AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sriperumbudur: ಶ್ರೀಪೆರಂಬದೂರ್ ಬಾಲಮುರುಗನ್ ಪ್ರತಿಮೆ: ಎತ್ತರದ ಏಕಶಿಲಾ ಷಣ್ಮುಖ ಪ್ರತಿಮೆಗೆ ವಿಶೇಷ ಪೂಜೆ, 2000 ಲೀಟರ್ ಹಾಲಿನ ಅಭಿಷೇಕ

Balamurugan Statue: ಏಕಶಿಲೆಯ ವಿಶ್ವರೂಪ ಬಾಲಮುರುಗನ್ ಸ್ವಾಮಿಗೆ ನಡೆದ ಹಾಲಿನ ಅಭಿಷೇಕವೂ ಭಕ್ತರಲ್ಲಿ ಸಂತಸ ಮೂಡಿಸಿತು. ಬೆಟ್ಟಗಳಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡಿದಂತೆ.. ಮುರುಗನ್ ಮೂರ್ತಿಯಿಂದ ಹಾಲಿನ ಧಾರೆ ಜಿನುಗಿತು.

Sriperumbudur: ಶ್ರೀಪೆರಂಬದೂರ್ ಬಾಲಮುರುಗನ್ ಪ್ರತಿಮೆ: ಎತ್ತರದ ಏಕಶಿಲಾ ಷಣ್ಮುಖ ಪ್ರತಿಮೆಗೆ ವಿಶೇಷ ಪೂಜೆ, 2000 ಲೀಟರ್ ಹಾಲಿನ ಅಭಿಷೇಕ
ಶ್ರೀಪೆರಂಬದೂರ್ ಬಾಲಮುರುಗನ್ ಪ್ರತಿಮೆ
ಸಾಧು ಶ್ರೀನಾಥ್​
|

Updated on: Jun 23, 2023 | 8:21 AM

Share

ಶಿವ ಪಾರ್ವತಿಯರ ಮಗನಾದ ಸುಬ್ರಹ್ಮಣ್ಯ ದೇವರು ತಾರಕಾಸುರನನ್ನು ಕೊಲ್ಲಲು ಜನಿಸಿದನು. ನಮ್ಮ ದೇಶದಲ್ಲಿ ಮಾತ್ರವಲ್ಲದೆ ಮಲೇಷ್ಯಾದಂತಹ ದೇಶಗಳಲ್ಲೂ ಸುಬ್ರಹ್ಮಣ್ಯನ ಅನೇಕ ದೇವಾಲಯಗಳಿವೆ. ಕುಮಾರಸ್ವಾಮಿ, ಕಾರ್ತಿಕೇಯ, ಸ್ಕಂದ, ಷಣ್ಮುಖ, ಮುರುಗನ್, ಗುಹುಡು, ಬಾಲಮುರುಗನ್ (Balamurugan) ಎಂಬಿತ್ಯಾದಿ ಹೆಸರುಗಳಿಂದ ಭಕ್ತಾದಿಗಳಿಂದ ಪೂಜಿಸಲ್ಪಡುತ್ತಾರೆ. ಅದರಲ್ಲೂ ತಮಿಳುನಾಡಿನಲ್ಲಿ ಬಾಲಮುರುಗನ್ ಗೆ ವಿಶೇಷ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ 40 ಅಡಿ ಎತ್ತರ, 180 ಟನ್ ತೂಕದ ಏಕಶಿಲಾ ಮೂರ್ತಿ ಭಕ್ತರ ಕಣ್ಮನ ಸೆಳೆಯಿತು. ಏಕಶಿಲಾ ಮೂರ್ತಿಗೆ 2000 ಲೀಟರ್ ಹಾಲಿನ ಅಭಿಷೇಕ (Milk Abhishekam) ಮಾಡಿದರು. ವಿವರಗಳಿಗೆ ಹೋಗುವುದಾದರೆ…

ಏಕಶಿಲೆಯ ವಿಶ್ವರೂಪ ಬಾಲಮುರುಗನ್ ಪ್ರತಿಮೆಯು 40 ಅಡಿ ಎತ್ತರದ, 180 ಟನ್ ಗಾತ್ರದಲ್ಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರ್ (Sriperumbudur) ತಾಂಡಲಂ ಬಳಿ ಸ್ಥಾಪಿಸಲಾಗಿದೆ. ಈ ವಿಗ್ರಹಗಳಿಗೆ ಸುಮಾರು 2000 ಸಾವಿರ ಲೀಟರ್ ಹಾಲಿನ ಅಭಿಷೇಕ ಮಾಡಲಾಯಿತು. ರತ್ನಗಿರಿ ಬಾಲಮುರುಗನ್ ಸ್ವಾಮಿ ನೇತೃತ್ವದಲ್ಲಿ 108 ಮಹಿಳೆಯರು ಹಾಲಿನ ಬಾಟಲಿಗಳನ್ನು ತಂದು ಮುರುಗನಿಗೆ ಹಾಲು ಅರ್ಪಿಸಿದರು.

ಸ್ವಾಮಿಗೆ ನಡೆದ ಹಾಲಿನ ಅಭಿಷೇಕವೂ ಭಕ್ತರಲ್ಲಿ ಸಂತಸ ಮೂಡಿಸಿತು. ಬೆಟ್ಟಗಳಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡಿದಂತೆ.. ಮುರುಗನ್ ಮೂರ್ತಿಯಿಂದ ಹಾಲಿನ ಧಾರೆ ಜಿನುಗಿತು. ಇದಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲದ ಬೀದಿಗಳು ಜೈಕಾರದಿಂದ ತುಂಬಿದ್ದವು. ಕ್ಷೀರಾಭಿಷೇಕದ ನಂತರ ಭಕ್ತರು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಈ ಪೂಜೆ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಹಾಗೂ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ದೇವಸ್ಥಾನದ ಅಧಿಕಾರಿಗಳು ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸಿದ್ದಾರೆ.

ದೇವಾಲಯದ ವೈಶಿಷ್ಟ್ಯಗಳು: 40 ಅಡಿ ಎತ್ತರದ ಸ್ವಾಮಿ ಬಾಲಮುರುಗನ್ ವಿಶ್ವದ ಅತಿ ಎತ್ತರದ ಏಕಶಿಲೆಯ ಪ್ರತಿಮೆಯಾಗಿದೆ. ಈ ಷಟ್ಪದಿ ನಕ್ಷತ್ರ ಪೀಠದಲ್ಲಿ ಸ್ವಾಮಿಯನ್ನು ಅಳೆಯಲಾಯಿತು. ಇಲ್ಲಿ ಧ್ಯಾನ ಮಂದಿರದಲ್ಲಿ ಗಣಪತಿ, ಸರಸ್ವತಿ ದೇವಿ, ದಕ್ಷಿಣಾಮೂರ್ತಿ, ವಿಷ್ಣು, ಶಿವ ಮತ್ತು ಹನುಮಂತ ಸೇರಿದಂತೆ ನವಗ್ರಹಗಳ ಹತ್ತು ಉಪಕ್ಷೇತ್ರಗಳಿವೆ. ಅನೇಕ ಭಕ್ತರು ಈ ಧ್ಯಾನ ಕೇಂದ್ರಕ್ಕೆ ಭೇಟಿ ನೀಡುತ್ತಾರೆ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್