AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಬೇಸರದಿಂದ ಚಕ್ರವರ್ತಿ ಅವರನ್ನು ಪ್ರಶಾಂತ್​ ತಬ್ಬಿಕೊಂಡರು. ಆಗ ಚಕ್ರವರ್ತಿ ಕೂಡ ಬೇಸರಗೊಂಡರು. ಅದನ್ನು ಅಲ್ಲಿ ತೋರಿಸದೆ ಇದ್ದರೂ, ಗಾರ್ಡನ್​ ಏರಿಯಾಗೆ ಬಂದು ಗಳಗಳನೆ ಅತ್ತರು.

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ
ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ
TV9 Web
| Edited By: |

Updated on:Jun 29, 2021 | 10:03 AM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ತಮ್ಮ ಕಟು ಮಾತುಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜೂನ್​ 27ರ ಎಪಿಸೋಡ್​ನಲ್ಲಂತೂ ಚಕ್ರವರ್ತಿ ಚಂದ್ರಚೂಡ್​ ಮಾತಿಗೆ ಇಡೀ ಮನೆ ನಡುಗಿ ಹೋಗಿತ್ತು. ಈ ಬೆನ್ನಲ್ಲೇ ಮನೆಯಲ್ಲಿ ಕಣ್ಣೀರಧಾರೆ ಹರಿದಿದೆ.

ಬಿಗ್​ ಬಾಸ್​ ಸ್ಪರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡಲಾಗಿದೆ. ಈ ಟಾಸ್ಕ್ ಪ್ರಕಾರ ಮನೆಯ 11 ಜನ ಸ್ಪರ್ಧಿಗಳು ಪ್ರಶಾಂತ್​ ಅವರನ್ನು ಪ್ರ್ಯಾಂಕ್​ ಮಾಡಬೇಕು. ಮನೆಯಲ್ಲಿ ಪ್ರಶಾಂತ್​ ಅದೃಶ್ಯವಾಗಿದ್ದಾರೆ ಎಂಬಂತೆ ಎಲ್ಲರೂ ವರ್ತಿಸಬೇಕು ಎಂದು ಸುದೀಪ್​ ಸೂಚನೆ ನೀಡಿದರು. ಈ ಸೂಚನೆಯಂತೆ ಸ್ಪರ್ಧಿಗಳು ನಡೆದುಕೊಳ್ಳೋಕೆ ಆರಂಭಿಸಿದರು.

ಇದು ಪ್ರ್ಯಾಂಕ್​ ಎಂಬುದು ಪ್ರಶಾಂತ್​ ಗಮನಕ್ಕೆ ಬಂದಿದೆ. ಇದು ಶೀಘ್ರವೇ ಪೂರ್ಣಗೊಳ್ಳಬಹುದು ಎಂದು ಪ್ರಶಾಂತ್​ ಭಾವಿಸಿದ್ದರು. ಆದರೆ, ಮನೆಯವರು ಪ್ರಶಾಂತ್​ ಅವರನ್ನು ಮಾತನಾಡಿಸಿಲ್ಲ. ಇದು ಅವರಿಗೆ ಹರ್ಟ್​ ಆಗಿದೆ. ಶುಭಾ ಪೂಂಜಾ ಅವರ ಜತೆ ಮಾತನಾಡುತ್ತಾ ಪ್ರಶಾಂತ್​ ಕಣ್ಣೀರು ಹಾಕಿದರು. ‘ನಿನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೇನೆ. ಆದರೂ, ಮಾತನಾಡುವುದಿಲ್ಲವಾ’ ಎಂದು ಪ್ರಶ್ನೆ ಮಾಡಿದರು.

ಇನ್ನು, ಬೇಸರದಿಂದ ಚಕ್ರವರ್ತಿ ಅವರನ್ನು ಪ್ರಶಾಂತ್​ ತಬ್ಬಿಕೊಂಡರು. ಆಗ ಚಕ್ರವರ್ತಿ ಕೂಡ ಬೇಸರಗೊಂಡರು. ಅದನ್ನು ಅಲ್ಲಿ ತೋರಿಸದೆ ಇದ್ದರೂ, ಗಾರ್ಡನ್​ ಏರಿಯಾಗೆ ಬಂದು ಗಳಗಳನೆ ಅತ್ತರು. ಮನೆ ಮಂದಿಯೆಲ್ಲ ಚಕ್ರವರ್ತಿಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಇನ್ನು, ದಿವ್ಯಾ ಉರುಡುಗಗೆ ಪ್ರಶಾಂತ್​ ಸಂಬರಗಿ ಪದೇಪದೇ ಚುಚ್ಚಿ ಮಾತನಾಡುತ್ತಿದ್ದರು. ಇದು ದಿವ್ಯಾಗೆ ತುಂಬಾನೇ ಹರ್ಟ್​ ಆಗಿದೆ. ಪ್ರಶಾಂತ್​ ಮಾತನ್ನು ಕೇಳುತ್ತಿದ್ದಂತೆಯೇ ದಿವ್ಯಾ ಕಣ್ಣಲ್ಲಿ ನೀರು ಬಂತು. ‘ಬಿಗ್​ ಬಾಸ್​ ನನ್ನ ಕೈಯಲ್ಲಿ ಇದು ಆಗಲ್ಲ’ ಎಂದು ಬೇಸರ ಹೊರ ಹಾಕಿದರು.

ಇನ್ನು, ನಿಧಿ ಊಟ ಮಾಡುವಾಗ ಮಂಜು ಯಾವುದೋ ವಿಚಾರ ಹೇಳಿದ್ದಾರೆ. ಅದು ನಿಧಿಗೆ ಬೇಸರ ಮೂಡಿಸಿದೆ. ಈ ವಿಚಾರದಲ್ಲಿ ಮಂಜುಗೆ ತಪ್ಪಿತಸ್ಥ ಭಾವನೆ ಕಾಡಿದೆ.  ಅವರು ಕೂಡ ಅತ್ತಿದ್ದಾರೆ. ಈ ವೇಳೆ ಮಂಜು ಅವರನ್ನು ನಿಧಿ, ಶುಭಾ ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: ಮಂಜು ವಿಚಾರಕ್ಕೆ ದಿವ್ಯಾ ಸುರೇಶ್​ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಚಕ್ರವರ್ತಿ ಚಂದ್ರಚೂಡ್​

BBK8 Shruthi Controversy : ಲ್ಯಾಗ್ ಮಂಜ-ಚಕ್ರವರ್ತಿ ನಡುವಿನ ಬಿಗ್‌ ಫೈಟ್‌ನಲ್ಲಿ ಕೇಳಿ ಬಂತು ನಟಿ ಶೃತಿ ವಿಚಾರ

Published On - 9:58 am, Tue, 29 June 21

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್