AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾಕ್ಕೆ ಮತ್ತೊಂದು ಶಾಕ್​, Apple iPhone ತಯಾರಿಕೆ ಭಾರತಕ್ಕೆ ಶಿಫ್ಟ್!

ದೆಹಲಿ: ಚೀನಾ ಮೂಲದ ಕೊರೊನಾ ವೈರಸ್​ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್​ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ. ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್​ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್​ ತಯಾರಕರು ದೇಶಕ್ಕೆ […]

ಚೀನಾಕ್ಕೆ ಮತ್ತೊಂದು ಶಾಕ್​, Apple iPhone ತಯಾರಿಕೆ ಭಾರತಕ್ಕೆ ಶಿಫ್ಟ್!
KUSHAL V
| Edited By: ಸಾಧು ಶ್ರೀನಾಥ್​|

Updated on:Aug 04, 2020 | 11:21 AM

Share

ದೆಹಲಿ: ಚೀನಾ ಮೂಲದ ಕೊರೊನಾ ವೈರಸ್​ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್​ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ.

ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್​ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್​ ತಯಾರಕರು ದೇಶಕ್ಕೆ ಬರಲು ಆಸಕ್ತಿ ತೋರಿಸಿದ್ದಾರೆ.

ಇದೀಗ ಅಮೆರಿಕಾದ ಪ್ರತಿಷ್ಠಿತ iPhone ತಯಾರಕ ಌಪಲ್​ ಕಂಪನಿಯ ಗುತ್ತಿಗೆದಾರನೊಬ್ಬ ಸಹ ಭಾರತದತ್ತ ಬರಲಿದ್ದಾನೆ. ಹೌದು, ಌಪಲ್​ ಕಂಪನಿಯ iPhone ನಿರ್ಮಿಸುವ ಈ ಗುತ್ತಿಗೆದಾರ ತನ್ನ ಆರೂ ಉತ್ಪಾದನಾ ಶ್ರೇಣಿ ಅಥವಾ ಪ್ರೊಡಕ್ಷನ್​ ಲೈನ್​ಗಳನ್ನ ಭಾರತಕ್ಕೆ ವರ್ಗಾಯಿಸಲಿದ್ದಾನೆ.

ಸರಿಸುಮಾರು 5 ಬಿಲಿಯನ್​ ಡಾಲರ್​ ಬೆಲೆಬಾಳುವ ಈ ಆರು ಪ್ರೊಡಕ್ಷನ್​ ಲೈನ್​ಗಳು ಈಗಾಗಲೇ ಭಾರತಕ್ಕೆ ಬಂದು ತಲುಪಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಭಾರತದಲ್ಲಿ ಸುಮಾರು 50 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿದುಬಂದಿದೆ.

Published On - 10:55 am, Tue, 4 August 20

Follow Us
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!