AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾಕ್ಕೆ ಮತ್ತೊಂದು ಶಾಕ್​, Apple iPhone ತಯಾರಿಕೆ ಭಾರತಕ್ಕೆ ಶಿಫ್ಟ್!

ದೆಹಲಿ: ಚೀನಾ ಮೂಲದ ಕೊರೊನಾ ವೈರಸ್​ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್​ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ. ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್​ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್​ ತಯಾರಕರು ದೇಶಕ್ಕೆ […]

ಚೀನಾಕ್ಕೆ ಮತ್ತೊಂದು ಶಾಕ್​, Apple iPhone ತಯಾರಿಕೆ ಭಾರತಕ್ಕೆ ಶಿಫ್ಟ್!
KUSHAL V
| Edited By: |

Updated on:Aug 04, 2020 | 11:21 AM

Share

ದೆಹಲಿ: ಚೀನಾ ಮೂಲದ ಕೊರೊನಾ ವೈರಸ್​ನಿಂದ ಕಂಗಾಲಾಗಿರುವ ಇಡೀ ವಿಶ್ವ ಇದೀಗ ಕಮ್ಯೂನಿಸ್ಟ್​ ರಾಷ್ಟ್ರದ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರಕ್ಕೆ ಇಳಿದಿದೆ. ಅದರ ಒಂದು ಅಂಶವಾಗಿ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಹಲವಾರು ಪ್ರತಿಷ್ಠಿತ MNC ಕಂಪನಿಗಳ ಕಾರ್ಖಾನೆಗಳು ಇದೀಗ ಅಲ್ಲಿಂದ ಹೊರನಡೆಯುತ್ತಿವೆ.

ಇದೇ ವೇಳೆಯಲ್ಲಿ ಹೂಡಿಕೆಯ ಉತ್ತಮ ತಾಣವಾಗಿ ಮಾರ್ಪಾಡಾಗಿರುವ ಭಾರತದತ್ತ ಎಲ್ಲರೂ ಮುಖ ಮಾಡುತ್ತಿದ್ದಾರೆ. ಮೊಬೈಲ್​ ತಯಾರಕರಿಗೆ ಕೇಂದ್ರ ಸರ್ಕಾರವು 41 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲು ಮುಂದಾಗಿರುವ ಬೆನ್ನಲ್ಲೇ ಹಲವಾರು ಮೊಬೈಲ್​ ತಯಾರಕರು ದೇಶಕ್ಕೆ ಬರಲು ಆಸಕ್ತಿ ತೋರಿಸಿದ್ದಾರೆ.

ಇದೀಗ ಅಮೆರಿಕಾದ ಪ್ರತಿಷ್ಠಿತ iPhone ತಯಾರಕ ಌಪಲ್​ ಕಂಪನಿಯ ಗುತ್ತಿಗೆದಾರನೊಬ್ಬ ಸಹ ಭಾರತದತ್ತ ಬರಲಿದ್ದಾನೆ. ಹೌದು, ಌಪಲ್​ ಕಂಪನಿಯ iPhone ನಿರ್ಮಿಸುವ ಈ ಗುತ್ತಿಗೆದಾರ ತನ್ನ ಆರೂ ಉತ್ಪಾದನಾ ಶ್ರೇಣಿ ಅಥವಾ ಪ್ರೊಡಕ್ಷನ್​ ಲೈನ್​ಗಳನ್ನ ಭಾರತಕ್ಕೆ ವರ್ಗಾಯಿಸಲಿದ್ದಾನೆ.

ಸರಿಸುಮಾರು 5 ಬಿಲಿಯನ್​ ಡಾಲರ್​ ಬೆಲೆಬಾಳುವ ಈ ಆರು ಪ್ರೊಡಕ್ಷನ್​ ಲೈನ್​ಗಳು ಈಗಾಗಲೇ ಭಾರತಕ್ಕೆ ಬಂದು ತಲುಪಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಭಾರತದಲ್ಲಿ ಸುಮಾರು 50 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿದುಬಂದಿದೆ.

Published On - 10:55 am, Tue, 4 August 20

Follow Us
KUSHAL V
KUSHAL V
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ