‘ಜಗನ್ ರೆಡ್ಡಿ ಸರ್ಕಾರ ಆಂಧ್ರದ ಆರ್ಥಿಕತೆಯನ್ನು ನಾಶಪಡಿಸಿತು’:ಶ್ವೇತಪತ್ರ ಬಿಡುಗಡೆ ಮಾಡಿದ ಚಂದ್ರಬಾಬು ನಾಯ್ಡು

ರೆಡ್ಡಿ ಅಧಿಕಾರ ವಹಿಸಿಕೊಂಡಾಗ ಪ್ರಾರಂಭವಾದ ‘ದುರಾಡಳಿತ’ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಕೈಗಾರಿಕಾ ವಿರೋಧಿ ನೀತಿಗಳು, ರಾಜಧಾನಿ ನಗರ ಯೋಜನೆಗೆ ಬದಲಾವಣೆಗಳಿಗೆ ಕಾರಣವಾಯಿತು. ಪೋಲಾವರಂ ಯೋಜನೆಯಲ್ಲಿ ₹ 45,000 ಕೋಟಿ ನಷ್ಟ ಮತ್ತು ಇತರ ಹಾನಿ ₹ 7,900 ಕೋಟಿ ಎಂದು ಶ್ವೇತಪತ್ರದಲ್ಲಿ ಆರೋಪಿಸಲಾಗಿದೆ.

‘ಜಗನ್ ರೆಡ್ಡಿ ಸರ್ಕಾರ ಆಂಧ್ರದ ಆರ್ಥಿಕತೆಯನ್ನು ನಾಶಪಡಿಸಿತು’:ಶ್ವೇತಪತ್ರ ಬಿಡುಗಡೆ ಮಾಡಿದ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
Follow us
|

Updated on: Jul 26, 2024 | 7:25 PM

ಅಮರಾವತಿ ಜುಲೈ 26: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಶುಕ್ರವಾರ ಶ್ವೇತಪತ್ರವನ್ನು (white paper) ಬಿಡುಗಡೆ ಮಾಡಿದ್ದು, ಜಗನ್ ಮೋಹನ್ ರೆಡ್ಡಿ (Jagan Mohan Reddy) ನೇತೃತ್ವದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ನಾಶಪಡಿಸಿದ್ದು ₹ 7 ಲಕ್ಷ ಕೋಟಿಗಳಷ್ಟು ನಷ್ಟವನ್ನು ಉಂಟುಮಾಡಿದೆ ಎಂದು ಆರೋಪಿಸಿದ್ದಾರೆ. ಆಂಧ್ರಪ್ರದೇಶ ವಿಧಾನಸಭೆಯಲ್ಲಿ ರಾಜ್ಯದ ಹಣಕಾಸು ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಿದ ನಾಯ್ಡು, ರೆಡ್ಡಿ ನಾಯಕತ್ವದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಶೇ.16ರಿಂದ ಶೇ.10.3ಕ್ಕೆ ಕುಸಿದಿದ್ದು, ಸೇವಾ ವಲಯದ ಬೆಳವಣಿಗೆ ದರ ಶೇ.10.3ರಿಂದ ಶೇ.9.9ಕ್ಕೆ ಕುಸಿದಿದೆ ಎಂದು ಆರೋಪಿಸಿದರು.

ರೆಡ್ಡಿ ಅಧಿಕಾರ ವಹಿಸಿಕೊಂಡಾಗ ಪ್ರಾರಂಭವಾದ ‘ದುರಾಡಳಿತ’ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಕೈಗಾರಿಕಾ ವಿರೋಧಿ ನೀತಿಗಳು, ರಾಜಧಾನಿ ನಗರ ಯೋಜನೆಗೆ ಬದಲಾವಣೆಗಳಿಗೆ ಕಾರಣವಾಯಿತು. ಪೋಲಾವರಂ ಯೋಜನೆಯಲ್ಲಿ ₹ 45,000 ಕೋಟಿ ನಷ್ಟ ಮತ್ತು ಇತರ ಹಾನಿ ₹ 7,900 ಕೋಟಿ ಎಂದು ದಾಖಲೆಯಲ್ಲಿ ಆರೋಪಿಸಲಾಗಿದೆ.

“2014 ರಿಂದ 2019 ರವರೆಗೆ ಆಂಧ್ರ ಪ್ರದೇಶವು ತೆಲಂಗಾಣಕ್ಕಿಂತ ವೇಗವಾಗಿ ಬೆಳೆಯುತ್ತಿದೆ, ಆದರೆ 2019 ರಿಂದ 2024 ರವರೆಗೆ ರೈತರ ಆದಾಯ ಕುಸಿಯಿತು ಮತ್ತು ಸಾಲಗಳು ಹೆಚ್ಚಾಗುವುದರೊಂದಿಗೆ ಆರ್ಥಿಕತೆಯು ನಾಶವಾಯಿತು” ಎಂದು ವಿಧಾನಸಭೆಯಲ್ಲಿ ಶ್ವೇತಪತ್ರ ಮಂಡಿಸಿದ ನಾಯ್ಡು ಹೇಳಿದ್ದಾರೆ.

ಅಲ್ಪಾವಧಿಯ ವಿದ್ಯುತ್ ಖರೀದಿಯಿಂದಾಗಿ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ವಿದ್ಯುತ್ ವೆಚ್ಚ ಹೆಚ್ಚಾಯಿತು, ಇದು ₹ 12,250 ಕೋಟಿ ಹೆಚ್ಚುವರಿ ಹೊರೆಯನ್ನು ಸೇರಿಸಿತು, ಆದರೆ ಅಕ್ರಮ ಮರಳು ಗಣಿಗಾರಿಕೆ ₹ 7,000 ಕೋಟಿ ನಷ್ಟಕ್ಕೆ ಕಾರಣವಾಯಿತು. ಖನಿಜ ಸಂಪತ್ತಿನ ಲೂಟಿಯಿಂದ ₹ 9,750 ಕೋಟಿ ಆದಾಯ ನಷ್ಟವಾಗಿದೆ ಎಂದು ಆರೋಪಿಸಿದ ಅವರು, ಅಮರಾವತಿ ನಗರ ಯೋಜನೆ, ಪೋಲವರಂ ಯೋಜನೆ ಮತ್ತು ಇಂಧನ ಒಪ್ಪಂದಗಳ ರದ್ದತಿ ಹೂಡಿಕೆದಾರರ ವಿಶ್ವಾಸವನ್ನು ನಾಶಪಡಿಸಿದೆ. ಇದು ರಾಜ್ಯದ ಬ್ರ್ಯಾಂಡ್ ಇಮೇಜ್ ಅನ್ನು ಹಾಳು ಮಾಡಿದೆ ಎಂದು ಹೇಳಿದರು.

ರಾಜ್ಯದ ಸಾಲವು ಮಾರ್ಚ್ 31, 2019 ರಂದು ₹ 3.75 ಲಕ್ಷ ಕೋಟಿಯಿಂದ ಜೂನ್ 12, 2024 ರ ವೇಳೆಗೆ ₹ 9.74 ಲಕ್ಷ ಕೋಟಿಗೆ ಏರಿದೆ ಎಂದು ತೆಲುಗು ದೇಶಂ ಪಕ್ಷದ ಮುಖ್ಯಸ್ಥರು ದೂರಿದ್ದಾರೆ.

ಇದನ್ನೂ ಓದಿ: ನೀತಿ ಆಯೋಗವನ್ನು ರದ್ದು ಮಾಡಿ; ಪ್ರಧಾನಿ ಮೋದಿ ನೇತೃತ್ವದ ಸಭೆಗೆ ಮುನ್ನ ಮಮತಾ ಬ್ಯಾನರ್ಜಿ ಬೇಡಿಕೆ

ಕೋವಿಡ್-19 ಪ್ರಭಾವದ ಹೊರತಾಗಿಯೂ ಆಂಧ್ರಪ್ರದೇಶ ಹೆಚ್ಚುವರಿ ₹52,197 ಕೋಟಿ ಸಂಗ್ರಹಿಸಬೇಕಿತ್ತು ಎಂದು ಶ್ವೇತಪತ್ರದಲ್ಲಿ ಹೇಳಿದ್ದು ಹಿಂದಿನ ಸರ್ಕಾರದ ಅಡಿಯಲ್ಲಿ ‘ಅಸಮರ್ಥತೆ’ ಮತ್ತು ‘ಕೆಟ್ಟ ನಿರ್ವಹಣೆ’ಯನ್ನು ಪತ್ರಿಕೆ ಎತ್ತಿ ತೋರಿಸಿದೆ.  ಇದು ಮಾರ್ಚ್ 2019 ರಲ್ಲಿ ₹ 3,75,295 ಕೋಟಿಗಳಿಂದ 2024 ರ ಮಧ್ಯದ ವೇಳೆಗೆ ₹ 9,74,556 ಕೋಟಿಗಳಿಗೆ ರಾಜ್ಯದ ಸಾಲದ ಏರಿಕೆಯನ್ನು ಎತ್ತಿ ತೋರಿಸಿದೆ.

ತಮ್ಮ ಸತತ ಏಳನೇ ಬಜೆಟ್ ಅನ್ನು ಮಂಡಿಸುತ್ತಿರುವಾಗ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು 2024-25 ರ ಆರ್ಥಿಕ ವರ್ಷದಲ್ಲಿ ಆಂಧ್ರಪ್ರದೇಶದ ಹೊಸ ರಾಜಧಾನಿಯ ಅಭಿವೃದ್ಧಿಗಾಗಿ ₹ 15,000 ಕೋಟಿಗಳ ವಿಶೇಷ ಹಣಕಾಸು ಬೆಂಬಲ ಪ್ಯಾಕೇಜ್ ಅನ್ನು ಘೋಷಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್