AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫೋಟೋದಲ್ಲಿರುವವರು ಯಾರು ಗುರುತಿಸಬಲ್ಲಿರಾ?-ಸಿನಿಮಾ ನಿರ್ಮಾಣದ ಕನಸು ಹೊತ್ತಿದ್ದ, ಇಂದಿನ ಖ್ಯಾತ ಉದ್ಯಮಿ ಇವರು

ಥ್ರೋಬ್ಯಾಕ್ ಫೋಟೋ ಶೇರ್​ ಮಾಡುತ್ತಿದ್ದಂತೆ ಅದು ತುಂಬ ವೈರಲ್​ ಆಗುತ್ತಿದೆ. ಆಗಲೇ ತುಂಬ ಚೆನ್ನಾಗಿದ್ದಿರಿ..ನಿಮ್ಮ ಹೇರ್​ ಸ್ಟೈಲ್​ ಚೆನ್ನಾಗಿತ್ತು ಎಂಬಿತ್ಯಾದಿ ಕಮೆಂಟ್​ಗಳನ್ನೂ ನೆಟ್ಟಿಗರು ಕೊಟ್ಟಿದ್ದಾರೆ.

ಈ ಫೋಟೋದಲ್ಲಿರುವವರು ಯಾರು ಗುರುತಿಸಬಲ್ಲಿರಾ?-ಸಿನಿಮಾ ನಿರ್ಮಾಣದ ಕನಸು ಹೊತ್ತಿದ್ದ, ಇಂದಿನ ಖ್ಯಾತ ಉದ್ಯಮಿ ಇವರು
ತಮ್ಮ ಹಳೇ ಫೋಟೋ ಶೇರ್ ಮಾಡಿಕೊಂಡ ಉದ್ಯಮಿ
TV9 Web
| Edited By: |

Updated on: Jan 20, 2022 | 5:21 PM

Share

ಈ ಫೋಟೋ ನೋಡಿ..ಇವರೊಬ್ಬರು ಭಾರತದ ಖ್ಯಾತ ಉದ್ಯಮಿ. ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಸಕ್ರಿಯರಾಗಿರುತ್ತಾರೆ. ಪರೋಪಕಾರಿಯೂ ಹೌದು. ಇವರ ಅದೆಷ್ಟೋ ಒಳ್ಳೆಯ ಕಾರ್ಯಗಳನ್ನು ದೇಶದ ಜನರು ಮೆಚ್ಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​​ನಲ್ಲಿ ಸದಾ ಒಂದಿಲ್ಲೊಂದು ಉಲ್ಲಾಸಭರಿತ, ಮನಸಿಗೆ ಮುದ ಕೊಡುವ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಫಾಲೋವರ್ಸ್​ನ್ನು ಖುಷಿಯಾಗಿಡುವ ಈ ಉದ್ಯಮಿ ಇದೀಗ ತಮ್ಮದೇ ಫೋಟೋ ಹಂಚಿಕೊಂಡು ಒಂದು ಹೊಸ ವಿಷಯ ಹೇಳಿದ್ದಾರೆ. ನಿಮಗೆ ಗೊತ್ತಾಯಿತಾ ಈ ವ್ಯಕ್ತಿ ಯಾರೆಂದು?

ಹಾಗೊಮ್ಮೆ ಗೊತ್ತಾಗದೆ ಇದ್ದರೆ ನಾವೇ ಹೇಳುತ್ತೇವೆ..ಇವರು ಬೇರೆ ಯಾರೂ ಅಲ್ಲ. ಮುಂಬೈನ ಉದ್ಯಮಿ ಆನಂದ್ ಮಹೀಂದ್ರಾ. ತಮ್ಮ ಹಳೇ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾನು ಚಲನಚಿತ್ರ ನಿರ್ದೇಶಕ ಆಗಬೇಕು ಎಂದುಕೊಂಡಿದ್ದೆ. ಅದಕ್ಕನುಗುಣವಾಗಿ ನಾನು ಕಾಲೇಜಿನಲ್ಲೂ ವಿದ್ಯಾಭ್ಯಾಸ ಮಾಡಿದೆ. ಆ ತರಬೇತಿಯ ಒಂದು ಭಾಗವಾಗಿ ಇಂದೋರ್​​ನ ಸಮೀಪ ಒಂದು ದುರ್ಗಮ ಹಳ್ಳಿಯಲ್ಲಿ ಸಾಕ್ಷ್ಯಚಿತ್ರವನ್ನು ಶೂಟಿಂಗ್ ಮಾಡುವಾಗ ತೆಗೆದ ನನ್ನ ಫೋಟೋ ಇದು. ಆಗ ನಾನು 16 ಎಂಎಂ ಕ್ಯಾಮರಾ ಬಳಸಿದ್ದೆ. ಆದರೆ ಯಾರಾದರೂ ಆ ಕಾಲದವರು ಇದ್ದರೆ ನಾನು 16 ಎಂಎಂನ ಯಾವ ಕ್ಯಾಮರಾ ಬಳಸಿದ್ದೆ ಎಂದು ಹೇಳಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ. ಹಾಗೇ, ನಾನು 77 ಕುಂಭಮೇಳ ಎಂಬ ಸಿನಿಮಾ ಪ್ರಬಂಧವನ್ನೂ ಬರೆದಿದ್ದೆ ಎಂದು ತಿಳಿಸಿದ್ದಾರೆ. ಅವರು ತಮ್ಮ ಥ್ರೋಬ್ಯಾಕ್ ಫೋಟೋ ಶೇರ್​ ಮಾಡುತ್ತಿದ್ದಂತೆ ಅದು ತುಂಬ ವೈರಲ್​ ಆಗುತ್ತಿದೆ. ಆಗಲೇ ತುಂಬ ಚೆನ್ನಾಗಿದ್ದಿರಿ..ನಿಮ್ಮ ಹೇರ್​ ಸ್ಟೈಲ್​ ಚೆನ್ನಾಗಿತ್ತು ಎಂಬಿತ್ಯಾದಿ ಕಮೆಂಟ್​ಗಳನ್ನೂ ನೆಟ್ಟಿಗರು ಕೊಟ್ಟಿದ್ದಾರೆ.

ಇದನ್ನೂ ಓದಿ: ICC Men Test Team: ಐಸಿಸಿ ಟೆಸ್ಟ್ ತಂಡ ಪ್ರಕಟ: ಟೀಮ್ ಇಂಡಿಯಾದ ಮೂವರಿಗೆ ಸ್ಥಾನ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?