AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮುವಿನಲ್ಲಿ ಹೆಚ್ಚಿದ ಉಗ್ರ ಚಟುವಟಿಕೆ; ನಿನ್ನೆ ಎರಡು ಡ್ರೋನ್​ ಪತ್ತೆಯಾದ ಬೆನ್ನಲ್ಲೇ ಇಂದು ಸುಂಜ್ವಾನಾದಲ್ಲಿ ಇನ್ನೊಂದು ಡ್ರೋನ್​ ಹಾರಾಟ

ಜಮ್ಮುವಿನ ಮಿಲಿಟರಿ ಇನ್​​ಸ್ಟಾಲೇಶನ್​ ಸಮೀಪ ಕಳೆದ ಮೂರು ದಿನಗಳಿಂದಲೂ ಡ್ರೋನ್​ಗಳು ಹಾರಾಡುತ್ತಿದ್ದು, ಸೋಮವಾರ ಕುಲಚಕ್​ ಮಿಲಿಟರಿ ಕ್ಯಾಂಪ್​ ಬಳಿ ಕಾಣಿಸಿಕೊಂಡ ಡ್ರೋನ್​ ಮೇಲೆ ಭಾರತೀಯ ಸೇನೆ ಯೋಧರು ಗುಂಡಿನ ದಾಳಿಯನ್ನೂ ನಡೆಸಿದ್ದರು.

ಜಮ್ಮುವಿನಲ್ಲಿ ಹೆಚ್ಚಿದ ಉಗ್ರ ಚಟುವಟಿಕೆ; ನಿನ್ನೆ ಎರಡು ಡ್ರೋನ್​ ಪತ್ತೆಯಾದ ಬೆನ್ನಲ್ಲೇ ಇಂದು ಸುಂಜ್ವಾನಾದಲ್ಲಿ ಇನ್ನೊಂದು ಡ್ರೋನ್​ ಹಾರಾಟ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 29, 2021 | 10:01 AM

Share

ಜಮ್ಮುವಿನಲ್ಲಿ ಉಗ್ರ ಚಟುವಟಿಕೆ ಹೆಚ್ಚುತ್ತಿದೆ. ಇಂದು ಮುಂಜಾನೆ 2.30ರ ಹೊತ್ತಿಗೆ ಜಮ್ಮುವಿನ ಸುಂಜ್ವಾನ್​ ಮಿಲಿಟರಿ ಸ್ಟೇಶನ್​​ ಬಳಿ ಇನ್ನೊಂದು ಡ್ರೋನ್​ ಪತ್ತೆಯಾಗಿದೆ. ಈ ಡ್ರೋನ್​ ಕುಂಜ್ವಾನಿ, ಸುಂಜ್ವಾನ್ ಮತ್ತು ಕಲುಚಕ್ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ಕೆಲವೇ ಹೊತ್ತಲ್ಲಿ ಕಣ್ಮರೆಯಾಗಿದೆ. ಕುಂಜ್ವಾನಿ ಪ್ರದೇಶ ಜಮ್ಮು ಪಟ್ಟಣದ ಒಳಗೇ ಇದ್ದು, ಸತ್ವಾರಿ ಏರ್​ಫೋರ್ಸ್​ ಸ್ಟೇಶನ್​​ ಸಮೀಪ ಇದೆ. ಕುಲಚಕ್​​ನಿಂದ 4.5 ಕಿಮೀ ದೂರದಲ್ಲಿ ಸುಂಜ್ವಾನಾ ಇದ್ದು, ಇಲ್ಲಿಂದ 6.5 ಕಿಮೀ ದೂರದಲ್ಲಿ ಕುಂಜ್ವಾನಿ ಇದೆ. ಈ ಏರಿಯಾ ಸುತ್ತಮುತ್ತಲೂ ಡ್ರೋನ್​ಗಳು ಮಧ್ಯರಾತ್ರಿಯಿಂದ ಮುಂಜಾನೆವರೆಗೆ ಹಾರಾಟ ನಡೆಸುತ್ತಿವೆ.

ಜಮ್ಮುವಿನ ಮಿಲಿಟರಿ ಇನ್​​ಸ್ಟಾಲೇಶನ್​ ಸಮೀಪ ಕಳೆದ ಮೂರು ದಿನಗಳಿಂದಲೂ ಡ್ರೋನ್​ಗಳು ಹಾರಾಡುತ್ತಿದ್ದು, ಸೋಮವಾರ ಕುಲಚಕ್​ ಮಿಲಿಟರಿ ಕ್ಯಾಂಪ್​ ಬಳಿ ಕಾಣಿಸಿಕೊಂಡ ಡ್ರೋನ್​ ಮೇಲೆ ಭಾರತೀಯ ಸೇನೆ ಯೋಧರು ಗುಂಡಿನ ದಾಳಿಯನ್ನೂ ನಡೆಸಿದ್ದರು. ಒಂದು ಮಾನವರಹಿತ ವೈಮಾನಿಕ ವಾಹನ ((UAV) ಭಾನುವಾರ ರಾತ್ರಿ 11: 45 ಕ್ಕೆ ಸೇನಾ ನೆಲೆಯೊಳಗೆ ಮತ್ತು ಇನ್ನೊಂದು ಸೋಮವಾರ ಮುಂಜಾನೆ 2:40 ಕ್ಕೆ ಹಾರಾಟ ನಡೆಸುತ್ತಿತ್ತು. ಅದರ ಮೇಲೆ ಯೋಧರು ಸುಮಾರು 202-25 ಬಾರಿ ಗುಂಡು ಹಾರಿಸಿದ್ದರು.

ಅದಕ್ಕೂ ಮೊದಲು ಜಮ್ಮುವಿನ ಏರ್​ಪೋರ್ಟ್​​ನಲ್ಲಿರುವ ಏರ್​ಫೋರ್ಸ್​ ಸ್ಟೇಶನ್​ನಲ್ಲಿ ಎರಡು ಸ್ಫೋಟ ಆಗಿತ್ತು. ಐಇಡಿ ಸ್ಫೋಟಕವನ್ನು ಡ್ರೋನ್​ ಮೂಲಕವೇ ಎಸೆದು ಸ್ಫೋಟಿಸಿದ್ದಾಗಿ ತನಿಖೆಯಿಂದ ಗೊತ್ತಾಗಿದೆ. ಒಟ್ಟಾರೆ ಜಮ್ಮುವಿನಲ್ಲಿ ಮತ್ತೆ ಉಗ್ರ ಚಟುವಟಿಕೆ ಹೆಚ್ಚಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿದಷ್ಟೂ ಉಗ್ರರು ಮತ್ತೆಮತ್ತೆ ದಾಳಿ ಮಾಡುತ್ತಿದ್ದಾರೆ. ಹಾಗೇ ಇಂದು ಕಾಶ್ಮೀರದಲ್ಲಿ ಲಷ್ಕರ್ ಇ ತೈಬಾ ಉಗ್ರಸಂಘಟನೆಯ ಉನ್ನತ ಕಮಾಂಡರ್​ ನದೀಮ್​ ಅಬ್ರಾಬ್​ನನ್ನು ಜಮ್ಮು-ಕಾಶ್ಮೀರ ಪೊಲೀಸರು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ