AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಂಗೋಂಗ್​ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್​ಗಳು; ಚೀನಾಕ್ಕೆ ಸೆಡ್ಡು

ಸರೋವರದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಸ್ತು ತಿರುಗುವುದು ಸಾಮಾನ್ಯ. ಅದರಲ್ಲಿ ಚೀನಾ ಸೇನೆ ಅತ್ಯುತ್ತಮ ಬೋಟ್​ಗಳನ್ನು ಬಳಸುತ್ತಿದೆ. ಅಲ್ಲದೆ ಅದರ ಹಾವಳಿಯೂ ಹೆಚ್ಚಾಗಿದೆ. ತುಂಬ ವೇಗವಾಗಿ ಬೋಟ್​ಗಳನ್ನು ಚಲಾಯಿಸುವ ಜತೆ ನದಿಯಲ್ಲಿ ದೊಡ್ಡ ಅಲೆಗಳು ಮೂಡುವಂತೆ ಮಾಡುತ್ತದೆ...

ಪ್ಯಾಂಗೋಂಗ್​ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್​ಗಳು; ಚೀನಾಕ್ಕೆ ಸೆಡ್ಡು
ಪ್ಯಾಂಗೋಂಗ್​ ಸರೋವರ
Lakshmi Hegde
| Edited By: ಸಾಧು ಶ್ರೀನಾಥ್​|

Updated on: Jan 02, 2021 | 12:01 PM

Share

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಕಳೆದ ಎಂಟು ತಿಂಗಳಿಂದಲೂ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆಯುತ್ತಿದೆ.. ಒಂದೆಡೆ ಉನ್ನತ ಮಟ್ಟದ ಸಭೆ ಮಾತುಕತೆ ನಡೆಯುತ್ತಿದ್ದರೆ, ಇತ್ತ ಗಡಿಯಲ್ಲಿ ಎರಡೂ ಸೇನೆಗಳು ಪದೇಪದೆ ತಮ್ಮ ಬಲ ಪ್ರದರ್ಶನ ಮಾಡುತ್ತಿವೆ. ಈ ಮಧ್ಯೆ ಭಾರತೀಯ ಸೇನೆ 12 ಅತಿವೇಗದ ಪೆಟ್ರೋಲಿಂಗ್​ (ಗಸ್ತು) ಬೋಟ್​ಗಳಿಗೆ ಆದೇಶ ನೀಡಿದೆ.

ಪೂರ್ವ ಲಡಾಖ್​ನ ಪ್ಯಾಂಗೋಂಗ್ ತ್ಸೋ ಸರೋವರ ಸೇರಿ, ಪರ್ವತ ಪ್ರದೇಶದಲ್ಲಿರುವ ಇತರ ಜಲಮೂಲಗಳಲ್ಲಿ ಗಸ್ತು ತಿರುಗಲು, ಕಣ್ಗಾವಲು ಇಡುವ ಸಲುವಾಗಿ, ಮುಂದುವರಿದ-ಆಧುನಿಕ ಸೌಕರ್ಯವುಳ್ಳ 12 ಬೋಟ್​ಗಳನ್ನು ಗೋವಾದ ಪಿಎಸ್​​ಯು ಹಡಗು ನಿರ್ಮಾಣ ಕೈಗಾರಿಕಾ ಸಂಸ್ಥೆಯಿಂದ ಖರೀದಿಸಲು ಮುಂದಾಗಿದೆ. ಗಸ್ತು ಹಡಗುಗಳ ಖರೀದಿ, ನಾಲ್ಕು ವರ್ಷಗಳ ಕಾಲ ಅದರ ಬಿಡಿಭಾಗಗಳ ನಿರ್ವಹಣೆಗಾಗಿ ಕಂಪನಿಯೊಂದಿಗೆ ಗುರುವಾರ 65 ಕೋಟಿ ರೂ.ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಭಾರತೀಯ ಸೇನೆ ಟ್ವೀಟ್ ಮಾಡಿಕೊಂಡಿದೆ.

ಒಪ್ಪಂದದ ಅನ್ವಯ ಗಸ್ತು ಹಡಗುಗಳು ಗೋವಾದಿಂದ ಮೇ ತಿಂಗಳಿಂದ ಸೇನೆಯನ್ನು ತಲುಪಲು ಪ್ರಾರಂಭವಾಗಲಿದೆ. ಇವೆಲ್ಲವುಗಳನ್ನೂ ಪ್ಯಾಂಗೋಂಗ್​ಸರೋವರದಲ್ಲಿ ನಿಯೋಜಿಸಲಾಗುವುದು ಎಂದು ಸೇನಾ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಸರೋವರದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಸ್ತು ತಿರುಗುವುದು ಸಾಮಾನ್ಯ. ಅದರಲ್ಲಿ ಚೀನಾ ಸೇನೆ ಅತ್ಯುತ್ತಮ ಬೋಟ್​ಗಳನ್ನು ಬಳಸುತ್ತಿದೆ. ಅಲ್ಲದೆ ಅದರ ಹಾವಳಿಯೂ ಹೆಚ್ಚಾಗಿದೆ. ತುಂಬ ವೇಗವಾಗಿ ಬೋಟ್​ಗಳನ್ನು ಚಲಾಯಿಸುವ ಜತೆ ನದಿಯಲ್ಲಿ ದೊಡ್ಡ ಅಲೆಗಳು ಮೂಡುವಂತೆ ಮಾಡುತ್ತದೆ. ಇದರಿಂದ ಭಾರತ ಸೇನೆಯ ಹಗುರವಾದ ಬೋಟ್​​ಗಳು ತಳ್ಳಲ್ಪಡುತ್ತವೆ. ಹಾಗಾಗಿ ನಮ್ಮ ಸೇನೆಗೂ ಕೂಡ ಅತ್ಯುತ್ತಮ ಸೌಕರ್ಯಗಳುಳ್ಳ, ವೇಗದ ಬೋಟ್​ಗಳ ಅವಶ್ಯಕತೆ ಇದೆ ಎಂದು ಮಾಜಿ ಕಮಾಂಡರ್​ ಲೆಫ್ಟಿನಂಟ್​ ಜನರಲ್​ ಬಿ.ಎಸ್​. ಜಸ್ವಾಲ್​ ಹೇಳಿದ್ದಾರೆ.

ಚೀನಾಕ್ಕೆ ತಕ್ಕ ತಿರುಗೇಟು ನೀಡಲು ಸರೋವರದಲ್ಲಿ ಸ್ಟೀಲ್​ ಹಲ್​ ಬೋಟ್​ ಬಿಡಲಿದೆ ಭಾರತೀಯ ಸೇನೆ!

Follow Us
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು