AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬಾ ಕಾ ಡಾಬಾ ಆಯ್ತು.. ಈಗ ‘ರೋಟಿವಾಲಿ ಅಮ್ಮಾ’ಳ ಸಂಕಷ್ಟಕ್ಕೆ ಸ್ಪಂದಿಸೋರು ಬೇಕು

ಲಕ್ನೋ: ಕಳೆದ ಕೆಲವು ದಿನಗಳ ಹಿಂದೆ ಜೀವನೋಪಾಯದ ದಾರಿಯಾಗಿದ್ದ ತನ್ನ ಡಾಬಾದಲ್ಲಿ ವ್ಯಾಪಾರವಾಗ್ತಿಲ್ಲ ಎಂದು ದೆಹಲಿಯ ವೃದ್ಧ ದಂಪತಿಯೊಂದು ಬಿಕ್ಕಿ ಬಿಕ್ಕಿ ಅತ್ತು ತಮ್ಮ ನೋವು ತೋಡಿಕೊಂಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವೃದ್ಧ ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿದ್ದ ನೆಟ್ಟಿಗರು ಮತ್ತು ದೆಹಲಿಯ ಜನತೆ ಅವರ ನೆರವಿಗೆ ಧಾವಿಸಿದ್ದರು. ಇದೀಗ, ಉತ್ತರ ಪ್ರದೇಶದ ಆಗ್ರಾದಲ್ಲಿರುವ ಈ 80 ವರ್ಷದ ವೃದ್ಧೆಯದ್ದು ಅದೇ ಪರಿಸ್ಥಿತಿ. ಅಂದ ಹಾಗೆ, ಈಕೆಯ ಹೆಸರು ಯಾರಿಗೂ ತಿಳಿದಿಲ್ಲ. ಆದರೂ ಈಕೆಯನ್ನು ಸಾಕ್ಷಾತ್​ ಅನ್ನಪೂರ್ಣೇಶ್ವರಿಯಂತೆ […]

ಬಾಬಾ ಕಾ ಡಾಬಾ ಆಯ್ತು.. ಈಗ ‘ರೋಟಿವಾಲಿ ಅಮ್ಮಾ’ಳ ಸಂಕಷ್ಟಕ್ಕೆ ಸ್ಪಂದಿಸೋರು ಬೇಕು
KUSHAL V
|

Updated on: Oct 18, 2020 | 7:23 PM

Share

ಲಕ್ನೋ: ಕಳೆದ ಕೆಲವು ದಿನಗಳ ಹಿಂದೆ ಜೀವನೋಪಾಯದ ದಾರಿಯಾಗಿದ್ದ ತನ್ನ ಡಾಬಾದಲ್ಲಿ ವ್ಯಾಪಾರವಾಗ್ತಿಲ್ಲ ಎಂದು ದೆಹಲಿಯ ವೃದ್ಧ ದಂಪತಿಯೊಂದು ಬಿಕ್ಕಿ ಬಿಕ್ಕಿ ಅತ್ತು ತಮ್ಮ ನೋವು ತೋಡಿಕೊಂಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವೃದ್ಧ ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿದ್ದ ನೆಟ್ಟಿಗರು ಮತ್ತು ದೆಹಲಿಯ ಜನತೆ ಅವರ ನೆರವಿಗೆ ಧಾವಿಸಿದ್ದರು. ಇದೀಗ, ಉತ್ತರ ಪ್ರದೇಶದ ಆಗ್ರಾದಲ್ಲಿರುವ ಈ 80 ವರ್ಷದ ವೃದ್ಧೆಯದ್ದು ಅದೇ ಪರಿಸ್ಥಿತಿ. ಅಂದ ಹಾಗೆ, ಈಕೆಯ ಹೆಸರು ಯಾರಿಗೂ ತಿಳಿದಿಲ್ಲ. ಆದರೂ ಈಕೆಯನ್ನು ಸಾಕ್ಷಾತ್​ ಅನ್ನಪೂರ್ಣೇಶ್ವರಿಯಂತೆ ರೋಟಿವಾಲಿ ಅಮ್ಮಾ ಅಥವಾ ರೊಟ್ಟಿ ಉಣಬಡಿಸುವ ತಾಯಿ ಎಂದೇ ಸ್ಥಳೀಯರು ಕರೆಯುತ್ತಾರೆ.

ಕಳೆದ 15 ವರ್ಷಗಳಿಂದ ನಗರದ ಸೇಂಟ್​ ಜಾನ್​ ಕಾಲೇಜು ಬಳಿ ವ್ಯಾಪಾರ ನಡೆಸುತ್ತಿರುವ ಈ ವೃದ್ಧೆ ನಗರದ ಬಡವರು ಮತ್ತು ಕೂಲಿ ಕಾರ್ಮಿಕರ ಪಾಲಿಗೆ ಅನ್ನದಾತೆ. ಕೇವಲ 20 ರೂಪಾಯಿಗೆ ರುಚಿರುಚಿಯಾದ ರೊಟ್ಟಿ ಮತ್ತು ಗೊಜ್ಜು ಸವಿಯಲು ವೃದ್ಧೆಯ ಫುಟ್​ಪಾತ್​ ಮೇಲಿರುವ ಗೂಡಂಗಡಿಗೆ ಬರುತ್ತಾರೆ.

ಆದರೆ, ಬಾಬಾ ಕಾ ಡಾಬಾ ದಂಪತಿಯಂತೆ ಈಕೆಗೂ ಕಳೆದ ಕೆಲವು ದಿನಗಳಿಂದ ವ್ಯಾಪಾರ ಅಷ್ಟಕಷ್ಟೆ. ಲಾಕ್​ಡೌನ್​ ಬಳಿಕ ಕೂಲಿ ಕಾರ್ಮಿಕರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಇದರಿಂದ ವೃದ್ಧೆಗೆ ಬದುಕು ಸಾಗಿಸಲು ಕೊಂಚ ಕಷ್ಟವಾಗಿದೆ. ಹಾಗಂತಾ ಈಕೆ ನೆರವಿಗೆ ಮನವಿ ಮಾಡಿಲ್ಲ. ತಮ್ಮ ಕಷ್ಟವನ್ನು ಯಾರ ಬಳಿಯೂ ಹೇಳಿಕೊಳ್ಳದೇ ಬರುವ ಆದಾಯದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇನ್ನಾದರೂ ಈಕೆಯ ಸಂಕಷ್ಟಕ್ಕೆ ಸಹೃದಯಿಗಳು ಸ್ಪಂದಿಸುವರು ಎಂಬುದು ಎಲ್ಲರ ಆಶಯ.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ