AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ. ಬಂಗಾಳ ಅಸೆಂಬ್ಲಿ ಚುನಾವಣೆ: ಮಮತಾ ಬ್ಯಾನರ್ಜಿಗೆ ಶುರುವಾಯ್ತು ಓವೈಸಿ ನಡುಕ!

ಅಸಾದುದ್ದೀನ್ ಓವೈಸಿ ಬಂಗಾಳಕ್ಕೆ ಕಾಲಿಡುವುದು ಪಕ್ಕಾ ಆಗಿದೆ. ಪಕ್ಕದ ಬಿಹಾರದಲ್ಲಿ ಎಐಎಂಐಎಂ 5 ಸೀಟ್ ಗೆದ್ದಿರುವುದು ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿದೆ. ಓವೈಸಿಯ ಪ್ರಬಲ ಟಾರ್ಗೆಟ್ ದಲಿತ ಮತ್ತು ಮುಸ್ಲಿಂ ಮತಗಳು. ಪಶ್ಚಿಮ ಬಂಗಾಳ ಅಸೆಂಬ್ಲಿಯ 294 ಸೀಟುಗಳಲ್ಲಿ 100-110 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳ ಪ್ರಾಬಲ್ಯವಿದೆ. ಇಷ್ಟು ದಿನ ಈ ಎಲ್ಲ ಮತಗಳೂ ಟಿಎಂಸಿ ಬುಟ್ಟಿಗೆ ಬಂದುಬೀಳುತ್ತಿದ್ದವು. 2021ರ ಚುನಾವಣೆಯಲ್ಲಿ ಓವೈಸಿ ಪಕ್ಷ ಕಣಕ್ಕಿಳಿಯುವುದು ಮಮತಾ ಬ್ಯಾನರ್ಜಿಗೆ ಇನ್ನೋರ್ವ ಪ್ರಬಲ ಸ್ಪರ್ಧಿಯನ್ನು ಸೃಷ್ಟಿಸಲಿದೆ. ಬಂಗಾಳಿಗರು ಹೊರ […]

ಪ. ಬಂಗಾಳ ಅಸೆಂಬ್ಲಿ ಚುನಾವಣೆ: ಮಮತಾ ಬ್ಯಾನರ್ಜಿಗೆ ಶುರುವಾಯ್ತು ಓವೈಸಿ ನಡುಕ!
ಸಾಧು ಶ್ರೀನಾಥ್​
|

Updated on: Nov 13, 2020 | 2:23 PM

Share

ಅಸಾದುದ್ದೀನ್ ಓವೈಸಿ ಬಂಗಾಳಕ್ಕೆ ಕಾಲಿಡುವುದು ಪಕ್ಕಾ ಆಗಿದೆ. ಪಕ್ಕದ ಬಿಹಾರದಲ್ಲಿ ಎಐಎಂಐಎಂ 5 ಸೀಟ್ ಗೆದ್ದಿರುವುದು ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿದೆ. ಓವೈಸಿಯ ಪ್ರಬಲ ಟಾರ್ಗೆಟ್ ದಲಿತ ಮತ್ತು ಮುಸ್ಲಿಂ ಮತಗಳು. ಪಶ್ಚಿಮ ಬಂಗಾಳ ಅಸೆಂಬ್ಲಿಯ 294 ಸೀಟುಗಳಲ್ಲಿ 100-110 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳ ಪ್ರಾಬಲ್ಯವಿದೆ. ಇಷ್ಟು ದಿನ ಈ ಎಲ್ಲ ಮತಗಳೂ ಟಿಎಂಸಿ ಬುಟ್ಟಿಗೆ ಬಂದುಬೀಳುತ್ತಿದ್ದವು. 2021ರ ಚುನಾವಣೆಯಲ್ಲಿ ಓವೈಸಿ ಪಕ್ಷ ಕಣಕ್ಕಿಳಿಯುವುದು ಮಮತಾ ಬ್ಯಾನರ್ಜಿಗೆ ಇನ್ನೋರ್ವ ಪ್ರಬಲ ಸ್ಪರ್ಧಿಯನ್ನು ಸೃಷ್ಟಿಸಲಿದೆ.

ಬಂಗಾಳಿಗರು ಹೊರ ರಾಜ್ಯಗಳ ಪಕ್ಷವನ್ನು ಬೆಂಬಲಿಸುವುದಿಲ್ಲವಂತೆ! ಕಾಶ್ಮೀರದ ನಂತರ ಅತಿ ಹೆಚ್ಚು ಮುಸ್ಲಿಂ ಮತಗಳನ್ನು ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ. ಇದೇ ಮತಗಳು 2011ರಲ್ಲಿ ಎಡ ಪಕ್ಷಗಳನ್ನು ಸೋಲಿಸಲು ಮಮತಾ ಬ್ಯಾನರ್ಜಿಗೆ ನೆರವಾಗಿದ್ದವು. ದೇಶದ ಮುಸ್ಲಿಂ ಮತಗಳನ್ನು ಧ್ರುವೀಕರಿಸುತ್ತಿರುವ ಓವೈಸಿಯಿಂದ ಈ ಮತಗಳಲ್ಲಿ ಒಡಕು ಹುಟ್ಟಲಿದೆ. ಟಿಎಂಸಿ ಸೋಲಿಗೂ ಓವೈಸಿ ಸ್ಪರ್ಧೆ ಕಾರಣವಾಗಬಹುದು ಎಂದು ವಿಶ್ಲೇಷಣೆ ನಡೆಸಲಾಗುತ್ತಿದೆ.

ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ನಿಜಕ್ಕೂ ಗೆದ್ದವರು ಯಾರು ಗೊತ್ತೇ !?

ಈಗಾಗಲೇ 23 ಜಿಲ್ಲೆಗಳಲ್ಲಿ ಎಐಎಂಐಎಂ ತನ್ನ ಘಟಕ ಹೊಂದಿದೆ. ಅಲ್ಲದೇ 22 ಜಿಲ್ಲೆಗಳಲ್ಲಿ ಜನರಿಗೆ ಪರಿಚಿತವಾಗಿದೆ. ಅತ್ಯಂತ ಪ್ರಬಲವಾದ ಚುನಾವಣಾ ರಾಜನೀತಿಯೊಂದಿಗೆ ಬಂಗಾಲದಲ್ಲಿ ಸ್ಪರ್ಧಿಸಲಿದ್ದೇವೆ ಎಂದು AIMIM ರಾಷ್ಟ್ರೀಯ ವಕ್ತಾರ ಅಸೀಮ್ ವಖಾರ್ ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿ ನಡೆಸಿದ ಆ್ಯಂಟಿ ಎನ್ಆರ್ಸಿ ರ್ಯಾಲಿಯನ್ನೂ ಮೀರಿ ಸ್ಟ್ರಾಟರ್ಜಿ ರೂಪಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಂಗಾಳದಲ್ಲಿ ಶೇಕಡಾ 30 ಹಿಂದಿ-ಉರ್ದು ಭಾಷಿಕರಿದ್ದಾರೆ. ಬಿಜೆಪಿ ವಿರುದ್ಧದ ಟಿಎಂಸಿ ಹೋರಾಟ ಇವರಿಗೆ ತೃಪ್ತಿ ನೀಡಿಲ್ಲ. ಹೀಗಾಗಿ ಮುಸ್ಲಿಂ ಸಮುದಾಯ ನಮ್ಮನ್ನು ಬೆಂಬಲಿಸಲಿದೆ ಎಂದು ವಖಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಹೊರ ರಾಜ್ಯಗಳ ಪಕ್ಷವನ್ನು ಬಂಗಾಳಿಗರು ಬೆಂಬಲಿಸುವುದಿಲ್ಲ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ.

Follow Us
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ