ಶಿಕ್ಷಣ ಸಚಿವಾಲಯದಲ್ಲಿ ಮನೀಶ್ ಸಿಸೋಡಿಯಾ ಅವರ ಸಲಹೆಗಾರರಾಗಿ ಕೆಲಸ ಮಾಡಿದ್ದರು.

 

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Wed, 1 March 23