ದಕ್ಷಿಣ್ ಹೆಲ್ತ್​ಕೇರ್ ಸಮಿಟ್ 2024: ಆರೋಗ್ಯಪಾಲನೆ ಕ್ಷೇತ್ರದ ದಿಗ್ಗಜರನ್ನು ಒಂದೇ ವೇದಿಕೆಗೆ ತರಲಿರುವ ಟಿವಿ9 ನೆಟ್ವರ್ಕ್ ಮತ್ತು ಸೌತ್ ಫಸ್ಟ್

Dakshin Healthcare Summit 2024: ಟಿವಿ9 ನೆಟ್ವರ್ಕ್ ಮತ್ತು ಸೌತ್ ಫಸ್ಟ್ ಸಂಸ್ಥೆಗಳು ಸೇರಿ ಆಗಸ್ಟ್ 3ರಂದು ಹೈದರಾಬಾದ್​ನಲ್ಲಿ ದಕ್ಷಿಣ್ ಹೆಲ್ತ್​ಕೇರ್ ಸಮಿಟ್ 2024 ಕಾರ್ಯಕ್ರಮ ಆಯೋಜಿಸಿವೆ. ಭಾರತದ ಆರೋಗ್ಯಪಾಲನಾ ಕ್ಷೇತ್ರದ ಮಹಾ ಮಹಾ ದಿಗ್ಗಜರ ಸಮಾವೇಶ ಅಂದು ನಡೆಯಲಿದೆ. ಸಂಸದ ಡಾ. ಸಿಎನ್ ಮಂಜುನಾಥ್ ಸೇರಿದಂತೆ ಬಹಳ ದೊಡ್ಡ ದೊಡ್ಡ ದಿಗ್ಗಜರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪೋಲೋ ಹಾಸ್ಪಿಟಲ್ಸ್​ನ ಎಂಡಿ ಸಂಗೀತಾ ರೆಡ್ಡಿ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ದಕ್ಷಿಣ್ ಹೆಲ್ತ್​ಕೇರ್ ಸಮಿಟ್ 2024: ಆರೋಗ್ಯಪಾಲನೆ ಕ್ಷೇತ್ರದ ದಿಗ್ಗಜರನ್ನು  ಒಂದೇ ವೇದಿಕೆಗೆ ತರಲಿರುವ ಟಿವಿ9 ನೆಟ್ವರ್ಕ್ ಮತ್ತು ಸೌತ್ ಫಸ್ಟ್
ಹೆಲ್ತ್​ಕೇರ್
Follow us
|

Updated on: Jul 26, 2024 | 7:48 PM

ಬೆಂಗಳೂರು, ಜುಲೈ 26: ಭಾರತದ ಆರೋಗ್ಯಪಾಲನೆ ಕ್ಷೇತ್ರ ಸಾಕಷ್ಟು ಪರಿವರ್ತನೆ ಕಾಣುತ್ತಿದೆ. ಹೊಸ ಆವಿಷ್ಕಾರಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬೆಳವಣಿಗೆ ಇವು ವಿಫುಲ ಅವಕಾಶಗಳನ್ನು ಮತ್ತು ಸಾಧ್ಯತೆಗಳನ್ನು ಸೃಷ್ಟಿಸಿವೆ. ಜೊತೆಗೆ ಕೆಲ ಪ್ರಮುಖ ಸಮಸ್ಯೆ, ಸವಾಲುಗಳನ್ನೂ ಹೊತ್ತು ಹೋಗುತ್ತಿವೆ. ಈ ಕ್ಷೇತ್ರದ ಸಾಮರ್ಥ್ಯ ಮತ್ತು ಪ್ರಮುಖ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ದಕ್ಷಿಣ್ ಹೆಲ್ತ್​ಕೇರ್ ಶೃಂಗಸಭೆ 2024 ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಟಿವಿ9 ನೆಟ್ವರ್ಕ್ ಮತ್ತು ಸೌತ್ ಫಸ್ಟ್ ಸಂಸ್ಥೆಗಳು ಈ ಸಮಿಟ್​ಗೆ ಆರೋಗ್ಯಕ್ಷೇತ್ರದ ದಿಗ್ಗಜರನ್ನು ಒಟ್ಟು ಸೇರಿಸುತ್ತಿದೆ. ಹೈದರಾಬಾದ್​ನಲ್ಲಿ ಆಗಸ್ಟ್ 3ರಂದು ಈ ಕಾರ್ಯಕ್ರಮ ನಡೆಯಲಿದೆ.

ಈ ಬಹುನಿರೀಕ್ಷಿತ ದಕ್ಷಿಣ್ ಹೆಲ್ತ್​ಕೇರ್ ಸಮಿಟ್ 2024 ಕಾರ್ಯಕ್ರಮದ ಮೂಲಕ ಅಗ್ರಮಾನ್ಯ ವೈದ್ಯಕೀಯ ಪರಿಣಿತರು, ನೀತಿ ರೂಪಕರು, ಉದ್ಯಮ ಪರಿಣಿತರು ಮೊದಲಾದ ದಿಗ್ಗಜರು ಒಂದೇ ವೇದಿಕೆಗೆ ಬರಲಿದ್ದಾರೆ. ಹೆಲ್ತ್​ಕೇರ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಆವಿಷ್ಕಾರಗಳು ಈ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿವೆ. ಆ ಸಂಬಂಧ ಚರ್ಚೆ, ಸಂವಾದಗಳೂ ನಡೆಯಲಿವೆ.

ಅಪೋಲೊ ಹಾಸ್ಪಿಟಲ್ಸ್​ನ ಜಂಟಿ ಎಂಡಿ ಡಾ. ಸಂಗೀತಾ ರೆಡ್ಡಿ ಅವರು ಆಗಸ್ಟ್ 3ರಂದು ದಕ್ಷಿಣ್ ಹೆಲ್ತ್​ಕೇರ್ ಸಮಿಟ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಬಿಜೆಪಿ ಸಂಸದ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ಮುಖ್ಯಸ್ಥ ಡಾ. ಸಿ.ಎನ್. ಮಂಜುನಾಥ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: Mudra loan details: ಮುದ್ರಾ ಸ್ಕೀಮ್: 20 ಲಕ್ಷ ರೂವರೆಗೂ ಸಾಲ ನೀಡುವ ಪಿಎಂಎಂವೈ ಬಗ್ಗೆ ಪೂರ್ಣ ಮಾಹಿತಿ

ಮೇದಾಂತ ಸಂಸ್ಥೆಯ ಡಾ. ಅರವಿಂದರ್ ಸಿಂಗ್ ಸೋಯಿನ್, ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಮತ್ತು ಎಂಡಿ ಪ್ರಶಾಂತ್ ಪ್ರಕಾಶ್, ಫೋರ್ಟಿಸ್ ಕ್ಯಾನ್ಸರ್ ಇನ್ಸ್​ಟಿಟ್ಯೂಟ್ಸ್​ನ ಪ್ರೋಗ್ರಾಮ್ ಹೆಡ್ ಡಾ. ವೃತ್ತಿ ಲುಂಬ, ನ್ಯೂರಾಲಜಿ ಅಂಡ್ ಸ್ಲೀಪ್ ಸೆಂಟರ್​ನ ಸಂಸ್ಥಾಪಕ ಡಾ. ಮನವೀರ್ ಭಾಟಿಯಾ, ಲಂಡನ್​ನ ಹೂಕ್​ನ ಕ್ಲಿನಿಕಲ್ ಪ್ರೋಸಸ್ ಲೀಡ್ ಫಿಸಿಶಿಯನ್ ಆಗಿರುವ ಉಮರ್ ಖಾದೀರ್, ಐಐಎಸ್​ಸಿಯ ಲಾಂಗೆವಿಟಿ ಇನ್ಸ್​ಟಿಟ್ಯೂಟ್​ನ ಪ್ರೊಫೆಸರ್ ಡಾ. ದೀಪಕ್ ಸೈನಿ, SOHFIT ಸಂಸ್ಥಾಪಕ ಡಾ. ಸೊಹ್ರಬ್ ಕುಶ್ರುಶಾಹಿ, ಎಐಜಿ ಹಾಸ್ಪಿಟಲ್ಸ್​ನ ಡಾ. ಡಿ ನಾಗೇಶ್ವರ್ ರೆಡ್ಡಿ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್​ನ ಗ್ಲೋಬಲ್ ಹೆಲ್ತ್ ಡೈರೆಕ್ಟರ್ ಡಾ. ಗಗನದೀಪ್ ಕಾಂಗ್, ಸ್ಟ್ರಾಂಡ್ ಲೈಫ್ ಸೈನ್ಸ್ ಸಂಸ್ಥಾಪಕ ಡಾ. ವಿಜಯ್ ಚಂದ್ರು, ಎಚ್​ಸಿಜಿ ಸಂಸ್ಥೆಯ ಸರ್ಜಿಕಲ್ ಆನ್ಕಾಲಜಿ ವಿಭಾಗದ ನಿರ್ದೇಶಕ ಡಾ. ವಿಶಾಲ್ ರಾವ್, ಆಕೃತಿ ಆಫ್ತಾಲ್ಮಿಕ್​ನ ಸಿಇಒ ಡಾ ಕುಲದೀಪ್ ರಾಯ್​ಜಾದ, ಎಐಎನ್​ಯು ಇಂಡಿಯಾದ ರೋಬೋಟಿಕ್ ಸರ್ಜನ್ ಕನ್ಸಲ್ಟೆಂಟ್ ಡಾ. ಸಯದ್ ಮೊಹಮ್ಮದ್ ಘೌಸ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ದಿಗ್ಗಜರು.

ಎಚ್​ಸಿಜಿ ಸಂಸ್ಥೆ ಡಾ. ಎಸ್ತರ್ ಸತ್ಯರಾಜ್, ಎಐಜಿ ಹಾಸ್ಪಿಟಲ್ಸ್​ನ ಡಾ. ರೂಪಾ ಬ್ಯಾನರ್ಜಿ, ಮದುಮೇಹ ತಜ್ಞೆ ಡಾ. ಸುನೀತಾ ಸಾಯಮ್ಮಗಾರು, ಅನು ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್​ನ ಎಂಡಿ ಡಾ. ಅನುರಾಧಾ ಕಾಟ್ರಗಡ್ಡ, ಡಿಲೈಫ್ ಡಾಟ್ ಇನ್​ನ ಸಹ-ಸಂಸ್ಥಾ;ಕ ಶಶಿಕಾಂತ್ ಅಯ್ಯಂಗಾರ್, ಬ್ರ್ಯಾಂಡ್ ಗುರು ಹರೀಶ್ ಬಿಜೂರು, ಅಪೋಲೋ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ ಮೊದಲಾದವರೂ ಕೂಡ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಇದನ್ನೂ ಓದಿ: ಬದಲಾಗುತ್ತಿದೆ ಆರ್​​ಬಿಐ ನಿಯಮ… ಬ್ಯಾಂಕ್​ಗೆ ಹೋಗಿ ಕ್ಯಾಷ್ ವಿತ್​ಡ್ರಾ ಮಾಡುವ ಮುನ್ನ ಇದು ತಿಳಿದಿರಿ…

ಈ ಅಪರೂಪದ ಮತ್ತು ಉಪಯುಕ್ತ ಮತ್ತು ಸಕಾಲಿಕ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ತಂತ್ರಜ್ಞಾನ ಬದಲಾವಣೆಗಳನ್ನು ಮತ್ತು ಭವಿಷ್ಯದ ಸಾಧ್ಯಾ ಸಾಧ್ಯತೆಗಳನ್ನು ಬಿಚ್ಚಿಡಲಿದೆ. ಟಿವಿ9 ನೆಟ್ವರ್ಕ್​ನ ಎಲ್ಲಾ ಪ್ಲಾಟ್​ಫಾರ್ಮ್​ಗಳಲ್ಲಿ ಈ ಕಾರ್ಯಕ್ರಮದ ಕವರೇಜ್ ಇರುತ್ತದೆ. ವಿಶ್ವದ ಮೊದಲ ಒಟಿಟಿ ನ್ಯೂಸ್ ಪ್ಲಾಟ್​ಫಾರ್ಮ್ ಆಗಿರುವ ನ್ಯೂಸ್9 ಪ್ಲಸ್ ಆ್ಯಪ್​ನಲ್ಲೂ ಈ ಇವೆಂಟ್ ನೋಡಬಹುದು. ನ್ಯೂಸ್9 ಲೈವ್​ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ. ತಪ್ಪದೇ ವೀಕ್ಷಿಸಿ, ಆರೋಗ್ಯ ಕ್ಷೇತ್ರದ ಹೊಸ ತಂತ್ರಜ್ಞಾನದ ಬಗ್ಗೆ ಅಪ್​ಡೇಟ್ ಆಗಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್