AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬಾ ರಾಮದೇವ್ ಪತಂಜಲಿ ಕಂಪನಿ ಈ ವರ್ಷವೂ ಲಾಭದಲ್ಲಿ..

ಯೋಗ ಗುರು ಬಾಬಾ ರಾಮದೇವ್‌ ಅವರ ಪತಂಜಲಿ ಆಯುರ್ವೇದ ಕಂಪನಿಯ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಹಲವು ವರ್ಷಗಳೇನೂ ಕಳೆದಿಲ್ಲ. ಆದ್ರೆ ಕಡಿಮೆ ಸಮಯದಲ್ಲಿಯೇ ಜನರನ್ನು ಆಕರ್ಷಿಸಿ, ಇದೀಗ ಲಾಭದತ್ತ ಮುಖ ಮಾಡಿದೆ. ನಿಸರ್ಗಪೂರಿತ ಪ್ರೊಡಕ್ಟ್​ಗಳನ್ನು ನೀಡುತ್ತ ಬಂದಿರುವ ಪತಂಜಲಿ ಸಂಸ್ಥೆ ಜನರಿಗೆ ಹೆಚ್ಚು ಪ್ರಿಯವಾಗುತ್ತಿದೆ. ಹೆಚ್ಚು ವಿಶ್ವಾಸಾರ್ಹದೊಂದಿಗೆ ಉತ್ಪನ್ನಗಳನ್ನು ಜನರಿಗೆ ಒದಗಿಸುತ್ತ ಬಂದಿದ್ದು, ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ನಿಂತಿದೆ. ಹರಿದ್ವಾರ ಮೂಲದ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿ 2018-19ನೇ ಸಾಲಿನಲ್ಲಿ 349.37 ಕೋಟಿ ರೂ ಲಾಭವನ್ನು ಗಳಿಸಿತ್ತು. […]

ಬಾಬಾ ರಾಮದೇವ್ ಪತಂಜಲಿ ಕಂಪನಿ ಈ ವರ್ಷವೂ ಲಾಭದಲ್ಲಿ..
ಬಾಬಾ ರಾಮ್​ದೇವ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 14, 2020 | 2:36 PM

Share

ಯೋಗ ಗುರು ಬಾಬಾ ರಾಮದೇವ್‌ ಅವರ ಪತಂಜಲಿ ಆಯುರ್ವೇದ ಕಂಪನಿಯ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಹಲವು ವರ್ಷಗಳೇನೂ ಕಳೆದಿಲ್ಲ. ಆದ್ರೆ ಕಡಿಮೆ ಸಮಯದಲ್ಲಿಯೇ ಜನರನ್ನು ಆಕರ್ಷಿಸಿ, ಇದೀಗ ಲಾಭದತ್ತ ಮುಖ ಮಾಡಿದೆ. ನಿಸರ್ಗಪೂರಿತ ಪ್ರೊಡಕ್ಟ್​ಗಳನ್ನು ನೀಡುತ್ತ ಬಂದಿರುವ ಪತಂಜಲಿ ಸಂಸ್ಥೆ ಜನರಿಗೆ ಹೆಚ್ಚು ಪ್ರಿಯವಾಗುತ್ತಿದೆ. ಹೆಚ್ಚು ವಿಶ್ವಾಸಾರ್ಹದೊಂದಿಗೆ ಉತ್ಪನ್ನಗಳನ್ನು ಜನರಿಗೆ ಒದಗಿಸುತ್ತ ಬಂದಿದ್ದು, ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ನಿಂತಿದೆ.

ಹರಿದ್ವಾರ ಮೂಲದ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿ 2018-19ನೇ ಸಾಲಿನಲ್ಲಿ 349.37 ಕೋಟಿ ರೂ ಲಾಭವನ್ನು ಗಳಿಸಿತ್ತು. ಆದರೆ ಈ ಬಾರಿ ಶೇಕಡ 21.56 ರಷ್ಟು ಆರ್ಥಿಕ ಹೆಚ್ಚಳವನ್ನು ಕಂಡಿದ್ದು, 424.72 ಕೋಟಿ ರೂ ಲಾಭವನ್ನು ಪಡೆದಿದೆ ಎಂದು ಸ್ಪಷ್ಟಪಡಿಸಿದೆ.

ಪತಂಜಲಿ ಸಂಸ್ಥೆಯು 2020 ಮಾರ್ಚ್ 31ರ ವೇಳೆಯಲ್ಲಿ ಶೇ. 5.86 ರಷ್ಟು ಏರಿಕೆ ಕಂಡು ಒಟ್ಟು 9,022.71 ಕೋಟಿ ರೂ ಹಣ ಲಾಭ ಗಳಿಸಿದೆ. ಇದರ ಹಿಂದಿನ ವರ್ಷದ ಅವಧಿಯಲ್ಲಿ 8,522.68 ಕೋಟಿ ರೂ ಹಣವನ್ನು ತನ್ನದಾಗಿಸಿಕೊಂಡಿತ್ತು. 2019-20ನೇ ಹಣಕಾಸು ವರ್ಷದಲ್ಲಿ ಇದರ ಒಟ್ಟು ಆದಾಯ 9.087.91 ಕೋಟಿ ರೂ ಗಳಾಗಿದ್ದು, 2019 ಮಾರ್ಚ್​ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯು 8.541.57 ಕೋಟಿ ರೂ ಗಳಿಸಿತ್ತು.

ಒಟ್ಟಾರೆಯಾಗಿ ಕಳೆದ ವರ್ಷಗಳಿಗಿಂತ ಈ ಬಾರಿ ಆದಾಯದಲ್ಲಿ ಮೂರು ಪಟ್ಟು ಏರಿಕೆಯಾಗಿದ್ದು, ಒಟ್ಟು 65.19 ಕೋಟಿ ರೂ ಹಣವನ್ನು ಕಂಪನಿಯು ಜೇಬಿಗಿಳಿಸಿಕೊಂಡಿದೆ.

‘ಉತ್ತಮ ಬೆಳವಣಿಗೆಯನ್ನು ಕಂಡು ಯೋಗ ಗುರು ರಾಮದೇವ್ ಅವರು ಕಳೆದ ವರ್ಷದ ಆದಾಯದಿಂದ ಜನರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳನ್ನು ನೀಡಲು ಮುಂದಾದೆವು. ಇದರ ಪ್ರತಿಫಲದಿಂದ ಯಶಸ್ಸಿನ ಹಾದಿಗೆ ತಲುಪಲು ಕಾರಣವಾಯಿತು. ಪತಂಜಲಿ ಉತ್ಪನ್ನಗಳಲ್ಲಿ ಶುದ್ಧ ಮತ್ತು ನಂಬಿಕೆಯ ಜೊತೆಗೆ ಕಡಿಮೆ ದರದಲ್ಲಿ ಲಭ್ಯವಿರುವ ಕಾರಣ ಉತ್ಪನ್ನದ ಮೇಲೆ ಹೆಚ್ಚಿನ ವಿಶ್ವಾಸವನ್ನು ಜನರು ಹೊಂದಿದ್ದಾರೆ’ ಎಂದಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!