ಕಾಯುವಂತೆ ಮಾಡಿದ್ದಕ್ಕೆ ಪೊಲೀಸರಿಗೆ ಬೈದು ವಿವಾದ ಸೃಷ್ಟಿಸಿದ ಆಂಧ್ರ ಸಚಿವರ ಪತ್ನಿ

ಆಂಧ್ರಪ್ರದೇಶ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಪತ್ನಿ ಹರಿತಾ ರೆಡ್ಡಿ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ತನ್ನನ್ನು ಕಾಯುವಂತೆ ಮಾಡಿದ್ದಕ್ಕೆ ಸಬ್​ಇನ್ಸ್​ಪೆಕ್ಟರ್​ಗೆ ಕೆಟ್ಟದಾಗಿ ಮಾತನಾಡಿ ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅನ್ನಮಯ್ಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೂರ್ಣ ಘಟನೆ ಬಗ್ಗೆ ಮಾಹಿತಿ ಇಲ್ಲಿದೆ.

ಕಾಯುವಂತೆ ಮಾಡಿದ್ದಕ್ಕೆ ಪೊಲೀಸರಿಗೆ ಬೈದು ವಿವಾದ ಸೃಷ್ಟಿಸಿದ ಆಂಧ್ರ ಸಚಿವರ ಪತ್ನಿ
ಹರಿತಾ ರೆಡ್ಡಿ
Image Credit source: India Today

Updated on: Jul 02, 2024 | 9:32 AM

30 ನಿಮಿಷಗಳ ಕಾಲ ಕಾಯಿಸಿದ್ದಕ್ಕೆ ಆಂಧ್ರಪ್ರದೇಶ(Andhra Pradesh)ದ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ(Mandipalli Ramprasad Reddy )ಪತ್ನಿ ಹರಿತಾ ನಡು ರಸ್ತೆಯಲ್ಲೇ ನಿಲ್ಲಿಸಿ ಸಬ್​ಇನ್​ಸ್ಪೆಕ್ಟರ್​ಗೆ ಬೈದಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅವರು ಕಾರ್ಯಕ್ರಮವೊಂದಕ್ಕೆ ತೆರಳಬೇಕಿತ್ತು, ಪ್ಯಾಸೆಂಜರ್​ ಸೀಟ್​ನಲ್ಲಿ ಕುಳಿತು ತಾನು 30 ನಿಮಿಷಗಳಿಂದ ಕಾಯುತ್ತಿದ್ದೇನೆ ನೀವು ಏಕೆ ತಡವಾಗಿ ಬಂದಿದ್ದು ಎಂದು ಕೇಳುತ್ತಾ ಕ್ಲಾಸ್ ತೆಗೆದುಕೊಂಡಿದ್ದರು.

ಪೊಲೀಸ್​ ಅಧಿಕಾರಿಗೆ ನೂರಾರು ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ, ಅವರು ನಡವಳಿಕೆ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇನ್ನೂ ನಿಮಗೆ ಬೆಳಗಾಗಿರಲಿಲ್ಲವೇ?, ನೀವು ಮದುವೆ ಮನೆಗೆ ಬಂದಿದ್ದಾ ಅಥವಾ ಕೆಲಸ ಮಾಡೋಕೆ ಬಂದಿರೋದ, ನಿಮಗಾಗಿ ಅರ್ಧ ಗಂಟೆ ಕಾಯಬೇಕಾಯಿತು, ನಿಮಗೆ ಯಾರು ಸಂಬಳ ಕೊಡುತ್ತಾರೆ ಸರ್ಕಾರ ಅಥವಾ ವೈಎಸ್​ಆರ್​ ಕಾಂಗ್ರೆಸ್​ ಆ ಎಂದು ಗದರಿಸಿದ್ದರು.

ವಿಡಿಯೋದ ಕೊನೆಯಲ್ಲಿ ಸಬ್​ ಇನ್​ಸ್ಪೆಕ್ಟರ್​ ಹರಿತಾ ರೆಡ್ಡಿಯವರಿಗೆ ಸೆಲ್ಯೂಟ್ ಹೊಡೆದು, ಬೆಂಗಾವಲು ಪಡೆಯನ್ನು ಮುಂದೆ ಹೋಗುವಂತೆ ಸೂಚನೆ ನೀಡಿದರು. ಆದರೆ ಹರಿತಾ ರೆಡ್ಡಿಗೆ ಬೆಂಗಾವಲಾಗಿ ಹೋಗಲು ನಿರಾಕರಿಸಿದರು.

ಮತ್ತಷ್ಟು ಓದಿ: Lok Sabha Session: ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಎಂದರೆ ಹಿಂದೂ ಸಮಾಜವಲ್ಲ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಇದಕ್ಕೆ ವೈಎಸ್​ಆರ್​ ಕಾಂಗ್ರೆಸ್​ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದು, ಸಚಿವರ ಪತ್ನಿಗೂ ರಾಜ ಮರ್ಯಾದಎ ಬೇಕು, ಪೊಲೀಸರಿಗೆ ಜೀತದಾಳಿನಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ವಿಚಾರ ಕುರಿತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಮಪ್ರಸಾದ್ ರೆಡ್ಡಿಗೆ ಕರೆ ಮಾಡಿ ವಿವರಣೆ ಕೇಳಿದ್ದಾರೆ. ಈಗ ತಾನೆ ಸಚಿವ ಸ್ಥಾನ ಸಿಕ್ಕಿದೆ, ಈ ರೀತಿ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.

ವೈಎಸ್​ಆರ್​ ಕಾಂಗ್ರೆಸ್​ ಹಂಚಿಕೊಂಡ ವಿಡಿಯೋ

ತಮ್ಮ ಪತ್ನಿ ಹರಿತಾ ರೆಡ್ಡಿ ಪೊಲೀಸರೊಂದಿಗೆ ನಡೆದುಕೊಂಡಿರುವ ರೀತಿ ನೋವಿನಿಂದ ಕೂಡಿದ್ದು, ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ರಾಮ ಪ್ರಸಾದ್ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:32 am, Tue, 2 July 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us