AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಂಗೋಂಗ್​ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್​ಗಳು; ಚೀನಾಕ್ಕೆ ಸೆಡ್ಡು

ಸರೋವರದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಸ್ತು ತಿರುಗುವುದು ಸಾಮಾನ್ಯ. ಅದರಲ್ಲಿ ಚೀನಾ ಸೇನೆ ಅತ್ಯುತ್ತಮ ಬೋಟ್​ಗಳನ್ನು ಬಳಸುತ್ತಿದೆ. ಅಲ್ಲದೆ ಅದರ ಹಾವಳಿಯೂ ಹೆಚ್ಚಾಗಿದೆ. ತುಂಬ ವೇಗವಾಗಿ ಬೋಟ್​ಗಳನ್ನು ಚಲಾಯಿಸುವ ಜತೆ ನದಿಯಲ್ಲಿ ದೊಡ್ಡ ಅಲೆಗಳು ಮೂಡುವಂತೆ ಮಾಡುತ್ತದೆ...

ಪ್ಯಾಂಗೋಂಗ್​ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್​ಗಳು; ಚೀನಾಕ್ಕೆ ಸೆಡ್ಡು
ಪ್ಯಾಂಗೋಂಗ್​ ಸರೋವರ
Lakshmi Hegde
| Edited By: |

Updated on: Jan 02, 2021 | 12:01 PM

Share

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಕಳೆದ ಎಂಟು ತಿಂಗಳಿಂದಲೂ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದೆ.. ಒಂದೆಡೆ ಉನ್ನತ ಮಟ್ಟದ ಸಭೆ ಮಾತುಕತೆ ನಡೆಯುತ್ತಿದ್ದರೆ, ಇತ್ತ ಗಡಿಯಲ್ಲಿ ಎರಡೂ ಸೇನೆಗಳು ಪದೇಪದೆ ತಮ್ಮ ಬಲ ಪ್ರದರ್ಶನ ಮಾಡುತ್ತಿವೆ. ಈ ಮಧ್ಯೆ ಭಾರತೀಯ ಸೇನೆ 12 ಅತಿವೇಗದ ಪೆಟ್ರೋಲಿಂಗ್​ (ಗಸ್ತು) ಬೋಟ್​ಗಳಿಗೆ ಆದೇಶ ನೀಡಿದೆ.

ಪೂರ್ವ ಲಡಾಖ್​ನ ಪ್ಯಾಂಗೋಂಗ್ ತ್ಸೋ ಸರೋವರ ಸೇರಿ, ಪರ್ವತ ಪ್ರದೇಶದಲ್ಲಿರುವ ಇತರ ಜಲಮೂಲಗಳಲ್ಲಿ ಗಸ್ತು ತಿರುಗಲು, ಕಣ್ಗಾವಲು ಇಡುವ ಸಲುವಾಗಿ, ಮುಂದುವರಿದ-ಆಧುನಿಕ ಸೌಕರ್ಯವುಳ್ಳ 12 ಬೋಟ್​ಗಳನ್ನು ಗೋವಾದ ಪಿಎಸ್​​ಯು ಹಡಗು ನಿರ್ಮಾಣ ಕೈಗಾರಿಕಾ ಸಂಸ್ಥೆಯಿಂದ ಖರೀದಿಸಲು ಮುಂದಾಗಿದೆ. ಗಸ್ತು ಹಡಗುಗಳ ಖರೀದಿ, ನಾಲ್ಕು ವರ್ಷಗಳ ಕಾಲ ಅದರ ಬಿಡಿಭಾಗಗಳ ನಿರ್ವಹಣೆಗಾಗಿ ಕಂಪನಿಯೊಂದಿಗೆ ಗುರುವಾರ 65 ಕೋಟಿ ರೂ.ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಭಾರತೀಯ ಸೇನೆ ಟ್ವೀಟ್ ಮಾಡಿಕೊಂಡಿದೆ.

ಒಪ್ಪಂದದ ಅನ್ವಯ ಗಸ್ತು ಹಡಗುಗಳು ಗೋವಾದಿಂದ ಮೇ ತಿಂಗಳಿಂದ ಸೇನೆಯನ್ನು ತಲುಪಲು ಪ್ರಾರಂಭವಾಗಲಿದೆ. ಇವೆಲ್ಲವುಗಳನ್ನೂ ಪ್ಯಾಂಗೋಂಗ್​ಸರೋವರದಲ್ಲಿ ನಿಯೋಜಿಸಲಾಗುವುದು ಎಂದು ಸೇನಾ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಸರೋವರದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಸ್ತು ತಿರುಗುವುದು ಸಾಮಾನ್ಯ. ಅದರಲ್ಲಿ ಚೀನಾ ಸೇನೆ ಅತ್ಯುತ್ತಮ ಬೋಟ್​ಗಳನ್ನು ಬಳಸುತ್ತಿದೆ. ಅಲ್ಲದೆ ಅದರ ಹಾವಳಿಯೂ ಹೆಚ್ಚಾಗಿದೆ. ತುಂಬ ವೇಗವಾಗಿ ಬೋಟ್​ಗಳನ್ನು ಚಲಾಯಿಸುವ ಜತೆ ನದಿಯಲ್ಲಿ ದೊಡ್ಡ ಅಲೆಗಳು ಮೂಡುವಂತೆ ಮಾಡುತ್ತದೆ. ಇದರಿಂದ ಭಾರತ ಸೇನೆಯ ಹಗುರವಾದ ಬೋಟ್​​ಗಳು ತಳ್ಳಲ್ಪಡುತ್ತವೆ. ಹಾಗಾಗಿ ನಮ್ಮ ಸೇನೆಗೂ ಕೂಡ ಅತ್ಯುತ್ತಮ ಸೌಕರ್ಯಗಳುಳ್ಳ, ವೇಗದ ಬೋಟ್​ಗಳ ಅವಶ್ಯಕತೆ ಇದೆ ಎಂದು ಮಾಜಿ ಕಮಾಂಡರ್​ ಲೆಫ್ಟಿನಂಟ್​ ಜನರಲ್​ ಬಿ.ಎಸ್​. ಜಸ್ವಾಲ್​ ಹೇಳಿದ್ದಾರೆ.

ಚೀನಾಕ್ಕೆ ತಕ್ಕ ತಿರುಗೇಟು ನೀಡಲು ಸರೋವರದಲ್ಲಿ ಸ್ಟೀಲ್​ ಹಲ್​ ಬೋಟ್​ ಬಿಡಲಿದೆ ಭಾರತೀಯ ಸೇನೆ!

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ