AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಬೇಸರದಿಂದ ಚಕ್ರವರ್ತಿ ಅವರನ್ನು ಪ್ರಶಾಂತ್​ ತಬ್ಬಿಕೊಂಡರು. ಆಗ ಚಕ್ರವರ್ತಿ ಕೂಡ ಬೇಸರಗೊಂಡರು. ಅದನ್ನು ಅಲ್ಲಿ ತೋರಿಸದೆ ಇದ್ದರೂ, ಗಾರ್ಡನ್​ ಏರಿಯಾಗೆ ಬಂದು ಗಳಗಳನೆ ಅತ್ತರು.

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ
ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ
TV9 Web
| Edited By: |

Updated on:Jun 29, 2021 | 10:03 AM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ತಮ್ಮ ಕಟು ಮಾತುಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜೂನ್​ 27ರ ಎಪಿಸೋಡ್​ನಲ್ಲಂತೂ ಚಕ್ರವರ್ತಿ ಚಂದ್ರಚೂಡ್​ ಮಾತಿಗೆ ಇಡೀ ಮನೆ ನಡುಗಿ ಹೋಗಿತ್ತು. ಈ ಬೆನ್ನಲ್ಲೇ ಮನೆಯಲ್ಲಿ ಕಣ್ಣೀರಧಾರೆ ಹರಿದಿದೆ.

ಬಿಗ್​ ಬಾಸ್​ ಸ್ಪರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡಲಾಗಿದೆ. ಈ ಟಾಸ್ಕ್ ಪ್ರಕಾರ ಮನೆಯ 11 ಜನ ಸ್ಪರ್ಧಿಗಳು ಪ್ರಶಾಂತ್​ ಅವರನ್ನು ಪ್ರ್ಯಾಂಕ್​ ಮಾಡಬೇಕು. ಮನೆಯಲ್ಲಿ ಪ್ರಶಾಂತ್​ ಅದೃಶ್ಯವಾಗಿದ್ದಾರೆ ಎಂಬಂತೆ ಎಲ್ಲರೂ ವರ್ತಿಸಬೇಕು ಎಂದು ಸುದೀಪ್​ ಸೂಚನೆ ನೀಡಿದರು. ಈ ಸೂಚನೆಯಂತೆ ಸ್ಪರ್ಧಿಗಳು ನಡೆದುಕೊಳ್ಳೋಕೆ ಆರಂಭಿಸಿದರು.

ಇದು ಪ್ರ್ಯಾಂಕ್​ ಎಂಬುದು ಪ್ರಶಾಂತ್​ ಗಮನಕ್ಕೆ ಬಂದಿದೆ. ಇದು ಶೀಘ್ರವೇ ಪೂರ್ಣಗೊಳ್ಳಬಹುದು ಎಂದು ಪ್ರಶಾಂತ್​ ಭಾವಿಸಿದ್ದರು. ಆದರೆ, ಮನೆಯವರು ಪ್ರಶಾಂತ್​ ಅವರನ್ನು ಮಾತನಾಡಿಸಿಲ್ಲ. ಇದು ಅವರಿಗೆ ಹರ್ಟ್​ ಆಗಿದೆ. ಶುಭಾ ಪೂಂಜಾ ಅವರ ಜತೆ ಮಾತನಾಡುತ್ತಾ ಪ್ರಶಾಂತ್​ ಕಣ್ಣೀರು ಹಾಕಿದರು. ‘ನಿನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೇನೆ. ಆದರೂ, ಮಾತನಾಡುವುದಿಲ್ಲವಾ’ ಎಂದು ಪ್ರಶ್ನೆ ಮಾಡಿದರು.

ಇನ್ನು, ಬೇಸರದಿಂದ ಚಕ್ರವರ್ತಿ ಅವರನ್ನು ಪ್ರಶಾಂತ್​ ತಬ್ಬಿಕೊಂಡರು. ಆಗ ಚಕ್ರವರ್ತಿ ಕೂಡ ಬೇಸರಗೊಂಡರು. ಅದನ್ನು ಅಲ್ಲಿ ತೋರಿಸದೆ ಇದ್ದರೂ, ಗಾರ್ಡನ್​ ಏರಿಯಾಗೆ ಬಂದು ಗಳಗಳನೆ ಅತ್ತರು. ಮನೆ ಮಂದಿಯೆಲ್ಲ ಚಕ್ರವರ್ತಿಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಇನ್ನು, ದಿವ್ಯಾ ಉರುಡುಗಗೆ ಪ್ರಶಾಂತ್​ ಸಂಬರಗಿ ಪದೇಪದೇ ಚುಚ್ಚಿ ಮಾತನಾಡುತ್ತಿದ್ದರು. ಇದು ದಿವ್ಯಾಗೆ ತುಂಬಾನೇ ಹರ್ಟ್​ ಆಗಿದೆ. ಪ್ರಶಾಂತ್​ ಮಾತನ್ನು ಕೇಳುತ್ತಿದ್ದಂತೆಯೇ ದಿವ್ಯಾ ಕಣ್ಣಲ್ಲಿ ನೀರು ಬಂತು. ‘ಬಿಗ್​ ಬಾಸ್​ ನನ್ನ ಕೈಯಲ್ಲಿ ಇದು ಆಗಲ್ಲ’ ಎಂದು ಬೇಸರ ಹೊರ ಹಾಕಿದರು.

ಇನ್ನು, ನಿಧಿ ಊಟ ಮಾಡುವಾಗ ಮಂಜು ಯಾವುದೋ ವಿಚಾರ ಹೇಳಿದ್ದಾರೆ. ಅದು ನಿಧಿಗೆ ಬೇಸರ ಮೂಡಿಸಿದೆ. ಈ ವಿಚಾರದಲ್ಲಿ ಮಂಜುಗೆ ತಪ್ಪಿತಸ್ಥ ಭಾವನೆ ಕಾಡಿದೆ.  ಅವರು ಕೂಡ ಅತ್ತಿದ್ದಾರೆ. ಈ ವೇಳೆ ಮಂಜು ಅವರನ್ನು ನಿಧಿ, ಶುಭಾ ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: ಮಂಜು ವಿಚಾರಕ್ಕೆ ದಿವ್ಯಾ ಸುರೇಶ್​ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಚಕ್ರವರ್ತಿ ಚಂದ್ರಚೂಡ್​

BBK8 Shruthi Controversy : ಲ್ಯಾಗ್ ಮಂಜ-ಚಕ್ರವರ್ತಿ ನಡುವಿನ ಬಿಗ್‌ ಫೈಟ್‌ನಲ್ಲಿ ಕೇಳಿ ಬಂತು ನಟಿ ಶೃತಿ ವಿಚಾರ

Published On - 9:58 am, Tue, 29 June 21

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ