Dahi Row: ಮೊಸರು ಪ್ಯಾಕೆಟ್ ಮೇಲೆ ‘ದಹಿ’ ಎಂದು ನಮೂದಿಸುವುದಕ್ಕೆ ವಿರೋಧ; ಮಾರ್ಗಸೂಚಿ ಪರಿಷ್ಕರಿಸಿದ ಎಫ್‌ಎಸ್‌ಎಸ್‌ಎಐ

|

Updated on: Mar 30, 2023 | 5:32 PM

ಮೊಸರು ಪ್ಯಾಕೆಟ್​​ಗಳಲ್ಲಿ ದಹಿ, ಮೊಸರು ಮತ್ತು ಝಾಮುತ್ ದೌಡ್ ಎಂದು ಲೇಬಲ್ ಮಾಡಬಹುದು ಎಂದು FSSAI ಹೇಳಿದೆ. ಮೊಸರು ಪ್ಯಾಕೆಟ್‌ಗಳ ಮೇಲೆ ‘ದಹಿ’ ಎಂದು ಮುದ್ರಿಸಲು ಎಫ್‌ಎಸ್‌ಎಸ್‌ಎಐ ಅಧಿಸೂಚನೆ ಕುರಿತು ತಮಿಳುನಾಡು ಮತ್ತು ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿತ್ತು

Dahi Row: ಮೊಸರು ಪ್ಯಾಕೆಟ್ ಮೇಲೆ ‘ದಹಿ’ ಎಂದು ನಮೂದಿಸುವುದಕ್ಕೆ ವಿರೋಧ; ಮಾರ್ಗಸೂಚಿ ಪರಿಷ್ಕರಿಸಿದ ಎಫ್‌ಎಸ್‌ಎಸ್‌ಎಐ
ನಂದಿನಿ ಮೊಸರು
Follow us on

ಮೊಸರಿನ ಪ್ಯಾಕೆಟ್‌ಗಳ ಮೇಲೆ ‘ದಹಿ’ (Dahi)ಎಂದು ನಮೂದಿಸಬೇಕು ಎಂಬ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಸೂಚನೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಿದೆ. ಈ ಬಗ್ಗೆ ಪ್ರಕಟಣೆ ನೀಡಿದ ಎಫ್‌ಎಸ್‌ಎಸ್‌ಎಐ, FSSAI, 11 ಜನವರಿ 2023 ದಿನಾಂಕದ ಅಧಿಸೂಚನೆಯ ಮೂಲಕ ಹುಳಿಬರಿಸಿದ ಹಾಲಿನ ಉತ್ಪನ್ನಗಳ ಮಾನದಂಡಗಳಿಂದ ಮೊಸರು ಪದವನ್ನು ಬಿಟ್ಟುಬಿಡುವ ನಿಬಂಧನೆಗಳನ್ನು ಸೂಚಿಸಿದೆ. ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳ ಗುಣಮಟ್ಟಗಳು ಮತ್ತು ಆಹಾರ ಸೇರ್ಪಡೆಗಳು) ನಿಯಮಗಳು 2011 ಅಡಿಯಲ್ಲಿ ‘ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಮಾನ್ಯ ಗುಣಮಟ್ಟ’ ಡೈರಿ ಉತ್ಪನ್ನಗಳ (ಹಾಲು, ಹಾಲಿನ ಉತ್ಪನ್ನ ಅಥವಾ ಸಂಯೋಜಿತ ಹಾಲಿನ ಉತ್ಪನ್ನ) ಡೈರಿ ಪದ ಬಳಕೆಗೆ ಮತ್ತು ಡೈರಿ ಅಲ್ಲದ ಉತ್ಪನ್ನಗಳಲ್ಲಿ ಅಂತಹ ಬಳಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಇದಕ್ಕೆಅನುಗುಣವಾಗಿ ಮೇಲಿನ ಮಾರ್ಗಸೂಚಿಯಲ್ಲಿ “ದಹಿ” ಜೊತೆಗೆ “ಮೊಸರು” ಎಂಬ ಪದವನ್ನು ಬರೆದಾಗ, ಅದು ಡೈರಿ ಅಲ್ಲದ ಉತ್ಪನ್ನಗಳಿಗೆ ಅದರ ಬಳಕೆಯನ್ನು ನಿರ್ಬಂಧಿಸುತ್ತದೆ. “ಮೊಸರು” ಎಂಬ ಪದವನ್ನು ಬಿಟ್ಟುಬಿಡುವುದರ ಬಗ್ಗೆ ವಿರೋಧ ವ್ಯಕ್ತವಾಗಿದ್ದು, Curd ಎಂಬ ಪದವನ್ನು ಲೇಬಲ್‌ನಲ್ಲಿ ಬರೆದು ಬ್ರಾಕೆಟ್‌ಗಳಲ್ಲಿ ಯಾವುದೇ ಇತರ ಪದನಾಮದೊಂದಿಗೆ (ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರು) ಬಳಸಬಹುದು ಎಂದು ನಿರ್ಧರಿಸಲಾಗಿದೆ ಎಂದ ಪ್ರಕಟಣೆ ತಿಳಿಸಿದೆ.


ಅದರಂತೆ ಮೊಸರು ಪ್ಯಾಕೆಟ್ ಗಳಲ್ಲಿ ದಹಿ, ಮೊಸರು ಮತ್ತು ಝಾಮುತ್ ದೌಡ್ ಎಂದು ಲೇಬಲ್ ಮಾಡಬಹುದು ಎಂದು FSSAI ಹೇಳಿದೆ.
ಮೊಸರು ಪ್ಯಾಕೆಟ್‌ಗಳ ಮೇಲೆ ‘ದಹಿ’ ಎಂದು ಮುದ್ರಿಸಲು ಎಫ್‌ಎಸ್‌ಎಸ್‌ಎಐ ಅಧಿಸೂಚನೆ ಕುರಿತು ಡಿಎಂಕೆಯ ಟಿಕೆಎಸ್ ಇಳಂಗೋವನ್,ಪ್ರತಿ ರಾಜ್ಯವು ಅವರ ಭಾಷೆಯಲ್ಲಿ ಬರೆಯಲಿ, ಎಫ್‌ಎಸ್‌ಎಸ್‌ಎಐ ಇದರಲ್ಲಿ ಯಾಕೆ ಹಸ್ತಕ್ಷೇಪ ಮಾಡುತ್ತಿದೆ? ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಎಲ್ಲಾ ಭಾಷೆಗಳಿಗೆ ಸಮಾನ ಗೌರವ ನೀಡಬೇಕು. ಈ ದೇಶದಲ್ಲಿ ಯಾವುದೇ ಭಾಷೆ ರಾಷ್ಟ್ರೀಯ ಭಾಷೆಯಾಗಲು ಸಾಧ್ಯವಿಲ್ಲ. ಅವರು ಇದನ್ನು ತಿಳಿದಿರಬೇಕು ಎಂದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಈ ನಿರ್ದೇಶನವನ್ನು ಹಿಂದಿ ಹೇರಿಕೆಯ ಪ್ರಕರಣ ಎಂದು ಟೀಕಿಸಿದ್ದು, ಇದನ್ನು ದಕ್ಷಿಣ ಭಾರತದ ಜನರು ದೂರವಿಡಬೇಕು ಎಂದಿದ್ದಾರೆ. ಹಿಂದಿ ಹೇರಿಕೆಯ ನಿರ್ಲಜ್ಜ ಒತ್ತಾಯಗಳು ಹಿಂದಿಯಲ್ಲಿ ಮೊಸರು ಪ್ಯಾಕೆಟ್‌ ಮೇಲೂ ಬರೆಯುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ, ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಇದು ದೂರ ಮಾಡುತ್ತದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ:Amit Shah: ಹರಿದ್ವಾರದಲ್ಲಿ ಪತಂಜಲಿ ವಿಶ್ವವಿದ್ಯಾಲಯ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಇತ್ತ ಕರ್ನಾಟಕದಲ್ಲಿಯೂ ಮೊಸರು ಎಂಬ ಪದ ಬದಲು ದಹಿ ಎಂದು ಬಳಸುವುದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ. ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ ಬಿಜೆಪಿಸರಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Thu, 30 March 23