AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರದಲ್ಲಿ 3ದಿನ ಪತ್ನಿಯೊಂದಿಗಿರಿ..3ದಿನ ಗರ್ಲ್​ಫ್ರೆಂಡ್ ಜತೆಗಿರಿ, 1 ದಿನ ರಜಾ ತೆಗೆದುಕೊಳ್ಳಿ’ -ಇನ್ನೊಬ್ಬಳ ಸಂಗ ಮಾಡಿದವನ ಸಮಸ್ಯೆ ಬಗೆಹರಿಸಿದ ಪೊಲೀಸರು !

ಆದರೆ..ಅದೇನಾಯಿತೋ ಒಂದಷ್ಟುದಿನಗಳಾದ ಮೇಲೆ ಗರ್ಲ್​ಫ್ರೆಂಡ್​ ಉಲ್ಟಾ ಹೊಡೆದಳು. ರಾಜೇಶ್​ ನನಗೆ ಸುಳ್ಳು ಹೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮತ್ತೆ ಪೊಲೀಸರಿಗೆ ದೂರು ನೀಡಿದಳು.

‘ವಾರದಲ್ಲಿ 3ದಿನ ಪತ್ನಿಯೊಂದಿಗಿರಿ..3ದಿನ ಗರ್ಲ್​ಫ್ರೆಂಡ್ ಜತೆಗಿರಿ, 1 ದಿನ ರಜಾ ತೆಗೆದುಕೊಳ್ಳಿ’ -ಇನ್ನೊಬ್ಬಳ ಸಂಗ ಮಾಡಿದವನ ಸಮಸ್ಯೆ ಬಗೆಹರಿಸಿದ ಪೊಲೀಸರು !
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Feb 17, 2021 | 4:26 PM

Share

ರಾಂಚಿ: ಪತ್ನಿಯಿದ್ದರೂ ಇನ್ನೊಬ್ಬಳ ಸಂಗ ಮಾಡಿದವನ ಪ್ರಕರಣವನ್ನು ಪೊಲೀಸರು ವಿಚಿತ್ರವಾಗಿ ಬಗೆಹರಿಸಿಕೊಟ್ಟು, ಇದೀಗ ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂಥದ್ದೊಂದು ಘಟನೆ ನಡೆದಿದ್ದು ಜಾರ್ಖಂಡದ ರಾಂಚಿಯಲ್ಲಿ. ಇಲ್ಲಿನ ಕೋಕರ್​ ತಿರಿಲ್​ ಏರಿಯಾದ ನಿವಾಸಿ ರಾಜೇಶ್ ಮೆಹತೋ ತನಗೆ ಮದುವೆಯಾಗಿದ್ದರೂ, ಸುಳ್ಳು ಹೇಳಿ ಇನ್ನೊಬ್ಬ ಯುವತಿಯನ್ನು ಪ್ರೀತಿಸಿದ್ದ. ನಾನು ಸಿಂಗಲ್​, ನನಗಿನ್ನೂ ವಿವಾಹ ಆಗಿಲ್ಲ ಎಂದು, ಪತ್ನಿ, ಮಗುವನ್ನು ಬಿಟ್ಟು ಆಕೆಯೊಂದಿಗೆ ಓಡಿ ಹೋಗಿದ್ದ.. !

ಇತ್ತ ಪತ್ನಿಗೆ ವಿಷಯ ತಿಳಿಯುತ್ತಿದ್ದಂತೆ ಸಾದಾರ್​ ಠಾಣೆಯಲ್ಲಿ ದೂರು ನೀಡಿದ್ದರು. ಹಾಗೇ ರಾಜೇಶ್​ ಮೆಹತಾ ಗರ್ಲ್​ಫ್ರೆಂಡ್ ಕುಟುಂಬದವರೂ ಈತನ ವಿರುದ್ಧ ಕಿಡ್ನ್ಯಾಪ್​ ಕೇಸ್ ದಾಖಲಿಸಿದ್ದರು.

ಪ್ರಕರಣದ ತನಿಖೆ ಶುರು ಮಾಡಿದ್ದ ಪೊಲೀಸರು, ಅಂತೂ ರಾಜೇಶ್​ ಹಾಗೂ ಆತನ ಗೆಳತಿಯನ್ನು ಪತ್ತೆಹಚ್ಚಿದ್ದರು. ಇವರಿಬ್ಬರೂ ಪತ್ತೆಯಾಗುತ್ತಿದ್ದಂತೆ ರಾಜೇಶ್​ ಪತ್ನಿ ಮತ್ತು ಪ್ರಿಯತಮೆಯ ವಿರುದ್ಧ ದೊಡ್ಡ ವಾಗ್ವಾದವೇ ನಡೆಯಿತು. ರಾಜೇಶ್​ಗೆ ಮದುವೆ ಆಗಿರುವ ವಿಚಾರ ನನಗೆ ಗೊತ್ತಿರಲಿಲ್ಲ. ನಾವಿಬ್ಬರೂ ಇಲ್ಲಿಂದ ಓಡಿಹೋದ ಬಳಿಕ ವಿವಾಹವಾಗಿದ್ದೇವೆ ಎಂದು ಆತನ ಗರ್ಲ್​ಫ್ರೆಂಡ್ ಕೂಡ ಪಟ್ಟುಬಿಡದಂತೆ ವಾದಿಸಿದಳು. ಈ ಇಬ್ಬರು ಮಹಿಳೆಯರ ಜಗಳ, ವಿವಾದ ನೋಡಲಾಗದೆ ಮಧ್ಯಪ್ರವೇಶಿಸಿದ ಪೊಲೀಸರು ವಿಚಿತ್ರ ರೀತಿಯಲ್ಲಿ ಸಮಸ್ಯೆ ಬಗೆಹರಿಸಿಕೊಟ್ಟರು. ‘ರಾಜೇಶ್​, ನೀವು ವಾರದಲ್ಲಿ ಮೂರು ದಿನ ಪತ್ನಿಯೊಂದಿಗೆ ಇರಿ..ಮೂರು ದಿನ ಗರ್ಲ್​ಫ್ರೆಂಡ್ ಜತೆಗೆ ಕಾಲ ಕಳೆಯಿರಿ..ಒಂದು ದಿನ ರಜಾ ತೆಗೆದುಕೊಳ್ಳಿ’ ಎಂದು ಹೇಳಿ ರಾಜಿ ಮಾಡಿಸಿಕೊಟ್ಟಿದ್ದರು. ಹೀಗೆ ಹೇಳಿದ ಬಳಿಕ ಇಬ್ಬರೂ ಮಹಿಳೆಯರು ಒಪ್ಪಿಗೆ ಸೂಚಿಸಿದ್ದರು. ಈ ಒಪ್ಪಂದಕ್ಕೆ ಮೂವರೂ ಸಹಿ ಕೂಡ ಹಾಕಿದ್ದರು. ಸ್ವಲ್ಪ ಕಾಲ ಹೀಗೆ ನಡೆದಿತ್ತು. ರಾಜೇಶ್​ ವಾರದಲ್ಲಿ 3 ದಿನ ಹೆಂಡತಿಯೊಂದಿಗೆ, 3 ದಿನ ಪ್ರಿಯತಮೆಯೊಂದಿಗೆ ಸಮಯ ಕಳೆಯುತ್ತಿದ್ದರು.

ಇದನ್ನೂ ಓದಿ: ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್​ ಜಾಂಗ್​ ಉನ್​ ಪತ್ನಿ; ಎಲ್ಲಿ ಹೋಗಿದ್ದರು ರಿ ಸೋಲ್​ ಜು?

ಆದರೆ..ಅದೇನಾಯಿತೋ ಒಂದಷ್ಟುದಿನಗಳಾದ ಮೇಲೆ ಗರ್ಲ್​ಫ್ರೆಂಡ್​ ಉಲ್ಟಾ ಹೊಡೆದಳು. ರಾಜೇಶ್​ ನನಗೆ ಸುಳ್ಳು ಹೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮತ್ತೆ ಪೊಲೀಸರಿಗೆ ದೂರು ನೀಡಿದಳು. ಈ ಕಂಪ್ಲೇಂಟ್​ ದಾಖಲಾಗುತ್ತಿದ್ದಂತೆ ರಾಜೇಶ್ ಪರಾರಿಯಾಗಿದ್ದಾನೆ. ಈತನ ಸಹಾಯಕ್ಕೆ ಮೊದಲ ಪತ್ನಿ ನಿಂತಿದ್ದಾರೆ. ಸದ್ಯ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ. ಆದರೆ ರಾಜೇಶ್ ಸಿಗುತ್ತಿಲ್ಲ. ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ.

Published On - 4:23 pm, Wed, 17 February 21

ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ