AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಮಲ ಬೆಟ್ಟ ಹತ್ತುತ್ತಿರುವಾಗ ಅಸ್ವಸ್ಥರಾದ ಭಕ್ತರು; 6 ಕಿ.ಮೀ. ಹೆಗಲ ಮೇಲೆ ಹೊತ್ತು ನಡೆದು ಆಸ್ಪತ್ರೆಗೆ ಸೇರಿಸಿದ ಕಾನ್​ಸ್ಟೆಬಲ್

ಶೇಖ್​ ಅರ್ಶದ್​ ಎಂಬ ಕಾನ್​ಸ್ಟೆಬಲ್​ ನಾಗೇಶ್ವರಮ್ಮನನ್ನು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 6 ಕಿ.ಮೀ.ದೂರ ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ತಿರುಮಲ ಬೆಟ್ಟ ಹತ್ತುತ್ತಿರುವಾಗ ಅಸ್ವಸ್ಥರಾದ ಭಕ್ತರು; 6 ಕಿ.ಮೀ. ಹೆಗಲ ಮೇಲೆ ಹೊತ್ತು ನಡೆದು ಆಸ್ಪತ್ರೆಗೆ ಸೇರಿಸಿದ ಕಾನ್​ಸ್ಟೆಬಲ್
ಹಿರಿಯರನ್ನು ಹೆಗಲಮೇಲೆ ಹೊತ್ತು ಸಾಗುತ್ತಿರುವ ಪೊಲೀಸ್ ಕಾನ್​ಸ್ಟೆಬಲ್​
Lakshmi Hegde
|

Updated on:Dec 24, 2020 | 6:24 PM

Share

ತಿರುಮಲ: ದೇವರ ದರ್ಶನಕ್ಕೆಂದು ತಿರುಪತಿ ಬೆಟ್ಟ ಹತ್ತುತ್ತಿದ್ದಂತೆ ದಾರಿ ಮಧ್ಯೆಯೇ ಅನಾರೋಗ್ಯಕ್ಕೀಡಾದ ಮಹಿಳೆಯನ್ನು ಹಾಗೂ ಜತೆಗಿದ್ದ ಇನ್ನೋರ್ವ ವಯಸ್ಸಾದ ವ್ಯಕ್ತಿಯನ್ನು ಮುಸ್ಲಿಂ ಪೊಲೀಸ್ ಕಾನ್​ಸ್ಟೆಬಲ್ ಒಬ್ಬರು ಹೆಗಲ ಮೇಲೆ ಹೊತ್ತು ಸಾಗಿದ ಮಾನವೀಯ ಘಟನೆ ನಡೆದಿದೆ.

ನಂದಲೂರ್ ಮಂಡಲ್​ ನಿವಾಸಿಯಾಗಿರುವ ಮಂಗಿ ನಾಗೇಶ್ವರಮ್ಮ (58) ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುತ್ತಿದ್ದರು. ಆದರೆ ಮಾರ್ಗಮಧ್ಯದಲ್ಲಿ ಅವರಿಗೆ ರಕ್ತದ ಒತ್ತಡ ಅಧಿಕವಾಗಿ ಅಸ್ವಸ್ಥರಾದರು. ಮುಂದೆ ನಡೆಯಲು ಆಕೆಗೆ ಸಾಧ್ಯವಾಗಲೇ ಇಲ್ಲ. ಈ ಹೊತ್ತಲ್ಲಿ ಭಕ್ತರೊಂದಿಗೇ ನಡೆದು ಬರುತ್ತಿದ್ದ ಕಡಪಾ ಜಿಲ್ಲೆಯ ವಿಶೇಷ ಪೊಲೀಸ್ ದಳದ ಸಿಬ್ಬಂದಿ ಇದನ್ನು ಗಮನಿಸಿದರು.

ಅವರಲ್ಲಿ ಶೇಖ್​ ಅರ್ಶದ್​ ಎಂಬ ಕಾನ್​ಸ್ಟೆಬಲ್​ ನಾಗೇಶ್ವರಮ್ಮನವರನ್ನು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 6 ಕಿ.ಮೀ.ದೂರ ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಗೇ, ನಾಗೇಶ್ವರ್​ ರಾವ್ ಎಂಬ ಹಿರಿಯ ವ್ಯಕ್ತಿಯ ಆರೋಗ್ಯದಲ್ಲೂ ಏರುಪೇರಾಗಿ, ಅವರನ್ನೂ ಭುಜದ ಮೇಲೆ ಹೊತ್ತು, ವಾಹನ ಸಂಚಾರ ಇರುವ ರಸ್ತೆಗೆ ಕರೆದೊಯ್ದಿದ್ದಾರೆ. ಅರ್ಶದ್​ರ ಈ ಕಾರ್ಯವನ್ನು ಮೇಲಧಿಕಾರಿಗಳು, ಉಳಿದ ಭಕ್ತರು ಶ್ಲಾಘಿಸಿದ್ದಾರೆ.

ಮಗುವಿಗೆ ವಾಹನ ಡಿಕ್ಕಿ: ಮಾನವೀಯತೆಯೇ ಶ್ರೇಷ್ಠ ಧರ್ಮ ಎಂದು ನೆರವು ನೀಡಿದ ಶಾ ಬಜಾರ್ ವ್ಯಾಪಾರಿಗಳು

Published On - 6:19 pm, Thu, 24 December 20

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ