AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​

ಲಕ್ಷಾಂತರ ಮಂದಿ ಏರ್​ಟೆಲ್ ಗ್ರಾಹಕರ ಫೋನ್​ ನಂಬರ್​ಗಳ​ ಜೊತೆಗೆ ಖಾಸಗಿ ಮಾಹಿತಿ ಸಹ ಸೋರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಏರ್​ಟೆಲ್​ ಗ್ರಾಹಕರ ವಿಳಾಸ, ಆಧಾರ್​ ಕಾರ್ಡ್​ ಮತ್ತು ಇತರೆ ಖಾಸಗಿ ಮಾಹಿತಿಯನ್ನು ಹ್ಯಾಕರ್​ಗಳು ಮಾರಾಟ ಮಾಡಲು ಯತ್ನಿಸಿದರು ಎಂಬ ಮಾಹಿತಿ ಸಹ ಸಿಕ್ಕಿದೆ.

ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​
ಪ್ರಾತಿನಿಧಿಕ ಚಿತ್ರ
Follow us
KUSHAL V
|

Updated on: Feb 02, 2021 | 10:27 PM

ದೆಹಲಿ: ಲಕ್ಷಾಂತರ ಮಂದಿ ಏರ್​ಟೆಲ್ ಗ್ರಾಹಕರ ಫೋನ್​ ನಂಬರ್​ಗಳ​ ಜೊತೆಗೆ ಖಾಸಗಿ ಮಾಹಿತಿ ಸಹ ಸೋರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಏರ್​ಟೆಲ್​ ಗ್ರಾಹಕರ ವಿಳಾಸ, ಆಧಾರ್​ ಕಾರ್ಡ್​ ಮತ್ತು ಇತರೆ ಖಾಸಗಿ ಮಾಹಿತಿಯನ್ನು ಹ್ಯಾಕರ್​ಗಳು ಮಾರಾಟ ಮಾಡಲು ಯತ್ನಿಸಿದರು ಎಂಬ ಮಾಹಿತಿ ಸಹ ಸಿಕ್ಕಿದೆ.

ರಾಜಶೇಖರ್​ ರಾಜಾಹಾರಿಯಾ ಎಂಬ ಇಂಟರ್​ನೆಟ್​ ಭದ್ರತಾ ಸಂಶೋಧಕ ಈ ಮಾಹಿತಿ ಸೋರಿಕೆಯನ್ನು ಮೊದಲು ಪತ್ತೆಹಚ್ಚಿದ್ದಾರೆ. ಅಂದ ಹಾಗೆ, ಗ್ರಾಹಕರ ಮಾಹಿತಿ ಕದ್ದ ಹ್ಯಾಕರ್​ಗಳು ಅದನ್ನು ಬಳಸಿ ಏರ್​ಟೆಲ್​ ಕಂಪನಿ ಬಳಿ ಸುಲಿಗೆ ಮಾಡಲು ಮುಂದಾಗಿದ್ದರಂತೆ. ಸುಮಾರು 3,500 ಬಿಟ್​ಕಾಯಿನ್​ಗಳಿಗೆ ಬೇಡಿಕೆ ಸಹ ಇಟ್ಟಿದ್ದರಂತೆ.

ಆದರೆ, ಕಂಪನಿ ಅವರ ಬೇಡಿಕೆಗಳನ್ನು ಒಪ್ಪದೆ ಇದ್ದಾಗ ಸಿಟ್ಟಿಗೆದ್ದ ಹ್ಯಾಕರ್​ ತಂಡ ಎಲ್ಲಾ ಮಾಹಿತಿಯನ್ನು ವೆಬ್​ಸೈಟ್​ ಒಂದರಲ್ಲಿ ಮಾರಲು ಮುಂದಾದರಂತೆ. ಸದ್ಯ, ಈ ವೆಬ್​ಸೈಟ್​ನ ತೆಗೆದುಹಾಕಲಾಗಿದೆ.

ಈ ನಡುವೆ, ಕೆಲ ಮೂಲಗಳ ಪ್ರಕಾರ ಮಾಹಿತಿ ಸೋರಿಕೆ, ಏರ್​ಟೆಲ್​ ಕಂಪನಿ ಕಡೆಯಿಂದ ನಡೆದಿಲ್ಲ ಬದಲಿಗೆ ಮೊಬೈಲ್​ ಗ್ರಾಹಕರ ಮೇಲೆ ನಿಗಾವಹಿಸುವ ಸರ್ಕಾರಿ ಏಜೆನ್ಸಿಗಳ ಮುಖಾಂತರ ಆಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಸೋರಿಕೆಯಾದ ಎಲ್ಲಾ ಮಾಹಿತಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಏರ್​ಟೆಲ್​ ಗ್ರಾಹಕರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಇನ್ನು, ಈ ಕುರಿತು ಏರ್​ಟೆಲ್​ ಸಂಸ್ಥೆ ಪ್ರತಿಕ್ರಿಯಿಸಿದ್ದು ನಮ್ಮ ಕಂಪನಿ, ಗ್ರಾಹಕರ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಕರಣದಲ್ಲಿ ಸಹ ನಮ್ಮ ಕಡೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಹೇಳಿದೆ. ಜೊತೆಗೆ, ಈ ಬಗ್ಗೆ ಸೂಕ್ತ ಅಧಿಕಾರಿಗಳಿಗೆ ಮಾಹಿತಿ ಸಹ ನೀಡಿದ್ದೇವೆ ಎಂದು ಹೇಳಿದೆ.

ಆಧಾರ್​ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!

ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ನೀರು ಬಿಡೋದಿಲ್ಲ ಅಂತ ಸ್ಟೇಟಸ್​ ಹಾಕಿದ್ದ BJP ಮುಖಂಡನ ಮೇಲೆ ಹಲ್ಲೆ
ನೀರು ಬಿಡೋದಿಲ್ಲ ಅಂತ ಸ್ಟೇಟಸ್​ ಹಾಕಿದ್ದ BJP ಮುಖಂಡನ ಮೇಲೆ ಹಲ್ಲೆ
ಹಾಸನದಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ಕಾಳಿಂಗ ಸರ್ಪ, ಭಯಭೀತರಾದ ಜನ!
ಹಾಸನದಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ಕಾಳಿಂಗ ಸರ್ಪ, ಭಯಭೀತರಾದ ಜನ!
ಪೊಲೀಸ್ ಆಯುಕ್ತ ಡಾ ಎಸ್ ಡಿ ಶರಣಪ್ಪರಿಂದ ಆರೋಪಿಗಳ ವಿಚಾರಣೆ
ಪೊಲೀಸ್ ಆಯುಕ್ತ ಡಾ ಎಸ್ ಡಿ ಶರಣಪ್ಪರಿಂದ ಆರೋಪಿಗಳ ವಿಚಾರಣೆ