ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ: ಉಗ್ರರ ನಿಗ್ರಹಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಅಮಿತ್ ಶಾ

Amit Shah ಶ್ರೀನಗರದಲ್ಲಿ ಭಯೋತ್ಪಾದನಾ ದಾಳಿಗಳಲ್ಲಿ ಭಾಗಿಯಾಗಿರುವ ಪಾಕಿಸ್ತಾನ ಬೆಂಬಲಿತ ಸ್ಥಳೀಯ ಮಾಡ್ಯೂಲ್ ಅನ್ನು ತಟಸ್ಥಗೊಳಿಸಲು ಸ್ಥಳೀಯ ಪೊಲೀಸರಿಗೆ ಸಹಾಯ ಮಾಡಲು ಕೇಂದ್ರವು ತನ್ನ ಉನ್ನತ ಉಗ್ರ ನಿಗ್ರಹ ತಜ್ಞರನ್ನು ಕಣಿವೆಗೆ ಕಳುಹಿಸಿದೆ.

ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ: ಉಗ್ರರ ನಿಗ್ರಹಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಅಮಿತ್ ಶಾ
ಅಮಿತ್ ಶಾ
Updated By: ರಶ್ಮಿ ಕಲ್ಲಕಟ್ಟ

Updated on: Oct 08, 2021 | 2:32 PM

ದೆಹಲಿ: ಕಾಶ್ಮೀರದಲ್ಲಿ ಅಮಾಯಕರು ಮತ್ತು ಅಲ್ಪಸಂಖ್ಯಾತರ ಹತ್ಯೆಗಳನ್ನು ಎದುರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ದೃಢ ಮತ್ತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ. ಅದೇ ವೇಳೆ ಶ್ರೀನಗರದಲ್ಲಿ ಭಯೋತ್ಪಾದನಾ ದಾಳಿಗಳಲ್ಲಿ ಭಾಗಿಯಾಗಿರುವ ಪಾಕಿಸ್ತಾನ ಬೆಂಬಲಿತ ಸ್ಥಳೀಯ ಮಾಡ್ಯೂಲ್ ಅನ್ನು ತಟಸ್ಥಗೊಳಿಸಲು ಸ್ಥಳೀಯ ಪೊಲೀಸರಿಗೆ ಸಹಾಯ ಮಾಡಲು ಕೇಂದ್ರವು ತನ್ನ ಉನ್ನತ ಉಗ್ರ ನಿಗ್ರಹ ತಜ್ಞರನ್ನು ಕಣಿವೆಗೆ ಕಳುಹಿಸಿದೆ. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾದ (LeT) ಸಂಘಟನೆ ಬೆಂಬಲಿತ ದಿ ರೆಸಿಸ್ಟೆನ್ಸ್ ಫೋರ್ಸ್ (TRF) ಶ್ರೀನಗರದಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿರುವ ಕಾಶ್ಮೀರಿ ಪಂಡಿತ್ ಬಿಂದ್ರೂ, ಶಾಲಾ ಪ್ರಾಂಶುಪಾಲರು, ಶಿಕ್ಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು. ಈ ಪ್ರಕರಣಗಳ ಬೆನ್ನಲ್ಲೇ ಅಮಿತ್ ಶಾ ಗುರುವಾರ 5 ಗಂಟೆಗಳ ಕಾಲ ಮ್ಯಾರಥಾನ್ ಸಭೆ ನಡೆಸಿದ್ದಾರೆ. ಭದ್ರತಾ ಏಜೆನ್ಸಿಗಳು ತಮ್ಮ ಉಗ್ರ ನಿಗ್ರಹ  ತಜ್ಞರನ್ನು (Counter Terror Experts) ಕಾಶ್ಮೀರಕ್ಕೆ ಕಳುಹಿಸುವಂತೆ ಕೇಳಿದಾಗ, ಶಾ ಅಪರಾಧಿಗಳನ್ನು ಬಂಧಿಸಲು ದೃಢವಾದ ಸೂಚನೆಗಳನ್ನು ನೀಡಿದರು.

ಇಟಿಲಿಜೆನ್ಸ್ ಬ್ಯೂರೋದ ಮುಖ್ಯಸ್ಥ ಸಿಟಿ ಕಾರ್ಯಾಚರಣೆಗಳ ಮುಖ್ಯಸ್ಥ ತಪನ್ ಡೆಕಾ ಇಂದು ಭಯೋತ್ಪಾದಕರ ವಿರುದ್ಧದ ಹೋರಾಟವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಕಣಿವೆಗೆ ಹೋಗುತ್ತಿದ್ದು, ಇತರ ರಾಷ್ಟ್ರೀಯ ಭದ್ರತಾ ಏಜೆನ್ಸಿಗಳ ಸಿಟಿ ತಂಡಗಳು ಈಗಾಗಲೇ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆ ಕಾರ್ಯನಿರ್ವಹಿಸಲು ಕಾಶ್ಮೀರವನ್ನು ತಲುಪಿದೆ.

ಭಾರತೀಯ ಒಳನಾಡಿನ ಪ್ರವಾಸಿಗರು ಕಣಿವೆಯಲ್ಲಿ ಎಲ್ಲಾ ಹೋಟೆಲ್‌ಗಳಲ್ಲಿ 100 ಪ್ರತಿಶತ ಆಕ್ಯುಪೆನ್ಸಿಯನ್ನು ತೋರಿಸಿದಾಗ ಮತ್ತು ಶ್ರೀನಗರ ಆರ್ಥಿಕ ಚಟುವಟಿಕೆಯೊಂದಿಗೆ ತೊಡಗಿರುವ ಸಮಯದಲ್ಲಿ ಈ ದಾಳಿಗಳು ನಡೆದಿವೆ.

ಭದ್ರತಾ ಏಜೆನ್ಸಿಗಳ ಪ್ರಕಾರ ಇತ್ತೀಚಿನ ಹಿಂಸಾಚಾರವು ಕಾಬೂಲ್ ಅನ್ನು  ತಾಲಿಬಾನ್ ವಶಪಡಿಸಿಕೊಂಡ ನಂತರ ಮತ್ತು ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರ ಹೊಸ ಐಎಸ್‌ಐ ಮುಖ್ಯಸ್ಥರನ್ನು ನೇಮಿಸಿದ ನಂತರ ಪಾಕಿಸ್ತಾನ ಮೂಲದ ಗುಂಪುಗಳ ವಿಶ್ವಾಸದ ಅಭಿವ್ಯಕ್ತಿಯಾಗಿದೆ. ಅಫ್ಘಾನಿಸ್ತಾನವು ರಾವಲ್ಪಿಂಡಿಯ ಭರವಸೆಯಡಿಲ್ಲಿರುವಾಗ ಹೊಸ ಗುರಿಯು ಕಾಶ್ಮೀರವಾಗಿದ್ದು, ಕಾಶ್ಮೀರಕ್ಕೆ ಮರಳಲು ಧೈರ್ಯವಿರುವವರನ್ನು ಗುರಿಯಾಗಿಸಿಕೊಂಡು ಕಣಿವೆಗೆ ಮರಳಲು ಅಲ್ಪಸಂಖ್ಯಾತರಿಗೆ ಅವಕಾಶ ನೀಡದೇ ಇರುವುದು ಇದರ ಭಾಗವಾಗಿದೆ.

ಇತ್ತೀಚಿನ ಹತ್ಯೆಗಳಲ್ಲಿ ಬಳಸಿದ ಆಯುಧಗಳು ಪಿಸ್ತೂಲ್‌ಗಳೆಂದು ಉನ್ನತ ಭದ್ರತಾ ಅಧಿಕಾರಿಗಳು ಹೇಳುತ್ತಾರೆ. ಇದನ್ನು ಗಡಿಯಾಚೆಗಿನ ಡ್ರೋನ್‌ಗಳ ಮೂಲಕ ಕಣಿವೆಯ ಮೇಲ್ಭಾಗಗಳಲ್ಲಿ ಬೀಳಿಸಿರಬಹುದು. “ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಜಿಹಾದಿಗಳು ಯುಎಸ್ ಸ್ನೈಪರ್ ರೈಫಲ್‌ಗಳು ಮತ್ತು ಏರಿಯಾ ಶಸ್ತ್ರಾಸ್ತ್ರಗಳನ್ನು ಕಣಿವೆಗೆ ತಂದರೆ ಎಂಬುದೇ ದೊಡ್ಡ ಚಿಂತೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮುಂಬರುವ ದಿನಗಳಲ್ಲಿ ಪ್ರಸ್ತುತ ಭಯೋತ್ಪಾದಕ ಘಟಕವನ್ನು ತಟಸ್ಥಗೊಳಿಸಬಹುದಾದರೂ, ಮೋದಿ ಸರ್ಕಾರ ಆಗಸ್ಟ್ 5, 2019ರಂದು ಹಿಂಪಡೆದ 370ನೇ ವಿಧಿ ಮತ್ತು 35 ಎಯಿಂದಾಗಿ ಪಾಕಿಸ್ತಾನವು ಕಾಶ್ಮೀರದ ಮೇಲೆ ಒತ್ತಡ ಹೇರುತ್ತದೆ ಎಂಬುದು ಸ್ಪಷ್ಟವಾಗಿದೆ. ಎರಡನೆಯದು ಕಣಿವೆ ಮೂಲದ ರಾಜಕೀಯ ಪಕ್ಷಗಳ ಬೇಡಿಕೆಯಾಗಿದೆ. ಇದು ಕಾಶ್ಮೀರದಲ್ಲಿ ಶಾಂತಿಗಾಗಿ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದಕ್ಕಾಗಿದೆ ಎಂದು  ಹೇಳಲಾಗಿದೆ.

ಆದಾಗ್ಯೂ, ಮೋದಿ ಸರ್ಕಾರವು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ಮುಂದೆ ತಲೆಬಾಗುವುದಿಲ್ಲ. ಭದ್ರತಾ ಏಜೆನ್ಸಿಗಳು ಮತ್ತು ಪ್ಯಾರಾ-ಮಿಲಿಟರಿ ಪಡೆಗಳು ಯಾವುದೇ ವಿಳಂಬವಿಲ್ಲದೆ ಆಕ್ರಮಣಕಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮತ್ತು ಕಣಿವೆಯಲ್ಲಿ ಸಹಜತೆಯನ್ನು ತರುವಂತೆ ಅಮಿತ್ ಶಾ ಅವರಲ್ಲಿ ವಿನಂತಿಸಿದ್ದಾರೆ.

ಇದನ್ನೂ ಓದಿ:ಧೈರ್ಯ ಇದ್ದರೆ ನನ್ನ ಮುಂದೆ ಬನ್ನಿ, ಚರ್ಚಿಸೋಣ; ಉಗ್ರರಿಗೆ ಸವಾಲು ಹಾಕಿದ ಶ್ರದ್ಧಾ ಬಿಂದ್ರೂ

ಇದನ್ನೂ ಓದಿ: ನೋಟು ರದ್ದತಿ, 370ನೇ ವಿಧಿ ತೆಗೆದುಹಾಕುವುದರಿಂದ ಕಾಶ್ಮೀರದಲ್ಲಿ ಉಗ್ರ ಕೃತ್ಯ ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ರಾಹುಲ್ ಗಾಂಧಿ

Published On - 2:28 pm, Fri, 8 October 21