AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾಕ್ಕೆ ಮತ್ತೊಂದು ಶಾಕ್​, Apple iPhone ತಯಾರಿಕೆ ಭಾರತಕ್ಕೆ ಶಿಫ್ಟ್!

ದೆಹಲಿ: ಚೀನಾ ಮೂಲದ ಕೊರೊನಾ ವೈರಸ್​ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್​ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ. ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್​ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್​ ತಯಾರಕರು ದೇಶಕ್ಕೆ […]

ಚೀನಾಕ್ಕೆ ಮತ್ತೊಂದು ಶಾಕ್​, Apple iPhone ತಯಾರಿಕೆ ಭಾರತಕ್ಕೆ ಶಿಫ್ಟ್!
KUSHAL V
| Updated By: ಸಾಧು ಶ್ರೀನಾಥ್​|

Updated on:Aug 04, 2020 | 11:21 AM

Share

ದೆಹಲಿ: ಚೀನಾ ಮೂಲದ ಕೊರೊನಾ ವೈರಸ್​ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್​ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ.

ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್​ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್​ ತಯಾರಕರು ದೇಶಕ್ಕೆ ಬರಲು ಆಸಕ್ತಿ ತೋರಿಸಿದ್ದಾರೆ.

ಇದೀಗ ಅಮೆರಿಕಾದ ಪ್ರತಿಷ್ಠಿತ iPhone ತಯಾರಕ ಌಪಲ್​ ಕಂಪನಿಯ ಗುತ್ತಿಗೆದಾರನೊಬ್ಬ ಸಹ ಭಾರತದತ್ತ ಬರಲಿದ್ದಾನೆ. ಹೌದು, ಌಪಲ್​ ಕಂಪನಿಯ iPhone ನಿರ್ಮಿಸುವ ಈ ಗುತ್ತಿಗೆದಾರ ತನ್ನ ಆರೂ ಉತ್ಪಾದನಾ ಶ್ರೇಣಿ ಅಥವಾ ಪ್ರೊಡಕ್ಷನ್​ ಲೈನ್​ಗಳನ್ನ ಭಾರತಕ್ಕೆ ವರ್ಗಾಯಿಸಲಿದ್ದಾನೆ.

ಸರಿಸುಮಾರು 5 ಬಿಲಿಯನ್​ ಡಾಲರ್​ ಬೆಲೆಬಾಳುವ ಈ ಆರು ಪ್ರೊಡಕ್ಷನ್​ ಲೈನ್​ಗಳು ಈಗಾಗಲೇ ಭಾರತಕ್ಕೆ ಬಂದು ತಲುಪಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಭಾರತದಲ್ಲಿ ಸುಮಾರು 50 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿದುಬಂದಿದೆ.

Published On - 10:55 am, Tue, 4 August 20

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ