ಜಮ್ಮುವಿನಲ್ಲಿ ಹೆಚ್ಚಿದ ಉಗ್ರ ಚಟುವಟಿಕೆ; ನಿನ್ನೆ ಎರಡು ಡ್ರೋನ್​ ಪತ್ತೆಯಾದ ಬೆನ್ನಲ್ಲೇ ಇಂದು ಸುಂಜ್ವಾನಾದಲ್ಲಿ ಇನ್ನೊಂದು ಡ್ರೋನ್​ ಹಾರಾಟ

ಜಮ್ಮುವಿನ ಮಿಲಿಟರಿ ಇನ್​​ಸ್ಟಾಲೇಶನ್​ ಸಮೀಪ ಕಳೆದ ಮೂರು ದಿನಗಳಿಂದಲೂ ಡ್ರೋನ್​ಗಳು ಹಾರಾಡುತ್ತಿದ್ದು, ಸೋಮವಾರ ಕುಲಚಕ್​ ಮಿಲಿಟರಿ ಕ್ಯಾಂಪ್​ ಬಳಿ ಕಾಣಿಸಿಕೊಂಡ ಡ್ರೋನ್​ ಮೇಲೆ ಭಾರತೀಯ ಸೇನೆ ಯೋಧರು ಗುಂಡಿನ ದಾಳಿಯನ್ನೂ ನಡೆಸಿದ್ದರು.

ಜಮ್ಮುವಿನಲ್ಲಿ ಹೆಚ್ಚಿದ ಉಗ್ರ ಚಟುವಟಿಕೆ; ನಿನ್ನೆ ಎರಡು ಡ್ರೋನ್​ ಪತ್ತೆಯಾದ ಬೆನ್ನಲ್ಲೇ ಇಂದು ಸುಂಜ್ವಾನಾದಲ್ಲಿ ಇನ್ನೊಂದು ಡ್ರೋನ್​ ಹಾರಾಟ
ಪ್ರಾತಿನಿಧಿಕ ಚಿತ್ರ
Follow us
| Updated By: Lakshmi Hegde

Updated on: Jun 29, 2021 | 10:01 AM

ಜಮ್ಮುವಿನಲ್ಲಿ ಉಗ್ರ ಚಟುವಟಿಕೆ ಹೆಚ್ಚುತ್ತಿದೆ. ಇಂದು ಮುಂಜಾನೆ 2.30ರ ಹೊತ್ತಿಗೆ ಜಮ್ಮುವಿನ ಸುಂಜ್ವಾನ್​ ಮಿಲಿಟರಿ ಸ್ಟೇಶನ್​​ ಬಳಿ ಇನ್ನೊಂದು ಡ್ರೋನ್​ ಪತ್ತೆಯಾಗಿದೆ. ಈ ಡ್ರೋನ್​ ಕುಂಜ್ವಾನಿ, ಸುಂಜ್ವಾನ್ ಮತ್ತು ಕಲುಚಕ್ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ಕೆಲವೇ ಹೊತ್ತಲ್ಲಿ ಕಣ್ಮರೆಯಾಗಿದೆ. ಕುಂಜ್ವಾನಿ ಪ್ರದೇಶ ಜಮ್ಮು ಪಟ್ಟಣದ ಒಳಗೇ ಇದ್ದು, ಸತ್ವಾರಿ ಏರ್​ಫೋರ್ಸ್​ ಸ್ಟೇಶನ್​​ ಸಮೀಪ ಇದೆ. ಕುಲಚಕ್​​ನಿಂದ 4.5 ಕಿಮೀ ದೂರದಲ್ಲಿ ಸುಂಜ್ವಾನಾ ಇದ್ದು, ಇಲ್ಲಿಂದ 6.5 ಕಿಮೀ ದೂರದಲ್ಲಿ ಕುಂಜ್ವಾನಿ ಇದೆ. ಈ ಏರಿಯಾ ಸುತ್ತಮುತ್ತಲೂ ಡ್ರೋನ್​ಗಳು ಮಧ್ಯರಾತ್ರಿಯಿಂದ ಮುಂಜಾನೆವರೆಗೆ ಹಾರಾಟ ನಡೆಸುತ್ತಿವೆ.

ಜಮ್ಮುವಿನ ಮಿಲಿಟರಿ ಇನ್​​ಸ್ಟಾಲೇಶನ್​ ಸಮೀಪ ಕಳೆದ ಮೂರು ದಿನಗಳಿಂದಲೂ ಡ್ರೋನ್​ಗಳು ಹಾರಾಡುತ್ತಿದ್ದು, ಸೋಮವಾರ ಕುಲಚಕ್​ ಮಿಲಿಟರಿ ಕ್ಯಾಂಪ್​ ಬಳಿ ಕಾಣಿಸಿಕೊಂಡ ಡ್ರೋನ್​ ಮೇಲೆ ಭಾರತೀಯ ಸೇನೆ ಯೋಧರು ಗುಂಡಿನ ದಾಳಿಯನ್ನೂ ನಡೆಸಿದ್ದರು. ಒಂದು ಮಾನವರಹಿತ ವೈಮಾನಿಕ ವಾಹನ ((UAV) ಭಾನುವಾರ ರಾತ್ರಿ 11: 45 ಕ್ಕೆ ಸೇನಾ ನೆಲೆಯೊಳಗೆ ಮತ್ತು ಇನ್ನೊಂದು ಸೋಮವಾರ ಮುಂಜಾನೆ 2:40 ಕ್ಕೆ ಹಾರಾಟ ನಡೆಸುತ್ತಿತ್ತು. ಅದರ ಮೇಲೆ ಯೋಧರು ಸುಮಾರು 202-25 ಬಾರಿ ಗುಂಡು ಹಾರಿಸಿದ್ದರು.

ಅದಕ್ಕೂ ಮೊದಲು ಜಮ್ಮುವಿನ ಏರ್​ಪೋರ್ಟ್​​ನಲ್ಲಿರುವ ಏರ್​ಫೋರ್ಸ್​ ಸ್ಟೇಶನ್​ನಲ್ಲಿ ಎರಡು ಸ್ಫೋಟ ಆಗಿತ್ತು. ಐಇಡಿ ಸ್ಫೋಟಕವನ್ನು ಡ್ರೋನ್​ ಮೂಲಕವೇ ಎಸೆದು ಸ್ಫೋಟಿಸಿದ್ದಾಗಿ ತನಿಖೆಯಿಂದ ಗೊತ್ತಾಗಿದೆ. ಒಟ್ಟಾರೆ ಜಮ್ಮುವಿನಲ್ಲಿ ಮತ್ತೆ ಉಗ್ರ ಚಟುವಟಿಕೆ ಹೆಚ್ಚಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿದಷ್ಟೂ ಉಗ್ರರು ಮತ್ತೆಮತ್ತೆ ದಾಳಿ ಮಾಡುತ್ತಿದ್ದಾರೆ. ಹಾಗೇ ಇಂದು ಕಾಶ್ಮೀರದಲ್ಲಿ ಲಷ್ಕರ್ ಇ ತೈಬಾ ಉಗ್ರಸಂಘಟನೆಯ ಉನ್ನತ ಕಮಾಂಡರ್​ ನದೀಮ್​ ಅಬ್ರಾಬ್​ನನ್ನು ಜಮ್ಮು-ಕಾಶ್ಮೀರ ಪೊಲೀಸರು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?